<p><strong>ಡಾ.ನಿಂಗಪ್ಪ ಮುದೇನೂರು</strong></p>.<p>ನೀನು ಆ ಮನೆ ಖಾಲಿಮಾಡಿರಬಹುದು<br> ಆದರೆ ಈ ಮನವನ್ನಲ್ಲ<br> ಮುಂದೊಮ್ಮೆ ಮತ್ತೆ ನೀನು ಆ ಮನೆಗೆ ಬರಲೂಬಹುದು<br> ಹಾಕಿದ ಚಾವಿಯನ್ನು ಅವರಿಗೊಪ್ಪಿಸಿ<br> ಬಂದಿರುವೆಯಷ್ಟೆ</p>.<p><br> ಗೋಡೆ ಗಡಿಯಾರ ಅಜ್ಜಿಯ ನೂಲು<br> ತಾತನ ನೆನಪು ಅಪ್ಪ ಅಮ್ಮರು ಹೇಳಿದ<br> ಹಿತವಚನಗಳೆಲ್ಲಾ ಇಲ್ಲಿ ಕಾಲದ ಚಿಗುರಾಗಿ <br> ಅರಳಿನಿಂತಿರಬಹುದು</p>.<p><br> ನೀನು ನುಡಿದ ಬಿರುನುಡಿಯೊಂದು<br> ಮನೆಯಿಂದ ಆಚೆತಳ್ಳಿದರೂ<br> ಮತ್ತೆ ಜೋಡಿಸುವ ಬಳ್ಳಿ ಹುಡುಕಿ ಹೊರಟೆ<br> ಹತ್ತು ನೂರು ಸಾವಿರ ಲಕ್ಷ ದನಿಗಳಲ್ಲಿ<br> ಪ್ರತಿಧ್ವನಿಯಾದೆ</p>.<p><br> ಎಲ್ಲಿ ರಕ್ತದ ಮಡುವುಗಟ್ಟಿ ಕಣ್ಣೀರಲ್ಲಿ ಬದುಕು <br> ತೊಳೆದುಹೋಗಿತ್ತೋ ಅಲ್ಲೊಂದು ನಿನ್ನ <br> ಪಾದದ ಗುರುತು ಮಗುವಿನಂತೆ ಉಳಿದಿತ್ತು<br> ಸರ್ವ ಜನಾಂಗದ ಶಾಂತಿಯ <br> ಹೂದೋಟವೊಂದು<br> ತುಂಬು ಅರಳಿ ನಿನ್ನ ಅಪಮಾನಕೆ <br> ಉತ್ತರವಾಯಿತು</p>.<p><br> ಅವರಂತೆ ನೀನೂ ನಮ್ಮ ಮನೆಯ ಬಂಧುವೇ<br> ಈ ಮಣ್ಣ ಕಣದಲ್ಲಿ ನಿಂತ ಮಹಾಬಿಂದುವೇ!<br> ಸೂರ್ಯ ಎಂದಿನಂತೆ ಪೂರ್ವದಲ್ಲಿಯೇ <br> ಮೂಡುತ್ತಾನೆ<br> ಅವನೆಷ್ಟೇ ಉರಿಯುಂಡರೂ ಬೆಳಕ <br> ತಂಪುನೀಡುವುದನ್ನು<br> ಮರೆಯುವುದಿಲ್ಲ<br> ಚಂದ್ರನ ಜೊತೆ ಅವನು ಮಾತನ್ನೆಂದೂ <br> ಬಿಡುವುದಿಲ್ಲ</p>.<p>ನಾವು ಮನುಷ್ಯರು<br /> ಅಂತರಂಗದಲ್ಲಾದರೂ ಪಿಸುಮಾತ <br /> ನುಡಿಯಬೇಕು<br /> ಬಿರುನುಡಿಯ ಮರೆತು<br /> ಪ್ರೀತಿ ಹಂಚಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಡಾ.ನಿಂಗಪ್ಪ ಮುದೇನೂರು</strong></p>.<p>ನೀನು ಆ ಮನೆ ಖಾಲಿಮಾಡಿರಬಹುದು<br> ಆದರೆ ಈ ಮನವನ್ನಲ್ಲ<br> ಮುಂದೊಮ್ಮೆ ಮತ್ತೆ ನೀನು ಆ ಮನೆಗೆ ಬರಲೂಬಹುದು<br> ಹಾಕಿದ ಚಾವಿಯನ್ನು ಅವರಿಗೊಪ್ಪಿಸಿ<br> ಬಂದಿರುವೆಯಷ್ಟೆ</p>.<p><br> ಗೋಡೆ ಗಡಿಯಾರ ಅಜ್ಜಿಯ ನೂಲು<br> ತಾತನ ನೆನಪು ಅಪ್ಪ ಅಮ್ಮರು ಹೇಳಿದ<br> ಹಿತವಚನಗಳೆಲ್ಲಾ ಇಲ್ಲಿ ಕಾಲದ ಚಿಗುರಾಗಿ <br> ಅರಳಿನಿಂತಿರಬಹುದು</p>.<p><br> ನೀನು ನುಡಿದ ಬಿರುನುಡಿಯೊಂದು<br> ಮನೆಯಿಂದ ಆಚೆತಳ್ಳಿದರೂ<br> ಮತ್ತೆ ಜೋಡಿಸುವ ಬಳ್ಳಿ ಹುಡುಕಿ ಹೊರಟೆ<br> ಹತ್ತು ನೂರು ಸಾವಿರ ಲಕ್ಷ ದನಿಗಳಲ್ಲಿ<br> ಪ್ರತಿಧ್ವನಿಯಾದೆ</p>.<p><br> ಎಲ್ಲಿ ರಕ್ತದ ಮಡುವುಗಟ್ಟಿ ಕಣ್ಣೀರಲ್ಲಿ ಬದುಕು <br> ತೊಳೆದುಹೋಗಿತ್ತೋ ಅಲ್ಲೊಂದು ನಿನ್ನ <br> ಪಾದದ ಗುರುತು ಮಗುವಿನಂತೆ ಉಳಿದಿತ್ತು<br> ಸರ್ವ ಜನಾಂಗದ ಶಾಂತಿಯ <br> ಹೂದೋಟವೊಂದು<br> ತುಂಬು ಅರಳಿ ನಿನ್ನ ಅಪಮಾನಕೆ <br> ಉತ್ತರವಾಯಿತು</p>.<p><br> ಅವರಂತೆ ನೀನೂ ನಮ್ಮ ಮನೆಯ ಬಂಧುವೇ<br> ಈ ಮಣ್ಣ ಕಣದಲ್ಲಿ ನಿಂತ ಮಹಾಬಿಂದುವೇ!<br> ಸೂರ್ಯ ಎಂದಿನಂತೆ ಪೂರ್ವದಲ್ಲಿಯೇ <br> ಮೂಡುತ್ತಾನೆ<br> ಅವನೆಷ್ಟೇ ಉರಿಯುಂಡರೂ ಬೆಳಕ <br> ತಂಪುನೀಡುವುದನ್ನು<br> ಮರೆಯುವುದಿಲ್ಲ<br> ಚಂದ್ರನ ಜೊತೆ ಅವನು ಮಾತನ್ನೆಂದೂ <br> ಬಿಡುವುದಿಲ್ಲ</p>.<p>ನಾವು ಮನುಷ್ಯರು<br /> ಅಂತರಂಗದಲ್ಲಾದರೂ ಪಿಸುಮಾತ <br /> ನುಡಿಯಬೇಕು<br /> ಬಿರುನುಡಿಯ ಮರೆತು<br /> ಪ್ರೀತಿ ಹಂಚಬೇಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>