<p>ಅವರು ಹೆಸರಾಂತ ಸ್ವಾಮಿಗಳು.<br />ಈಗಲೂ ಇದ್ದಾರೆ. ತುಂಬಾ ಭಾವುಕರು.<br />ಕೆಲವೊಮ್ಮೆ ಗೊತ್ತಿಲ್ಲದೇ ಏನೇನೋ ಮಾತಾಡಿ ಮಾಡಲು ಹೋಗಿ, ಇಲ್ಲದ ತೊಂದರೆ ತಂದುಕೊಳ್ಳುತ್ತಾರೆ<br />ಅವರಿಗೆ ನಮ್ಮ ಯಕ್ಷಗಾನ ಅಂದರೆ ಪ್ರಾಣ.<br />ಆಟ ಆಡಿಸುತ್ತಿದ್ದರು.</p>.<p>***<br />‘ರಾತ್ರಿ ಬೇಗ ಆಟ ಶುರು ಮಾಡಿ ಬೇಗ ಮುಗಿಸಿದರೆ ಒಳ್ಳೆಯದು. ಕೊನೆಯವರೆಗೆ ಜನ ನಿಲ್ಲುವುದಿಲ್ಲ’<br />ಆಗಲೇ ಟಿ.ವಿ. ಯುಗ ಬಂದಾಗಿತ್ತು.<br />ನಾನೆಂದರೆ ಆ ಸ್ವಾಮಿಗಳಿಗೆ ಸಲಿಗೆ.<br />ಯಾವಾಗಲಾದರೂ ಹೊತ್ತು ಗೊತ್ತು ಇಲ್ಲದೇ ಕರೆಯುತ್ತಾರೆ.<br />‘ಭಟ್ಟರೇ, ಬನ್ನಿ ಕೆಲಸ ಇದೆ’.<br />ನಾನು ಅವರ ಬಳಿಗೆ ಓಡುವುದು.<br />ಸುಮ್ಮನೆ ಅವರಿಗೆ ಸಮಯ ಕಳೆಯಲಿಕ್ಕೆ ನಾನು.<br />ಆದರೆ ಸ್ವಾಮಿಗಳಿಗೆ ಸಂಜೆ ಪೂಜೆಯ ಹೊತ್ತು.<br />ಬಿಡುವ ಹಾಗಿಲ್ಲ<br />‘ಇಲ್ಲ’. ಅವರ ಮಾತು ದೃಢ.<br />‘ರಾತ್ರಿ ಒಂಬತ್ತರ ಮೇಲೆಯೇ ಶುರು ಮಾಡಿ’.<br />‘ನಾನು ಎಲ್ಲರ ಕುಣಿತವನ್ನು ನೋಡಬೇಕು. ಅವರು<br />ಆಡುವುದನ್ನು ಕುಣಿಯುವುದನ್ನು ನಾನು ನೋಡಬೇಕು.<br />ಮತ್ತೆ ನಾನು ನೋಡಲಿಲ್ಲ ಎಂದು ಅವರಿಗೆ ಬೇಸರವಾಗಬಾರದು’.</p>.<p>***<br />ಹಾಗಾಗಿ ರಾತ್ರಿ ತಡ ಆಟ ಶುರು ಆಗುತ್ತಿತ್ತು.<br />ಆಟ ಮುಗಿಸಿ ಮನೆಗೆ ಬರುವುದು ಸರಿರಾತ್ರಿಗೆ.<br />ಆ ದಿನ ಜೋರು ಮಳೆ.<br />ನಾನು ಮನೆಗೆ ಬರುವಾಗ ಒಂದು ನಾಯಿ ಬಾಗಿಲಲ್ಲಿ ಮಲಗಿದ್ದು,<br />ನನ್ನನ್ನು ನೋಡಿದ ಕೂಡಲೇ ಓಡಿಹೋಯಿತು.</p>.<p>***<br />ನನಗೆ, ‘ಪಾಪ. ಯಾರ ಮನೆಯದ್ದೋ ಅಥವಾ ದಾರಿ<br />ತಪ್ಪಿರಬೇಕು ಬಂದಿರಬೇಕು. ಉಪವಾಸ ಇರಬೇಕು’<br />ಅನ್ನಿಸಿತು. ಹಾಗಂತ ನನಗೆ ಪ್ರಾಣಿಗಳನ್ನು<br />ಸಾಕುವುದರಲ್ಲಿ<br />ಅಂತಹಾ ಆಸಕ್ತಿಯಿಲ್ಲ.<br />ಆದರೂ ಮನೆಯಲ್ಲಿ ತಂದಿಟ್ಟ ಹಳೆಯ ಬ್ರೆಡ್ ಇತ್ತು.<br />ತಂದು ಹೊರಗೆ ಇಟ್ಟು ಬಾಗಿಲು ಹಾಕಿ ಮಲಗಿದೆ.</p>.<p>***<br />ಮರುದಿನವೂ ರಾತ್ರಿ ಆ ನಾಯಿ ಹಾಜರ್!<br />ನಾನು ಹಾಕುವ ಬ್ರೆಡ್ಗಾಗಿ.<br />ಅಲ್ಲಿಯೇ ಬಾಲ ಅಲ್ಲಾಡಿಸುತ್ತಾ ನಿಂತಿದೆ.<br />ನೋಡಲೂ ಚೆನ್ನಾಗಿದೆ.<br />ಯಾರ ಮನೆಯದ್ದೋ ಏನೋ?<br />ಬಹುಶಃ ಬುದ್ಧಿ ಕಲಿಸಿದ ನಾಯಿ ಇರಬೇಕು.<br />ಬೇರೆ ಊರಿಗೆ ವರ್ಗವಾಗಿ ಹೋಗುವಾಗ ಸಾಕಿದ್ದ ಇದು ಹೆಚ್ಚಾಗಿರಬೇಕು. ಅದಕ್ಕೇ ಬಿಟ್ಟು ಹೋಗಿರಬೇಕು.</p>.<p>***<br />ಅದಕ್ಕೆ ಎದುರು ಕೋರೆ ಹಲ್ಲು ಇರಲಿಲ್ಲ.<br />ಹಾಗಾಗಿ ಕಚ್ಚಿದರೂ ಅಪಾಯ ಇಲ್ಲ.<br />ಹಾಗೆ ಮನೆ ಸೇರಿದ ಆ ನಾಯಿ, ಅದಕ್ಕೆ ಹೆಸರು ಇಟ್ಟೆನಾ? ಗೊತ್ತಿಲ್ಲ. ಅದು ಬೇಡ.<br />ಅದಕ್ಕೆ ಅನ್ನ ಕೊಟ್ಟದ್ದಕ್ಕೆ ನಮ್ಮ ಮನೆಯನ್ನು ಕಾಯತೊಡಗಿತು.<br />ಯಜಮಾನಿಕೆಗೆ ತೊಡಗಿತು.<br />***</p>.<p>ಒಮ್ಮೆ ಆಕಸ್ಮಿಕವಾಗಿ ಅದು ನೆರೆಮನೆಯ ಹೆಂಗಸಿಗೆ ಕಚ್ಚಿತು ಎಂದು ಹತ್ತಿರದ ನಾಲ್ಕು ಮನೆಯವರು ಬೆಳಿಗ್ಗೆ ಬೆಳಿಗ್ಗೆ ಬಂದು ‘ನಿಮ್ಮ ನಾಯಿಯನ್ನು ನಾವು ಕೊಲ್ಲುತ್ತೇವೆ. ಅದು ದಾರಿಯಲ್ಲಿ ಹೋಗುವವರಿಗೆ ಕಚ್ಚುತ್ತದೆ’<br />ಎಂದರು.<br />ನಾನು, ‘ಅಡ್ಡಿಲ್ಲ. ಹಾಗೇ ಮಾಡಿ’<br />ಅಂದೆ.<br />ನನಗೆ ನೋವಾಗಿತ್ತು. ಅದು ಆ ಹೆಂಗಸಿಗೆ ಕಚ್ಚಿರಲಿಲ್ಲ.<br />ಇದು ಬೊಗಳಿದ್ದು ನೋಡಿ ಅವಳಿಗೆ ಗಾಬರಿಯಾಗಿರಬೇಕು. ಓಡಿದಳು. ಬಿದ್ದಳು.<br />ಆದರೆ ಅಪವಾದ ನಾಯಿಯ ಮೇಲೆ.<br />ಅದಕ್ಕೆ ಮಾತಾಡಲು ಬರುವುದಿಲ್ಲವಲ್ಲ!</p>.<p>***<br />ರಾತ್ರಿ ಗೋಳೋ ಎಂದು ಅಳುವ ಶಬ್ದ!<br />ಎಚ್ಚರಾಯಿತು.<br />ಏನೆಂದು ನೋಡಲು ಹೊರಗೆ ಬಂದೆ.<br />ಮಗಳು.<br />ನಾಯಿಯ ಹತ್ತಿರ ಇದ್ದಾಳೆ.<br />ಅದರ ಕುತ್ತಿಗೆ ಅಪ್ಪಿ ಹಿಡಿದುಕೊಂಡು ಅಳುತ್ತಿದ್ದಾಳೆ.<br />ನನ್ನನ್ನು ನೋಡಿ,<br />‘ಅಪ್ಪಾ, ನಿನಗೆ ಏನೂ ಅನ್ನಿಸುವುದಿಲ್ಲವೆ?<br />ಅವರೆಲ್ಲ ಸೇರಿ ನಮ್ಮ ನಾಯಿಯನ್ನು ಬಡಿದು ಕೊಲ್ಲುತ್ತಾರೆ’.<br />ನನಗೆ ತಡೆಯಲಾಗಲಿಲ್ಲ.<br />‘ಚಿತ್ರಹಿಂಸೆ ಮಾಡುತ್ತಾರಲ್ಲವೆ?’</p>.<p>***<br />ಮರುದಿನವೇ ಬೆಳಿಗ್ಗೆ.<br />ಬಾಡಿಗೆ ಕಾರು ತರಿಸಿ ಅದರಲ್ಲಿ ಆ ನಾಯಿಯನ್ನು ಕೂರಿಸಿ ಕೂರಾಡಿಗೆ ಬಂದೆ. ಅಲ್ಲಿ ಬಿಟ್ಟು ತಮ್ಮನಿಗೆ ಹೇಳಿದೆ–<br />‘ನೀನು ಮಾಡುವ ಊಟದಲ್ಲಿ ಇದಕ್ಕೆ ಒಂದಷ್ಟು ಹಾಕು. ಅದು ಮೋಸ ಮಾಡುವುದಿಲ್ಲ.’<br />ಪಾಪ. ಅದಕ್ಕೇನು ಗೊತ್ತು? ತನಗೆ ಅನ್ನ ಇತ್ತವನ ಆಜ್ಞೆ.<br />ಹೇಳಿದ ಕೂಡಲೇ ಬಾಲ ಅಲ್ಲಾಡಿಸುತ್ತಾ ಬಂದು ಕಾರಿನ ಹಿಂದಿನ ಸೀಟಿನಲ್ಲಿ ಹೇಳಿದ ಕೂಡಲೇ ಮನುಷ್ಯರಂತೆ ಬಂದು ಕುಳಿತಿತ್ತು.</p>.<p>***<br />ಕೂರಾಡಿ.<br />ಅದು ನಮ್ಮ ಹಿರಿಯರ ಮನೆ.<br />ಅಲ್ಲಿ ಆ ನಾಯಿ ಬಹಳ ಕಾಲ ಇತ್ತು<br />ಅನ್ನ ಹಾಕಿದ ಅವರ ಸೇವೆ ಮಾಡುತ್ತಾ.</p>.<p>***<br />ಒಮ್ಮೆ ಆ ಮನೆಗೆ ಯಾರೋ ಗಿರಾಕಿಗಳು ಬಂದಿದ್ದರು. ಅವರದು ಹುಲ್ಲು ವ್ಯಾಪಾರ. ಹೀಗೇ. ಲಾಭಕ್ಕಲ್ಲ.</p>.<p>***<br />ಹುಲ್ಲು ಸೂಡಿ ಅವರಿಗೆ ಬೇಕಿತ್ತು.<br />ಹತ್ತೇ ಸೂಡಿ. ಲೆಕ್ಕ ಮಾಡಿ ಕೊಟ್ಟು ನನ್ನ ತಮ್ಮ ಮನೆಯ ಒಳಗೆ ಬಂದಿದ್ದರು.<br />ಹೊರಗೆ ಬೊಬ್ಬೆ ಹಾಕಿದ ಶಬ್ದ.<br />‘ನಾಯಿ ಕಚ್ಚಿದೆ. ಬನ್ನಿ. ಬಿಡಿಸಿ.’<br />ಭಟ್ಟರ ತಮ್ಮ ಓಡಿದರು.</p>.<p>***</p>.<p>ಹೌದು. ನಾಯಿ ಸರಪಳಿಯನ್ನು ಬಿಡಿಸಿಕೊಂಡು ಹೋಗಿ, ಆ ಹುಲ್ಲು ಸೂಡಿ ಗಿರಾಕಿಯ ಪಂಚೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದೆ. ಕಚ್ಚಲಿಕ್ಕೆ ಅದಕ್ಕೆ ಹಲ್ಲಿಲ್ಲವಲ್ಲ!</p>.<p>***<br />ಅವನು. ಆ ಗಿರಾಕಿ.<br />ಹತ್ತು ಸೂಡಿಯ ಬದಲು ಇಪ್ಪತ್ತು ಒಯ್ಯುತ್ತಿದ್ದ.</p>.<p>***<br />ಮತ್ತೊಮ್ಮೆ ಹೀಗಾಯಿತು.<br />ಒಬ್ಬ ಕೆಲಸದ ಹೆಂಗಸು. ಮನೆಯ ಎದುರಿನಿಂದ ಹೋಗುತ್ತಿದ್ದಳು.<br />ಮಧ್ಯಾಹ್ನದ ಹೊತ್ತು.<br />ಎಲ್ಲರೂ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಸಮಯ.<br />ಇದ್ದಕ್ಕಿದ್ದಂತೆ ಬೊಬ್ಬೆ! ‘ನಾಯಿ ಕಚ್ಚಿದೆ ಬನ್ನಿ. ಕಾಪಾಡಿ. ಕಾಪಾಡಿ’</p>.<p>***<br />ಕಚ್ಚಲಿಕ್ಕೆ ಅದಕ್ಕೆ ಚೂಪಾದ ಕೋರೆ ಹಲ್ಲಿದ್ದರಲ್ಲವೆ?<br />ಮೊದಲೇ ಹೀಗೆಲ್ಲ ಆಗಬಹುದೆಂದು ಕಿತ್ತು ಹಾಕಿದ್ದರಲ್ಲ.</p>.<p>***<br />ಅದರೂ ಬೊಬ್ಬೆ ಕೇಳಿದ ತಮ್ಮ ಓಡಿದ.<br />ನಾಯಿ ಅವಳ ಸೀರೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದೆ.<br />ಮತ್ತೆ ಹೇಳುತ್ತಿದ್ದೇನೆ,<br />ಅದಕ್ಕೆ ಕಚ್ಚಲು ಕೋರೆ ಹಲ್ಲೇ ಇರಲಿಲ್ಲ.<br />ಮತ್ತೆ ತನ್ನ ಸರಪಳಿಯನ್ನು ಕುತ್ತಿಗೆಯಿಂದ ಬಿಡಿಸಿಕೊಂಡು ಹೋಗಿ ಬಾಯಿಯಲ್ಲಿ ಅವಳ ಸೀರೆ ಹಿಡಿದು ಎಳೆಯುತ್ತಿದೆ.<br />ಆ ಕೆಲಸದವಳು ತನ್ನ ಕೈಯ ಕತ್ತಿಯಿಂದ ಅದಕ್ಕೆ ಹೊಡೆಯುತ್ತಿದ್ದರೂ, ಪೆಟ್ಟು ಹಾಕಿದರೂ ಅದು ಬಿಡುವುದಿಲ್ಲ.<br />ಅವಳ ಸೀರೆಯ ಮರೆಯಲ್ಲಿದ್ದ ಅಡಿಕೆ,<br />ತೋಟದಿಂದ ಕದ್ದು ಒಯ್ಯುತ್ತಿದ್ದ ಒಣ ಅಡಿಕೆ.<br />ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.<br />ಅಂತಹ ನಾಯಿ ಅದು.</p>.<p>***<br />ತಮ್ಮನ ಮನೆಯ ನಾಯಿ.<br />ಬಹಳ ಕಾಲ ಅವರ ಸೇವೆ ಮಾಡಿ ಕೊನೆಯುಸಿರೆಳೆಯಿತು.<br />ನಂತರವೂ ಆ ನಾಯಿ ಇದೆ ಎಂದೇ ಕಳ್ಳಕಾಕರು ಮನೆಯ ಹತ್ತಿರ ಸುಳಿಯುತ್ತಿರಲಿಲ್ಲ.<br />ಅವರ ಮನೆಯ ಸುತ್ತಮುತ್ತ ಕಾಡು.<br />ಕುಡುಕನ ಉಪದ್ರವ.<br />ನಾಯಿ ಸಾಕಿದರೆ ರಾತ್ರಿ ಹೊತ್ತುಕೊಂಡು ಹೋಗುತ್ತದೆ.</p>.<p>***<br />ಯಾರೋ ಹೇಳಿದರಂತೆ.<br />ನಮ್ಮ ಮನೆಯಲ್ಲಿ ಒಂದು ನಾಯಿ ಇದೆ.<br />ಪ್ರೀತಿಯಿಂದ ಸಾಕಿದ್ದೇವೆ.<br />ನಮಗೆ ಹೆಚ್ಚಲ್ಲ.<br />ಬೇಕಾದರೆ ಕೊಡುತ್ತೇವೆ.<br />ಅವರ ತಮ್ಮ ಹೇಳಿದರಂತೆ.<br />‘ಬೇಡ ನಾವು ನಾಯಿಯನ್ನು ಕೊಲ್ಲುವುದಿಲ್ಲ. ನೀವೇ ಸಾಕಿ’</p>.<p><em><strong>(ಎಸ್.ವಿ. ಭಟ್ಟರು ಹೇಳಿದ ಕತೆ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅವರು ಹೆಸರಾಂತ ಸ್ವಾಮಿಗಳು.<br />ಈಗಲೂ ಇದ್ದಾರೆ. ತುಂಬಾ ಭಾವುಕರು.<br />ಕೆಲವೊಮ್ಮೆ ಗೊತ್ತಿಲ್ಲದೇ ಏನೇನೋ ಮಾತಾಡಿ ಮಾಡಲು ಹೋಗಿ, ಇಲ್ಲದ ತೊಂದರೆ ತಂದುಕೊಳ್ಳುತ್ತಾರೆ<br />ಅವರಿಗೆ ನಮ್ಮ ಯಕ್ಷಗಾನ ಅಂದರೆ ಪ್ರಾಣ.<br />ಆಟ ಆಡಿಸುತ್ತಿದ್ದರು.</p>.<p>***<br />‘ರಾತ್ರಿ ಬೇಗ ಆಟ ಶುರು ಮಾಡಿ ಬೇಗ ಮುಗಿಸಿದರೆ ಒಳ್ಳೆಯದು. ಕೊನೆಯವರೆಗೆ ಜನ ನಿಲ್ಲುವುದಿಲ್ಲ’<br />ಆಗಲೇ ಟಿ.ವಿ. ಯುಗ ಬಂದಾಗಿತ್ತು.<br />ನಾನೆಂದರೆ ಆ ಸ್ವಾಮಿಗಳಿಗೆ ಸಲಿಗೆ.<br />ಯಾವಾಗಲಾದರೂ ಹೊತ್ತು ಗೊತ್ತು ಇಲ್ಲದೇ ಕರೆಯುತ್ತಾರೆ.<br />‘ಭಟ್ಟರೇ, ಬನ್ನಿ ಕೆಲಸ ಇದೆ’.<br />ನಾನು ಅವರ ಬಳಿಗೆ ಓಡುವುದು.<br />ಸುಮ್ಮನೆ ಅವರಿಗೆ ಸಮಯ ಕಳೆಯಲಿಕ್ಕೆ ನಾನು.<br />ಆದರೆ ಸ್ವಾಮಿಗಳಿಗೆ ಸಂಜೆ ಪೂಜೆಯ ಹೊತ್ತು.<br />ಬಿಡುವ ಹಾಗಿಲ್ಲ<br />‘ಇಲ್ಲ’. ಅವರ ಮಾತು ದೃಢ.<br />‘ರಾತ್ರಿ ಒಂಬತ್ತರ ಮೇಲೆಯೇ ಶುರು ಮಾಡಿ’.<br />‘ನಾನು ಎಲ್ಲರ ಕುಣಿತವನ್ನು ನೋಡಬೇಕು. ಅವರು<br />ಆಡುವುದನ್ನು ಕುಣಿಯುವುದನ್ನು ನಾನು ನೋಡಬೇಕು.<br />ಮತ್ತೆ ನಾನು ನೋಡಲಿಲ್ಲ ಎಂದು ಅವರಿಗೆ ಬೇಸರವಾಗಬಾರದು’.</p>.<p>***<br />ಹಾಗಾಗಿ ರಾತ್ರಿ ತಡ ಆಟ ಶುರು ಆಗುತ್ತಿತ್ತು.<br />ಆಟ ಮುಗಿಸಿ ಮನೆಗೆ ಬರುವುದು ಸರಿರಾತ್ರಿಗೆ.<br />ಆ ದಿನ ಜೋರು ಮಳೆ.<br />ನಾನು ಮನೆಗೆ ಬರುವಾಗ ಒಂದು ನಾಯಿ ಬಾಗಿಲಲ್ಲಿ ಮಲಗಿದ್ದು,<br />ನನ್ನನ್ನು ನೋಡಿದ ಕೂಡಲೇ ಓಡಿಹೋಯಿತು.</p>.<p>***<br />ನನಗೆ, ‘ಪಾಪ. ಯಾರ ಮನೆಯದ್ದೋ ಅಥವಾ ದಾರಿ<br />ತಪ್ಪಿರಬೇಕು ಬಂದಿರಬೇಕು. ಉಪವಾಸ ಇರಬೇಕು’<br />ಅನ್ನಿಸಿತು. ಹಾಗಂತ ನನಗೆ ಪ್ರಾಣಿಗಳನ್ನು<br />ಸಾಕುವುದರಲ್ಲಿ<br />ಅಂತಹಾ ಆಸಕ್ತಿಯಿಲ್ಲ.<br />ಆದರೂ ಮನೆಯಲ್ಲಿ ತಂದಿಟ್ಟ ಹಳೆಯ ಬ್ರೆಡ್ ಇತ್ತು.<br />ತಂದು ಹೊರಗೆ ಇಟ್ಟು ಬಾಗಿಲು ಹಾಕಿ ಮಲಗಿದೆ.</p>.<p>***<br />ಮರುದಿನವೂ ರಾತ್ರಿ ಆ ನಾಯಿ ಹಾಜರ್!<br />ನಾನು ಹಾಕುವ ಬ್ರೆಡ್ಗಾಗಿ.<br />ಅಲ್ಲಿಯೇ ಬಾಲ ಅಲ್ಲಾಡಿಸುತ್ತಾ ನಿಂತಿದೆ.<br />ನೋಡಲೂ ಚೆನ್ನಾಗಿದೆ.<br />ಯಾರ ಮನೆಯದ್ದೋ ಏನೋ?<br />ಬಹುಶಃ ಬುದ್ಧಿ ಕಲಿಸಿದ ನಾಯಿ ಇರಬೇಕು.<br />ಬೇರೆ ಊರಿಗೆ ವರ್ಗವಾಗಿ ಹೋಗುವಾಗ ಸಾಕಿದ್ದ ಇದು ಹೆಚ್ಚಾಗಿರಬೇಕು. ಅದಕ್ಕೇ ಬಿಟ್ಟು ಹೋಗಿರಬೇಕು.</p>.<p>***<br />ಅದಕ್ಕೆ ಎದುರು ಕೋರೆ ಹಲ್ಲು ಇರಲಿಲ್ಲ.<br />ಹಾಗಾಗಿ ಕಚ್ಚಿದರೂ ಅಪಾಯ ಇಲ್ಲ.<br />ಹಾಗೆ ಮನೆ ಸೇರಿದ ಆ ನಾಯಿ, ಅದಕ್ಕೆ ಹೆಸರು ಇಟ್ಟೆನಾ? ಗೊತ್ತಿಲ್ಲ. ಅದು ಬೇಡ.<br />ಅದಕ್ಕೆ ಅನ್ನ ಕೊಟ್ಟದ್ದಕ್ಕೆ ನಮ್ಮ ಮನೆಯನ್ನು ಕಾಯತೊಡಗಿತು.<br />ಯಜಮಾನಿಕೆಗೆ ತೊಡಗಿತು.<br />***</p>.<p>ಒಮ್ಮೆ ಆಕಸ್ಮಿಕವಾಗಿ ಅದು ನೆರೆಮನೆಯ ಹೆಂಗಸಿಗೆ ಕಚ್ಚಿತು ಎಂದು ಹತ್ತಿರದ ನಾಲ್ಕು ಮನೆಯವರು ಬೆಳಿಗ್ಗೆ ಬೆಳಿಗ್ಗೆ ಬಂದು ‘ನಿಮ್ಮ ನಾಯಿಯನ್ನು ನಾವು ಕೊಲ್ಲುತ್ತೇವೆ. ಅದು ದಾರಿಯಲ್ಲಿ ಹೋಗುವವರಿಗೆ ಕಚ್ಚುತ್ತದೆ’<br />ಎಂದರು.<br />ನಾನು, ‘ಅಡ್ಡಿಲ್ಲ. ಹಾಗೇ ಮಾಡಿ’<br />ಅಂದೆ.<br />ನನಗೆ ನೋವಾಗಿತ್ತು. ಅದು ಆ ಹೆಂಗಸಿಗೆ ಕಚ್ಚಿರಲಿಲ್ಲ.<br />ಇದು ಬೊಗಳಿದ್ದು ನೋಡಿ ಅವಳಿಗೆ ಗಾಬರಿಯಾಗಿರಬೇಕು. ಓಡಿದಳು. ಬಿದ್ದಳು.<br />ಆದರೆ ಅಪವಾದ ನಾಯಿಯ ಮೇಲೆ.<br />ಅದಕ್ಕೆ ಮಾತಾಡಲು ಬರುವುದಿಲ್ಲವಲ್ಲ!</p>.<p>***<br />ರಾತ್ರಿ ಗೋಳೋ ಎಂದು ಅಳುವ ಶಬ್ದ!<br />ಎಚ್ಚರಾಯಿತು.<br />ಏನೆಂದು ನೋಡಲು ಹೊರಗೆ ಬಂದೆ.<br />ಮಗಳು.<br />ನಾಯಿಯ ಹತ್ತಿರ ಇದ್ದಾಳೆ.<br />ಅದರ ಕುತ್ತಿಗೆ ಅಪ್ಪಿ ಹಿಡಿದುಕೊಂಡು ಅಳುತ್ತಿದ್ದಾಳೆ.<br />ನನ್ನನ್ನು ನೋಡಿ,<br />‘ಅಪ್ಪಾ, ನಿನಗೆ ಏನೂ ಅನ್ನಿಸುವುದಿಲ್ಲವೆ?<br />ಅವರೆಲ್ಲ ಸೇರಿ ನಮ್ಮ ನಾಯಿಯನ್ನು ಬಡಿದು ಕೊಲ್ಲುತ್ತಾರೆ’.<br />ನನಗೆ ತಡೆಯಲಾಗಲಿಲ್ಲ.<br />‘ಚಿತ್ರಹಿಂಸೆ ಮಾಡುತ್ತಾರಲ್ಲವೆ?’</p>.<p>***<br />ಮರುದಿನವೇ ಬೆಳಿಗ್ಗೆ.<br />ಬಾಡಿಗೆ ಕಾರು ತರಿಸಿ ಅದರಲ್ಲಿ ಆ ನಾಯಿಯನ್ನು ಕೂರಿಸಿ ಕೂರಾಡಿಗೆ ಬಂದೆ. ಅಲ್ಲಿ ಬಿಟ್ಟು ತಮ್ಮನಿಗೆ ಹೇಳಿದೆ–<br />‘ನೀನು ಮಾಡುವ ಊಟದಲ್ಲಿ ಇದಕ್ಕೆ ಒಂದಷ್ಟು ಹಾಕು. ಅದು ಮೋಸ ಮಾಡುವುದಿಲ್ಲ.’<br />ಪಾಪ. ಅದಕ್ಕೇನು ಗೊತ್ತು? ತನಗೆ ಅನ್ನ ಇತ್ತವನ ಆಜ್ಞೆ.<br />ಹೇಳಿದ ಕೂಡಲೇ ಬಾಲ ಅಲ್ಲಾಡಿಸುತ್ತಾ ಬಂದು ಕಾರಿನ ಹಿಂದಿನ ಸೀಟಿನಲ್ಲಿ ಹೇಳಿದ ಕೂಡಲೇ ಮನುಷ್ಯರಂತೆ ಬಂದು ಕುಳಿತಿತ್ತು.</p>.<p>***<br />ಕೂರಾಡಿ.<br />ಅದು ನಮ್ಮ ಹಿರಿಯರ ಮನೆ.<br />ಅಲ್ಲಿ ಆ ನಾಯಿ ಬಹಳ ಕಾಲ ಇತ್ತು<br />ಅನ್ನ ಹಾಕಿದ ಅವರ ಸೇವೆ ಮಾಡುತ್ತಾ.</p>.<p>***<br />ಒಮ್ಮೆ ಆ ಮನೆಗೆ ಯಾರೋ ಗಿರಾಕಿಗಳು ಬಂದಿದ್ದರು. ಅವರದು ಹುಲ್ಲು ವ್ಯಾಪಾರ. ಹೀಗೇ. ಲಾಭಕ್ಕಲ್ಲ.</p>.<p>***<br />ಹುಲ್ಲು ಸೂಡಿ ಅವರಿಗೆ ಬೇಕಿತ್ತು.<br />ಹತ್ತೇ ಸೂಡಿ. ಲೆಕ್ಕ ಮಾಡಿ ಕೊಟ್ಟು ನನ್ನ ತಮ್ಮ ಮನೆಯ ಒಳಗೆ ಬಂದಿದ್ದರು.<br />ಹೊರಗೆ ಬೊಬ್ಬೆ ಹಾಕಿದ ಶಬ್ದ.<br />‘ನಾಯಿ ಕಚ್ಚಿದೆ. ಬನ್ನಿ. ಬಿಡಿಸಿ.’<br />ಭಟ್ಟರ ತಮ್ಮ ಓಡಿದರು.</p>.<p>***</p>.<p>ಹೌದು. ನಾಯಿ ಸರಪಳಿಯನ್ನು ಬಿಡಿಸಿಕೊಂಡು ಹೋಗಿ, ಆ ಹುಲ್ಲು ಸೂಡಿ ಗಿರಾಕಿಯ ಪಂಚೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದೆ. ಕಚ್ಚಲಿಕ್ಕೆ ಅದಕ್ಕೆ ಹಲ್ಲಿಲ್ಲವಲ್ಲ!</p>.<p>***<br />ಅವನು. ಆ ಗಿರಾಕಿ.<br />ಹತ್ತು ಸೂಡಿಯ ಬದಲು ಇಪ್ಪತ್ತು ಒಯ್ಯುತ್ತಿದ್ದ.</p>.<p>***<br />ಮತ್ತೊಮ್ಮೆ ಹೀಗಾಯಿತು.<br />ಒಬ್ಬ ಕೆಲಸದ ಹೆಂಗಸು. ಮನೆಯ ಎದುರಿನಿಂದ ಹೋಗುತ್ತಿದ್ದಳು.<br />ಮಧ್ಯಾಹ್ನದ ಹೊತ್ತು.<br />ಎಲ್ಲರೂ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವ ಸಮಯ.<br />ಇದ್ದಕ್ಕಿದ್ದಂತೆ ಬೊಬ್ಬೆ! ‘ನಾಯಿ ಕಚ್ಚಿದೆ ಬನ್ನಿ. ಕಾಪಾಡಿ. ಕಾಪಾಡಿ’</p>.<p>***<br />ಕಚ್ಚಲಿಕ್ಕೆ ಅದಕ್ಕೆ ಚೂಪಾದ ಕೋರೆ ಹಲ್ಲಿದ್ದರಲ್ಲವೆ?<br />ಮೊದಲೇ ಹೀಗೆಲ್ಲ ಆಗಬಹುದೆಂದು ಕಿತ್ತು ಹಾಕಿದ್ದರಲ್ಲ.</p>.<p>***<br />ಅದರೂ ಬೊಬ್ಬೆ ಕೇಳಿದ ತಮ್ಮ ಓಡಿದ.<br />ನಾಯಿ ಅವಳ ಸೀರೆಯನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದೆ.<br />ಮತ್ತೆ ಹೇಳುತ್ತಿದ್ದೇನೆ,<br />ಅದಕ್ಕೆ ಕಚ್ಚಲು ಕೋರೆ ಹಲ್ಲೇ ಇರಲಿಲ್ಲ.<br />ಮತ್ತೆ ತನ್ನ ಸರಪಳಿಯನ್ನು ಕುತ್ತಿಗೆಯಿಂದ ಬಿಡಿಸಿಕೊಂಡು ಹೋಗಿ ಬಾಯಿಯಲ್ಲಿ ಅವಳ ಸೀರೆ ಹಿಡಿದು ಎಳೆಯುತ್ತಿದೆ.<br />ಆ ಕೆಲಸದವಳು ತನ್ನ ಕೈಯ ಕತ್ತಿಯಿಂದ ಅದಕ್ಕೆ ಹೊಡೆಯುತ್ತಿದ್ದರೂ, ಪೆಟ್ಟು ಹಾಕಿದರೂ ಅದು ಬಿಡುವುದಿಲ್ಲ.<br />ಅವಳ ಸೀರೆಯ ಮರೆಯಲ್ಲಿದ್ದ ಅಡಿಕೆ,<br />ತೋಟದಿಂದ ಕದ್ದು ಒಯ್ಯುತ್ತಿದ್ದ ಒಣ ಅಡಿಕೆ.<br />ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.<br />ಅಂತಹ ನಾಯಿ ಅದು.</p>.<p>***<br />ತಮ್ಮನ ಮನೆಯ ನಾಯಿ.<br />ಬಹಳ ಕಾಲ ಅವರ ಸೇವೆ ಮಾಡಿ ಕೊನೆಯುಸಿರೆಳೆಯಿತು.<br />ನಂತರವೂ ಆ ನಾಯಿ ಇದೆ ಎಂದೇ ಕಳ್ಳಕಾಕರು ಮನೆಯ ಹತ್ತಿರ ಸುಳಿಯುತ್ತಿರಲಿಲ್ಲ.<br />ಅವರ ಮನೆಯ ಸುತ್ತಮುತ್ತ ಕಾಡು.<br />ಕುಡುಕನ ಉಪದ್ರವ.<br />ನಾಯಿ ಸಾಕಿದರೆ ರಾತ್ರಿ ಹೊತ್ತುಕೊಂಡು ಹೋಗುತ್ತದೆ.</p>.<p>***<br />ಯಾರೋ ಹೇಳಿದರಂತೆ.<br />ನಮ್ಮ ಮನೆಯಲ್ಲಿ ಒಂದು ನಾಯಿ ಇದೆ.<br />ಪ್ರೀತಿಯಿಂದ ಸಾಕಿದ್ದೇವೆ.<br />ನಮಗೆ ಹೆಚ್ಚಲ್ಲ.<br />ಬೇಕಾದರೆ ಕೊಡುತ್ತೇವೆ.<br />ಅವರ ತಮ್ಮ ಹೇಳಿದರಂತೆ.<br />‘ಬೇಡ ನಾವು ನಾಯಿಯನ್ನು ಕೊಲ್ಲುವುದಿಲ್ಲ. ನೀವೇ ಸಾಕಿ’</p>.<p><em><strong>(ಎಸ್.ವಿ. ಭಟ್ಟರು ಹೇಳಿದ ಕತೆ)</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>