ಚಂದ್ರ ಮುಗಿಲನ್ನು ಅಟ್ಟಾಡಿಸಿ ಕುಣಿವಾಗ
ವೃಕ್ಷದೆಲೆಗಳು ಕುಣಿ ಕುಣಿದು ತಿರು ತಿರುಗಿ ನೆಲಕ್ಕಿಳಿವಾಗ
ಕಡಲ ನೀರು
ಸೀತೆ ಸೆರಗಿಗೆ ಸೋಂಕಿ
ಧಗ್ಗನೆದ್ದು ಉರಿಯುತ್ತದೆ
ರಾಮ ರಾಮ.
ಎದೆಯೊಳಗೆ ಕೂತು ಕನಸು ಬರೆವ ಚಿತ್ರಕಾರನಿಗೆ ಹೇಳು ದೊರೆಯೇ
ಗಂಗೆ ತಟದ ಸುಗ್ಗಿ ಹಬ್ಬವ ಚಿತ್ರಿಸಲು.
ನೀರು ಬೆಂಕಿಯಾಗುವ ಪಾಪಿ ನಾನಲ್ಲವಯ್ಯಾ.