<p>ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜಕೀಯ ಬಿಕ್ಕಟ್ಟು, ಅಂತರಿಕ ಯುದ್ಧ, ಯೂರೋಪಿನ ರಾಷ್ಟ್ರಗಳ ನಿರುದ್ಯೋಗ, ಗಡಿ ಸಮಸ್ಯೆ, ಏಷ್ಯಾಖಂಡದ ಜನರ ವಲಸೆ, ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದವರು ಖ್ಯಾತ ವ್ಯಂಗ್ಯಚಿತ್ರಕಾರ ಪರೇಶ್ ನಾಥ್.</p>.<p>ಒಡಿಶಾ ರಾಜ್ಯದ ಪರೇಶ್ ಇಂಗ್ಲಿಷ್ ಮತ್ತು ಅಮೆರಿಕ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವೀಧರರು. ಜಾಗತಿಕ ಬಿಕ್ಕಟ್ಟುಗಳ ಬಗ್ಗೆ ಒಳನೋಟ ಹೊಂದಿರುವ ವ್ಯಂಗ್ಯಚಿತ್ರಕಾರ. ದೇಶದಲ್ಲಿನ ನೋಟು ನಿಷೇಧ, ಕಪ್ಪು ಹಣದ ಬಗ್ಗೆಯೂ ಅವರ ತೀಕ್ಷ್ಣ ಗೆರೆಗಳ ವ್ಯಂಗ್ಯಚಿತ್ರಗಳು ಗಮನಾರ್ಹವಾಗಿವೆ.</p>.<p>ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆಯು ಮೇ 5ರಂದು ಅಂತರರಾಷ್ಟ್ರೀಯ ವ್ಯಂಗ್ಯಚಿತ್ರಕಾರರ ದಿನಾಚರಣೆ ಅಂಗವಾಗಿ ಮೇ 4ರಂದು ಪರೇಶ್ ನಾಥ್ ಅವರ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿದೆ.</p>.<p>ಸದ್ಯ ದುಬೈನ ‘ಖಲೀಜ್ ಟೈಮ್ಸ್’ನಲ್ಲಿ ಅವರು 2005ರಿಂದ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಒಡಿಶಾದ ದಿನಪತ್ರಿಕೆ ‘ಸಮಾಜ‘ದಲ್ಲಿ ಪ್ರಾರಂಭಿಸಿದರು. 1989-1990ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಕೆಲ ಕಾಲ ಕೆಲಸ ಮಾಡಿದರು. ನಂತರ ದೆಹಲಿಯ ‘ನ್ಯಾಷನಲ್ ಹೆರಾಲ್ಡ್’ನಲ್ಲಿ 1990ರಿಂದ 2008ರವರೆಗೆ ಪ್ರಧಾನ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದರು.</p>.<p>ವಿಶ್ವಸಂಸ್ಥೆ ನೀಡುವ ‘ರಾನನ್ ಲೂರೀ ವ್ಯಂಗ್ಯಚಿತ್ರ ಪ್ರಶಸ್ತಿ’ಯನ್ನು 2000 ಮತ್ತು 2001ರಲ್ಲಿ ಸತತವಾಗಿ ಎರಡು ವರ್ಷ ಪಡೆದ ಪ್ರಥಮ ಭಾರತೀಯ ವ್ಯಂಗ್ಯಚಿತ್ರಕಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫ್ರಾನ್ಸ್ ದೇಶದ ಪ್ರತಿಷ್ಟಿತ ಗೌರವವಾದ ‘ ಲೆ ಷವಲೀರ್’ (ನೈಟ್ಹುಡ್) ಪ್ರಶಸ್ತಿಯನ್ನು 2004ರಲ್ಲಿ ‘ಇಂಟರ್ ನ್ಯಾಷನಲ್ ಎಡಿಟೋರಿಯಲ್ ಕಾರ್ಟೂನ್ ಫೆಸ್ಟಿವಲ್’ ನಲ್ಲಿ ಪಡೆದ ಹಿರಿಮೆ ಅವರದ್ದು. ಅವರ ರಾಜಕೀಯ ವ್ಯಂಗ್ಯಚಿತ್ರಗಳು ದೇಶ-ವಿದೇಶಗಳ ಅಸಂಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಪ್ರದರ್ಶನಗೊಂಡಿವೆ.</p>.<p>ಅಲ್ಲದೆ, ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, ನ್ಯೂಸ್ವೀಕ್ ಸೇರಿದಂತೆ ಜಗತ್ತಿನ ಪ್ರಮುಖ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡು ಜನರ ಗಮನ ಸೆಳೆದಿವೆ.</p>.<p><strong>ವ್ಯಂಗ್ಯಚಿತ್ರ ಪ್ರದರ್ಶನ</strong><br /><strong>ಸ್ಥಳ:</strong> ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ ನಂ.1 ಮಿಡ್ ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ,ಬೆಂಗಳೂರು<br /><strong>ಉದ್ಘಾಟನೆ:</strong> ಮೇ 4ರಂದು ಬೆಳಿಗ್ಗೆ 10.30 ಗ್ಯಾಲರಿ ಸಮಯ: ಬೆಳಿಗ್ಗೆ 10ರಿಂದ ಸಂಜೆ 6, ಈ ಪ್ರದರ್ಶನ ಮೇ18ರವರೆಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಸಂಪರ್ಕ: ವಿ.ಜಿ.ನರೇಂದ್ರ, 99800917428</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜಕೀಯ ಬಿಕ್ಕಟ್ಟು, ಅಂತರಿಕ ಯುದ್ಧ, ಯೂರೋಪಿನ ರಾಷ್ಟ್ರಗಳ ನಿರುದ್ಯೋಗ, ಗಡಿ ಸಮಸ್ಯೆ, ಏಷ್ಯಾಖಂಡದ ಜನರ ವಲಸೆ, ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ವ್ಯಂಗ್ಯಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದವರು ಖ್ಯಾತ ವ್ಯಂಗ್ಯಚಿತ್ರಕಾರ ಪರೇಶ್ ನಾಥ್.</p>.<p>ಒಡಿಶಾ ರಾಜ್ಯದ ಪರೇಶ್ ಇಂಗ್ಲಿಷ್ ಮತ್ತು ಅಮೆರಿಕ ಸಾಹಿತ್ಯದಲ್ಲಿ ಸ್ನಾತ್ತಕೋತ್ತರ ಪದವೀಧರರು. ಜಾಗತಿಕ ಬಿಕ್ಕಟ್ಟುಗಳ ಬಗ್ಗೆ ಒಳನೋಟ ಹೊಂದಿರುವ ವ್ಯಂಗ್ಯಚಿತ್ರಕಾರ. ದೇಶದಲ್ಲಿನ ನೋಟು ನಿಷೇಧ, ಕಪ್ಪು ಹಣದ ಬಗ್ಗೆಯೂ ಅವರ ತೀಕ್ಷ್ಣ ಗೆರೆಗಳ ವ್ಯಂಗ್ಯಚಿತ್ರಗಳು ಗಮನಾರ್ಹವಾಗಿವೆ.</p>.<p>ಭಾರತೀಯ ವ್ಯಂಗ್ಯಚಿತ್ರಕಾರ ಸಂಸ್ಥೆಯು ಮೇ 5ರಂದು ಅಂತರರಾಷ್ಟ್ರೀಯ ವ್ಯಂಗ್ಯಚಿತ್ರಕಾರರ ದಿನಾಚರಣೆ ಅಂಗವಾಗಿ ಮೇ 4ರಂದು ಪರೇಶ್ ನಾಥ್ ಅವರ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿದೆ.</p>.<p>ಸದ್ಯ ದುಬೈನ ‘ಖಲೀಜ್ ಟೈಮ್ಸ್’ನಲ್ಲಿ ಅವರು 2005ರಿಂದ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡುತ್ತಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಒಡಿಶಾದ ದಿನಪತ್ರಿಕೆ ‘ಸಮಾಜ‘ದಲ್ಲಿ ಪ್ರಾರಂಭಿಸಿದರು. 1989-1990ರಲ್ಲಿ ಇಂಡಿಯನ್ ಎಕ್ಸ್ಪ್ರೆಸ್ನಲ್ಲಿ ಕೆಲ ಕಾಲ ಕೆಲಸ ಮಾಡಿದರು. ನಂತರ ದೆಹಲಿಯ ‘ನ್ಯಾಷನಲ್ ಹೆರಾಲ್ಡ್’ನಲ್ಲಿ 1990ರಿಂದ 2008ರವರೆಗೆ ಪ್ರಧಾನ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದರು.</p>.<p>ವಿಶ್ವಸಂಸ್ಥೆ ನೀಡುವ ‘ರಾನನ್ ಲೂರೀ ವ್ಯಂಗ್ಯಚಿತ್ರ ಪ್ರಶಸ್ತಿ’ಯನ್ನು 2000 ಮತ್ತು 2001ರಲ್ಲಿ ಸತತವಾಗಿ ಎರಡು ವರ್ಷ ಪಡೆದ ಪ್ರಥಮ ಭಾರತೀಯ ವ್ಯಂಗ್ಯಚಿತ್ರಕಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಫ್ರಾನ್ಸ್ ದೇಶದ ಪ್ರತಿಷ್ಟಿತ ಗೌರವವಾದ ‘ ಲೆ ಷವಲೀರ್’ (ನೈಟ್ಹುಡ್) ಪ್ರಶಸ್ತಿಯನ್ನು 2004ರಲ್ಲಿ ‘ಇಂಟರ್ ನ್ಯಾಷನಲ್ ಎಡಿಟೋರಿಯಲ್ ಕಾರ್ಟೂನ್ ಫೆಸ್ಟಿವಲ್’ ನಲ್ಲಿ ಪಡೆದ ಹಿರಿಮೆ ಅವರದ್ದು. ಅವರ ರಾಜಕೀಯ ವ್ಯಂಗ್ಯಚಿತ್ರಗಳು ದೇಶ-ವಿದೇಶಗಳ ಅಸಂಖ್ಯಾತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಪ್ರದರ್ಶನಗೊಂಡಿವೆ.</p>.<p>ಅಲ್ಲದೆ, ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್, ಲಾಸ್ ಏಂಜಲೀಸ್ ಟೈಮ್ಸ್, ನ್ಯೂಸ್ವೀಕ್ ಸೇರಿದಂತೆ ಜಗತ್ತಿನ ಪ್ರಮುಖ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಇವರ ವ್ಯಂಗ್ಯಚಿತ್ರಗಳು ಪ್ರಕಟಗೊಂಡು ಜನರ ಗಮನ ಸೆಳೆದಿವೆ.</p>.<p><strong>ವ್ಯಂಗ್ಯಚಿತ್ರ ಪ್ರದರ್ಶನ</strong><br /><strong>ಸ್ಥಳ:</strong> ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ ನಂ.1 ಮಿಡ್ ಫೋರ್ಡ್ ಹೌಸ್, ಟ್ರಿನಿಟಿ ವೃತ್ತ, ಎಂ.ಜಿ.ರಸ್ತೆ,ಬೆಂಗಳೂರು<br /><strong>ಉದ್ಘಾಟನೆ:</strong> ಮೇ 4ರಂದು ಬೆಳಿಗ್ಗೆ 10.30 ಗ್ಯಾಲರಿ ಸಮಯ: ಬೆಳಿಗ್ಗೆ 10ರಿಂದ ಸಂಜೆ 6, ಈ ಪ್ರದರ್ಶನ ಮೇ18ರವರೆಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಸಂಪರ್ಕ: ವಿ.ಜಿ.ನರೇಂದ್ರ, 99800917428</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>