ನನ್ನಪ್ಪ ತುಂಬಾ ಬುದ್ಧಿವಂತನಾಗಿದ್ದ. ಇಂಗ್ಲಿಷ್ ಅನ್ನು ಚೆನ್ನಾಗಿ ಮಾತನಾಡುತ್ತಿದ್ದರು. ಸುತ್ತಮುತ್ತಲಿನ ಜನರು ಸಹ ಅವರಲ್ಲಿ ಬಂದು ಚರ್ಚೆ ನಡೆಸುತ್ತಿದ್ದರು. ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಆದರೆ, ಮಗನಾದ ನನಗೆ ಅಪ್ಪನ ಸನಿಹದ ಪ್ರೀತಿ ಮಾತ್ರ ಸಿಕ್ಕಿರಲಿಲ್ಲ. ಆ ನೋವು ನನಗೆ ಸದಾ ಕಾಡುತ್ತಿದೆ. ಯಾವಾಗಾದರೂ ಒಮ್ಮೆ ದಾವಣಗೆರೆಗೆಅಪ್ಪ ಇದ್ದಲ್ಲಿಗೆ ಹೋಗುತ್ತಿದ್ದೆ. ಪ್ರೀತಿಯಿಂದ ಮಾತನಾಡುತ್ತಿದ್ದರು. ಅಲ್ಲಿದ್ದಾಗ ಅಮ್ಮ, ರಾಮಾಯಣ, ಮಹಾಭಾರತದ ಕಥೆಗಳನ್ನು ಹೇಳುತ್ತಿದ್ದಳು. ಅವಳು ಹೇಳುತ್ತಿದ್ದ ಕಥೆಗಳು ನನಗೆ ಸ್ಫೂರ್ತಿ ನೀಡುತ್ತಿದ್ದವು. ಎಲ್ಲರಿಗೂ ಅಪ್ಪನ ಪ್ರೀತಿ ಸಿಗಬೇಕು. ಅಪ್ಪನ ತೋಳತೆಕ್ಕೆಯಲ್ಲಿ ನಲಿದಾಡಬೇಕು.