<p>ಬೆಂಗಳೂರಿನ ಕಾರ್ಪೊರೇಟ್ ಕಂಪನಿಗಳಲ್ಲಿ ದೊಡ್ಡ ಉದ್ಯೋಗದಲ್ಲಿದ್ದ ಸಕಲೇಶಪುರ ತಾಲ್ಲೂಕಿನ ಹಾನಬಾಳ್ ಗ್ರಾಮದ ರವಿತೇಜ ಈಗ 25 ತಮ್ಮ ಹುಟ್ಟೂರಿನಲ್ಲಿ ‘ಹಾನಬಾಳ್ ಚಿಕ್ಕಿ’ ಎಂಬ ಕೈಗಾರಿಕೆ ತೆರೆದು ಉದ್ಯಮಿಯಾಗಿದ್ದಾರೆ.</p>.<p>ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ನಲ್ಲಿ ಡಿಪ್ಲೊಮಾ ಮುಗಿಸಿದ ರವಿತೇಜ, ಬೆಂಗಳೂರಿನತ್ತ ಮುಖ ಮಾಡಿದರು. ವಿದ್ಯಾಭ್ಯಾಸ ಮುಂದುವರಿಸುವ ಜೊತೆಗೆ ಹಂತ–ಹಂತವಾಗಿ ವೃತ್ತಿಯಲ್ಲಿ ಮೇಲೆ ಬಂದರು. ಬಾಷ್ ಕಂಪನಿಯಲ್ಲಿ ವ್ಯವಸ್ಥಾಪಕರಾಗುವ ಮಟ್ಟಕ್ಕೆ ಬೆಳೆದರು. ವಿ ಗಾರ್ಡ್ಇಂಡಸ್ಟ್ರೀಸ್ನಲ್ಲೂ ರಾಜ್ಯಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.</p>.<p>ಸ್ವಂತ ಕಂಪನಿ ತೆರೆಯಬೇಕೆಂದು ಮನದೊಳಗೆ ಮೊಳೆತಿದ್ದ ಕನಸನ್ನು ಕಡ್ಲೆ ಮಿಠಾಯಿ (ಚಿಕ್ಕಿ) ತಯಾರಿಸುವ ಕೈಗಾರಿಕೆಯನ್ನು ತೆರೆಯುವ ಮೂಲಕ ಸಾಕಾರಗೊಳಿಸಿದರು.</p>.<p>90ರ ದಶಕದ ಮಕ್ಕಳಿಗೆ ಬಲು ಇಷ್ಟದ ತಿನಿಸಾಗಿದ್ದ ಚಿಕ್ಕಿಯನ್ನು ಇಂದಿನ ಜಮಾನಕ್ಕೂ ವಿಭಿನ್ನವಾಗಿ ಪರಿಚಯಿಸುವ ಪ್ರಯತ್ನವನ್ನು ರವಿತೇಜ ಮಾಡಿದ್ದಾರೆ. ಕಡ್ಲೆ (ಶೆಂಗಾ) ಮತ್ತು ಬೆಲ್ಲ ಬಳಸಿ ತಯಾರಿಸುವ ಚಿಕ್ಕಿಗೆ ಮಾವು, ಹಲಸು, ಕಾಫಿ ಸೇರಿ 32 ರೀತಿಯ ರುಚಿ ನೀಡಿದ್ದಾರೆ.</p>.<p>‘ಶೆಂಗಾ ಮತ್ತು ಬೆಲ್ಲ ಬಳಸಿ ತಯಾರಿಸುವ ಚಿಕ್ಕಿ ಆರೋಗ್ಯಕರ ತಿನಿಸು. ಅದಕ್ಕೆ ಬ್ರ್ಯಾಂಡ್ ರೂಪ ನೀಡಿದ್ದರಿಂದ ಸಾಕಷ್ಟು ಬೇಡಿಕೆ ಬಂದಿದೆ. ಈ ಕಾರ್ಖಾನೆ ಜೊತೆಗೆ ಕೃಷಿಯಲ್ಲೂ ತೊಡಗಿಕೊಂಡಿದ್ದೇನೆ. ನೇರವಾಗಿ 25 ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ. ಪರೋಕ್ಷವಾಗಿ ಹಲವರಿಗೆ ಉದ್ಯೋಗ ಸಿಕ್ಕಿದೆ. ವರ್ಷಕ್ಕೆ ₹1 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಶೇ 10ರಿಂದ ಶೇ 15ರಷ್ಟು ಲಾಭ ಸಿಗುತ್ತಿದೆ’ ಎಂದು ರವಿತೇಜ ಹೇಳುತ್ತಾರೆ.</p>.<p><strong>ಹೆಸರು</strong>: ರವಿತೇಜ<br /><strong>ವೃತ್ತಿ:</strong> ನವೋದ್ಯಮಿ (ಹಾನಬಾಳ್ ಚಿಕ್ಕಿ ಕಂಪನಿ)<br /><strong>ಸಾಧನೆ:</strong> ಹಾನಬಾಳ್ ಚಿಕ್ಕಿಗೆ ಬ್ರ್ಯಾಂಡ್ ರೂಪು ನೀಡಿ ಉದ್ಯಮಿಯಾದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರಿನ ಕಾರ್ಪೊರೇಟ್ ಕಂಪನಿಗಳಲ್ಲಿ ದೊಡ್ಡ ಉದ್ಯೋಗದಲ್ಲಿದ್ದ ಸಕಲೇಶಪುರ ತಾಲ್ಲೂಕಿನ ಹಾನಬಾಳ್ ಗ್ರಾಮದ ರವಿತೇಜ ಈಗ 25 ತಮ್ಮ ಹುಟ್ಟೂರಿನಲ್ಲಿ ‘ಹಾನಬಾಳ್ ಚಿಕ್ಕಿ’ ಎಂಬ ಕೈಗಾರಿಕೆ ತೆರೆದು ಉದ್ಯಮಿಯಾಗಿದ್ದಾರೆ.</p>.<p>ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಷನ್ನಲ್ಲಿ ಡಿಪ್ಲೊಮಾ ಮುಗಿಸಿದ ರವಿತೇಜ, ಬೆಂಗಳೂರಿನತ್ತ ಮುಖ ಮಾಡಿದರು. ವಿದ್ಯಾಭ್ಯಾಸ ಮುಂದುವರಿಸುವ ಜೊತೆಗೆ ಹಂತ–ಹಂತವಾಗಿ ವೃತ್ತಿಯಲ್ಲಿ ಮೇಲೆ ಬಂದರು. ಬಾಷ್ ಕಂಪನಿಯಲ್ಲಿ ವ್ಯವಸ್ಥಾಪಕರಾಗುವ ಮಟ್ಟಕ್ಕೆ ಬೆಳೆದರು. ವಿ ಗಾರ್ಡ್ಇಂಡಸ್ಟ್ರೀಸ್ನಲ್ಲೂ ರಾಜ್ಯಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.</p>.<p>ಸ್ವಂತ ಕಂಪನಿ ತೆರೆಯಬೇಕೆಂದು ಮನದೊಳಗೆ ಮೊಳೆತಿದ್ದ ಕನಸನ್ನು ಕಡ್ಲೆ ಮಿಠಾಯಿ (ಚಿಕ್ಕಿ) ತಯಾರಿಸುವ ಕೈಗಾರಿಕೆಯನ್ನು ತೆರೆಯುವ ಮೂಲಕ ಸಾಕಾರಗೊಳಿಸಿದರು.</p>.<p>90ರ ದಶಕದ ಮಕ್ಕಳಿಗೆ ಬಲು ಇಷ್ಟದ ತಿನಿಸಾಗಿದ್ದ ಚಿಕ್ಕಿಯನ್ನು ಇಂದಿನ ಜಮಾನಕ್ಕೂ ವಿಭಿನ್ನವಾಗಿ ಪರಿಚಯಿಸುವ ಪ್ರಯತ್ನವನ್ನು ರವಿತೇಜ ಮಾಡಿದ್ದಾರೆ. ಕಡ್ಲೆ (ಶೆಂಗಾ) ಮತ್ತು ಬೆಲ್ಲ ಬಳಸಿ ತಯಾರಿಸುವ ಚಿಕ್ಕಿಗೆ ಮಾವು, ಹಲಸು, ಕಾಫಿ ಸೇರಿ 32 ರೀತಿಯ ರುಚಿ ನೀಡಿದ್ದಾರೆ.</p>.<p>‘ಶೆಂಗಾ ಮತ್ತು ಬೆಲ್ಲ ಬಳಸಿ ತಯಾರಿಸುವ ಚಿಕ್ಕಿ ಆರೋಗ್ಯಕರ ತಿನಿಸು. ಅದಕ್ಕೆ ಬ್ರ್ಯಾಂಡ್ ರೂಪ ನೀಡಿದ್ದರಿಂದ ಸಾಕಷ್ಟು ಬೇಡಿಕೆ ಬಂದಿದೆ. ಈ ಕಾರ್ಖಾನೆ ಜೊತೆಗೆ ಕೃಷಿಯಲ್ಲೂ ತೊಡಗಿಕೊಂಡಿದ್ದೇನೆ. ನೇರವಾಗಿ 25 ಜನರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ. ಪರೋಕ್ಷವಾಗಿ ಹಲವರಿಗೆ ಉದ್ಯೋಗ ಸಿಕ್ಕಿದೆ. ವರ್ಷಕ್ಕೆ ₹1 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದ್ದು, ಅದರಲ್ಲಿ ಶೇ 10ರಿಂದ ಶೇ 15ರಷ್ಟು ಲಾಭ ಸಿಗುತ್ತಿದೆ’ ಎಂದು ರವಿತೇಜ ಹೇಳುತ್ತಾರೆ.</p>.<p><strong>ಹೆಸರು</strong>: ರವಿತೇಜ<br /><strong>ವೃತ್ತಿ:</strong> ನವೋದ್ಯಮಿ (ಹಾನಬಾಳ್ ಚಿಕ್ಕಿ ಕಂಪನಿ)<br /><strong>ಸಾಧನೆ:</strong> ಹಾನಬಾಳ್ ಚಿಕ್ಕಿಗೆ ಬ್ರ್ಯಾಂಡ್ ರೂಪು ನೀಡಿ ಉದ್ಯಮಿಯಾದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>