<p>ನಮ್ಮ ಸಂಸ್ಕೃತಿಯಲ್ಲಿ ಸನ್ಯಾಸಕ್ಕೆ ತುಂಬ ಗೌರವವಿದೆ. ಲೌಕಿಕ ಸಂಸಾರವನ್ನು ತ್ಯಜಿಸಿ, ಜಗತ್ತಿನ ಒಳಿತಿಗಾಗಿ ಬದುಕುವವನೇ ಸನ್ಯಾಸಿ. ಅವನು ಒಂದೇ ಕಡೆ ನೆಲೆ ನಿಲ್ಲಬಾರದು; ಜಗತ್ತೇ ಅವನ ಪಾಲಿಗೆ ಮನೆ. ಹೀಗಿದ್ದರೂ ಅವನು ಮಳೆಗಾದಲ್ಲಿ ಒಂದೆಡೆ ಇರಬೇಕು; ಆ ಸಮಯದಲ್ಲಿ ಅಧ್ಯಯನಶೀಲನಾಗಿರಬೇಕು; ಜನರಿಗೆ ಧರ್ಮಬೋಧನೆಯನ್ನು ಮಾಡಬೇಕು ಎಂದು ಪರಂಪರೆ ಹೇಳುತ್ತದೆ. ಹೀಗೆ ಅವನು ಸನ್ಯಾಸಿಯಾದವನು ಒಂದೆಡೆ ಇದ್ದು, ಸಾಧನೆಯಲ್ಲಿ ತೊಡಗುವ ವ್ರತವನ್ನೇ ‘ಚಾತುರ್ಮಾಸ್ಯ’ ಎಂದು ಕರೆಯುವುದು.</p>.<p>‘ಚಾತುರ್ಮಾಸ್ಯ’ ಎಂದರೆ ನಾಲ್ಕು ತಿಂಗಳು ಎಂದು ಅರ್ಥ. ವರ್ಷದಲ್ಲಿ ನಾಲ್ಕು ತಿಂಗಳ ಕಾಲ ಈ ವ್ರತವನ್ನು ಆಚರಿಸುವುದರಿಂದ ಈ ಹೆಸರು ಬಂದಿದೆ. ಇಂದು ಈ ವ್ರತ ಸನ್ಯಾಸಿಗಳಿಗೆ ಮಾತ್ರ ಎಂಬ ಅಭಿಪ್ರಾಯವಿದ್ದರೂ ಇದನ್ನು ಗೃಹಸ್ಥರೂ ಆಚರಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.</p>.<p>ಆಷಾಢಮಾಸದ ಶುಕ್ಲಪಕ್ಷದ ಏಕಾದಶಿ ಅಥವಾ ದ್ವಾದಶೀ ಅಥವಾ ಪೂರ್ಣಿಮೆಯಂದು ಚಾತುರ್ಮಾಸ್ಯವ್ರತವನ್ನು ಆಚರಿಸುವುದು ವಾಡಿಕೆ.</p>.<p>ದೈಹಿಕ ಮತ್ತು ಮಾನಸಿಕ ನಿಯಂತ್ರಣಕ್ಕೆ ಪೂರಕವಾಗುವಂತೆ ಈ ವ್ರತದ ವಿಧಾನಗಳನ್ನು ರೂಪಿಸಲಾಗಿದೆ. ಈ ಸಮಯದಲ್ಲಿ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು, ಭಗವಂತನ ಧ್ಯಾನ, ಸ್ತೋತ್ರ ಮತ್ತು ಪೂಜೆಗಳಲ್ಲಿ ತೊಡಗಬೇಕೆಂಬುದು ಈ ವ್ರತದ ಉದ್ದೇಶ. ಹೀಗೆ ನಮ್ಮ ದೈಹಿಕ ಚಟುವಟಿಕೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವ ಉದ್ದೇಶದಿಂದ ಈ ವ್ರತದ ಸಮಯದಲ್ಲಿ ಕೆಲವೊಂದು ಆಹಾರಪದಾರ್ಥಗಳನ್ನು ತೊರೆಯುವುದುಂಟು. ಮೊದಲ ತಿಂಗಳು ತರಕಾರಿಗಳನ್ನೂ ಎರಡನೆಯ ತಿಂಗಳು ಮೊಸರನ್ನೂ ಮೂರನೆಯ ತಿಂಗಳಲ್ಲಿ ಹಾಲನ್ನೂ ನಾಲ್ಕನೆಯ ತಿಂಗಳಿನಲ್ಲಿ ದ್ವಿದಳಧಾನ್ಯಗಳನ್ನೂ ಉಪಯೋಗಿಸುವಂತಿಲ್ಲ. (ಈಗ ಹದಿನೈದು ದಿನಗಳಿಗೆ – ಎಂದರೆ ಒಂದು ಪಕ್ಷವನ್ನೇ ಒಂದು ತಿಂಗಳು ಎಂಬ ಎಣಿಕೆಯಲ್ಲಿಯೂ ಚಾತುರ್ಮಾಸ್ಯವನ್ನು ಕೆಲವರು ಆಚರಿಸುವುದುಂಟು.)</p>.<p>ಚಾತುರ್ಮಾಸ್ಯವನ್ನು ಸನ್ಯಾಸಿಗಳು ವಿಶೇಷವಾಗಿ ಆಚರಿಸುವುದುಂಟು. ಸನ್ಯಾಸಿಗಳು ಆಷಾಢಪೂರ್ಣಿಮೆಯಂದು ಕ್ಷೌರವನ್ನು ಮಾಡಿಸಿಕೊಂಡು ವ್ರತಾಚರಣೆಗೆ ತೊಡಗುತ್ತಾರೆ. ವ್ರತವು ಮುಗಿಯುವ ತನಕ ಅವರು ಕ್ಷೌರವನ್ನು ಮಾಡಿಸಿಕೊಳ್ಳುವಂತಿಲ್ಲ.</p>.<p>ಶ್ರೀಮಹಾವಿಷ್ಣುವು ಈ ಸಮಯದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ ಎಂಬ ನಂಬಿಕೆಯಿದೆ. ಸನ್ಯಾಸಿಗಳು ಈ ಸಮಯದಲ್ಲಿ ಒಂದೇ ಕಡೆಯಲ್ಲಿ ವಾಸ ಮಾಡಿ, ಜಗತ್ತಿನ ಒಳಿತಿಗಾಗಿ ಭಗವಂತನ ಧ್ಯಾನದಲ್ಲಿ ತಲ್ಲೀನರಾಗಿರಬೇಕು. ಸನ್ಯಾಸಿಗಳು ಒಂದೇ ಕಡೆಯಲ್ಲಿ ವಾಸ ಮಾಡುವಂತಿಲ್ಲ. ಆದರೆ ಮಳೆಗಾಲದಲ್ಲಿ ಓಡಾಟವೂ ಕಷ್ಟ. ಹೀಗಾಗಿ ಅವರು ಈ ಸಂದರ್ಭದಲ್ಲಿ ಒಂದು ಕಡೆ ಇರಲು ಅವಕಾಶ ಕೊಟ್ಟಿದೆ. ಆದರೆ ಈ ಸಮಯದಲ್ಲಿ ಅವರು ಎಂದಿನ ತಮ್ಮ ಅನುಷ್ಠಾನಗಳ ಜೊತೆಗೆ ಮತ್ತೂ ಹೆಚ್ಚಿನ ಜಪ–ತಪ–ಅಧ್ಯಯನಗಳಲ್ಲಿ ನಿರತರಾಗಿರಬೇಕು. ಜನರಿಗೆ ಧರ್ಮಬೋಧನೆಯನ್ನು ಮಾಡಬೇಕು.</p>.<p>ಕೇವಲ ವೈದಿಕ ಪಂಥದ ಸನ್ಯಾಸಿಗಳು ಮಾತ್ರವೇ ಅಲ್ಲದೆ, ಬೌದ್ಧ–ಜೈನ ಸನ್ಯಾಸಿಗಳೂ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಾರೆ.</p>.<p>ನಮ್ಮ ನಾಡಿನಲ್ಲಿ ಶೃಂಗೇರಿ, ಉಡುಪಿ ಮುಂತಾದ ಪ್ರಸಿದ್ಧ ಕ್ಷೇತ್ರಗಳಲ್ಲಿ ಸನ್ಯಾಸಿಗಳು ಆಚರಿಸುವ ಚಾತುರ್ಮಾಸ್ಯವ್ರತದ ವಿಧಿ–ವಿಧಾನಗಳನ್ನು ನೋಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ಸಂಸ್ಕೃತಿಯಲ್ಲಿ ಸನ್ಯಾಸಕ್ಕೆ ತುಂಬ ಗೌರವವಿದೆ. ಲೌಕಿಕ ಸಂಸಾರವನ್ನು ತ್ಯಜಿಸಿ, ಜಗತ್ತಿನ ಒಳಿತಿಗಾಗಿ ಬದುಕುವವನೇ ಸನ್ಯಾಸಿ. ಅವನು ಒಂದೇ ಕಡೆ ನೆಲೆ ನಿಲ್ಲಬಾರದು; ಜಗತ್ತೇ ಅವನ ಪಾಲಿಗೆ ಮನೆ. ಹೀಗಿದ್ದರೂ ಅವನು ಮಳೆಗಾದಲ್ಲಿ ಒಂದೆಡೆ ಇರಬೇಕು; ಆ ಸಮಯದಲ್ಲಿ ಅಧ್ಯಯನಶೀಲನಾಗಿರಬೇಕು; ಜನರಿಗೆ ಧರ್ಮಬೋಧನೆಯನ್ನು ಮಾಡಬೇಕು ಎಂದು ಪರಂಪರೆ ಹೇಳುತ್ತದೆ. ಹೀಗೆ ಅವನು ಸನ್ಯಾಸಿಯಾದವನು ಒಂದೆಡೆ ಇದ್ದು, ಸಾಧನೆಯಲ್ಲಿ ತೊಡಗುವ ವ್ರತವನ್ನೇ ‘ಚಾತುರ್ಮಾಸ್ಯ’ ಎಂದು ಕರೆಯುವುದು.</p>.<p>‘ಚಾತುರ್ಮಾಸ್ಯ’ ಎಂದರೆ ನಾಲ್ಕು ತಿಂಗಳು ಎಂದು ಅರ್ಥ. ವರ್ಷದಲ್ಲಿ ನಾಲ್ಕು ತಿಂಗಳ ಕಾಲ ಈ ವ್ರತವನ್ನು ಆಚರಿಸುವುದರಿಂದ ಈ ಹೆಸರು ಬಂದಿದೆ. ಇಂದು ಈ ವ್ರತ ಸನ್ಯಾಸಿಗಳಿಗೆ ಮಾತ್ರ ಎಂಬ ಅಭಿಪ್ರಾಯವಿದ್ದರೂ ಇದನ್ನು ಗೃಹಸ್ಥರೂ ಆಚರಿಸಬೇಕು ಎಂದು ಶಾಸ್ತ್ರಗಳು ಹೇಳುತ್ತವೆ.</p>.<p>ಆಷಾಢಮಾಸದ ಶುಕ್ಲಪಕ್ಷದ ಏಕಾದಶಿ ಅಥವಾ ದ್ವಾದಶೀ ಅಥವಾ ಪೂರ್ಣಿಮೆಯಂದು ಚಾತುರ್ಮಾಸ್ಯವ್ರತವನ್ನು ಆಚರಿಸುವುದು ವಾಡಿಕೆ.</p>.<p>ದೈಹಿಕ ಮತ್ತು ಮಾನಸಿಕ ನಿಯಂತ್ರಣಕ್ಕೆ ಪೂರಕವಾಗುವಂತೆ ಈ ವ್ರತದ ವಿಧಾನಗಳನ್ನು ರೂಪಿಸಲಾಗಿದೆ. ಈ ಸಮಯದಲ್ಲಿ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಿಕೊಂಡು, ಭಗವಂತನ ಧ್ಯಾನ, ಸ್ತೋತ್ರ ಮತ್ತು ಪೂಜೆಗಳಲ್ಲಿ ತೊಡಗಬೇಕೆಂಬುದು ಈ ವ್ರತದ ಉದ್ದೇಶ. ಹೀಗೆ ನಮ್ಮ ದೈಹಿಕ ಚಟುವಟಿಕೆಗಳ ಮೇಲೆ ನಿಯಂತ್ರಣವನ್ನು ಸಾಧಿಸುವ ಉದ್ದೇಶದಿಂದ ಈ ವ್ರತದ ಸಮಯದಲ್ಲಿ ಕೆಲವೊಂದು ಆಹಾರಪದಾರ್ಥಗಳನ್ನು ತೊರೆಯುವುದುಂಟು. ಮೊದಲ ತಿಂಗಳು ತರಕಾರಿಗಳನ್ನೂ ಎರಡನೆಯ ತಿಂಗಳು ಮೊಸರನ್ನೂ ಮೂರನೆಯ ತಿಂಗಳಲ್ಲಿ ಹಾಲನ್ನೂ ನಾಲ್ಕನೆಯ ತಿಂಗಳಿನಲ್ಲಿ ದ್ವಿದಳಧಾನ್ಯಗಳನ್ನೂ ಉಪಯೋಗಿಸುವಂತಿಲ್ಲ. (ಈಗ ಹದಿನೈದು ದಿನಗಳಿಗೆ – ಎಂದರೆ ಒಂದು ಪಕ್ಷವನ್ನೇ ಒಂದು ತಿಂಗಳು ಎಂಬ ಎಣಿಕೆಯಲ್ಲಿಯೂ ಚಾತುರ್ಮಾಸ್ಯವನ್ನು ಕೆಲವರು ಆಚರಿಸುವುದುಂಟು.)</p>.<p>ಚಾತುರ್ಮಾಸ್ಯವನ್ನು ಸನ್ಯಾಸಿಗಳು ವಿಶೇಷವಾಗಿ ಆಚರಿಸುವುದುಂಟು. ಸನ್ಯಾಸಿಗಳು ಆಷಾಢಪೂರ್ಣಿಮೆಯಂದು ಕ್ಷೌರವನ್ನು ಮಾಡಿಸಿಕೊಂಡು ವ್ರತಾಚರಣೆಗೆ ತೊಡಗುತ್ತಾರೆ. ವ್ರತವು ಮುಗಿಯುವ ತನಕ ಅವರು ಕ್ಷೌರವನ್ನು ಮಾಡಿಸಿಕೊಳ್ಳುವಂತಿಲ್ಲ.</p>.<p>ಶ್ರೀಮಹಾವಿಷ್ಣುವು ಈ ಸಮಯದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ ಎಂಬ ನಂಬಿಕೆಯಿದೆ. ಸನ್ಯಾಸಿಗಳು ಈ ಸಮಯದಲ್ಲಿ ಒಂದೇ ಕಡೆಯಲ್ಲಿ ವಾಸ ಮಾಡಿ, ಜಗತ್ತಿನ ಒಳಿತಿಗಾಗಿ ಭಗವಂತನ ಧ್ಯಾನದಲ್ಲಿ ತಲ್ಲೀನರಾಗಿರಬೇಕು. ಸನ್ಯಾಸಿಗಳು ಒಂದೇ ಕಡೆಯಲ್ಲಿ ವಾಸ ಮಾಡುವಂತಿಲ್ಲ. ಆದರೆ ಮಳೆಗಾಲದಲ್ಲಿ ಓಡಾಟವೂ ಕಷ್ಟ. ಹೀಗಾಗಿ ಅವರು ಈ ಸಂದರ್ಭದಲ್ಲಿ ಒಂದು ಕಡೆ ಇರಲು ಅವಕಾಶ ಕೊಟ್ಟಿದೆ. ಆದರೆ ಈ ಸಮಯದಲ್ಲಿ ಅವರು ಎಂದಿನ ತಮ್ಮ ಅನುಷ್ಠಾನಗಳ ಜೊತೆಗೆ ಮತ್ತೂ ಹೆಚ್ಚಿನ ಜಪ–ತಪ–ಅಧ್ಯಯನಗಳಲ್ಲಿ ನಿರತರಾಗಿರಬೇಕು. ಜನರಿಗೆ ಧರ್ಮಬೋಧನೆಯನ್ನು ಮಾಡಬೇಕು.</p>.<p>ಕೇವಲ ವೈದಿಕ ಪಂಥದ ಸನ್ಯಾಸಿಗಳು ಮಾತ್ರವೇ ಅಲ್ಲದೆ, ಬೌದ್ಧ–ಜೈನ ಸನ್ಯಾಸಿಗಳೂ ಚಾತುರ್ಮಾಸ್ಯವ್ರತವನ್ನು ಆಚರಿಸುತ್ತಾರೆ.</p>.<p>ನಮ್ಮ ನಾಡಿನಲ್ಲಿ ಶೃಂಗೇರಿ, ಉಡುಪಿ ಮುಂತಾದ ಪ್ರಸಿದ್ಧ ಕ್ಷೇತ್ರಗಳಲ್ಲಿ ಸನ್ಯಾಸಿಗಳು ಆಚರಿಸುವ ಚಾತುರ್ಮಾಸ್ಯವ್ರತದ ವಿಧಿ–ವಿಧಾನಗಳನ್ನು ನೋಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>