ತಿರುಪತಿಯನ್ನು ಭೂವೈಕುಂಠ ಎಂದೇ ಪುರಾಣಗಳು ಬಣ್ಣಿಸಿವೆ. ಕಲಿಯುಗದ ದೈವ ಎಂದರೇ ಅದು ಶ್ರೀನಿವಸನೇ ಹೌದು ಎಂದೂ ನಂಬಿಕೆಯಿದೆ. ಶನಿವಾರ ವೆಂಕಟೇಶ್ವರಿನಿಗೆ ಮೀಸಲಾದ ವಾರ. ಅಂದು, ಅದರಲ್ಲೂ ಶ್ರಾವಣ ಶನಿವಾರಗಳಂದು ತಿರುಪತಿ ತಿಮ್ಮಪ್ಪನನ್ನು ಪೂಜಿಸುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಆಸ್ತಿಕರದ್ದು. ಶ್ರಾವಣ ಶನಿವಾರಗಳಂದು ಶ್ರೀನಿವಾಸನ ಎಲ್ಲ ಆಲಯಗಳೂ ವೈಕುಂಠಕ್ಕೆ ಸಮವೇ ಆಗಿರುತ್ತದೆ. ಆದ್ದರಿಂದ ಅಂದು ಅವನ ಆಲಯವನ್ನು ಸಂದರ್ಶಿಸುವ ತವಕ ಭಕ್ತರದ್ದು.