<figcaption>""</figcaption>.<figcaption>""</figcaption>.<p>‘ಕೊರೊನಾ ವೈರಾಣು ಕುರಿತ ಭೀತಿ, ಆತಂಕಗಳು ನಾಗರಿಕರನ್ನು ಕಂಗೆಡಿಸಿರುವುದು ನಿಜ. ಆದರೆ ಭಾರತೀಯ ಜನಸಮುದಾಯಗಳು ಶತಶತಮಾನದಿಂದ ಇಂಥ ಸಹಸ್ರಾರು ವಿದ್ಯಮಾನಗಳನ್ನು ಎದುರಿಸಿವೆ’ ಎಂದು ಮುನ್ನುಡಿಯೊಂದಿಗೆ ಪುಸ್ತಕದ ಓದು ಆರಂಭವಾಗುತ್ತದೆ.</p>.<p>‘ಅಂಗಳದ ತುಳಸಿ, ಹಿತ್ತಲಿನ ವೀಳ್ಯದೆಲೆಯೂ ವೈರಾಣು ನಿರೋಧಕ’ ಎಂಬ ಭರವಸೆ ಬಿತ್ತುವ ಈ ಪುಸ್ತಕದಲ್ಲಿ ಒಟ್ಟು 19 ಅಧ್ಯಾಯಗಳಿವೆ.</p>.<p>ಆಯುರ್ವೇದ ವೈದ್ಯ ಡಾ.ಸತ್ಯನಾರಾಯಣ ಭಟ್ ಅವರು ಈ ಪುಸ್ತಕದ ಮೂಲಕ ತಿಳಿಗನ್ನಡದಲ್ಲಿ ಕೊರೊನಾವೈರಸ್ (ಕೋವಿಡ್–19) ಬಗ್ಗೆಮಾಹಿತಿ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚಿಕಿತ್ಸೆಯ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ.</p>.<p>‘ಆಗಾಗ ಕೊಬ್ಬರಿ ಎಣ್ಣೆ ಮತ್ತು ತುಪ್ಪವನ್ನು ಸೌಟಿನಲ್ಲಿ ಬಿಸಿ ಮಾಡಿ ನೆತ್ತಿಗೆ ಹೆಚ್ಚಿ. ಐದೇ ನಿಮಿಷದಲ್ಲಿ ತಲೆಗೆ ಸ್ನಾನ ಮಾಡಿದರೆ ರೋಗ ನಿರೋಧಕತೆಗೆ ಒತ್ತು ಸಿಗುತ್ತದೆ. ಎಲ್ಲ ಬಗೆಯ ನೆಗಡಿ ಮತ್ತು ಗಂಟಲು ತೊಂದರೆಗೆ ಇದು ಉತ್ತಮ ವಿಧಾನ’ ಎಂಬುದು ಈ ಪುಸ್ತಕದಲ್ಲಿ ಪ್ರಸ್ತಾಪವಾಗಿರುವಸರಳ ಮುನ್ನೆಚ್ಚರಿಕೆ ಕ್ರಮ. ಇಂಥ ಹಲವು ಸಲಹೆಗಳನ್ನು ಈ ಪುಸ್ತಕದಲ್ಲಿ ಗಮನಿಸಬಹುದು.</p>.<p>ಪುಸ್ತಕದ ಹೆಸರು ‘ಮಹಾಮಾರಿ ಕೊರೊನಾ’ ಎಂದು ಇದ್ದರೂ ಈ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಹಲವು ವಿಷಯಗಳು ಮನುಷ್ಯರ ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕ ಕ್ರಮಗಳನ್ನು ಪ್ರಸ್ತಾಪಿಸುತ್ತವೆ. ಹೀಗಾಗಿ ಇದನ್ನು ಕೇವಲ ಕೊರಾನಾಗೆ ಮಾತ್ರವೇ ಸೀಮಿತವಾಗಿ ಪರಿಗಣಿಸಬೇಕಾಗಿಲ್ಲ.</p>.<p><strong>ಪುಸ್ತಕದ ಹೆಸರು: </strong>ಮಹಾಮಾರಿ ಕೊರೊನಾ (ಕಾರಣ ಮತ್ತು ಆಯುರ್ವೇದ ಚಿಕಿತ್ಸಾ ವಿಧಾನ)<br /><strong>ಲೇಖಕ: </strong>ಡಾ.ಸತ್ಯನಾರಾಯಣ ಭಟ್<br /><strong>ಪುಟಗಳು:</strong> 95<br /><strong>ಬೆಲೆ: </strong>₹100<br /><strong>ಪ್ರಕಾಶನ: </strong>ಸಾಹಿತ್ಯ ಲೋಕ ಪ್ರಕಾಶನ, ನಂ 745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು, ಪಿನ್560010. ಮೊ– 99459 39436.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<figcaption>""</figcaption>.<figcaption>""</figcaption>.<p>‘ಕೊರೊನಾ ವೈರಾಣು ಕುರಿತ ಭೀತಿ, ಆತಂಕಗಳು ನಾಗರಿಕರನ್ನು ಕಂಗೆಡಿಸಿರುವುದು ನಿಜ. ಆದರೆ ಭಾರತೀಯ ಜನಸಮುದಾಯಗಳು ಶತಶತಮಾನದಿಂದ ಇಂಥ ಸಹಸ್ರಾರು ವಿದ್ಯಮಾನಗಳನ್ನು ಎದುರಿಸಿವೆ’ ಎಂದು ಮುನ್ನುಡಿಯೊಂದಿಗೆ ಪುಸ್ತಕದ ಓದು ಆರಂಭವಾಗುತ್ತದೆ.</p>.<p>‘ಅಂಗಳದ ತುಳಸಿ, ಹಿತ್ತಲಿನ ವೀಳ್ಯದೆಲೆಯೂ ವೈರಾಣು ನಿರೋಧಕ’ ಎಂಬ ಭರವಸೆ ಬಿತ್ತುವ ಈ ಪುಸ್ತಕದಲ್ಲಿ ಒಟ್ಟು 19 ಅಧ್ಯಾಯಗಳಿವೆ.</p>.<p>ಆಯುರ್ವೇದ ವೈದ್ಯ ಡಾ.ಸತ್ಯನಾರಾಯಣ ಭಟ್ ಅವರು ಈ ಪುಸ್ತಕದ ಮೂಲಕ ತಿಳಿಗನ್ನಡದಲ್ಲಿ ಕೊರೊನಾವೈರಸ್ (ಕೋವಿಡ್–19) ಬಗ್ಗೆಮಾಹಿತಿ, ಮುನ್ನೆಚ್ಚರಿಕೆ ಕ್ರಮಗಳು ಮತ್ತು ಚಿಕಿತ್ಸೆಯ ಮಾಹಿತಿ ನೀಡುವ ಪ್ರಯತ್ನ ಮಾಡಿದ್ದಾರೆ.</p>.<p>‘ಆಗಾಗ ಕೊಬ್ಬರಿ ಎಣ್ಣೆ ಮತ್ತು ತುಪ್ಪವನ್ನು ಸೌಟಿನಲ್ಲಿ ಬಿಸಿ ಮಾಡಿ ನೆತ್ತಿಗೆ ಹೆಚ್ಚಿ. ಐದೇ ನಿಮಿಷದಲ್ಲಿ ತಲೆಗೆ ಸ್ನಾನ ಮಾಡಿದರೆ ರೋಗ ನಿರೋಧಕತೆಗೆ ಒತ್ತು ಸಿಗುತ್ತದೆ. ಎಲ್ಲ ಬಗೆಯ ನೆಗಡಿ ಮತ್ತು ಗಂಟಲು ತೊಂದರೆಗೆ ಇದು ಉತ್ತಮ ವಿಧಾನ’ ಎಂಬುದು ಈ ಪುಸ್ತಕದಲ್ಲಿ ಪ್ರಸ್ತಾಪವಾಗಿರುವಸರಳ ಮುನ್ನೆಚ್ಚರಿಕೆ ಕ್ರಮ. ಇಂಥ ಹಲವು ಸಲಹೆಗಳನ್ನು ಈ ಪುಸ್ತಕದಲ್ಲಿ ಗಮನಿಸಬಹುದು.</p>.<p>ಪುಸ್ತಕದ ಹೆಸರು ‘ಮಹಾಮಾರಿ ಕೊರೊನಾ’ ಎಂದು ಇದ್ದರೂ ಈ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಹಲವು ವಿಷಯಗಳು ಮನುಷ್ಯರ ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕ ಕ್ರಮಗಳನ್ನು ಪ್ರಸ್ತಾಪಿಸುತ್ತವೆ. ಹೀಗಾಗಿ ಇದನ್ನು ಕೇವಲ ಕೊರಾನಾಗೆ ಮಾತ್ರವೇ ಸೀಮಿತವಾಗಿ ಪರಿಗಣಿಸಬೇಕಾಗಿಲ್ಲ.</p>.<p><strong>ಪುಸ್ತಕದ ಹೆಸರು: </strong>ಮಹಾಮಾರಿ ಕೊರೊನಾ (ಕಾರಣ ಮತ್ತು ಆಯುರ್ವೇದ ಚಿಕಿತ್ಸಾ ವಿಧಾನ)<br /><strong>ಲೇಖಕ: </strong>ಡಾ.ಸತ್ಯನಾರಾಯಣ ಭಟ್<br /><strong>ಪುಟಗಳು:</strong> 95<br /><strong>ಬೆಲೆ: </strong>₹100<br /><strong>ಪ್ರಕಾಶನ: </strong>ಸಾಹಿತ್ಯ ಲೋಕ ಪ್ರಕಾಶನ, ನಂ 745, 12ನೇ ಮುಖ್ಯರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು, ಪಿನ್560010. ಮೊ– 99459 39436.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>