ತಿಳಿಹಾಸ್ಯ, ಲವಲವಿಕೆ, ವಿನೋದಗಳಿಂದ ಪ್ರಾರಂಭವಾಗುವ ಕೃತಿಯಲ್ಲಿ ಬದುಕಿನ ಕ್ಷುದ್ರತೆ, ಅನ್ಯಾಯ ಮತ್ತು ಜಿಗುಪ್ಸೆಯನ್ನು ತೀಕ್ಷ್ಣವಾಗಿ ವಿವೇಚಿಸುತ್ತಾ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ದುಡಿಮೆ ಮತ್ತು ಸಂಸ್ಕೃತಿಗಳು ಒಂದಾದಾಗ ಮಾತ್ರ ಸದೃಢ ದೇಶವನ್ನು ಕಟ್ಟಬಹುದು ಎಂದು ನಂಬಿದ್ದ ಚೆಕಾವ್, ಶಾಂಪೇನ್ ಪೇಯವನ್ನು ಬದುಕಿನ ಸಂಭ್ರಮ ಎಂದು ಪರಿಗಣಿಸಿದ್ದ ಬಗೆಯೂ ನಾಟಕದಲ್ಲಿದೆ. ಆಧುನಿಕ ಬದುಕಿನ ಸಂಕೀರ್ಣತೆ ಹಾಗೂ ಸ್ವಸ್ಥ ನಾಗರಿಕ ಸಮಾಜದ ಕನಸು–ಕಳಕಳಿಯನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಚೆಕಾವ್ನ ಬದುಕಿನ ವೈವಿಧ್ಯತೆಯನ್ನು ಈ ನಾಟಕ ಯಶಸ್ವಿಯಾಗಿ ರಂಗರೂಪಕ್ಕಿಳಿಸಿದೆ.