<p>ಡಾ.ಗೀತಾ ವಸಂತ ಅವರ ‘ಅಕ್ಷರ ದಾಹ’ ಎಂಬ ವಿಮರ್ಶಾ ಸಂಕಲನದಲ್ಲಿ ಒಟ್ಟು 16 ಲೇಖನಗಳಿವೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಕೆಲವು ಕೃತಿಗಳನ್ನು ಇಲ್ಲಿ ಸಮೀಕ್ಷೆ ಮಾಡಲಾಗಿದೆ. ಜೊತೆಗೆ ಕರ್ನಾಟಕ ‘ಅವಧೂತ ಪರಂಪರೆ’, ‘ಬುದ್ಧ: ನೈತಿಕ ವಿಕಾಸದ ಮಹಾ ಮಾರ್ಗ’, ‘ಕೈವಾರ ತಾತಯ್ಯ: ಆಧ್ಯಾತ್ಮಿಕ -ಸಾಂಸ್ಕೃತಿಕ ನೆಲೆ’ ಎಂಬ ಗಮನ ಸೆಳೆಯುವ ಲೇಖನಗಳು ಇವೆ.</p>.<p>‘ಹಳೆಗನ್ನಡ ಕಾವ್ಯದ ಮರುಸೃಷ್ಟಿಯ ಸವಾಲುಗಳು: ನಾಗಚಂದ್ರ’ ಎಂಬ ಲೇಖನದಲ್ಲಿ ಜೈನಪುರಾಣಗಳ ಸ್ವರೂಪ, ವಿನ್ಯಾಸ, ರಾಮಾಯಣ ಪರಂಪರೆ, ಜೈನ ರಾಮಾಯಣ ಪರಂಪರೆ, ನಾಗಚಂದ್ರ ಉದಾತ್ತ ರಾವಣ ಎಂಬ ಉಪಶೀರ್ಷಿಕೆಗಳಡಿಯಲ್ಲಿ ಕೆಲವು ಮಾಹಿತಿ ಸ್ವರೂಪದ ಒಳನೋಟಗಳನ್ನು ಲೇಖಕಿ ಕೊಟ್ಟಿದ್ದಾರೆ. ‘ಜನ್ನನ ಕಾವ್ಯ: ಚಿತ್ತವೃತ್ತಿಗಳ ನಿಬಿಡಲೋಕ’ ಈ ಸಂಕಲನದ ಬಹುಮುಖ್ಯ ಲೇಖನವಾಗಿದ್ದು ಯಶೋಧರ ಚರಿತೆಯ ತಾತ್ವಿಕ ನೆಲೆಗಳ ಚರ್ಚೆ ಅಮೃತಮತಿಯ ಪಾತ್ರದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಕುವೆಂಪು ಅವರಿಂದ ಮೊದಲುಗೊಂಡು ಜಿ. ರಾಜಶೇಖರ್, ಗಿರಡ್ಡಿ ಗೋವಿಂದರಾಜು ಒಳಗೊಂಡಂತೆ ಹಿರಿಯ ಕಿರಿಯ ವಿಮರ್ಶಕರು ಈ ಕೃತಿಯ ಕುರಿತು ಚರ್ಚಿಸಿದ್ದಾರೆ. ಅವುಗಳಲ್ಲಿರುವ ಚರ್ಚೆ, ವಾದಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಲೇಖನದ ಚರ್ಚೆಯನ್ನು ಮುಂದುವರಿಸಿದ್ದರೆ ಇನ್ನೂ ಹೆಚ್ಚಿನ ಒಳನೋಟಗಳನ್ನು ಕೊಡಲು ಸಾಧ್ಯವಾಗುತ್ತಿತ್ತು.</p>.<p>‘ಕನ್ನಡ ಕೀರ್ತನಸಾಹಿತ್ಯ ಸಂಪಾದನೆಯ ತಾತ್ವಿಕತೆ’, ‘ಸತ್ಯವಂತರ ಸಂಗವಿರಲು’ ಲೇಖನಗಳು ಕೀರ್ತನ ಸಾಹಿತ್ಯದ ಸಾಂಸ್ಕೃತಿಕ ಮಹತ್ವ, ತಾತ್ವಿಕ ಒಳನೋಟಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ ಕ್ರಮದಲ್ಲಿ ಯಶಸ್ವಿಯಾಗಿವೆ. ‘ಗ್ರಾಮಾಯಣ ಕಾದಂಬರಿಯಲ್ಲಿ ಕುಟುಂಬ ಮತ್ತು ಮಹಿಳೆ’, ‘ಜ್ಯೋತಿ ಸ್ಪರ್ಶಿಸಿದ ಜ್ಯೋತಿ: ಕೆಳದಿ’, ‘ಹೋರಾಟದ ಮೌನ ಝರಿ: ಶಬರಿ’, ‘ಸಮಗಾರ ಭೀಮವ್ವ’, ‘ಮಹಿಳಾ ಸಾಹಿತ್ಯ: ಬಹುಮುಖಿ ನೆಲೆಗಳು’ ಈ ಲೇಖನಗಳು ಸ್ತ್ರೀವಾದಿ ಅಧ್ಯಯನದ ನೆಲೆಗಳನ್ನೊಳಗೊಂಡಿವೆ.</p>.<p>‘ಕನ್ನಡ ಕಾವ್ಯ ಪರಂಪರೆಯ ಆರಂಭವು ಜೈನ ಕವಿಗಳಿಂದ ಆಯಿತು’ ಎನ್ನುತ್ತದೆ ಈ ಕೃತಿಯ ಮೊದಲ ಲೇಖನದ ಮೊದಲ ಸಾಲು. ಕೃತಿಕಾರರ ಧರ್ಮ, ಜಾತಿಯನ್ನು ಗುರುತಿಸಿ ಅಧ್ಯಯನ ಮಾಡಿರುವುದು ಕೃತಿಯ ಉದ್ದಕ್ಕೂ ಕಂಡುಬರುತ್ತದೆ. ಇಂದು ಈ ಬಗೆಯಲ್ಲಿಯೇ ಸಾಹಿತ್ಯ ಕೃತಿಗಳನ್ನು ಪರಿಶೀಲಿಸುವ ಕ್ರಮವೊಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕನ್ನಡ ಭಾಷೆಯಲ್ಲಿ ಬರೆಯುವ ಕೃತಿಕಾರ ಕನ್ನಡ ಲೇಖಕನಲ್ಲವೇ, ಕನ್ನಡ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ಅವನನ್ನು ಅಧ್ಯಯನ ಮಾಡಬೇಕಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಡಾ.ಗೀತಾ ವಸಂತ ಅವರ ‘ಅಕ್ಷರ ದಾಹ’ ಎಂಬ ವಿಮರ್ಶಾ ಸಂಕಲನದಲ್ಲಿ ಒಟ್ಟು 16 ಲೇಖನಗಳಿವೆ. ಹಳೆಗನ್ನಡ, ಹೊಸಗನ್ನಡ ಸಾಹಿತ್ಯದ ಕೆಲವು ಕೃತಿಗಳನ್ನು ಇಲ್ಲಿ ಸಮೀಕ್ಷೆ ಮಾಡಲಾಗಿದೆ. ಜೊತೆಗೆ ಕರ್ನಾಟಕ ‘ಅವಧೂತ ಪರಂಪರೆ’, ‘ಬುದ್ಧ: ನೈತಿಕ ವಿಕಾಸದ ಮಹಾ ಮಾರ್ಗ’, ‘ಕೈವಾರ ತಾತಯ್ಯ: ಆಧ್ಯಾತ್ಮಿಕ -ಸಾಂಸ್ಕೃತಿಕ ನೆಲೆ’ ಎಂಬ ಗಮನ ಸೆಳೆಯುವ ಲೇಖನಗಳು ಇವೆ.</p>.<p>‘ಹಳೆಗನ್ನಡ ಕಾವ್ಯದ ಮರುಸೃಷ್ಟಿಯ ಸವಾಲುಗಳು: ನಾಗಚಂದ್ರ’ ಎಂಬ ಲೇಖನದಲ್ಲಿ ಜೈನಪುರಾಣಗಳ ಸ್ವರೂಪ, ವಿನ್ಯಾಸ, ರಾಮಾಯಣ ಪರಂಪರೆ, ಜೈನ ರಾಮಾಯಣ ಪರಂಪರೆ, ನಾಗಚಂದ್ರ ಉದಾತ್ತ ರಾವಣ ಎಂಬ ಉಪಶೀರ್ಷಿಕೆಗಳಡಿಯಲ್ಲಿ ಕೆಲವು ಮಾಹಿತಿ ಸ್ವರೂಪದ ಒಳನೋಟಗಳನ್ನು ಲೇಖಕಿ ಕೊಟ್ಟಿದ್ದಾರೆ. ‘ಜನ್ನನ ಕಾವ್ಯ: ಚಿತ್ತವೃತ್ತಿಗಳ ನಿಬಿಡಲೋಕ’ ಈ ಸಂಕಲನದ ಬಹುಮುಖ್ಯ ಲೇಖನವಾಗಿದ್ದು ಯಶೋಧರ ಚರಿತೆಯ ತಾತ್ವಿಕ ನೆಲೆಗಳ ಚರ್ಚೆ ಅಮೃತಮತಿಯ ಪಾತ್ರದ ಚೌಕಟ್ಟಿನಲ್ಲಿಯೇ ನಡೆಯುತ್ತದೆ. ಕುವೆಂಪು ಅವರಿಂದ ಮೊದಲುಗೊಂಡು ಜಿ. ರಾಜಶೇಖರ್, ಗಿರಡ್ಡಿ ಗೋವಿಂದರಾಜು ಒಳಗೊಂಡಂತೆ ಹಿರಿಯ ಕಿರಿಯ ವಿಮರ್ಶಕರು ಈ ಕೃತಿಯ ಕುರಿತು ಚರ್ಚಿಸಿದ್ದಾರೆ. ಅವುಗಳಲ್ಲಿರುವ ಚರ್ಚೆ, ವಾದಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಲೇಖನದ ಚರ್ಚೆಯನ್ನು ಮುಂದುವರಿಸಿದ್ದರೆ ಇನ್ನೂ ಹೆಚ್ಚಿನ ಒಳನೋಟಗಳನ್ನು ಕೊಡಲು ಸಾಧ್ಯವಾಗುತ್ತಿತ್ತು.</p>.<p>‘ಕನ್ನಡ ಕೀರ್ತನಸಾಹಿತ್ಯ ಸಂಪಾದನೆಯ ತಾತ್ವಿಕತೆ’, ‘ಸತ್ಯವಂತರ ಸಂಗವಿರಲು’ ಲೇಖನಗಳು ಕೀರ್ತನ ಸಾಹಿತ್ಯದ ಸಾಂಸ್ಕೃತಿಕ ಮಹತ್ವ, ತಾತ್ವಿಕ ಒಳನೋಟಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ ಕ್ರಮದಲ್ಲಿ ಯಶಸ್ವಿಯಾಗಿವೆ. ‘ಗ್ರಾಮಾಯಣ ಕಾದಂಬರಿಯಲ್ಲಿ ಕುಟುಂಬ ಮತ್ತು ಮಹಿಳೆ’, ‘ಜ್ಯೋತಿ ಸ್ಪರ್ಶಿಸಿದ ಜ್ಯೋತಿ: ಕೆಳದಿ’, ‘ಹೋರಾಟದ ಮೌನ ಝರಿ: ಶಬರಿ’, ‘ಸಮಗಾರ ಭೀಮವ್ವ’, ‘ಮಹಿಳಾ ಸಾಹಿತ್ಯ: ಬಹುಮುಖಿ ನೆಲೆಗಳು’ ಈ ಲೇಖನಗಳು ಸ್ತ್ರೀವಾದಿ ಅಧ್ಯಯನದ ನೆಲೆಗಳನ್ನೊಳಗೊಂಡಿವೆ.</p>.<p>‘ಕನ್ನಡ ಕಾವ್ಯ ಪರಂಪರೆಯ ಆರಂಭವು ಜೈನ ಕವಿಗಳಿಂದ ಆಯಿತು’ ಎನ್ನುತ್ತದೆ ಈ ಕೃತಿಯ ಮೊದಲ ಲೇಖನದ ಮೊದಲ ಸಾಲು. ಕೃತಿಕಾರರ ಧರ್ಮ, ಜಾತಿಯನ್ನು ಗುರುತಿಸಿ ಅಧ್ಯಯನ ಮಾಡಿರುವುದು ಕೃತಿಯ ಉದ್ದಕ್ಕೂ ಕಂಡುಬರುತ್ತದೆ. ಇಂದು ಈ ಬಗೆಯಲ್ಲಿಯೇ ಸಾಹಿತ್ಯ ಕೃತಿಗಳನ್ನು ಪರಿಶೀಲಿಸುವ ಕ್ರಮವೊಂದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕನ್ನಡ ಭಾಷೆಯಲ್ಲಿ ಬರೆಯುವ ಕೃತಿಕಾರ ಕನ್ನಡ ಲೇಖಕನಲ್ಲವೇ, ಕನ್ನಡ ಸಾಹಿತ್ಯ ಪರಂಪರೆಯ ಹಿನ್ನೆಲೆಯಲ್ಲಿ ಅವನನ್ನು ಅಧ್ಯಯನ ಮಾಡಬೇಕಲ್ಲವೇ ಎಂಬ ಪ್ರಶ್ನೆ ಕಾಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>