ಇತ್ತೀಚಿನ ವರ್ಷಗಳಲ್ಲಿ ಎಚ್ಚೆಸ್ವಿ ಕಾವ್ಯದ ಕುರಿತು ಬರೆದ ವಿಮರ್ಶೆಗಳು ಮತ್ತು ಅವರ ಪತ್ರಿಕಾ ಅಂಕಣಗಳಲ್ಲಿ ಬರೆದ ಎಚ್ಚೆಸ್ವಿ ಕೃತಿಗಳ ಕುರಿತ ಲೇಖನಗಳನ್ನು ಈ ಕೃತಿಯಲ್ಲಿ ಒಟ್ಟುಗೂಡಿಸಿದ್ದಾರೆ. ಈ ಸಂಕಲನಕ್ಕಾಗಿಯೇ ಎಚ್ಚೆಸ್ವಿಯವರ ಸುನೀತಗಳು ಮತ್ತು ಮಕ್ಕಳ ಕಾವ್ಯದ ಬಗ್ಗೆ ಬರೆದ ಎರಡು ಲೇಖನಗಳು ಮತ್ತು ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಮಾಡಿದ ವಿಶೇಷ ಸಂದರ್ಶನಗಳೂ ಇಲ್ಲಿವೆ. ಎಚ್ಚೆಸ್ವಿಯವರ ಮೂರು ಮುಖ್ಯ ಕವಿತೆಗಳು ಮತ್ತು ಒಟ್ಟು ಸಾಹಿತ್ಯದ ಕುರಿತ ಮುನ್ನೋಟಗಳನ್ನು ಬೊಗಸೆಯಲ್ಲಿ ಹಿಡಿದಿಡುವ ವಿಜಯಶಂಕರ ಅವರ ಪ್ರಯತ್ನ ಇಲ್ಲಿ ಗಮನ ಸೆಳೆಯುತ್ತದೆ.