‘ಹಕ್ಕಿಯಂತೆ ರೆಕ್ಕೆ ಇದ್ರೆ ಶಾಲೆಯ ತುಂಟ ಮಕ್ಕಳಿಗೆ/ ಬಸ್ಸು ಆಟೊ ಕಾಯ್ತಿರಲಿಲ್ಲ ಬೇಗನೆ ಬರಲು ಶಾಲೆಗೆ’ ಎಂಬ ಸಾಲುಗಳು ಮಕ್ಕಳಿಗೆ ಖುಷಿ ನೀಡಬಲ್ಲಂಥವು. ಮಕ್ಕಳಿಗೆ ಮಂಗಗಳಂತೆ ಉದ್ದನೆಯ ಬಾಲ ಇದ್ದಿದ್ದರೆ ಏನಾಗುತ್ತಿತ್ತು? ಪ್ರೈಮರಿ ಸ್ಕೂಲನ್ನು ಗಿಡಗಿಡದಲ್ಲಿ ಕಟ್ಟಬೇಕಿತ್ತು ಎನ್ನುತ್ತದೆ ಇಲ್ಲಿನ ಒಂದು ಕವಿತೆ! ನೀರಲ್ಲೇ ಇರುವ ಮೀನಿಗೆ ನೆಗಡಿ ಯಾಕ ಬಂದಿಲ್ಲ ಎಂದು ಕೇಳುತ್ತದೆ ಮತ್ತೊಂದು ಕವಿತೆ. ಜೋಡುಗಾಲಿಯ ಚಂದ್ರಾಮ, ಅದ್ಭುತ ಯಾನ ಮೊದಲಾದ ಪದ್ಯಗಳು ಮಕ್ಕಳು ಸದಾ ಗುನುಗುನಿಸುವಂತಿವೆ.