ದೊಡ್ಡರಂಗೇಗೌಡರ 48 ಪುಟ್ಟ ಪುಟ್ಟ ಕಥೆಗಳ ಗುಚ್ಛವೇ ‘ಮಧ್ಯವರ್ತಿ’. ಕಾಲೇಜು ದಿನಗಳಲ್ಲಿ ಕಥೆ ಬರೆಯುತ್ತಿದ್ದ ಅವರು ಬಳಿಕ ಕಾವ್ಯದ ಕಡೆಗೆ ವಾಲಿದವರು. ನಿವೃತ್ತಿಯ ನಂತರವಷ್ಟೇ ಅವರು ಮತ್ತೆ ಕಥಾಸಾಗರಕ್ಕೆ ಧುಮುಕಿದ್ದಾರೆ. ಗೌಡರ ಅನುಭವ, ಸುತ್ತಮುತ್ತಲಿನ ಸಮಾಜದ ಕುರಿತು ಅವರು ಹೊಂದಿದ ಕೌತುಕ, ಕಥೆ ಹೇಳುವ ಆಸಕ್ತಿ ಎಲ್ಲವೂ ಮೇಳೈಸಿದ್ದರಿಂದ ‘ಮಧ್ಯವರ್ತಿ’ ಅವತರಿಸಲು ಸಾಧ್ಯವಾಗಿದೆ. ಸಮಾಜವನ್ನು ಕಾಡುವ ಭ್ರಷ್ಟಾಚಾರ, ಮೋಸ, ವಂಚನೆ, ಬಡತನ ಇವರ ಕಥೆಗಳಿಗೆ ಮುಖ್ಯ ವಸ್ತುವಾಗಿವೆ.