ಬಾಳಿನ ಸೆಳೆತದಲ್ಲಿ ಅಜ್ಞಾತವಾಗಿಯೇ ಉಳಿಯುವ ಹಲವು ಪ್ರಶ್ನೆಗಳನ್ನು ಕಾದಂಬರಿ ಎತ್ತುತ್ತದೆ. ಜತೆಗೆ ಕಾಯಕನಾಥನ ಸಂಯಮವೂ ಕಾಡುತ್ತದೆ. ಧಾರಾವಾಹಿ ರೂಪದಲ್ಲಿ ಕಾದಂಬರಿ ಪ್ರಕಟವಾಗಿದ್ದರಿಂದ ಓದುಗರನ್ನು ಸದಾ ಸೆಳೆಯುವಂತಹ, ಮುಂದಿನ ಭಾಗಕ್ಕಾಗಿ ಕುತೂಹಲದಿಂದ ಕಾಯುವಂತಹ ಅನಿರೀಕ್ಷಿತ ತಿರುವುಗಳನ್ನೂ ಇದು ಒಳಗೊಂಡಿದೆ. 40ಕ್ಕೂ ಹೆಚ್ಚು ಕಾದಂಬರಿಗಳನ್ನು ಕೊಟ್ಟಿರುವ ಕಾಮತ್ ಅವರು, ‘ಅಜ್ಞಾತ’ದಲ್ಲಿ ಬಳಸಿರುವ ಭಿನ್ನತಂತ್ರ, ನಿರೂಪಣಾಶೈಲಿ ಗಮನ ಸೆಳೆಯುತ್ತದೆ.