ಮೊದಲ ಕೆಲವು ಪುಟಗಳಲ್ಲಿ ಭೌಗೋಳಿಕ ಮಾಹಿತಿ, ಜನಸಂಖ್ಯೆ, ಆರ್ಥಿಕ ಚಟುವಟಿಕೆ ಇತ್ಯಾದಿ ಸಾಮಾನ್ಯ ವಿವರಗಳಿವೆ. ಮುಂದೆ ಈ ಭಾಗದ ಶಿಲಾಯುಗ ಕಾಲದ ಇತಿಹಾಸವಿದೆ. ಮೈಸೂರು ಅರಸರು ಇಲ್ಲಿ ಕೆರೆ ಕಟ್ಟಿಸಿದ ನಂತರ ಈ ಊರಿಗೆ ಕೃಷ್ಣರಾಜ ಪೇಟೆ ಎಂದು ಹೆಸರಾದದ್ದರ ಕುರಿತು ವಿವರಗಳಿವೆ. ಈ ಹೆಸರು ಹಾಗೂ ಮೂಲ ಹೆಸರಿನ ಕುರಿತು ವಿವಿಧ ವಿದ್ವಾಂಸರಲ್ಲಿರುವ ಭಿನ್ನ ಅಭಿಪ್ರಾಯಗಳನ್ನೂ ಉಲ್ಲೇಖಿಸಲಾಗಿದೆ.ಕೃಷಿ, ಸಾಮಾಜಿಕ, ರಾಜಕೀಯ, ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಕೆ.ಆರ್.ಪೇಟೆಯ ಗಣನೀಯ ಕೊಡುಗೆಗಳ ಉಲ್ಲೇಖ, ವಿವಿಧ ಮಹನೀಯರ ಪರಿಚಯ ಹಾಗೂ ಸಣ್ಣ ಸಣ್ಣ ವಿವರಗಳನ್ನೂ ಒದಗಿಸಲಾಗಿದೆ. ರಾಜಧಾನಿಗೆ ಹತ್ತಿರವಿರುವ ಸದಾ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿರುತ್ತಲೇ ಇರುವ ಕೃಷ್ಣರಾಜಪೇಟೆ ತಾಲ್ಲೂಕಿನ ಒಳಗೆ ಸುತ್ತು ಹಾಕುವ ಕುತೂಹಲವುಳ್ಳವರು ಓದಬೇಕಾದ ಕೃತಿ.