ಭವಿಷ್ಯ ಪೂರ್ವನಿಶ್ಚಿತವಾದದ್ದು ಎಂಬ ಚಿಂತನೆಯನ್ನು ಮೇಲಿನ ಸಾಲುಗಳ ಮೂಲಕ ಚರ್ಚೆಗೆ ಒಳಪಡಿಸಿದ್ದಾರೆ ಲೇಖಕ. ನಮ್ಮ ಅಂತರಾತ್ಮಕ್ಕೆ ನಿಷ್ಠರಾದರೆ ಬೇರೆಯವರಿಗೆ ಅಪ್ರಾಮಾಣಿಕರಾಗಲು ಸಾಧ್ಯವೇ ಇಲ್ಲ ಎಂದು ‘ಅಂತರಂಗಕ್ಕೊಂದು ಒಳ್ಳೆಯತನದ ಬೆಳಕು’ ಹಿಡಿದಿದ್ದಾರೆ. ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಮರುಗುವ ಮೇಷ್ಟ್ರು, ಮೊದಲ ಬರಹವು ‘ಸುಧಾ’ದಲ್ಲಿ ಪ್ರಕಟವಾದಾಗಿನ ಸಂಭ್ರಮವನ್ನು ನೆನಪಿಸಿದ್ದಾರೆ. ಕಾಮಕುತೂಹಲದ ವಿವರಣೆಯಲ್ಲಿ ಕೊನೆಯ ಸಾಲು (ಲೇಖನ: ಲಿಬಿಡೋ ಬಿಡುವುದಿಲ್ಲ) ಆಸಕ್ತಿದಾಯಕವಾಗಿದೆ. ತೀರಾ ಸಡಿಲ ಬಿಟ್ಟರೆ ತಂತಿ ಮಿಡಿಯುವುದಿಲ್ಲ. ತೀರಾ ಬಿಗಿ ಮಾಡಿದರೆ ತಂತಿ ಹರಿದು ಹೋದೀತು. ವೀಣೆಯನ್ನು ಹದವರಿತು ಶ್ರುತಿ ಮಾಡುವ ವಿದ್ಯೆಯನ್ನು ಪೋಷಕರು ಕಲಿಯಬೇಕಾದದ್ದು ಇಂದಿನ ಅಗತ್ಯ ಎಂದಿದ್ದಾರೆ.