ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಕವಿ,ಕಥೆಗಾರನೊಬ್ಬನನ್ನು ತನ್ನೊಳಗೆ ಸೃಷ್ಟಿಸಿಕೊಂಡ ಫೈಜ್ನಟ್ರಾಜ್ ಅವರು ಓದುಗರ ನಾಡಿ ಮಿಡಿತವನ್ನು ಅರ್ಥೈಸಿಕೊಂಡು ‘ಮತ್ತೆ ಮತ್ತೆ ಹೇಗೆ ಹಾಡಲಿ’ ಎಂಬ ನಲವತ್ತು ಕವಿತೆಗಳ ಗುಚ್ಛದೊಂದಿಗೆ ಬಂದಿದ್ದಾರೆ. ಈಗಾಗಲೇ ‘ಬುದ್ಧನಾಗ ಹೊರಟು’, ‘ಹಬ್ಬಿದಾ ಮಲೆ ಮಧ್ಯದೊಳಗೆ’ ಸೇರಿದಂತೆ ಆರೇಳು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಅವರ ಕವಿತಾ ಲೋಕವೂ ರಮ್ಯವಾಗಿದೆ.