ಹೆತ್ತವ್ವನ ಉಸಿರುನಿಂತ ಗಳಿಗೆಯಿಂದ ಕೃತಿಯನ್ನು ಆರಂಭಿಸಿರುವ ಲೇಖಕರು ಅವ್ವನ ನೆನಪನ್ನು ಕೆದಕುತ್ತಾ ಹೋಗುತ್ತಾರೆ. ಈ ನೆನಪೆಲ್ಲವನ್ನೂ ಒಂದೇ ಗುಕ್ಕಿನಲ್ಲಿ ಬರೆದದ್ದಾಗಿ ಲೇಖಕರು ಉಲ್ಲೇಖಿಸಿದ್ದಾರೆ. ಬರವಣಿಗೆ ಇದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಮಕ್ಕಳಿಗೆ ನೀಡುವ ಪ್ರೀತಿ, ಆರೈಕೆ, ಮಮತೆಯಲ್ಲಿ ತಾಯಂದಿರೆಲ್ಲ ಒಂದೇ. ಹೀಗಾಗಿ ಲೇಖಕರು ತಮ್ಮ ಹೆತ್ತವ್ವನ ಕರ್ತವ್ಯ, ಜವಾಬ್ದಾರಿ, ಆಕೆ ಎದುರಿಸಿದ ಸವಾಲು, ಸಂಕಷ್ಟಗಳನ್ನು ವಿವರಿಸುವಾಗ ಓದುಗರಿಗೂ ತಮ್ಮ ತಾಯಿಯೊಮ್ಮೆ ನೆನಪಾದಾರು. ಈ ರೀತಿ ನೆನಪಾದರೆ ಪುಸ್ತಕಕ್ಕೆ ಸಾರ್ಥಕತೆ ಸಿಕ್ಕೀತು ಎಂದೂ ಲೇಖಕರು ಹೇಳಿದ್ದಾರೆ.