ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಸ್ತಕ ವಿಮರ್ಶೆ| ನುಡಿ ಬೆಡಗು, ಕಿ.ರಂ.ನಾಗರಾಜ ಅವರ ವಿಮರ್ಶೆಗಳ ಗುಚ್ಛ

Last Updated 18 ಜನವರಿ 2020, 19:45 IST
ಅಕ್ಷರ ಗಾತ್ರ

ವಿಮರ್ಶಕ ಕಿ.ರಂ. ನಾಗರಾಜ ಅವರು ಗತಿಸಿ 10 ವರ್ಷ ಕಳೆದರೂ ಅವರ ನೆನಪುಗಳು ಸಾಂಸ್ಕೃತಿಕ ಮನಸ್ಸುಗಳಿಂದ ಗತಿಸಿ ಹೋಗಿಲ್ಲ. ತನ್ನ ಬದುಕಿನ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದ ಘನ ಪರಂಪರೆಯನ್ನು ಸಂಪೂರ್ಣ ಆವರಿಸಿಕೊಂಡವರು ಕಿ.ರಂ. ಅವರ ಒಡನಾಟಕ್ಕೆ ದಕ್ಕಿದ ಯಾವ ಮನುಷ್ಯನನ್ನೂ ಅವರು ಪ್ರಭಾವಿಸದೆ ಬಿಟ್ಟಿಲ್ಲ ಎಂಬುದಕ್ಕೆ ಈ ಪುಸ್ತಕವೇ ಸಾಕ್ಷಿ.

ಕಿ.ರಂ. ಎಂಬ ವಿಮರ್ಶಾ ಪ್ರತಿಭೆ ಸೃಷ್ಟಿಸಿದ ಸಾಂಸ್ಕೃತಿಕ ಸಂಚಲನದ ಅಗಾಧತೆಯನ್ನು ಅರಿಯಲು ಡಾ. ಶಿವರಾಜ ಬ್ಯಾಡರಹಳ್ಳಿ ಅವರ ‘ನುಡಿಬೆಡಗು’ ಕೃತಿ ಸಹಾಯ ಮಾಡುತ್ತದೆ. ಕಿ.ರಂ ಅವರು ನೀಲು ಕವಿತೆಗಳು, ಅಡಿಗರ ಕವಿತೆಗಳು, ಚಂದ್ರಶೇಖರ ಕಂಬಾರ ಅವರ ‘ಸಿರಿ ಸಂಪಿಗೆ’, ಅಂಕುರ್‌ ಬೆಟಗೇರಿ ಅವರ ‘ಹಳದಿ ಪುಸ್ತಕ’ ಸೇರಿ ಹಲವು ಕೃತಿಗಳಿಗೆ ಸಂಬಂಧಿಸಿದಂತೆ ಮಾಡಿದ ವಿಮರ್ಶಾ ಗುಚ್ಛ ಇಲ್ಲಿದೆ. ಜತೆಗೆ ಅವರ ಆಯ್ದ ಭಾಷಣಗಳನ್ನು ಸಂಪಾದಿಸಲಾಗಿದೆ.

ಕಿ.ರಂ.ನಾಗರಾಜ ಅವರ ಸಾಹಿತ್ಯಕ ದೃಷ್ಟಿಕೋನವನ್ನು ಅರಿಯಲು ಈ ಕೃತಿ ಪ್ರಯೋಜನಕಾರಿ.

ಪುಸ್ತಕ: ನುಡಿ ಬೆಡಗು

ಸಂಪಾದಕ: ಡಾ.ಶಿವರಾಜ ಬ್ಯಾಡರಹಳ್ಳಿ

ಪುಟಗಳು: 128

ಬೆಲೆ: 128

ಪ್ರಕಾಶಕರು: ಸಂಸ ಪ್ರಕಾಶನ

ಮೊ: 9742067427

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT