ವರ್ತಮಾನದ ವಿದ್ಯಮಾನಗಳಿಗೆ ತುಂಬಾ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಕನ್ನಡದ ಬರಹಗಾರರಲ್ಲಿ ರಾಜಾರಾಂ ತಲ್ಲೂರು ಕೂಡ ಒಬ್ಬರು. ಅದು ಕೇಂದ್ರದ ಕೃಷಿ ಕಾಯ್ದೆಗಳೇ ಇರಬಹುದು, ಕೊರೊನಾ ಕಾಲದ ಸಂಕಟಗಳೇ ಆಗಿರಬಹುದು, ಮಾಧ್ಯಮವನ್ನು ಕಾಡುತ್ತಿರುವ ಸಂಗತಿಗಳೇ ಆಗಿರಬಹುದು ವಸ್ತುನಿಷ್ಠವಾದ ವಿಶ್ಲೇಷಣೆಯನ್ನು ತಲ್ಲೂರು ಅವರ ಬರಹದಲ್ಲಿ ಕಾಣಬಹುದು. ಆಯಾ ಸಂದರ್ಭಕ್ಕೆ ತಕ್ಕಂತೆ ವಿವಿಧ ಪತ್ರಿಕೆಗಳಿಗೆ ಅವರು ಬರೆದ ಲೇಖನಗಳ ಸಂಗ್ರಹವೇ ನಮ್ದೇಕತೆ.