<p>‘ಬೆಂಗಳೂರು ಸಾಕಷ್ಟು ಹಾಳಾಗಿದೆ. ಜೀವವೈವಿಧ್ಯವನ್ನು ಕಳೆದುಕೊಂಡು ಬರಡಾಗುತ್ತಿದೆ. ಇಂತಹ ನಗರಕ್ಕೆ ಚೈತನ್ಯ ತುಂಬಬೇಕಾದರೆ ಜನರಲ್ಲಿ ಜಾಗೃತಿ ಹೆಚ್ಚಬೇಕು’ ಎನ್ನುವುದು ಕಲಾವಿದೆ ಹುಮೇರಾ ಅಲಿ ಅವರ ಮಾತು.</p>.<p>ಚಿಕ್ಕ ವಯಸ್ಸಿನಿಂದಲೇ ಕಲಾವಿದೆ ಯಾಗುವ ಕನಸು ಕಂಡಿದ್ದ ಹುಮೇರಾ, ಓದು ಮುಗಿಸಿ ಬೇಗನೆ ಮದುವೆಯಾದರು. ಆದರೆ ಇವೆಲ್ಲದರ ನಡುವೆಯೂ ಅವರ ಹೃದಯ ಆಗಾಗ ನಗರದ ಸೌಂದರ್ಯ ಕೆಡುತ್ತಿರುವುದನ್ನು ಕಂಡು ಮರುಗುತ್ತಿತ್ತು. ಈ ಕಾಳಜಿಯೇ ಅವರನ್ನು ಇಂದು ಕಲಾವಿದೆಯಾಗಿ ರೂಪಿಸಿದೆ.</p>.<p>‘ಮಕ್ಕಳನ್ನು ದೊಡ್ಡವ ರನ್ನಾಗಿಸುವಲ್ಲಿಯೇ 13 ವರ್ಷ ಕಳೆದುಹೋಯಿತು. ಆದರೆ ಕಲಾವಿದೆಯಾಗಿ ಕುಂಚ ಹಿಡಿಯಬೇಕು ಎಂಬುದು ನನ್ನ ಬಹುಕಾಲದ ಕನಸಾಗಿತ್ತು. ಮಕ್ಕಳು ದೊಡ್ಡವರಾದಂತೆ ನನಗೂ ಸಮಯ ಸಿಕ್ಕಿತು. ಮೂರು ವರ್ಷಗಳಿಂದ ಮತ್ತೆ ಚಿತ್ರ ಬಿಡಿಸುತ್ತಿದ್ದೇನೆ’ ಎಂದು ಅವರು ಕಲಾವಿದೆಯಾಗಿ ರೂಪುಗೊಂಡ ಬಗೆಯನ್ನು ಹಂಚಿಕೊಂಡರು.</p>.<p>ಕಲಾವಿದ ಜಾಕ್ಸನ್ ಪೊಲಾಕ್ ಪ್ರೇರಣೆ: ಹುಮೇರಾ ಅವರು ಅಮೆರಿಕದ ಪ್ರಖ್ಯಾತ ಕಲಾವಿದ ಜಾಕ್ಸನ್ ಪೊಲಾಕ್ ಅವರ ಚಿತ್ರಕಲೆಯನ್ನು ಮೆಚ್ಚಿ ಕೊಂಡರು. ಅವರಂತೆಯೇ ಚಿತ್ರಗಳನ್ನು ಬಿಡಿಸುವ ಕನಸು ಕಂಡರು. ಕಲುಷಿತಗೊಂಡಿರುವ ನದಿ, ಬೆಟ್ಟ, ನೀರು, ನಗರದ ಕಸ, ಜೀವವೈವಿಧ್ಯತೆ ಸೇರಿದಂತೆ ಪರಿಸರ ಕಾಳಜಿಯ ವಸ್ತುಗಳು ಇವರನ್ನು ಆಕರ್ಷಿಸಿದವು.</p>.<p>‘ನಗರೀಕರಣ ಹೆಚ್ಚಿದಂತೆ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾನೆ. ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವ್ಯವಸ್ಥೆ ಹಿಂದೆ ಉಳಿದಿದೆ. ಚಿತ್ರಕಲೆಗಳು ಜನರನ್ನು ಜಾಗೃತರನ್ನಾಗಿ ಮಾಡುತ್ತವೆ’ ಎನ್ನುತ್ತಾರೆ ಹುಮೇರಾ.</p>.<p>ದುಬೈ, ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ಏಕವ್ಯಕ್ತಿ ಪ್ರದರ್ಶನ ಡಿ.4ರಿಂದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಬೆಂಗಳೂರು ಸಾಕಷ್ಟು ಹಾಳಾಗಿದೆ. ಜೀವವೈವಿಧ್ಯವನ್ನು ಕಳೆದುಕೊಂಡು ಬರಡಾಗುತ್ತಿದೆ. ಇಂತಹ ನಗರಕ್ಕೆ ಚೈತನ್ಯ ತುಂಬಬೇಕಾದರೆ ಜನರಲ್ಲಿ ಜಾಗೃತಿ ಹೆಚ್ಚಬೇಕು’ ಎನ್ನುವುದು ಕಲಾವಿದೆ ಹುಮೇರಾ ಅಲಿ ಅವರ ಮಾತು.</p>.<p>ಚಿಕ್ಕ ವಯಸ್ಸಿನಿಂದಲೇ ಕಲಾವಿದೆ ಯಾಗುವ ಕನಸು ಕಂಡಿದ್ದ ಹುಮೇರಾ, ಓದು ಮುಗಿಸಿ ಬೇಗನೆ ಮದುವೆಯಾದರು. ಆದರೆ ಇವೆಲ್ಲದರ ನಡುವೆಯೂ ಅವರ ಹೃದಯ ಆಗಾಗ ನಗರದ ಸೌಂದರ್ಯ ಕೆಡುತ್ತಿರುವುದನ್ನು ಕಂಡು ಮರುಗುತ್ತಿತ್ತು. ಈ ಕಾಳಜಿಯೇ ಅವರನ್ನು ಇಂದು ಕಲಾವಿದೆಯಾಗಿ ರೂಪಿಸಿದೆ.</p>.<p>‘ಮಕ್ಕಳನ್ನು ದೊಡ್ಡವ ರನ್ನಾಗಿಸುವಲ್ಲಿಯೇ 13 ವರ್ಷ ಕಳೆದುಹೋಯಿತು. ಆದರೆ ಕಲಾವಿದೆಯಾಗಿ ಕುಂಚ ಹಿಡಿಯಬೇಕು ಎಂಬುದು ನನ್ನ ಬಹುಕಾಲದ ಕನಸಾಗಿತ್ತು. ಮಕ್ಕಳು ದೊಡ್ಡವರಾದಂತೆ ನನಗೂ ಸಮಯ ಸಿಕ್ಕಿತು. ಮೂರು ವರ್ಷಗಳಿಂದ ಮತ್ತೆ ಚಿತ್ರ ಬಿಡಿಸುತ್ತಿದ್ದೇನೆ’ ಎಂದು ಅವರು ಕಲಾವಿದೆಯಾಗಿ ರೂಪುಗೊಂಡ ಬಗೆಯನ್ನು ಹಂಚಿಕೊಂಡರು.</p>.<p>ಕಲಾವಿದ ಜಾಕ್ಸನ್ ಪೊಲಾಕ್ ಪ್ರೇರಣೆ: ಹುಮೇರಾ ಅವರು ಅಮೆರಿಕದ ಪ್ರಖ್ಯಾತ ಕಲಾವಿದ ಜಾಕ್ಸನ್ ಪೊಲಾಕ್ ಅವರ ಚಿತ್ರಕಲೆಯನ್ನು ಮೆಚ್ಚಿ ಕೊಂಡರು. ಅವರಂತೆಯೇ ಚಿತ್ರಗಳನ್ನು ಬಿಡಿಸುವ ಕನಸು ಕಂಡರು. ಕಲುಷಿತಗೊಂಡಿರುವ ನದಿ, ಬೆಟ್ಟ, ನೀರು, ನಗರದ ಕಸ, ಜೀವವೈವಿಧ್ಯತೆ ಸೇರಿದಂತೆ ಪರಿಸರ ಕಾಳಜಿಯ ವಸ್ತುಗಳು ಇವರನ್ನು ಆಕರ್ಷಿಸಿದವು.</p>.<p>‘ನಗರೀಕರಣ ಹೆಚ್ಚಿದಂತೆ ಮನುಷ್ಯ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾನೆ. ಇದಕ್ಕೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ವ್ಯವಸ್ಥೆ ಹಿಂದೆ ಉಳಿದಿದೆ. ಚಿತ್ರಕಲೆಗಳು ಜನರನ್ನು ಜಾಗೃತರನ್ನಾಗಿ ಮಾಡುತ್ತವೆ’ ಎನ್ನುತ್ತಾರೆ ಹುಮೇರಾ.</p>.<p>ದುಬೈ, ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲಾ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ಏಕವ್ಯಕ್ತಿ ಪ್ರದರ್ಶನ ಡಿ.4ರಿಂದ ನಡೆಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>