<p><em><strong>ಹಾಡುಗಳಿಲ್ಲದ ಲೋಕದಲ್ಲಿ ಮಕ್ಕಳು ಬೆಳೆಯುವುದು ಹೇಗೆ ಎಂದು ಕೇಳಿದ್ದರು ಕೀರ್ತಿನಾಥ ಕುರ್ತ ಕೋಟಿ. ಅಂಥ ಶಿಶು ಗೀತೆಗಳನ್ನು ಮಕ್ಕಳು ಸವಿಯಲಿ ಎಂದು ಪ್ರೀತಿಯಿಂದ ಬೊಳುವಾರು ಮಹಮ್ಮದ್ ಕುಂಞಿ ಸಂಪಾದಿಸಿದ ಕೃತಿಯೇ ‘ತಟ್ಟು ಚಪ್ಪಾಳೆ ಪುಟ್ಟಮಗು’. ಶತಮಾನದ ನೂರಾರು ಅನನ್ಯ ಶಿಶುಗೀತೆಗಳು ಈ ಕೃತಿಯಲ್ಲಿವೆ. ಪ್ರತಿ ಮಗುವೂ ಓದಲೇಬೇಕಾದ ಪುಸ್ತಕ ಇದು.</strong></em></p>.<p>***</p>.<p><strong>ಕರಡಿ ಕುಣಿತ</strong></p>.<p>ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು<br />ಕಂಬಳಿ ಹೊದ್ದಾಂವ ಬಂದಾನ!<br />ಗುಣುಗುಣುಗುಟ್ಟುತ ಕಡಗವ ಕುಟ್ಟುತ<br />ಕರಡಿಯನಾಡಿಸುತ ನಿಂದಾನ!</p>.<p>ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ<br />ಜಾಂಬುವಂತನ ಹಿಡಿದು ತಂದಾನ?<br />‘ಧಣಿಯರ ಮನಿಮುಂದ ಕಾವಲು ಮಾಡಣ್ಣ<br />ಧಣಿ ದಾನ ಕೊಡುವನು’ ಅಂದಾನ.<br />ನೀ ನನಗಿದ್ದರೆ<br /><em><strong>–ದ.ರಾ. ಬೇಂದ್ರೆ</strong></em></p>.<p><em><strong>**</strong></em></p>.<p><strong>ಸಂತೆಗೆ ಹೋದನು ಭೀಮಣ್ಣ</strong></p>.<p>ಹಿಂಡಿಯ ಕೊಂಡನು ಹತ್ತು ಮಣ;<br />ಕತ್ತೆಯ ಬೆನ್ನಿಗೆ ಹೇರಿಸಿದ<br />ಕುದುರೆಯ ಜತೆಯಲಿ ಸಾಗಿಸಿದ.<br /><br />ಕತ್ತೆಯು ಅರಚಿತು ‘ಓ ಗೆಳೆಯ,<br />ಅರ್ಧವ ನೀ ಹೊರು, ದಮ್ಮಯ್ಯ’<br />ಕುದುರೆಗೆ ಕೂಗದು ಕೇಳಿಸಿತು<br />ಕತ್ತೆಯ ಕಿರುಚನು ಚಾಳಿಸಿತು.</p>.<p><em><strong>–ಕಯ್ಯಾರ ಕಿಂಞ್ಞಣ್ಣ ರೈ</strong></em></p>.<p>***</p>.<p><strong>ಕಾಶೀಗ್ ಹೋದ ನಂ ಬಾವ</strong></p>.<p>ಕಾಶೀಗ್ ಹೋದ ನಂ ಬಾವ<br />ಕಬ್ಣದ್ ದೋಣೀಲಿ<br />ರಾಶಿ ರಾಶಿ ಗಂಗೆ ತರೋಕ್<br />ಸೊಳ್ಳೇ ಪರದೇಲಿ<br />ತಂಗಿ ಯಮುನಾದೇವಿಯಳ<br />ಸಂಗವಾಯ್ತೆಂದುಬ್ಬಿ ಉಬ್ಬಿ<br />ಗಂಗಾದೇವಿ ಉಕ್ಕಿ ಉಕ್ಕಿ<br />ಬೀಸಿ ಬೀಸಿ ದೋಣಿ ಕುಕ್ಕಿ<br />ಬಾವ ಅತ್ತು ಬಿಕ್ಕಿ ಬಿಕ್ಕಿ<br />ಬಂಡೆ ತಾಕಿ ದೋಣಿ ಒಡ್ದು<br />ಸೊಳ್ಳೇ ಪರದೆ ಬಾವನ್ ಬಡ್ದು<br />ಮಂಡೆ ದವಡೆ ಪಟ್ಟಾಗೊಡ್ದು<br />ಕಾಶೀ ಆಸೆ ನಾಶವಾಗಿ<br />ಮೀಸೇ ಉಳಿದದ್ ಎಷ್ಟೋ ವಾಸೀಂತ<br />ಕಾಶೀಂದ್ ಬಂದ ನಂ ಬಾವ<br /><em><strong>–ಟಿ.ಪಿ. ಕೈಲಾಸಂ</strong></em></p>.<p>***</p>.<p><strong>ಹಿಂದಿನ ಸಾಲಿನ ಹುಡುಗರು</strong></p>.<p>‘ಹಿಂದಿನ ಸಾಲಿನ ಹುಡುಗರು’ ಎಂದರೆ<br />ನಮಗೇನೇನೂ ಭಯವಿಲ್ಲ!<br />ನಮ್ಮಿಂದಾಗದು ಶಾಲೆಗೆ ತೊಂದರೆ:<br />ನಮಗೆಂದೆಂದೂ ಜಯವಿಲ್ಲ!</p>.<p><br />ನೀರಿನ ಜೋರಿಗೆ ತೇಲದು ಬಂಡೆ;<br />ಅಂತೆಯೇ ನಾವೀ ತರಗತಿಗೆ!<br />ಪರೀಕ್ಷೆ ಎಂದರೆ ಹೂವಿನ ಚೆಂಡೆ?<br />ಚಿಂತಿಸಬಾರದು ದುರ್ಗತಿಗೆ.</p>.<p><em><strong>– ಕೆ.ಎಸ್.ನರಸಿಂಹಸ್ವಾಮಿ</strong></em></p>.<p>***</p>.<p><strong>ನನ್ನ ಕುದುರೆ</strong></p>.<p>ಅಜ್ಜನ ಕೋಲಿದು ನನ್ನಯ ಕುದುರೆ<br />ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ<br />ಕಾಲಿಲ್ಲದೆಯೇ ನಡೆಯುವ ಕುದುರೆ<br />ಕೂಳಿಲ್ಲದೆಯೇ ಬದುಕುವ ಕುದುರೆ<br />ನಾಲನು ಬಡಿಸದ ಜೂಲವ ಹೊದಿಸದ<br />ಲಾಲನೆ ಪಾಲನೆ ಬಯಸದ ಕುದುರೆ<br />ಅಜ್ಜನ ಕೋಲಿದು ನನ್ನಯ ಕುದುರೆ</p>.<p><em><strong>– ಸಿದ್ದಯ್ಯ ಪುರಾಣಿಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಹಾಡುಗಳಿಲ್ಲದ ಲೋಕದಲ್ಲಿ ಮಕ್ಕಳು ಬೆಳೆಯುವುದು ಹೇಗೆ ಎಂದು ಕೇಳಿದ್ದರು ಕೀರ್ತಿನಾಥ ಕುರ್ತ ಕೋಟಿ. ಅಂಥ ಶಿಶು ಗೀತೆಗಳನ್ನು ಮಕ್ಕಳು ಸವಿಯಲಿ ಎಂದು ಪ್ರೀತಿಯಿಂದ ಬೊಳುವಾರು ಮಹಮ್ಮದ್ ಕುಂಞಿ ಸಂಪಾದಿಸಿದ ಕೃತಿಯೇ ‘ತಟ್ಟು ಚಪ್ಪಾಳೆ ಪುಟ್ಟಮಗು’. ಶತಮಾನದ ನೂರಾರು ಅನನ್ಯ ಶಿಶುಗೀತೆಗಳು ಈ ಕೃತಿಯಲ್ಲಿವೆ. ಪ್ರತಿ ಮಗುವೂ ಓದಲೇಬೇಕಾದ ಪುಸ್ತಕ ಇದು.</strong></em></p>.<p>***</p>.<p><strong>ಕರಡಿ ಕುಣಿತ</strong></p>.<p>ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು<br />ಕಂಬಳಿ ಹೊದ್ದಾಂವ ಬಂದಾನ!<br />ಗುಣುಗುಣುಗುಟ್ಟುತ ಕಡಗವ ಕುಟ್ಟುತ<br />ಕರಡಿಯನಾಡಿಸುತ ನಿಂದಾನ!</p>.<p>ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ<br />ಜಾಂಬುವಂತನ ಹಿಡಿದು ತಂದಾನ?<br />‘ಧಣಿಯರ ಮನಿಮುಂದ ಕಾವಲು ಮಾಡಣ್ಣ<br />ಧಣಿ ದಾನ ಕೊಡುವನು’ ಅಂದಾನ.<br />ನೀ ನನಗಿದ್ದರೆ<br /><em><strong>–ದ.ರಾ. ಬೇಂದ್ರೆ</strong></em></p>.<p><em><strong>**</strong></em></p>.<p><strong>ಸಂತೆಗೆ ಹೋದನು ಭೀಮಣ್ಣ</strong></p>.<p>ಹಿಂಡಿಯ ಕೊಂಡನು ಹತ್ತು ಮಣ;<br />ಕತ್ತೆಯ ಬೆನ್ನಿಗೆ ಹೇರಿಸಿದ<br />ಕುದುರೆಯ ಜತೆಯಲಿ ಸಾಗಿಸಿದ.<br /><br />ಕತ್ತೆಯು ಅರಚಿತು ‘ಓ ಗೆಳೆಯ,<br />ಅರ್ಧವ ನೀ ಹೊರು, ದಮ್ಮಯ್ಯ’<br />ಕುದುರೆಗೆ ಕೂಗದು ಕೇಳಿಸಿತು<br />ಕತ್ತೆಯ ಕಿರುಚನು ಚಾಳಿಸಿತು.</p>.<p><em><strong>–ಕಯ್ಯಾರ ಕಿಂಞ್ಞಣ್ಣ ರೈ</strong></em></p>.<p>***</p>.<p><strong>ಕಾಶೀಗ್ ಹೋದ ನಂ ಬಾವ</strong></p>.<p>ಕಾಶೀಗ್ ಹೋದ ನಂ ಬಾವ<br />ಕಬ್ಣದ್ ದೋಣೀಲಿ<br />ರಾಶಿ ರಾಶಿ ಗಂಗೆ ತರೋಕ್<br />ಸೊಳ್ಳೇ ಪರದೇಲಿ<br />ತಂಗಿ ಯಮುನಾದೇವಿಯಳ<br />ಸಂಗವಾಯ್ತೆಂದುಬ್ಬಿ ಉಬ್ಬಿ<br />ಗಂಗಾದೇವಿ ಉಕ್ಕಿ ಉಕ್ಕಿ<br />ಬೀಸಿ ಬೀಸಿ ದೋಣಿ ಕುಕ್ಕಿ<br />ಬಾವ ಅತ್ತು ಬಿಕ್ಕಿ ಬಿಕ್ಕಿ<br />ಬಂಡೆ ತಾಕಿ ದೋಣಿ ಒಡ್ದು<br />ಸೊಳ್ಳೇ ಪರದೆ ಬಾವನ್ ಬಡ್ದು<br />ಮಂಡೆ ದವಡೆ ಪಟ್ಟಾಗೊಡ್ದು<br />ಕಾಶೀ ಆಸೆ ನಾಶವಾಗಿ<br />ಮೀಸೇ ಉಳಿದದ್ ಎಷ್ಟೋ ವಾಸೀಂತ<br />ಕಾಶೀಂದ್ ಬಂದ ನಂ ಬಾವ<br /><em><strong>–ಟಿ.ಪಿ. ಕೈಲಾಸಂ</strong></em></p>.<p>***</p>.<p><strong>ಹಿಂದಿನ ಸಾಲಿನ ಹುಡುಗರು</strong></p>.<p>‘ಹಿಂದಿನ ಸಾಲಿನ ಹುಡುಗರು’ ಎಂದರೆ<br />ನಮಗೇನೇನೂ ಭಯವಿಲ್ಲ!<br />ನಮ್ಮಿಂದಾಗದು ಶಾಲೆಗೆ ತೊಂದರೆ:<br />ನಮಗೆಂದೆಂದೂ ಜಯವಿಲ್ಲ!</p>.<p><br />ನೀರಿನ ಜೋರಿಗೆ ತೇಲದು ಬಂಡೆ;<br />ಅಂತೆಯೇ ನಾವೀ ತರಗತಿಗೆ!<br />ಪರೀಕ್ಷೆ ಎಂದರೆ ಹೂವಿನ ಚೆಂಡೆ?<br />ಚಿಂತಿಸಬಾರದು ದುರ್ಗತಿಗೆ.</p>.<p><em><strong>– ಕೆ.ಎಸ್.ನರಸಿಂಹಸ್ವಾಮಿ</strong></em></p>.<p>***</p>.<p><strong>ನನ್ನ ಕುದುರೆ</strong></p>.<p>ಅಜ್ಜನ ಕೋಲಿದು ನನ್ನಯ ಕುದುರೆ<br />ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ<br />ಕಾಲಿಲ್ಲದೆಯೇ ನಡೆಯುವ ಕುದುರೆ<br />ಕೂಳಿಲ್ಲದೆಯೇ ಬದುಕುವ ಕುದುರೆ<br />ನಾಲನು ಬಡಿಸದ ಜೂಲವ ಹೊದಿಸದ<br />ಲಾಲನೆ ಪಾಲನೆ ಬಯಸದ ಕುದುರೆ<br />ಅಜ್ಜನ ಕೋಲಿದು ನನ್ನಯ ಕುದುರೆ</p>.<p><em><strong>– ಸಿದ್ದಯ್ಯ ಪುರಾಣಿಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>