ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ: ಅಮೃತವ ಹರಿಯಬಿಡು

Last Updated 15 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಯಾವುದೂ ಸ್ಥಿರವಲ್ಲ

ಕ್ಷಣಿಕ

ಅಣಕ

ಇತಿಹಾಸವೆಂಬುವುದು

ಬರೀ

ನೆನಪುಗಳ ಕಣಕ

ಸತ್ತ ಘಟನೆಯ ಹೊತ್ತು

ಮರೆಯುತ್ತಿದ್ದಾರೆ ಮಂದಿ

ನಿಂತ ನೆಲದಲ್ಲಿ

ಆರಿಸುತ್ತಿದ್ದಾರೆ

ಅಳಿದುಳಿದ ಚಿಂದಿ

ಇರುವಾಗ

ವಂಚನೆಯ ಲೀಲೆ

ಅದಕ್ಕೆ

ಚಿತ್ತಾರದ

ಸತ್ಯದ ಹೂಮಾಲೆ

ಬಿಡಿಸುತ್ತಿದ್ದಾರೆ

ಸಣ್ಣ ನಗುವಿನ ಹಿಂದೆ

ಮಾಫಿಯಾ ಗ್ಯಾಂಗ್‍ನ

ಕ್ರೌರ್ಯ ನಗೆ

ಹೆಡೆಗಟ್ಟಿದೆ

ಮುಟ್ಟಿದಲ್ಲೆಲ್ಲ ಜೀವಕೊಲ್ಲುವ

ಕಾರ್ಕೋಟದ

ದೈತ್ಯ ವಿಷ

ಹರಿದಾಡುತ್ತಿದೆ

ಆದರೂ

ವಿಷ ಸರ್ಪದಮೇಲೆ

ಹೂಮಳೆಗರೆಯುತ್ತಿದ್ದಾರೆ

ಭಕ್ತಿಯಿಂದಲ್ಲ

ಭಾವದಿಂದಲ್ಲ

ಎಲ್ಲಿಯಾದರೂ

ಹರಿಯುವ ವಿಷ

ತಮ್ಮ ಒಡಲು

ಸೇರಿಬಿಟ್ಟೀತೆಂಬ ಹೆದರಿಕೆಯಿಂದ

ಹೆದರಿಕೆಯಿಲ್ಲದವರು

ಹಾವು ಹಿಡಿಯುತ್ತಾರೆ

ದೂರ ಬಿಡುತ್ತಾರೆ

ಆಗದಿದ್ದರೆ ಕೊನೆಗೆ

ಹಾವು ಕೊಂದು

ವಿಷ ಹರಿಯುವ ನಾಡಿಗಳಲ್ಲಿ

ಅಮೃತವ ಹರಿಯಬಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT