<p>ಪುಳಕ್ ಅಂತ ಒಂದು ಹನಿ ನೀರಿಗೆ ಬಿದ್ದರೆ<br />ಅಷ್ಟೆತ್ತರದಿಂದ ಪ್ರಪಾತಕ್ಕೆ ಧುಮುಕಿದ ಹಾಗೆ ಕೇಳುತ್ತದೆ.<br />ತಲೆಯೊಳಗೆ ತರಂಗಗಳೇಳುತ್ತವೆ<br />ಬಿಂಬ ಒಡೆದು ಬಿಡಿ ಬಿಡಿಯಾಗಿ ಹಿಂಜರಿದು<br />ತುಣುಕು ಬಣ್ಣಗಳೆಲ್ಲ ಪಾರದರ್ಶಕವಾಗಿ ಕಳೆದು ಹೋಗುತ್ತವೆ</p>.<p>ಗಿರಕಿ ಹೊಡೆಯುತ್ತ ಬೆನ್ನಟ್ಟುವ ಎಲೆಗಳ ಬೀಸಿಗೆ ಹೆದರಿ<br />ವಲಸೆ ಹೊರಟ ಹಳದಿ ಹೂಗಳ ಹಿಂಡು,<br />ಹಾದಿಯುದ್ದಕೂ ಉದುರಿ, ಒಣಗಿ<br />ಬಿದ್ದಿವೆ ನೀರು ನೆಲೆ ಇಲ್ಲದೆ</p>.<p>ಗೋಡೆ ಮೇಲೆ ಒಣಗುತ್ತಿದೆ ಬಿಸಿಲ ತುಣುಕು<br />ಮನೆಯಲ್ಲಿದ್ದವರು ನೆನಪುಗಳನ್ನೆಲ್ಲಾ ಬಾಚಿಕೊಂಡು<br />ನೆರಳ ಬಿಟ್ಟು ನಡೆದಿರಬೇಕು</p>.<p>ನೆಮ್ಮದಿಯ ನೆಪದಲ್ಲಿ ನಝರು ದೇಖರೇಕು?<br />ಶಿಸ್ತಿನ ಈ ಶಾಂತಿ ಸಾಕಾಗಿದೆ<br />ವರ್ಚುವಲ್ ಆಗಿ ತಾರಾಡುವ ನಮಗೆ<br />ಕದ ತೆರೆದದ್ದೇ ಕಿಟಕಿ ಬಾಗಿಲುಗಳೆಲ್ಲ ಮುಚ್ಚಿಹೋಗಿ<br />ಝುಮಿಕೊಳ್ಳುತ್ತದೆ, ಬದುಕು<br />ನೆತ್ತಿಯ ಮೇಲೆ ಸುತ್ತುವ ನಿಗಾ ಖಾಯಮ್ಮಾಗಿ<br />ಡ್ರೋನುಗಳೊಳಗಿಂದ ಒಳಹೊರಗಿನೋಡಾಟ ಶುರುವಾಗಿ<br />ಎಲ್ಲಿಲ್ಲದ ಹೊಸ ಹೊಸ ಕಾಳಜಿಗಳು ಮೊಳಕೆಯೊಡೆಯುತ್ತವೆ<br />ಸರ್ವೆಲೆನ್ಸಿನ ಮಾಸ್ಕ್ ತೊಟ್ಟು.<br /><br />ಸದ್ದೇಯಿಲ್ಲದೀ ಮೌನದ ಮಾತಿಗೆ ಬೆಚ್ಚಿಬಿದ್ದಿದ್ದೇನೆ<br />ಕಾಣದ್ದೆಲ್ಲ ಕಾಣುತ್ತಿದೆ, ಕೇಳದ್ದೆಲ್ಲ ಕೇಳುತ್ತಿದೆ.</p>.<p>***</p>.<p><strong>ಮಮತಾ ಸಾಗರ ಅವರಕವಿತೆ ವಾಚನದ ವಿಡಿಯೊ ಇಲ್ಲಿ ವೀಕ್ಷಿಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುಳಕ್ ಅಂತ ಒಂದು ಹನಿ ನೀರಿಗೆ ಬಿದ್ದರೆ<br />ಅಷ್ಟೆತ್ತರದಿಂದ ಪ್ರಪಾತಕ್ಕೆ ಧುಮುಕಿದ ಹಾಗೆ ಕೇಳುತ್ತದೆ.<br />ತಲೆಯೊಳಗೆ ತರಂಗಗಳೇಳುತ್ತವೆ<br />ಬಿಂಬ ಒಡೆದು ಬಿಡಿ ಬಿಡಿಯಾಗಿ ಹಿಂಜರಿದು<br />ತುಣುಕು ಬಣ್ಣಗಳೆಲ್ಲ ಪಾರದರ್ಶಕವಾಗಿ ಕಳೆದು ಹೋಗುತ್ತವೆ</p>.<p>ಗಿರಕಿ ಹೊಡೆಯುತ್ತ ಬೆನ್ನಟ್ಟುವ ಎಲೆಗಳ ಬೀಸಿಗೆ ಹೆದರಿ<br />ವಲಸೆ ಹೊರಟ ಹಳದಿ ಹೂಗಳ ಹಿಂಡು,<br />ಹಾದಿಯುದ್ದಕೂ ಉದುರಿ, ಒಣಗಿ<br />ಬಿದ್ದಿವೆ ನೀರು ನೆಲೆ ಇಲ್ಲದೆ</p>.<p>ಗೋಡೆ ಮೇಲೆ ಒಣಗುತ್ತಿದೆ ಬಿಸಿಲ ತುಣುಕು<br />ಮನೆಯಲ್ಲಿದ್ದವರು ನೆನಪುಗಳನ್ನೆಲ್ಲಾ ಬಾಚಿಕೊಂಡು<br />ನೆರಳ ಬಿಟ್ಟು ನಡೆದಿರಬೇಕು</p>.<p>ನೆಮ್ಮದಿಯ ನೆಪದಲ್ಲಿ ನಝರು ದೇಖರೇಕು?<br />ಶಿಸ್ತಿನ ಈ ಶಾಂತಿ ಸಾಕಾಗಿದೆ<br />ವರ್ಚುವಲ್ ಆಗಿ ತಾರಾಡುವ ನಮಗೆ<br />ಕದ ತೆರೆದದ್ದೇ ಕಿಟಕಿ ಬಾಗಿಲುಗಳೆಲ್ಲ ಮುಚ್ಚಿಹೋಗಿ<br />ಝುಮಿಕೊಳ್ಳುತ್ತದೆ, ಬದುಕು<br />ನೆತ್ತಿಯ ಮೇಲೆ ಸುತ್ತುವ ನಿಗಾ ಖಾಯಮ್ಮಾಗಿ<br />ಡ್ರೋನುಗಳೊಳಗಿಂದ ಒಳಹೊರಗಿನೋಡಾಟ ಶುರುವಾಗಿ<br />ಎಲ್ಲಿಲ್ಲದ ಹೊಸ ಹೊಸ ಕಾಳಜಿಗಳು ಮೊಳಕೆಯೊಡೆಯುತ್ತವೆ<br />ಸರ್ವೆಲೆನ್ಸಿನ ಮಾಸ್ಕ್ ತೊಟ್ಟು.<br /><br />ಸದ್ದೇಯಿಲ್ಲದೀ ಮೌನದ ಮಾತಿಗೆ ಬೆಚ್ಚಿಬಿದ್ದಿದ್ದೇನೆ<br />ಕಾಣದ್ದೆಲ್ಲ ಕಾಣುತ್ತಿದೆ, ಕೇಳದ್ದೆಲ್ಲ ಕೇಳುತ್ತಿದೆ.</p>.<p>***</p>.<p><strong>ಮಮತಾ ಸಾಗರ ಅವರಕವಿತೆ ವಾಚನದ ವಿಡಿಯೊ ಇಲ್ಲಿ ವೀಕ್ಷಿಸಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>