<p>ಸಂಗೀತದ ರಸದೌತಣ ಉಣಬಡಿಸುವ ರಾಮನವಮಿ ಸಂಗೀತೋತ್ಸವ ಮತ್ತೆ ರಂಗೇರಲಿದೆ. ಈ ಬಾರಿ ಅಂದಾಜು ಐದು ಲಕ್ಷ ಜನ ಸೇರಲಿರುವ ರಾಮಸೇವಾಮಂಡಳಿಯ ರಾಷ್ಟ್ರೀಯ ರಾಮಸೇವಾ ಸಂಗೀತೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 6ರಂದು ಆರಂಭವಾಗುವ ಉತ್ಸವಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ.</p>.<p>ಫೆಬ್ರುವರಿ 7ರಂದು ಹಳೆ ಕೋಟೆ ಹೈಸ್ಕೂಲ್ ಮೈದಾನದಲ್ಲಿ ಗುದ್ದಲಿಪೂಜೆ ನಡೆದಿದೆ. ಅದ್ದೂರಿಯಾದ ಸೆಟ್ ಹಾಕಲು ಬೇಕಾದ ತಯಾರಿ ನಡೆಸಲಾಗಿದೆ.ಈ ಬಾರಿಯ ಸಂಗೀತೋತ್ಸವಕ್ಕೆ ರಂಗು ತುಂಬಲು ಕಲಾವಿದರ ದೊಡ್ಡ ಪಟ್ಟಿಯೇ ಸಿದ್ಧಗೊಂಡಿದೆ. ಪ್ರತಿ ವರ್ಷದಂತೆ ಕೆಲವು ಜನಪ್ರಿಯ ಕಲಾವಿದರು ಈ ಬಾರಿಯೂ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ 5ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.</p>.<p>ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಇರುವ ಕಾರಣ ಈ ಮಹನೀಯರಿಗೆ ಸಂಗೀತೋತ್ಸವ ವನ್ನು ಅರ್ಪಿಸಲಾಗಿದೆ.</p>.<p><strong>2019ರ ವಿಶೇಷ:</strong> ಪ್ರತಿ ವರ್ಷ ಸಂಗೀತೋತ್ಸವದಲ್ಲಿ ಭಿನ್ನವಾದ ಸಂಗೀತ ಕಛೇರಿ ಗಳನ್ನು ಪರಿಚಯಿಸಲಾಗು ತ್ತದೆ. ಈ ಬಾರಿಯೂ ಜುಗಲ್ಬಂದಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.</p>.<p>ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್ಬಂದಿಗಳು ಸಾಮಾನ್ಯವಾಗಿ ನಡೆಯುತ್ತವೆ. ಆದರೆ ಕರ್ನಾಟಕ ಸಂಗೀತದ ಜೊತೆ ಪಾಶ್ಚಿಮಾತ್ಯ ಶೈಲಿಯ ಸಂಗೀತದ ಜುಗಲ್ಬಂದಿ ಇದ್ದರೆ ಹೇಗಿರುತ್ತದೆ? ಹೀಗೊಂದು ಭಿನ್ನ ಪ್ರಯತ್ನವನ್ನು ಸಂಗೀತೋತ್ಸವದಲ್ಲಿ ಮಾಡಲಾಗಿದೆ.</p>.<p>ಡಾ.ಎಲ್.ಸುಬ್ರಹ್ಮಣ್ಯ ಮತ್ತು ಸಂಗಡಿಗರು ಈ ರೀತಿಯ ಜುಗಲ್ಬಂದಿಗೆ ಸಿದ್ಧತೆ ನಡೆಸಿದ್ದಾರೆ. ಫೆಬ್ರುವರಿ 12ರಂದು ಸಂಜೆ 6.15ರಿಂದ ರಾತ್ರಿ 9.30ವರೆಗೆ ಈ ಕಾರ್ಯಕ್ರಮ ನಡೆಯಲಿದೆ.</p>.<p>ಫೆಬ್ರುವರಿ 28ಕ್ಕೆ ವಯೊಲಿನ್, ಕೊಳಲು, ಪಿಯಾನೊ ಜುಗಲ್ಬಂದಿ ಇದೆ. ಈ ಮೂರು ವಾದ್ಯಗಳ ಜುಗಲ್ಬಂದಿ ಕೂಡ ತೀರಾ ಅಪರೂಪ. ಮೈಸೂರು ನಾಗರಾಜ್ ಅವರು ವಯೊಲಿನ್ ನುಡಿಸಿದರೆ, ರಾಕೇಶ್ ಚೌರಾಸಿಯಾ ಅವರು ಕೊಳಲು ಹಾಗೂ ಅನಿಲ್ ಶ್ರೀನಿವಾಸನ್ ಪಿಯಾನೊ ನುಡಿಸಲಿದ್ದಾರೆ.</p>.<p><strong>ಪುಸ್ತಕ ಬಿಡುಗಡೆ:</strong>ರಾಮಸೇವಾ ಮಂಡಳಿಯ ಸಂಸ್ಥಾಪಕ ಎಸ್.ವಿ.ನಾರಾಯಣಸ್ವಾಮಿ ರಾವ್ ಅವರ 95ನೇ ಜನ್ಮದಿನಾಚರಣೆ ಪ್ರಯುಕ್ತ ಸಂಗೀತೋತ್ಸವದ ಮೊದಲ ದಿನ ‘ಕಾಫಿ ಟೇಬಲ್ ಬುಕ್‘ ಬಿಡುಗಡೆ ಮಾಡಲಾಗುತ್ತಿದೆ.</p>.<p>ರಾಮಸೇವಾ ಮಂಡಳಿ ಹಾಗೂ ನಾರಾಯಣಸ್ವಾಮಿ ಅವರ ಕುರಿತು ಸಾಕಷ್ಟು ಕುತೂಹಲ ಸಂಗತಿಗಳು ಈ ಪುಸ್ತಕದಲ್ಲಿವೆ. ಐತಿಹಾಸಿಕ ದಾಖಲೆಗಳನ್ನು ಮಾಡಲಾಗಿದೆ.</p>.<p><strong>ಪ್ರಶಸ್ತಿ:</strong> ಈ ಬಾರಿಯ ‘ಎಸ್ವಿಎನ್ ಅವಾರ್ಡ್ ಫಾರ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಚಂದನ್ ಬಾಲ ಕಲ್ಯಾಣ್, ಇಂದ್ರಯುಧ್ ಮಜುಂದಾರ್, ಶಂಕರಮೂರ್ತಿ ಬಲಿಲಾ, ಸಲೀಲ್ಭಟ್ ಅವರಿಗೆ ನೀಡಲಾಗುತ್ತಿದೆ.</p>.<p>ಪ್ರತಿ ವರ್ಷ ಯುವ ಕಲಾವಿದರಿಗೆ ಪ್ರತಿಭಾಕಾಂಕ್ಷೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ 2,500 ಅರ್ಜಿಗಳು ಬಂದಿದ್ದವು. ಅದರಲ್ಲಿ 25 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಸಂಗೀತೋತ್ಸವದಲ್ಲಿ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಲಾಗಿದೆ. ಮೇ 4ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.</p>.<p>**</p>.<p><strong>ಹರಿದಾಸ ಕೀರ್ತನೆ ಹಾಡಲಿರುವ ಬಾಲಸುಬ್ರಹ್ಮಣ್ಯಂ</strong></p>.<p>ಮೊದಲ ಬಾರಿಗೆ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಹರಿದಾಸ, ರಾಮದಾಸ ಹಾಗೂ ತ್ಯಾಗರಾಜರ ಕೀರ್ತನೆಗಳನ್ನು ಹಾಡಲಿದ್ದಾರೆ.</p>.<p>ಏಪ್ರಿಲ್ 21ರಂದು ಸಂಜೆ 5.45ಕ್ಕೆ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ. ಇದೇ ವೇಳೆ ಅವರಿಗೆ‘ಎಸ್.ವಿ. ನಾರಾಯಣಸ್ವಾಮಿ ರಾವ್ ಜಾಗತಿಕ ಸಂಗೀತ ಪ್ರಶಸ್ತಿ‘ ನೀಡಿ ಗೌರವಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂಗೀತದ ರಸದೌತಣ ಉಣಬಡಿಸುವ ರಾಮನವಮಿ ಸಂಗೀತೋತ್ಸವ ಮತ್ತೆ ರಂಗೇರಲಿದೆ. ಈ ಬಾರಿ ಅಂದಾಜು ಐದು ಲಕ್ಷ ಜನ ಸೇರಲಿರುವ ರಾಮಸೇವಾಮಂಡಳಿಯ ರಾಷ್ಟ್ರೀಯ ರಾಮಸೇವಾ ಸಂಗೀತೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಏಪ್ರಿಲ್ 6ರಂದು ಆರಂಭವಾಗುವ ಉತ್ಸವಕ್ಕೆ ಈಗಾಗಲೇ ಸಿದ್ಧತೆ ನಡೆದಿದೆ.</p>.<p>ಫೆಬ್ರುವರಿ 7ರಂದು ಹಳೆ ಕೋಟೆ ಹೈಸ್ಕೂಲ್ ಮೈದಾನದಲ್ಲಿ ಗುದ್ದಲಿಪೂಜೆ ನಡೆದಿದೆ. ಅದ್ದೂರಿಯಾದ ಸೆಟ್ ಹಾಕಲು ಬೇಕಾದ ತಯಾರಿ ನಡೆಸಲಾಗಿದೆ.ಈ ಬಾರಿಯ ಸಂಗೀತೋತ್ಸವಕ್ಕೆ ರಂಗು ತುಂಬಲು ಕಲಾವಿದರ ದೊಡ್ಡ ಪಟ್ಟಿಯೇ ಸಿದ್ಧಗೊಂಡಿದೆ. ಪ್ರತಿ ವರ್ಷದಂತೆ ಕೆಲವು ಜನಪ್ರಿಯ ಕಲಾವಿದರು ಈ ಬಾರಿಯೂ ವೇದಿಕೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.ಪ್ರತಿ ವರ್ಷದಂತೆ ಈ ವರ್ಷವೂ 5ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.</p>.<p>ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಹಾಗೂ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಇರುವ ಕಾರಣ ಈ ಮಹನೀಯರಿಗೆ ಸಂಗೀತೋತ್ಸವ ವನ್ನು ಅರ್ಪಿಸಲಾಗಿದೆ.</p>.<p><strong>2019ರ ವಿಶೇಷ:</strong> ಪ್ರತಿ ವರ್ಷ ಸಂಗೀತೋತ್ಸವದಲ್ಲಿ ಭಿನ್ನವಾದ ಸಂಗೀತ ಕಛೇರಿ ಗಳನ್ನು ಪರಿಚಯಿಸಲಾಗು ತ್ತದೆ. ಈ ಬಾರಿಯೂ ಜುಗಲ್ಬಂದಿಗೆ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ.</p>.<p>ಹಿಂದೂಸ್ತಾನಿ ಹಾಗೂ ಕರ್ನಾಟಕ ಸಂಗೀತದ ಜುಗಲ್ಬಂದಿಗಳು ಸಾಮಾನ್ಯವಾಗಿ ನಡೆಯುತ್ತವೆ. ಆದರೆ ಕರ್ನಾಟಕ ಸಂಗೀತದ ಜೊತೆ ಪಾಶ್ಚಿಮಾತ್ಯ ಶೈಲಿಯ ಸಂಗೀತದ ಜುಗಲ್ಬಂದಿ ಇದ್ದರೆ ಹೇಗಿರುತ್ತದೆ? ಹೀಗೊಂದು ಭಿನ್ನ ಪ್ರಯತ್ನವನ್ನು ಸಂಗೀತೋತ್ಸವದಲ್ಲಿ ಮಾಡಲಾಗಿದೆ.</p>.<p>ಡಾ.ಎಲ್.ಸುಬ್ರಹ್ಮಣ್ಯ ಮತ್ತು ಸಂಗಡಿಗರು ಈ ರೀತಿಯ ಜುಗಲ್ಬಂದಿಗೆ ಸಿದ್ಧತೆ ನಡೆಸಿದ್ದಾರೆ. ಫೆಬ್ರುವರಿ 12ರಂದು ಸಂಜೆ 6.15ರಿಂದ ರಾತ್ರಿ 9.30ವರೆಗೆ ಈ ಕಾರ್ಯಕ್ರಮ ನಡೆಯಲಿದೆ.</p>.<p>ಫೆಬ್ರುವರಿ 28ಕ್ಕೆ ವಯೊಲಿನ್, ಕೊಳಲು, ಪಿಯಾನೊ ಜುಗಲ್ಬಂದಿ ಇದೆ. ಈ ಮೂರು ವಾದ್ಯಗಳ ಜುಗಲ್ಬಂದಿ ಕೂಡ ತೀರಾ ಅಪರೂಪ. ಮೈಸೂರು ನಾಗರಾಜ್ ಅವರು ವಯೊಲಿನ್ ನುಡಿಸಿದರೆ, ರಾಕೇಶ್ ಚೌರಾಸಿಯಾ ಅವರು ಕೊಳಲು ಹಾಗೂ ಅನಿಲ್ ಶ್ರೀನಿವಾಸನ್ ಪಿಯಾನೊ ನುಡಿಸಲಿದ್ದಾರೆ.</p>.<p><strong>ಪುಸ್ತಕ ಬಿಡುಗಡೆ:</strong>ರಾಮಸೇವಾ ಮಂಡಳಿಯ ಸಂಸ್ಥಾಪಕ ಎಸ್.ವಿ.ನಾರಾಯಣಸ್ವಾಮಿ ರಾವ್ ಅವರ 95ನೇ ಜನ್ಮದಿನಾಚರಣೆ ಪ್ರಯುಕ್ತ ಸಂಗೀತೋತ್ಸವದ ಮೊದಲ ದಿನ ‘ಕಾಫಿ ಟೇಬಲ್ ಬುಕ್‘ ಬಿಡುಗಡೆ ಮಾಡಲಾಗುತ್ತಿದೆ.</p>.<p>ರಾಮಸೇವಾ ಮಂಡಳಿ ಹಾಗೂ ನಾರಾಯಣಸ್ವಾಮಿ ಅವರ ಕುರಿತು ಸಾಕಷ್ಟು ಕುತೂಹಲ ಸಂಗತಿಗಳು ಈ ಪುಸ್ತಕದಲ್ಲಿವೆ. ಐತಿಹಾಸಿಕ ದಾಖಲೆಗಳನ್ನು ಮಾಡಲಾಗಿದೆ.</p>.<p><strong>ಪ್ರಶಸ್ತಿ:</strong> ಈ ಬಾರಿಯ ‘ಎಸ್ವಿಎನ್ ಅವಾರ್ಡ್ ಫಾರ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಚಂದನ್ ಬಾಲ ಕಲ್ಯಾಣ್, ಇಂದ್ರಯುಧ್ ಮಜುಂದಾರ್, ಶಂಕರಮೂರ್ತಿ ಬಲಿಲಾ, ಸಲೀಲ್ಭಟ್ ಅವರಿಗೆ ನೀಡಲಾಗುತ್ತಿದೆ.</p>.<p>ಪ್ರತಿ ವರ್ಷ ಯುವ ಕಲಾವಿದರಿಗೆ ಪ್ರತಿಭಾಕಾಂಕ್ಷೆ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿಯೂ 2,500 ಅರ್ಜಿಗಳು ಬಂದಿದ್ದವು. ಅದರಲ್ಲಿ 25 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ಸಂಗೀತೋತ್ಸವದಲ್ಲಿ ಪ್ರತಿಭಾ ಪ್ರದರ್ಶನಕ್ಕೂ ಅವಕಾಶ ನೀಡಲಾಗಿದೆ. ಮೇ 4ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.</p>.<p>**</p>.<p><strong>ಹರಿದಾಸ ಕೀರ್ತನೆ ಹಾಡಲಿರುವ ಬಾಲಸುಬ್ರಹ್ಮಣ್ಯಂ</strong></p>.<p>ಮೊದಲ ಬಾರಿಗೆ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲಿರುವ ಹಿನ್ನೆಲೆ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಹರಿದಾಸ, ರಾಮದಾಸ ಹಾಗೂ ತ್ಯಾಗರಾಜರ ಕೀರ್ತನೆಗಳನ್ನು ಹಾಡಲಿದ್ದಾರೆ.</p>.<p>ಏಪ್ರಿಲ್ 21ರಂದು ಸಂಜೆ 5.45ಕ್ಕೆ ಸಂಗೀತ ಕಾರ್ಯಕ್ರಮ ಆರಂಭವಾಗಲಿದೆ. ಇದೇ ವೇಳೆ ಅವರಿಗೆ‘ಎಸ್.ವಿ. ನಾರಾಯಣಸ್ವಾಮಿ ರಾವ್ ಜಾಗತಿಕ ಸಂಗೀತ ಪ್ರಶಸ್ತಿ‘ ನೀಡಿ ಗೌರವಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>