<p>ಅಪೌಷ್ಟಿಕತೆ ಎಂಬುದು ರಾಷ್ಟ್ರೀಯ ಅವಮಾನ ಎಂದು ಪ್ರಧಾನಿ ಮನಮೋಹನ್ಸಿಂಗ್ ಇತ್ತೀಚೆಗೆ ಹೇಳಿದ್ದರು. ಅಪೌಷ್ಟಿಕತೆಯ ನಿವಾರಣೆಗೆ ರಾಷ್ಟ್ರದ ಬಹುಮುಖ್ಯ ಸಾಧನ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಸೇವಾ ಕಾರ್ಯಕ್ರಮ) ಕಾರ್ಯಕ್ರಮ. 1975ರಲ್ಲಿ ಆರಂಭವಾದ ಈ ಕಾರ್ಯಕ್ರಮದ ಭಾಗವಾಗಿ ಅಂಗನವಾಡಿ ಕೇಂದ್ರಗಳನ್ನು ರಾಷ್ಟ್ರದಾದ್ಯಂತ ಆರಂಭಿಸಲಾಗಿದೆ.<br /> <br /> ಆದರೆ, ಅಂಗನವಾಡಿ ಕಾರ್ಯಕರ್ತೆಯರ ವೇತನ, ಅಂಗನವಾಡಿಗಳಲ್ಲಿ ನೀಡಲಾಗುವ ಆಹಾರ, ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿರುವ ಕಟ್ಟಡಗಳ ದುಃಸ್ಥಿತಿ - ಹೀಗೆ ಅನೇಕ ರೀತಿಯ ಸಮಸ್ಯೆಗಳಿವೆ. ಈ ಎಲ್ಲದರ ನಡುವೆಯೇ ಹೊಸದಾಗಿ 1,141 ಅಂಗನವಾಡಿ ಕೇಂದ್ರಗಳನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. <br /> <br /> ವಾಸ್ತವವಾಗಿ, 1156 ಕೇಂದ್ರಗಳ ಆರಂಭಕ್ಕೆ ರಾಜ್ಯ ಪ್ರಸ್ತಾವ ಸಲ್ಲಿಸಿತ್ತು. ಆದರೆ ಕೇಂದ್ರದ ಒಪ್ಪಿಗೆ ಸಿಕ್ಕಿರುವುದು 1,141 ಕೇಂದ್ರಗಳಿಗೆ. ಇವುಗಳಲ್ಲಿ 232 ಅಂಗನವಾಡಿ ಕೇಂದ್ರಗಳಿಗೆ ಜನರೇ ಬೇಡಿಕೆ ಸಲ್ಲಿಸಿದ್ದರು. ಹೊಸ ಅಂಗನವಾಡಿ ಕೇಂದ್ರಗಳು ಆರಂಭವಾಗುವುದು ಸ್ವಾಗತಾರ್ಹ ಸಂಗತಿ. <br /> <br /> ಆದರೆ ಇವುಗಳಿಗೆ ಕಟ್ಟಡಗಳೆಲ್ಲಿ ಎಂಬ ಪ್ರಶ್ನೆಗೆ ಸುಲಭ ಉತ್ತರವಿಲ್ಲ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ 63,377 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಸ್ವಂತ ಕಟ್ಟಡಗಳಿರುವುದು 35 ಸಾವಿರ ಕೇಂದ್ರಗಳಿಗೆ ಮಾತ್ರ ಎಂಬುದು ಈ ಸಮಸ್ಯೆಯ ಮತ್ತೊಂದು ಮುಖವನ್ನು ತೋರುತ್ತದೆ. <br /> <br /> ಸ್ವಂತ ಕಟ್ಟಡ ಇರದ ಅನೇಕ ಅಂಗನವಾಡಿ ಕೇಂದ್ರಗಳು ಯುವಕ -ಯುವತಿಯರ ಮಂಡಳಿ, ಮಹಿಳಾ ಮಂಡಳಿ, ಸಮುದಾಯ ಭವನ, ಗ್ರಾಮಪಂಚಾಯ್ತಿ ಕಟ್ಟಡ - ಹೀಗೆ ಎಲ್ಲೆಂದರಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುತ್ತದೆ. ಹಾಗೆಯೇ ಅಂಗನವಾಡಿ ಕೇಂದ್ರಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಸಲ್ಲಿಸಿರುವ ಪ್ರಸ್ತಾವಗಳ ಬಗ್ಗೆ ಸರ್ಕಾರದ ಗಂಭೀರ ಪರಿಶೀಲನೆ ತುರ್ತು ಅಗತ್ಯ. <br /> <br /> ಆಗಲೋ ಈಗಲೋ ಬೀಳಬಹುದಾದ ಕಟ್ಟಡಗಳು, ಬಾಡಿಗೆ ದುಡ್ಡು ಭರಿಸಲು ಅಸಾಧ್ಯವಾದಂತಹ ಬಾಡಿಗೆ ಕಟ್ಟಡಗಳು ಅಥವಾ ಯಾವುದೋ ಒಂದು ಜಗುಲಿಯೂ ಅಂಗನವಾಡಿಗಳಾಗಿರುವ ವಿಪರ್ಯಾಸಗಳಿವೆ. `ಅಂಗಳದ ಆಶ್ರಯ~ಎಂಬಂತಹ ಅರ್ಥವಿರುವ ಅಂಗನವಾಡಿ ಕೇಂದ್ರಗಳ ಈ ದುಃಸ್ಥಿತಿ ವಿಪರ್ಯಾಸದ್ದು. ಜೊತೆಗೆ ಅಂಗನವಾಡಿಗಳೆಂದು ಎಂತಹದೋ ಕಟ್ಟಡ ಕಟ್ಟಿಬಿಟ್ಟರೆ ಸಾಲದು, ಮಕ್ಕಳಿಗೆ ಆಕರ್ಷಕ ಎನಿಸುವ ಮಾದರಿಯ ಕಟ್ಟಡಗಳನ್ನು ನಿರ್ಮಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ. <br /> <br /> ಈ ಮಧ್ಯೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನಿವೃತ್ತಿ ವಯಸ್ಸು ನಿಗದಿ ಮಾಡಿದ ನಂತರ ಸುಮಾರು ಎರಡು ಸಾವಿರ ಹುದ್ದೆಗಳು ಖಾಲಿ ಇವೆ. ಈಗ ಸರ್ಕಾರ ಪ್ರಕಟಿಸಿರುವ ಹೊಸ ಕೇಂದ್ರಗಳಿಗೂ ನೇಮಕಗಳಾಗಬೇಕಿವೆ. <br /> <br /> ಇಷ್ಟೆಲ್ಲಾ ಸಮಸ್ಯೆಗಳ ವರ್ತುಲಗಳಲ್ಲಿ ಸಿಲುಕಿರುವ ಅಂಗನವಾಡಿ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ. ಮಕ್ಕಳ ಪೌಷ್ಟಿಕತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಈ ಯೋಜನೆಯ ಸಾರ್ವತ್ರೀಕರಣಕ್ಕೆ ಮೂಲಸೌಕರ್ಯಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸುವುದು ಸರ್ಕಾರದ ಕರ್ತವ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಪೌಷ್ಟಿಕತೆ ಎಂಬುದು ರಾಷ್ಟ್ರೀಯ ಅವಮಾನ ಎಂದು ಪ್ರಧಾನಿ ಮನಮೋಹನ್ಸಿಂಗ್ ಇತ್ತೀಚೆಗೆ ಹೇಳಿದ್ದರು. ಅಪೌಷ್ಟಿಕತೆಯ ನಿವಾರಣೆಗೆ ರಾಷ್ಟ್ರದ ಬಹುಮುಖ್ಯ ಸಾಧನ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಸೇವಾ ಕಾರ್ಯಕ್ರಮ) ಕಾರ್ಯಕ್ರಮ. 1975ರಲ್ಲಿ ಆರಂಭವಾದ ಈ ಕಾರ್ಯಕ್ರಮದ ಭಾಗವಾಗಿ ಅಂಗನವಾಡಿ ಕೇಂದ್ರಗಳನ್ನು ರಾಷ್ಟ್ರದಾದ್ಯಂತ ಆರಂಭಿಸಲಾಗಿದೆ.<br /> <br /> ಆದರೆ, ಅಂಗನವಾಡಿ ಕಾರ್ಯಕರ್ತೆಯರ ವೇತನ, ಅಂಗನವಾಡಿಗಳಲ್ಲಿ ನೀಡಲಾಗುವ ಆಹಾರ, ಅಂಗನವಾಡಿಗಳು ಕಾರ್ಯ ನಿರ್ವಹಿಸುತ್ತಿರುವ ಕಟ್ಟಡಗಳ ದುಃಸ್ಥಿತಿ - ಹೀಗೆ ಅನೇಕ ರೀತಿಯ ಸಮಸ್ಯೆಗಳಿವೆ. ಈ ಎಲ್ಲದರ ನಡುವೆಯೇ ಹೊಸದಾಗಿ 1,141 ಅಂಗನವಾಡಿ ಕೇಂದ್ರಗಳನ್ನು ರಾಜ್ಯಕ್ಕೆ ಕೇಂದ್ರ ಸರ್ಕಾರ ಮಂಜೂರು ಮಾಡಿದೆ. <br /> <br /> ವಾಸ್ತವವಾಗಿ, 1156 ಕೇಂದ್ರಗಳ ಆರಂಭಕ್ಕೆ ರಾಜ್ಯ ಪ್ರಸ್ತಾವ ಸಲ್ಲಿಸಿತ್ತು. ಆದರೆ ಕೇಂದ್ರದ ಒಪ್ಪಿಗೆ ಸಿಕ್ಕಿರುವುದು 1,141 ಕೇಂದ್ರಗಳಿಗೆ. ಇವುಗಳಲ್ಲಿ 232 ಅಂಗನವಾಡಿ ಕೇಂದ್ರಗಳಿಗೆ ಜನರೇ ಬೇಡಿಕೆ ಸಲ್ಲಿಸಿದ್ದರು. ಹೊಸ ಅಂಗನವಾಡಿ ಕೇಂದ್ರಗಳು ಆರಂಭವಾಗುವುದು ಸ್ವಾಗತಾರ್ಹ ಸಂಗತಿ. <br /> <br /> ಆದರೆ ಇವುಗಳಿಗೆ ಕಟ್ಟಡಗಳೆಲ್ಲಿ ಎಂಬ ಪ್ರಶ್ನೆಗೆ ಸುಲಭ ಉತ್ತರವಿಲ್ಲ. ಏಕೆಂದರೆ ಈಗಾಗಲೇ ರಾಜ್ಯದಲ್ಲಿ 63,377 ಅಂಗನವಾಡಿ ಕೇಂದ್ರಗಳಿದ್ದು, ಈ ಪೈಕಿ ಸ್ವಂತ ಕಟ್ಟಡಗಳಿರುವುದು 35 ಸಾವಿರ ಕೇಂದ್ರಗಳಿಗೆ ಮಾತ್ರ ಎಂಬುದು ಈ ಸಮಸ್ಯೆಯ ಮತ್ತೊಂದು ಮುಖವನ್ನು ತೋರುತ್ತದೆ. <br /> <br /> ಸ್ವಂತ ಕಟ್ಟಡ ಇರದ ಅನೇಕ ಅಂಗನವಾಡಿ ಕೇಂದ್ರಗಳು ಯುವಕ -ಯುವತಿಯರ ಮಂಡಳಿ, ಮಹಿಳಾ ಮಂಡಳಿ, ಸಮುದಾಯ ಭವನ, ಗ್ರಾಮಪಂಚಾಯ್ತಿ ಕಟ್ಟಡ - ಹೀಗೆ ಎಲ್ಲೆಂದರಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರ್ವ ಶಿಕ್ಷಣ ಅಭಿಯಾನ ಯೋಜನೆ ಅಡಿ ಶಾಲೆಗಳಿಗೆ ಕಟ್ಟಡಗಳನ್ನು ನಿರ್ಮಿಸಿಕೊಡಲಾಗುತ್ತದೆ. ಹಾಗೆಯೇ ಅಂಗನವಾಡಿ ಕೇಂದ್ರಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸಲು ಸಲ್ಲಿಸಿರುವ ಪ್ರಸ್ತಾವಗಳ ಬಗ್ಗೆ ಸರ್ಕಾರದ ಗಂಭೀರ ಪರಿಶೀಲನೆ ತುರ್ತು ಅಗತ್ಯ. <br /> <br /> ಆಗಲೋ ಈಗಲೋ ಬೀಳಬಹುದಾದ ಕಟ್ಟಡಗಳು, ಬಾಡಿಗೆ ದುಡ್ಡು ಭರಿಸಲು ಅಸಾಧ್ಯವಾದಂತಹ ಬಾಡಿಗೆ ಕಟ್ಟಡಗಳು ಅಥವಾ ಯಾವುದೋ ಒಂದು ಜಗುಲಿಯೂ ಅಂಗನವಾಡಿಗಳಾಗಿರುವ ವಿಪರ್ಯಾಸಗಳಿವೆ. `ಅಂಗಳದ ಆಶ್ರಯ~ಎಂಬಂತಹ ಅರ್ಥವಿರುವ ಅಂಗನವಾಡಿ ಕೇಂದ್ರಗಳ ಈ ದುಃಸ್ಥಿತಿ ವಿಪರ್ಯಾಸದ್ದು. ಜೊತೆಗೆ ಅಂಗನವಾಡಿಗಳೆಂದು ಎಂತಹದೋ ಕಟ್ಟಡ ಕಟ್ಟಿಬಿಟ್ಟರೆ ಸಾಲದು, ಮಕ್ಕಳಿಗೆ ಆಕರ್ಷಕ ಎನಿಸುವ ಮಾದರಿಯ ಕಟ್ಟಡಗಳನ್ನು ನಿರ್ಮಿಸುವತ್ತ ಸರ್ಕಾರ ಗಮನ ಹರಿಸಬೇಕಿದೆ. <br /> <br /> ಈ ಮಧ್ಯೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ನಿವೃತ್ತಿ ವಯಸ್ಸು ನಿಗದಿ ಮಾಡಿದ ನಂತರ ಸುಮಾರು ಎರಡು ಸಾವಿರ ಹುದ್ದೆಗಳು ಖಾಲಿ ಇವೆ. ಈಗ ಸರ್ಕಾರ ಪ್ರಕಟಿಸಿರುವ ಹೊಸ ಕೇಂದ್ರಗಳಿಗೂ ನೇಮಕಗಳಾಗಬೇಕಿವೆ. <br /> <br /> ಇಷ್ಟೆಲ್ಲಾ ಸಮಸ್ಯೆಗಳ ವರ್ತುಲಗಳಲ್ಲಿ ಸಿಲುಕಿರುವ ಅಂಗನವಾಡಿ ವ್ಯವಸ್ಥೆಗೆ ಕಾಯಕಲ್ಪ ಅಗತ್ಯ. ಮಕ್ಕಳ ಪೌಷ್ಟಿಕತೆ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಈ ಯೋಜನೆಯ ಸಾರ್ವತ್ರೀಕರಣಕ್ಕೆ ಮೂಲಸೌಕರ್ಯಗಳನ್ನು ಸಮರ್ಪಕ ರೀತಿಯಲ್ಲಿ ಒದಗಿಸುವುದು ಸರ್ಕಾರದ ಕರ್ತವ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>