<p><strong>ಹಿರೀಸಾವೆ:</strong>ಬೇಸಿಗೆ ಪ್ರಾರಂಭವಾಗಿದ್ದು, ಪಟ್ಟಣದ ಕೊಳವೆಬಾವಿಗಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. <br /> <br /> 500 ಮನೆಗಳಿರುವ ಕುವೆಂಪುನಗರ ಬಡಾವಣೆಗೆ 5 ನೀರು ಒದಗಿಸುವ ಕೊಳವೆ ಬಾವಿಗಳಿವೆ. 3ರಲ್ಲಿ ನೀರಿಲ್ಲ, 2ರಲ್ಲಿ ಸಿಗುವ ನೀರನ್ನು ಎಲ್ಲ ಮನೆಗಳಿಗೆ ಒದಗಿಸಲು ಪಂಚಾಯಿತಿ ಹರಸಾಹಸ ಪಡುತ್ತಿದೆ. ಬಡಾವಣೆಯ ನೀರಿನ ಟ್ಯಾಂಕ್ಗಳಿಗೆ ಸಂಪರ್ಕ ಕಡಿತಗೊಳಿಸಿ, ಪಕ್ಕದಲ್ಲಿ ಒಂದು ನಲ್ಲಿಯ ಸೌಲಭ್ಯ ಒದಗಿಸಲಾಗಿದೆ.<br /> <br /> ಪ್ರತಿ ನಲ್ಲಿಯ ಮುಂದೆ ಹತ್ತಾರು ಮಹಿಳೆಯರು ಮತ್ತು ಮಕ್ಕಳು ಕೊಡಗಳನ್ನು ಹಿಡಿದು ನೀರು ತುಂಬಿಸಲು ಪೈಪೋಟಿ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಅಕ್ಕ-ಪಕ್ಕದ ಮನೆಯವರ ಜಗಳ ಸಹಜವಾಗಿ ಬಿಟ್ಟಿದೆ.<br /> ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ರಾತ್ರಿ ವೇಳೆ ನೀರು ಹಿಡಿಯಬೇಕಿದೆ. ಹಳೆ ಬಡಾವಣೆಗಿಂತ ಹೊಸ ಬಡವಣೆಯಲ್ಲಿ ನೀರಿನ ಸಮಸ್ಯೆ ಹೆಚ್ಚು. <br /> <br /> ಈ ಹಿಂದೆ ಮನೆಗಳಿಗೆ, ಹೊಟೇಲ್ ಮತ್ತು ಉದ್ಯಮಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿರುವದು ಸಮಸ್ಯೆ ತೀವ್ರತೆಗೆ ಕಾರಣ ಎಂದು ಬಡವಣೆಯ ಜನರು ದೂರುತ್ತಾರೆ. <br /> <br /> `ಈ ಭಾಗದಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. 2 ಕೊಳವೆ ಬಾವಿ ಕೊರೆಸುವಂತೆ ಪಂಚಾಯಿತಿ ವತಿಯಿಂದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮನೆಗಳಿಗೆ ನೀರಿನ ಸಂಪರ್ಕ ಪಡೆದಿರುವವರು ನೀರ ಪೋಲು ಆಗುವುದನ್ನು ತಡೆಯಬೇಕು~ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ಶ್ರೀಧರ್ ಹೇಳುತ್ತಾರೆ. <br /> <br /> ಹಿರೀಸಾವೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ನೀರಿನ ಸಮಸ್ಯೆ ಇರುವ ಕುವೆಂಪುನಗರಕ್ಕೆ ಸಮಪರ್ಕ ನೀರು ಒದಗಿಸಲು ಜನಪ್ರತಿನಿಧಿಗಳು ಮುಂದಾಗ ಬೇಕು ಎಂಬುದು ಸ್ಥಳೀಯರ ಒತ್ತಾಯ.<br /> <br /> <strong>ಶಶಿವಾಳ: ಬತ್ತಿದ ಅಂತರ್ಜಲ</strong><br /> ಅರಸೀಕೆರೆ: ಬೇಸಿಗೆ ಆರಂಭದಲ್ಲಿಯೇ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಸಂಗ್ರಹಿಸ ತೋಟ, ಜಮೀನುಗಳಿಗೆ ಬಿಂದಿಗೆ ಹಿಡಿದು ಪರದಾಡುವ ಚಿತ್ರಣ ಅನೇಕ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ.<br /> <br /> ತಾಲ್ಲೂಕಿನ ಗಡಿ ಭಾಗದ ಶಶಿವಾಳ ಗ್ರಾಮದಲ್ಲಿ ಜನತೆ ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ. ಗ್ರಾಮದಲ್ಲಿ ಎರಡು ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ 5 ವರ್ಷಗಳಿಂದ ಮಳೆ ಅಭಾವದಿಂದ ಅಂತರ್ಜಲ ಬತ್ತಿ ಹೋಗಿರು ವುದರಿಂದ ನೀರು ಪೂರೈಕೆ ಗ್ರಾಮದಲ್ಲಿ ಸಾಧ್ಯವಿಲ್ಲದಂತಾಗಿದೆ. <br /> <br /> ಗ್ರಾಮದಿಂದ ಸುಮಾರು ದೂರದ ಜಮೀನು ಮಾಲೀಕರು ಕೃಷಿಗಾಗಿ ಹಾಕಿಕೊಂಡ ಕೊಳವೆಬಾವಿಗಳಿಂದ ನೀರು ತರುವುದು ಜನತೆಗೆ ಅನಿವಾರ್ಯವಾಗಿದೆ.ಗ್ರಾಮದಲ್ಲಿ ಎರಡು ಕೈಪಂಪ್ ಅಳವಡಿಸಲಾಗಿದ್ದು, ಅವುಗಳಲ್ಲಿ ನೀರು ಬಂದು ವರ್ಷಗಳೇ ಉರುಳಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಸಾಕಷ್ಟು ಬಾರಿ ಕೇಳಿದರು ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ:</strong>ಬೇಸಿಗೆ ಪ್ರಾರಂಭವಾಗಿದ್ದು, ಪಟ್ಟಣದ ಕೊಳವೆಬಾವಿಗಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ. <br /> <br /> 500 ಮನೆಗಳಿರುವ ಕುವೆಂಪುನಗರ ಬಡಾವಣೆಗೆ 5 ನೀರು ಒದಗಿಸುವ ಕೊಳವೆ ಬಾವಿಗಳಿವೆ. 3ರಲ್ಲಿ ನೀರಿಲ್ಲ, 2ರಲ್ಲಿ ಸಿಗುವ ನೀರನ್ನು ಎಲ್ಲ ಮನೆಗಳಿಗೆ ಒದಗಿಸಲು ಪಂಚಾಯಿತಿ ಹರಸಾಹಸ ಪಡುತ್ತಿದೆ. ಬಡಾವಣೆಯ ನೀರಿನ ಟ್ಯಾಂಕ್ಗಳಿಗೆ ಸಂಪರ್ಕ ಕಡಿತಗೊಳಿಸಿ, ಪಕ್ಕದಲ್ಲಿ ಒಂದು ನಲ್ಲಿಯ ಸೌಲಭ್ಯ ಒದಗಿಸಲಾಗಿದೆ.<br /> <br /> ಪ್ರತಿ ನಲ್ಲಿಯ ಮುಂದೆ ಹತ್ತಾರು ಮಹಿಳೆಯರು ಮತ್ತು ಮಕ್ಕಳು ಕೊಡಗಳನ್ನು ಹಿಡಿದು ನೀರು ತುಂಬಿಸಲು ಪೈಪೋಟಿ ನಡೆಸುತ್ತಿದ್ದಾರೆ. ಈ ವಿಷಯದಲ್ಲಿ ಅಕ್ಕ-ಪಕ್ಕದ ಮನೆಯವರ ಜಗಳ ಸಹಜವಾಗಿ ಬಿಟ್ಟಿದೆ.<br /> ವಿದ್ಯುತ್ ಕಣ್ಣಾಮುಚ್ಚಾಲೆ ನಡುವೆ ರಾತ್ರಿ ವೇಳೆ ನೀರು ಹಿಡಿಯಬೇಕಿದೆ. ಹಳೆ ಬಡಾವಣೆಗಿಂತ ಹೊಸ ಬಡವಣೆಯಲ್ಲಿ ನೀರಿನ ಸಮಸ್ಯೆ ಹೆಚ್ಚು. <br /> <br /> ಈ ಹಿಂದೆ ಮನೆಗಳಿಗೆ, ಹೊಟೇಲ್ ಮತ್ತು ಉದ್ಯಮಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿರುವದು ಸಮಸ್ಯೆ ತೀವ್ರತೆಗೆ ಕಾರಣ ಎಂದು ಬಡವಣೆಯ ಜನರು ದೂರುತ್ತಾರೆ. <br /> <br /> `ಈ ಭಾಗದಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. 2 ಕೊಳವೆ ಬಾವಿ ಕೊರೆಸುವಂತೆ ಪಂಚಾಯಿತಿ ವತಿಯಿಂದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಮನೆಗಳಿಗೆ ನೀರಿನ ಸಂಪರ್ಕ ಪಡೆದಿರುವವರು ನೀರ ಪೋಲು ಆಗುವುದನ್ನು ತಡೆಯಬೇಕು~ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎಸ್. ಶ್ರೀಧರ್ ಹೇಳುತ್ತಾರೆ. <br /> <br /> ಹಿರೀಸಾವೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ನೀರಿನ ಸಮಸ್ಯೆ ಇರುವ ಕುವೆಂಪುನಗರಕ್ಕೆ ಸಮಪರ್ಕ ನೀರು ಒದಗಿಸಲು ಜನಪ್ರತಿನಿಧಿಗಳು ಮುಂದಾಗ ಬೇಕು ಎಂಬುದು ಸ್ಥಳೀಯರ ಒತ್ತಾಯ.<br /> <br /> <strong>ಶಶಿವಾಳ: ಬತ್ತಿದ ಅಂತರ್ಜಲ</strong><br /> ಅರಸೀಕೆರೆ: ಬೇಸಿಗೆ ಆರಂಭದಲ್ಲಿಯೇ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಕುಡಿಯುವ ನೀರು ಸಂಗ್ರಹಿಸ ತೋಟ, ಜಮೀನುಗಳಿಗೆ ಬಿಂದಿಗೆ ಹಿಡಿದು ಪರದಾಡುವ ಚಿತ್ರಣ ಅನೇಕ ಗ್ರಾಮಗಳಲ್ಲಿ ಸಾಮಾನ್ಯವಾಗಿದೆ.<br /> <br /> ತಾಲ್ಲೂಕಿನ ಗಡಿ ಭಾಗದ ಶಶಿವಾಳ ಗ್ರಾಮದಲ್ಲಿ ಜನತೆ ನೀರಿಗಾಗಿ ಹರಸಾಹಸ ಪಡುತ್ತಿದ್ದಾರೆ. ಗ್ರಾಮದಲ್ಲಿ ಎರಡು ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ 5 ವರ್ಷಗಳಿಂದ ಮಳೆ ಅಭಾವದಿಂದ ಅಂತರ್ಜಲ ಬತ್ತಿ ಹೋಗಿರು ವುದರಿಂದ ನೀರು ಪೂರೈಕೆ ಗ್ರಾಮದಲ್ಲಿ ಸಾಧ್ಯವಿಲ್ಲದಂತಾಗಿದೆ. <br /> <br /> ಗ್ರಾಮದಿಂದ ಸುಮಾರು ದೂರದ ಜಮೀನು ಮಾಲೀಕರು ಕೃಷಿಗಾಗಿ ಹಾಕಿಕೊಂಡ ಕೊಳವೆಬಾವಿಗಳಿಂದ ನೀರು ತರುವುದು ಜನತೆಗೆ ಅನಿವಾರ್ಯವಾಗಿದೆ.ಗ್ರಾಮದಲ್ಲಿ ಎರಡು ಕೈಪಂಪ್ ಅಳವಡಿಸಲಾಗಿದ್ದು, ಅವುಗಳಲ್ಲಿ ನೀರು ಬಂದು ವರ್ಷಗಳೇ ಉರುಳಿವೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಸಾಕಷ್ಟು ಬಾರಿ ಕೇಳಿದರು ಪ್ರಯೋಜನವಾಗಿಲ್ಲ ಎಂದು ಜನರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>