<p>ಗೋಣಿಕೊಪ್ಪಲು: ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಇವರ ಹೋರಾಟ ಮತ್ತು ಆದರ್ಶ ಯುವ ಪೀಳಿಗೆಗೆ ದಾರಿದೀಪವಾಗಲಿ ಎಂದು ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತಿರುನೆಲ್ಲಿಮಾಡ ಜೀವನ್ ಹೇಳಿದರು.<br /> <br /> ಮಾಯಮುಡಿ ಸಮೀಪದ ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂಬೇಡ್ಕರ್ ಜಯಂತಿಯಲ್ಲಿ ವರು ಮಾತನಾಡಿರು. ಶೋಷಿತರ ಮತ್ತು ಬಡವರ ಧ್ವನಿಯಾಗಿದ್ದ ಅಂಬೇಡ್ಕರ್ ರಚಿಸಿದ ಸಂವಿಧಾನ ವಿಶ್ವದಲ್ಲಿಯೇ ಮಾದರಿ ಎಂದರು. <br /> <br /> ಅಂಬೇಡ್ಕರ್ ಅವರ ಬದುಕಿನ ಚರಿತ್ರೆಯನ್ನು ಓದಿ ಅರ್ಥೈಸಿಕೊಂಡು ಅವರಂತೆ ಬದುಕಲು ಮುಂದಾಗಬೇಕು ಎಂದು ಕರೆ ನೀಡಿದರು.<br /> <br /> ಹಿರಿಯ ಶಿಕ್ಷಕಿ ಶ್ರೀಜಾ ಮಾತನಾಡಿ ಮಹಿಳೆಯರಿಗೆ ಮೀಸಲಾತಿ ದೊರಕಿಸಿಕೊಡಲು ಮೊದಲು ಧ್ವನಿ ಎತ್ತಿದವರು ಅಂಬೇಡ್ಕರ್ ಎಂದರು. <br /> <br /> ಗ್ರಾಮದ ಹಿರಿಯ ಮುಖಂಡ ಸುಬ್ಬಮ್ಮಯ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳಾದ ಅರ್ಚನಾ, ಚೈತ್ರ, ದೀಕ್ಷಿತ್, ರವಿನಂದನ್, ಕೆ.ಆರ್.ನಂದಾ, ಧನಲಕ್ಷ್ಮಿ, ಶಾಲಿನಿ, ಕಾರ್ತಿಕ್ ಮಾತನಾಡಿದರು. ಶಿಕ್ಷಕಿ ಕೆ.ಆರ್.ಗ್ರೇಸಿ ನಿರ್ವಹಿಸಿದರು. ಬಳಿಕ ಪ್ರಸಕ್ತ ಸಾಲಿನ ಫಲಿತಾಂಶ ಪ್ರಕಟಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗೋಣಿಕೊಪ್ಪಲು: ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಇವರ ಹೋರಾಟ ಮತ್ತು ಆದರ್ಶ ಯುವ ಪೀಳಿಗೆಗೆ ದಾರಿದೀಪವಾಗಲಿ ಎಂದು ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ತಿರುನೆಲ್ಲಿಮಾಡ ಜೀವನ್ ಹೇಳಿದರು.<br /> <br /> ಮಾಯಮುಡಿ ಸಮೀಪದ ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂಬೇಡ್ಕರ್ ಜಯಂತಿಯಲ್ಲಿ ವರು ಮಾತನಾಡಿರು. ಶೋಷಿತರ ಮತ್ತು ಬಡವರ ಧ್ವನಿಯಾಗಿದ್ದ ಅಂಬೇಡ್ಕರ್ ರಚಿಸಿದ ಸಂವಿಧಾನ ವಿಶ್ವದಲ್ಲಿಯೇ ಮಾದರಿ ಎಂದರು. <br /> <br /> ಅಂಬೇಡ್ಕರ್ ಅವರ ಬದುಕಿನ ಚರಿತ್ರೆಯನ್ನು ಓದಿ ಅರ್ಥೈಸಿಕೊಂಡು ಅವರಂತೆ ಬದುಕಲು ಮುಂದಾಗಬೇಕು ಎಂದು ಕರೆ ನೀಡಿದರು.<br /> <br /> ಹಿರಿಯ ಶಿಕ್ಷಕಿ ಶ್ರೀಜಾ ಮಾತನಾಡಿ ಮಹಿಳೆಯರಿಗೆ ಮೀಸಲಾತಿ ದೊರಕಿಸಿಕೊಡಲು ಮೊದಲು ಧ್ವನಿ ಎತ್ತಿದವರು ಅಂಬೇಡ್ಕರ್ ಎಂದರು. <br /> <br /> ಗ್ರಾಮದ ಹಿರಿಯ ಮುಖಂಡ ಸುಬ್ಬಮ್ಮಯ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳಾದ ಅರ್ಚನಾ, ಚೈತ್ರ, ದೀಕ್ಷಿತ್, ರವಿನಂದನ್, ಕೆ.ಆರ್.ನಂದಾ, ಧನಲಕ್ಷ್ಮಿ, ಶಾಲಿನಿ, ಕಾರ್ತಿಕ್ ಮಾತನಾಡಿದರು. ಶಿಕ್ಷಕಿ ಕೆ.ಆರ್.ಗ್ರೇಸಿ ನಿರ್ವಹಿಸಿದರು. ಬಳಿಕ ಪ್ರಸಕ್ತ ಸಾಲಿನ ಫಲಿತಾಂಶ ಪ್ರಕಟಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>