<p><strong>ಬೆಂಗಳೂರು: </strong>ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸುವುದೇ ತಮ್ಮ ಆದ್ಯ ಕರ್ತವ್ಯ ಎಂದು ಹೈಕೋರ್ಟ್ ಮುಂದೆ ಹೇಳಿಕೊಂಡ ರಾಜ್ಯ ಸರ್ಕಾರದ ಅಧಿಕಾರಿಗಳು, ತಯಾರಕರ ಹೆಸರೇ ಇಲ್ಲದ ಆಹಾರ ಪದಾರ್ಥಗಳನ್ನು ತೋರಿಸಿ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿ ಸುಸ್ತಾದ ಘಟನೆ ಮಂಗಳವಾರ ನಡೆಯಿತು. <br /> <br /> ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಮುಂದೆ ಈ ಘಟನೆ ನಡೆಯಿತು.<br /> <br /> `ನಾವು ಒಳ್ಳೆಯ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುತ್ತಿದ್ದೇವೆ~ ಎಂದು ಹೆಮ್ಮೆಯಿಂದ ಹೇಳಿಕೊಂಡ ಸರ್ಕಾರ, ಆಹಾರ ಪದಾರ್ಥದ ಮಾದರಿಯ ಲಕೋಟೆ ಒಂದನ್ನು ನ್ಯಾಯಮೂರ್ತಿಗಳ ಮುಂದಿಟ್ಟಿತು. ಅದನ್ನು ನೋಡುತ್ತಿದ್ದಂತೆ ನ್ಯಾಯಮೂರ್ತಿಗಳು, `ಇದೇನಿದು, ಇದರಲ್ಲಿ ತಯಾರಕರ ಹೆಸರೇ ಇಲ್ಲವಲ್ಲ. <br /> <br /> ಇದರಲ್ಲಿ ವಿಷ ಬೆರೆಸಿ ನೀಡಿದ್ದರೆ ಯಾರು ಜವಾಬ್ದಾರರು, ಇಂತಹ ಆಹಾರವನ್ನು ಮಕ್ಕಳಿಗೆ ಹೇಗೆ ನೀಡುತ್ತೀರಿ, ನೀವೇನಾದರೂ ಇದನ್ನು ತಿನ್ನುತ್ತೀರಾ, ಯಾರು ತಿನ್ನುತ್ತೀರಿ ಮುಂದೆ ಬನ್ನಿ~ ಎಂದು ಹಾಜರು ಇದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. <br /> <br /> <strong>ರಾಜಕೀಯ ಭಾಷಣ! <br /> <br /> </strong>ಅಪೌಷ್ಟಿಕತೆ ಹೋಗಲಾಡಿಸಲು ಸಮಿತಿ ರಚನೆ ಮಾಡಿರುವ ಬಗ್ಗೆ ಸರ್ಕಾರವು ಪ್ರಮಾಣ ಪತ್ರವೊಂದನ್ನು ಕೋರ್ಟ್ ಮುಂದಿಟ್ಟಿತು.ಇದನ್ನು ಗಮನಿಸಿದ ನ್ಯಾಯಮೂರ್ತಿಗಳು ಸಿಟ್ಟಿನಿಂದ, `ಇದೇನಿದು, ರಾಜಕೀಯ ಭಾಷಣದ ಹಾಗೆ ಭರವಸೆಗಳ ಮಹಾಪೂರ ಈ ಪ್ರಮಾಣ ಪತ್ರದಲ್ಲಿ ಇದೆಯಲ್ಲ.<br /> <br /> ಯಾರನ್ನು ಕೇಳಿ ಈ ಸಮಿತಿ ರಚನೆ ಮಾಡಿದ್ದೀರಿ, ಇದನ್ನು ಮಾಡುವ ಮುನ್ನ ನಮ್ಮ ಸಲಹೆ ಪಡೆದಿದ್ದೀರಾ, ಈ ರೀತಿ ಯರ್ರಾಬಿರ್ರಿಯಾಗಿ ಸಮಿತಿ ರಚನೆ ಮಾಡಬೇಡಿ ಎಂದು ಈ ಹಿಂದೆಯೇ ನಿರ್ದೇಶಿಸಿದ್ದೆವು. ಅದೇ ತಪ್ಪು ಮರುಕಳಿಸಿದೆ. ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಸರ್ಕಾರೇತರ ಸಂಘ ಸಂಸ್ಥೆ ಇತ್ಯಾದಿಗಳನ್ನು ನೀವು ಸಮಿತಿಯಲ್ಲಿ ಸೇರಿಸಿಕೊಂಡಿದ್ದೀರಾ, ಇಲ್ಲ. ಏನೂ ಮಾಡಿಲ್ಲ. ನಿಮಗೆ ಬೇಕಾದವರನ್ನು ಹಾಕಿಕೊಂಡು ಸಮಿತಿ ಮಾಡಿದ್ದೀರಿ.<br /> <br /> `ಇವತ್ತು ಈ ಪ್ರಕರಣ ಕೋರ್ಟ್ನಲ್ಲಿ ಬರಲಿದೆ ಎಂದು ಒಂದು ದಿನ ಮುಂಚೆ ಸಮಿತಿ ರಚನೆ ಆಗಿದೆ. ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದಾರೆ. ಮೇಲಿಂದ ಮೇಲೆ ಯೋಜನೆ ರೂಪಿಸುವುದು ಬಿಟ್ಟರೆ ನಿಮ್ಮಿಂದ (ಸರ್ಕಾರದಿಂದ) ಏನೂ ಆಗುತ್ತಿಲ್ಲ. ಯೋಜನೆಗಳೆಲ್ಲ ವಿಫಲ ಆಗುತ್ತಿವೆ. <br /> <br /> ಈ ಸಮಸ್ಯೆ ಹೋಗಲಾಡಿಸಲು ಬಜೆಟ್ನಲ್ಲಿ ಎಷ್ಟು ಹಣ ಮಂಜೂರು ಮಾಡಲಾಗಿದೆ, ಕೇಂದ್ರದಿಂದ ಎಷ್ಟು ಹಣ ಮಂಜೂರು ಆಗಿದೆ ಏನೊಂದೂ ವಿವರಣೆ ಇದರಲ್ಲಿ ಇಲ್ಲ. ಇಂತಹ ಪ್ರಮಾಣ ಪತ್ರದಿಂದ ಏನು ಪ್ರಯೋಜನ~ ಎಂದು ಪ್ರಶ್ನಿಸಿತು.<br /> <br /> ಈ ಬಗ್ಗೆ ತಾವು ಸರ್ಕಾರದ ಜೊತೆ ಸಮಾಲೋಚನೆ ನಡೆಸುವುದಾಗಿ ಅಡ್ವೊಕೇಟ್ ಜನರಲ್ ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು. <br /> <br /> <strong>ಮುಖ್ಯಾಂಶಗಳು<br /> <br /> * ತಯಾರಕರ ಹೆಸರೇ ಇಲ್ಲದ ಆಹಾರ ಪದಾರ್ಥಗಳ ಪ್ರದರ್ಶನ<br /> * ಸಮಿತಿ ರಚನೆಗೆ ಕೋರ್ಟ್ ಅಸಮಾಧಾನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸುವುದೇ ತಮ್ಮ ಆದ್ಯ ಕರ್ತವ್ಯ ಎಂದು ಹೈಕೋರ್ಟ್ ಮುಂದೆ ಹೇಳಿಕೊಂಡ ರಾಜ್ಯ ಸರ್ಕಾರದ ಅಧಿಕಾರಿಗಳು, ತಯಾರಕರ ಹೆಸರೇ ಇಲ್ಲದ ಆಹಾರ ಪದಾರ್ಥಗಳನ್ನು ತೋರಿಸಿ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿ ಸುಸ್ತಾದ ಘಟನೆ ಮಂಗಳವಾರ ನಡೆಯಿತು. <br /> <br /> ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಮುಂದೆ ಈ ಘಟನೆ ನಡೆಯಿತು.<br /> <br /> `ನಾವು ಒಳ್ಳೆಯ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡುತ್ತಿದ್ದೇವೆ~ ಎಂದು ಹೆಮ್ಮೆಯಿಂದ ಹೇಳಿಕೊಂಡ ಸರ್ಕಾರ, ಆಹಾರ ಪದಾರ್ಥದ ಮಾದರಿಯ ಲಕೋಟೆ ಒಂದನ್ನು ನ್ಯಾಯಮೂರ್ತಿಗಳ ಮುಂದಿಟ್ಟಿತು. ಅದನ್ನು ನೋಡುತ್ತಿದ್ದಂತೆ ನ್ಯಾಯಮೂರ್ತಿಗಳು, `ಇದೇನಿದು, ಇದರಲ್ಲಿ ತಯಾರಕರ ಹೆಸರೇ ಇಲ್ಲವಲ್ಲ. <br /> <br /> ಇದರಲ್ಲಿ ವಿಷ ಬೆರೆಸಿ ನೀಡಿದ್ದರೆ ಯಾರು ಜವಾಬ್ದಾರರು, ಇಂತಹ ಆಹಾರವನ್ನು ಮಕ್ಕಳಿಗೆ ಹೇಗೆ ನೀಡುತ್ತೀರಿ, ನೀವೇನಾದರೂ ಇದನ್ನು ತಿನ್ನುತ್ತೀರಾ, ಯಾರು ತಿನ್ನುತ್ತೀರಿ ಮುಂದೆ ಬನ್ನಿ~ ಎಂದು ಹಾಜರು ಇದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. <br /> <br /> <strong>ರಾಜಕೀಯ ಭಾಷಣ! <br /> <br /> </strong>ಅಪೌಷ್ಟಿಕತೆ ಹೋಗಲಾಡಿಸಲು ಸಮಿತಿ ರಚನೆ ಮಾಡಿರುವ ಬಗ್ಗೆ ಸರ್ಕಾರವು ಪ್ರಮಾಣ ಪತ್ರವೊಂದನ್ನು ಕೋರ್ಟ್ ಮುಂದಿಟ್ಟಿತು.ಇದನ್ನು ಗಮನಿಸಿದ ನ್ಯಾಯಮೂರ್ತಿಗಳು ಸಿಟ್ಟಿನಿಂದ, `ಇದೇನಿದು, ರಾಜಕೀಯ ಭಾಷಣದ ಹಾಗೆ ಭರವಸೆಗಳ ಮಹಾಪೂರ ಈ ಪ್ರಮಾಣ ಪತ್ರದಲ್ಲಿ ಇದೆಯಲ್ಲ.<br /> <br /> ಯಾರನ್ನು ಕೇಳಿ ಈ ಸಮಿತಿ ರಚನೆ ಮಾಡಿದ್ದೀರಿ, ಇದನ್ನು ಮಾಡುವ ಮುನ್ನ ನಮ್ಮ ಸಲಹೆ ಪಡೆದಿದ್ದೀರಾ, ಈ ರೀತಿ ಯರ್ರಾಬಿರ್ರಿಯಾಗಿ ಸಮಿತಿ ರಚನೆ ಮಾಡಬೇಡಿ ಎಂದು ಈ ಹಿಂದೆಯೇ ನಿರ್ದೇಶಿಸಿದ್ದೆವು. ಅದೇ ತಪ್ಪು ಮರುಕಳಿಸಿದೆ. ಅಪೌಷ್ಟಿಕತೆ ವಿರುದ್ಧ ಹೋರಾಡುತ್ತಿರುವ ಸರ್ಕಾರೇತರ ಸಂಘ ಸಂಸ್ಥೆ ಇತ್ಯಾದಿಗಳನ್ನು ನೀವು ಸಮಿತಿಯಲ್ಲಿ ಸೇರಿಸಿಕೊಂಡಿದ್ದೀರಾ, ಇಲ್ಲ. ಏನೂ ಮಾಡಿಲ್ಲ. ನಿಮಗೆ ಬೇಕಾದವರನ್ನು ಹಾಕಿಕೊಂಡು ಸಮಿತಿ ಮಾಡಿದ್ದೀರಿ.<br /> <br /> `ಇವತ್ತು ಈ ಪ್ರಕರಣ ಕೋರ್ಟ್ನಲ್ಲಿ ಬರಲಿದೆ ಎಂದು ಒಂದು ದಿನ ಮುಂಚೆ ಸಮಿತಿ ರಚನೆ ಆಗಿದೆ. ಅಪೌಷ್ಟಿಕತೆಯಿಂದ ಮಕ್ಕಳು ಸಾಯುತ್ತಿದ್ದಾರೆ. ಮೇಲಿಂದ ಮೇಲೆ ಯೋಜನೆ ರೂಪಿಸುವುದು ಬಿಟ್ಟರೆ ನಿಮ್ಮಿಂದ (ಸರ್ಕಾರದಿಂದ) ಏನೂ ಆಗುತ್ತಿಲ್ಲ. ಯೋಜನೆಗಳೆಲ್ಲ ವಿಫಲ ಆಗುತ್ತಿವೆ. <br /> <br /> ಈ ಸಮಸ್ಯೆ ಹೋಗಲಾಡಿಸಲು ಬಜೆಟ್ನಲ್ಲಿ ಎಷ್ಟು ಹಣ ಮಂಜೂರು ಮಾಡಲಾಗಿದೆ, ಕೇಂದ್ರದಿಂದ ಎಷ್ಟು ಹಣ ಮಂಜೂರು ಆಗಿದೆ ಏನೊಂದೂ ವಿವರಣೆ ಇದರಲ್ಲಿ ಇಲ್ಲ. ಇಂತಹ ಪ್ರಮಾಣ ಪತ್ರದಿಂದ ಏನು ಪ್ರಯೋಜನ~ ಎಂದು ಪ್ರಶ್ನಿಸಿತು.<br /> <br /> ಈ ಬಗ್ಗೆ ತಾವು ಸರ್ಕಾರದ ಜೊತೆ ಸಮಾಲೋಚನೆ ನಡೆಸುವುದಾಗಿ ಅಡ್ವೊಕೇಟ್ ಜನರಲ್ ಹೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು. <br /> <br /> <strong>ಮುಖ್ಯಾಂಶಗಳು<br /> <br /> * ತಯಾರಕರ ಹೆಸರೇ ಇಲ್ಲದ ಆಹಾರ ಪದಾರ್ಥಗಳ ಪ್ರದರ್ಶನ<br /> * ಸಮಿತಿ ರಚನೆಗೆ ಕೋರ್ಟ್ ಅಸಮಾಧಾನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>