<p><strong>ನವದೆಹಲಿ (ಪಿಟಿಐ):</strong> ಅಳಿವಿನ ಅಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂಕೋರ್ಟ್, ಅಭಯಾರಣ್ಯಗಳಲ್ಲಿ ಹುಲಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸದಂತೆ ಮಂಗಳವಾರ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. <br /> <br /> ನ್ಯಾಯಮೂರ್ತಿಗಳಾದ ಸ್ವತಂತ್ರಕುಮಾರ್ ಮತ್ತು ಇಬ್ರಾಹಿಂ ಖಲಿಫುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು, ಹುಲಿ ಅರಣ್ಯ ಸಂರಕ್ಷಿತ ಪ್ರದೇಶಗಳನ್ನೊಳಗೊಂಡ ರಾಜ್ಯ ಸರ್ಕಾರಗಳಿಗೆ ಈ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಅಂತಿಮ ನಿರ್ದೇಶನ ಬರುವವರೆಗೂ, ಹುಲಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಸಂರಕ್ಷಿತ ಪ್ರದೇಶಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಬಾರದು~ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.<br /> <br /> ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಲಿನ ಗಡಿ ಪ್ರದೇಶಗಳನ್ನು ಗುರುತಿಸುವಂತೆ ಇದೇ ವರ್ಷದ ಏಪ್ರಿಲ್ 4 ಮತ್ತು ಜುಲೈ10ರಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ನ್ಯಾಯಾಲಯದ ನಿರ್ದೇಶನವನ್ನು ನಿರ್ಲಕ್ಷಿಸಿರುವ ರಾಜ್ಯ ಸರ್ಕಾರಗಳ ವಿರುದ್ಧ `ಗರಂ~ ಆಗಿರುವ ಪೀಠ, `ಮೂರು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ರಾಜ್ಯಗಳ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ರೂ 50,000 ದಂಡ ವಸೂಲಿ ಮಾಡಲಾಗುವುದು ಎಂದು ತಿಳಿಸಿದೆ.<br /> <br /> ನ್ಯಾಯಾಲಯದ ಈ ಆದೇಶ ಉಲ್ಲಂಘಿಸಿರುವ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ರೂ 10,000 ದಂಡ ವಿಧಿಸಿದೆ.</p>.<p><br /> ಈಗ ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿರುವ ಅರುಣಾಚಲ ಪ್ರದೇಶ ಮತ್ತು ಜಾರ್ಖಂಡ್ ಸರ್ಕಾರಗಳು, `ನಮ್ಮ ರಾಜ್ಯದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಗಡಿ ಪ್ರದೇಶವನ್ನು ಗುರುತಿಸಲಾಗಿದೆ.<br /> <br /> ಸಂಬಂಧಪಟ್ಟ ವಿವರಗಳನ್ನು ಪ್ರಮಾಣಪತ್ರದೊಂದಿಗೆ ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು~ ಎಂದು ಹೇಳಿವೆ.<br /> <br /> ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪರಿಸರವಾದಿ ಅಜಯ್ ದುಬೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.<br /> <br /> `ಅನೇಕ ರಾಜ್ಯಗಳು ಸಂರಕ್ಷಣಾ ನಿಯಮ ಉಲ್ಲಂಘಿಸಿ, ಸಂರಕ್ಷಿತ ಪ್ರದೇಶಗಳ ಗಡಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಟೆಲ್ಗಳು, ರೆಸಾರ್ಟ್ ನಿರ್ಮಿಸಲು, ಜೊತೆಗೆ ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನಕ್ಕೂ ಅನುಮತಿ ನೀಡಿವೆ. ಇದರಿಂದ ವನ್ಯಜೀವಿ ಚಟುವಟಿಕೆಗೆ ತೊಂದರೆಯಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಚಟುವಟಿಕೆ ನಿಷೇಧಿಸಬೇಕು~ ಎಂದು ದುಬೆ ಅರ್ಜಿಯಲ್ಲಿ ಒತ್ತಾಯಿಸ್ದ್ದಿದರು.<br /> <br /> 10 ಕಿ.ಮೀ ವ್ಯಾಪ್ತಿಯ ಗಡಿ ಪ್ರದೇಶ: 1972ರ ವನ್ಯಜೀವಿ (ರಕ್ಷಣೆ) ಕಾಯ್ದೆ ಪ್ರಕಾರ ರಾಜ್ಯ ಸರ್ಕಾರಗಳು ಹುಲಿ ಸಂರಕ್ಷಣಾ ಪ್ರದೇಶ ಮತ್ತು ಗಡಿ ಪ್ರದೇಶಗಳನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕು.<br /> <br /> ಹುಲಿ ಸಂರಕ್ಷಣಾ ಪ್ರದೇಶದ ಅಂಚಿನಲ್ಲಿ `ಗಡಿ ಪ್ರದೇಶ~ಗಳಿರುತ್ತವೆ. ಇವುಗಳನ್ನು `ಅಪಾಯದ ಹುಲಿ ಆವಾಸಸ್ಥಾನ~ ಎಂದು ಕರೆಯಲಾಗುತ್ತದೆ. ಇಂಥ ಪ್ರದೇಶಗಳಲ್ಲಿ ಹುಲಿಗಳು ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ. <br /> <br /> ಆದ್ದರಿಂದ ಈ ಪ್ರದೇಶಗಳನ್ನು ಪ್ರವಾಸೋದ್ಯಮ ಸೇರಿದಂತೆ ಯಾವುದೇ ಗಲಭೆ, ಗದ್ದಲಗಳಿಂದ ಮುಕ್ತವಾಗಿಡಬೇಕು. ಆದ್ದರಿಂದ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಗಡಿ ಪ್ರದೇಶಗಳನ್ನು ಗುರುತು ಮಾಡಬೇಕೆಂದು ಹೇಳಲಾಗಿದೆ. <br /> </p>.<p><strong>ಭಾರತದಲ್ಲಿ ಹುಲಿ ಅಭಯಾರಣ್ಯಗಳು </strong></p>.<p>1.ಕಾರ್ಬೆಟ್, <br /> 2.ದುದ್ವಾ<br /> 3.ವಲ್ಮಿಕಿ<br /> 4.ಬುಕ್ಸಾ<br /> 5.ಮಾನಸ<br /> 6.ನಮೇರಿ<br /> 7.ಪಕ್ಹುಯಿ<br /> 8.ನಮ್ದಫಾ<br /> 9.ಕಾಂಜಿರಂಗ<br /> 10.ಡಂಪಾ<br /> 11.ಸುಂದರ್ಬನ್<br /> 12.ಸಿಮ್ಲಿಪಾಲ್<br /> 13.ಪಲಮವು<br /> 14.ಸಂಜಯ ದುಬ್ರಿ<br /> 15.ಬಾಂದವಗಡ್<br /> 16.ಪನ್ನಾ<br /> 17.ಸರಿಸ್ಕಾ<br /> 18.ರಣಥಂಬೋರ್<br /> 19.ಸತ್ಪುರ<br /> 20.ಪೆಂಚ್-ಎಂಎಚ್<br /> 21.ಕನ್ಹ<br /> 22.ಪೆಂಚ್ -ಎಂಪಿ <br /> 23.ಮೇಲ್ಘಾಟ್ <br /> 24.ತಡೊಬಾ ಅಂಧೇರಿ<br /> 25.ಇಂದ್ರಾವತಿ<br /> 26.ಉದಂತಿ-ಸೀತಾನದಿ<br /> 27.ಸತ್ಕೋಸಿಯಾ<br /> 28.ನಾಗಾರ್ಜುನ ಸಾಗರ<br /> 29.ಸಹ್ಯಾದ್ರಿ<br /> 30.ದಾಂಡೇಲಿ-ಅಣಶಿ<br /> 31.ಭದ್ರಾ<br /> 32.ನಾಗರಹೊಳೆ<br /> 33.ಬಂಡೀಪುರ<br /> 34.ಮದುಮಲೆ <br /> 35.ಪರಂಬಿಕುಲಂ<br /> 36.ಅಣ್ಣಾಮಲೆ<br /> 37.ಪೆರಿಯಾರ್<br /> 38.ಕಲಕ್ಕಡ್-ಮುಂದಂತುರೈ<br /> 39.ಬಿಳಿಗಿರಿ ರಂಗನ ಬೆಟ್ಟ<br /> 40.ಅಚಾನಕ್ಮಾರ್</p>.<p><strong>ಒಟ್ಟು ಹುಲಿ ಅಭಯಾರಣ್ಯ</strong><br /> ದೇಶದಲ್ಲಿ 40<br /> ಕರ್ನಾಟಕದಲ್ಲಿ 5<br /> <strong>ಒಟ್ಟು ಹುಲಿಗಳು</strong><br /> ದೇಶದಲ್ಲಿ 1700<br /> ಕರ್ನಾಟಕದಲ್ಲಿ 300</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಅಳಿವಿನ ಅಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಸುಪ್ರೀಂಕೋರ್ಟ್, ಅಭಯಾರಣ್ಯಗಳಲ್ಲಿ ಹುಲಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಕಡೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸದಂತೆ ಮಂಗಳವಾರ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. <br /> <br /> ನ್ಯಾಯಮೂರ್ತಿಗಳಾದ ಸ್ವತಂತ್ರಕುಮಾರ್ ಮತ್ತು ಇಬ್ರಾಹಿಂ ಖಲಿಫುಲ್ಲಾ ಅವರನ್ನೊಳಗೊಂಡ ನ್ಯಾಯಪೀಠವು, ಹುಲಿ ಅರಣ್ಯ ಸಂರಕ್ಷಿತ ಪ್ರದೇಶಗಳನ್ನೊಳಗೊಂಡ ರಾಜ್ಯ ಸರ್ಕಾರಗಳಿಗೆ ಈ ನಿರ್ದೇಶನ ನೀಡಿದ್ದು, ನ್ಯಾಯಾಲಯದ ಅಂತಿಮ ನಿರ್ದೇಶನ ಬರುವವರೆಗೂ, ಹುಲಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಸಂರಕ್ಷಿತ ಪ್ರದೇಶಗಳನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಬಳಸಬಾರದು~ ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.<br /> <br /> ಹುಲಿ ಸಂರಕ್ಷಿತ ಪ್ರದೇಶಗಳ ಸುತ್ತಲಿನ ಗಡಿ ಪ್ರದೇಶಗಳನ್ನು ಗುರುತಿಸುವಂತೆ ಇದೇ ವರ್ಷದ ಏಪ್ರಿಲ್ 4 ಮತ್ತು ಜುಲೈ10ರಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ನ್ಯಾಯಾಲಯದ ನಿರ್ದೇಶನವನ್ನು ನಿರ್ಲಕ್ಷಿಸಿರುವ ರಾಜ್ಯ ಸರ್ಕಾರಗಳ ವಿರುದ್ಧ `ಗರಂ~ ಆಗಿರುವ ಪೀಠ, `ಮೂರು ವಾರಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ರಾಜ್ಯಗಳ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಂದ ರೂ 50,000 ದಂಡ ವಸೂಲಿ ಮಾಡಲಾಗುವುದು ಎಂದು ತಿಳಿಸಿದೆ.<br /> <br /> ನ್ಯಾಯಾಲಯದ ಈ ಆದೇಶ ಉಲ್ಲಂಘಿಸಿರುವ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತಮಿಳುನಾಡು, ಬಿಹಾರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಿಗೆ ರೂ 10,000 ದಂಡ ವಿಧಿಸಿದೆ.</p>.<p><br /> ಈಗ ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆಬಾಗಿರುವ ಅರುಣಾಚಲ ಪ್ರದೇಶ ಮತ್ತು ಜಾರ್ಖಂಡ್ ಸರ್ಕಾರಗಳು, `ನಮ್ಮ ರಾಜ್ಯದಲ್ಲಿರುವ ಹುಲಿ ಸಂರಕ್ಷಿತ ಪ್ರದೇಶದ ಸುತ್ತಲಿನ ಗಡಿ ಪ್ರದೇಶವನ್ನು ಗುರುತಿಸಲಾಗಿದೆ.<br /> <br /> ಸಂಬಂಧಪಟ್ಟ ವಿವರಗಳನ್ನು ಪ್ರಮಾಣಪತ್ರದೊಂದಿಗೆ ಶೀಘ್ರವೇ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು~ ಎಂದು ಹೇಳಿವೆ.<br /> <br /> ಹುಲಿ ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪರಿಸರವಾದಿ ಅಜಯ್ ದುಬೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.<br /> <br /> `ಅನೇಕ ರಾಜ್ಯಗಳು ಸಂರಕ್ಷಣಾ ನಿಯಮ ಉಲ್ಲಂಘಿಸಿ, ಸಂರಕ್ಷಿತ ಪ್ರದೇಶಗಳ ಗಡಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋಟೆಲ್ಗಳು, ರೆಸಾರ್ಟ್ ನಿರ್ಮಿಸಲು, ಜೊತೆಗೆ ಪ್ರವಾಸೋದ್ಯಮ ಯೋಜನೆಗಳ ಅನುಷ್ಠಾನಕ್ಕೂ ಅನುಮತಿ ನೀಡಿವೆ. ಇದರಿಂದ ವನ್ಯಜೀವಿ ಚಟುವಟಿಕೆಗೆ ತೊಂದರೆಯಾಗುತ್ತದೆ. ಹೀಗಾಗಿ ಪ್ರವಾಸೋದ್ಯಮ ಚಟುವಟಿಕೆ ನಿಷೇಧಿಸಬೇಕು~ ಎಂದು ದುಬೆ ಅರ್ಜಿಯಲ್ಲಿ ಒತ್ತಾಯಿಸ್ದ್ದಿದರು.<br /> <br /> 10 ಕಿ.ಮೀ ವ್ಯಾಪ್ತಿಯ ಗಡಿ ಪ್ರದೇಶ: 1972ರ ವನ್ಯಜೀವಿ (ರಕ್ಷಣೆ) ಕಾಯ್ದೆ ಪ್ರಕಾರ ರಾಜ್ಯ ಸರ್ಕಾರಗಳು ಹುಲಿ ಸಂರಕ್ಷಣಾ ಪ್ರದೇಶ ಮತ್ತು ಗಡಿ ಪ್ರದೇಶಗಳನ್ನು ಗುರುತಿಸಿ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬೇಕು.<br /> <br /> ಹುಲಿ ಸಂರಕ್ಷಣಾ ಪ್ರದೇಶದ ಅಂಚಿನಲ್ಲಿ `ಗಡಿ ಪ್ರದೇಶ~ಗಳಿರುತ್ತವೆ. ಇವುಗಳನ್ನು `ಅಪಾಯದ ಹುಲಿ ಆವಾಸಸ್ಥಾನ~ ಎಂದು ಕರೆಯಲಾಗುತ್ತದೆ. ಇಂಥ ಪ್ರದೇಶಗಳಲ್ಲಿ ಹುಲಿಗಳು ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗುತ್ತವೆ. <br /> <br /> ಆದ್ದರಿಂದ ಈ ಪ್ರದೇಶಗಳನ್ನು ಪ್ರವಾಸೋದ್ಯಮ ಸೇರಿದಂತೆ ಯಾವುದೇ ಗಲಭೆ, ಗದ್ದಲಗಳಿಂದ ಮುಕ್ತವಾಗಿಡಬೇಕು. ಆದ್ದರಿಂದ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಲ್ಲಿ ಹುಲಿ ಸಂರಕ್ಷಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿ ಗಡಿ ಪ್ರದೇಶಗಳನ್ನು ಗುರುತು ಮಾಡಬೇಕೆಂದು ಹೇಳಲಾಗಿದೆ. <br /> </p>.<p><strong>ಭಾರತದಲ್ಲಿ ಹುಲಿ ಅಭಯಾರಣ್ಯಗಳು </strong></p>.<p>1.ಕಾರ್ಬೆಟ್, <br /> 2.ದುದ್ವಾ<br /> 3.ವಲ್ಮಿಕಿ<br /> 4.ಬುಕ್ಸಾ<br /> 5.ಮಾನಸ<br /> 6.ನಮೇರಿ<br /> 7.ಪಕ್ಹುಯಿ<br /> 8.ನಮ್ದಫಾ<br /> 9.ಕಾಂಜಿರಂಗ<br /> 10.ಡಂಪಾ<br /> 11.ಸುಂದರ್ಬನ್<br /> 12.ಸಿಮ್ಲಿಪಾಲ್<br /> 13.ಪಲಮವು<br /> 14.ಸಂಜಯ ದುಬ್ರಿ<br /> 15.ಬಾಂದವಗಡ್<br /> 16.ಪನ್ನಾ<br /> 17.ಸರಿಸ್ಕಾ<br /> 18.ರಣಥಂಬೋರ್<br /> 19.ಸತ್ಪುರ<br /> 20.ಪೆಂಚ್-ಎಂಎಚ್<br /> 21.ಕನ್ಹ<br /> 22.ಪೆಂಚ್ -ಎಂಪಿ <br /> 23.ಮೇಲ್ಘಾಟ್ <br /> 24.ತಡೊಬಾ ಅಂಧೇರಿ<br /> 25.ಇಂದ್ರಾವತಿ<br /> 26.ಉದಂತಿ-ಸೀತಾನದಿ<br /> 27.ಸತ್ಕೋಸಿಯಾ<br /> 28.ನಾಗಾರ್ಜುನ ಸಾಗರ<br /> 29.ಸಹ್ಯಾದ್ರಿ<br /> 30.ದಾಂಡೇಲಿ-ಅಣಶಿ<br /> 31.ಭದ್ರಾ<br /> 32.ನಾಗರಹೊಳೆ<br /> 33.ಬಂಡೀಪುರ<br /> 34.ಮದುಮಲೆ <br /> 35.ಪರಂಬಿಕುಲಂ<br /> 36.ಅಣ್ಣಾಮಲೆ<br /> 37.ಪೆರಿಯಾರ್<br /> 38.ಕಲಕ್ಕಡ್-ಮುಂದಂತುರೈ<br /> 39.ಬಿಳಿಗಿರಿ ರಂಗನ ಬೆಟ್ಟ<br /> 40.ಅಚಾನಕ್ಮಾರ್</p>.<p><strong>ಒಟ್ಟು ಹುಲಿ ಅಭಯಾರಣ್ಯ</strong><br /> ದೇಶದಲ್ಲಿ 40<br /> ಕರ್ನಾಟಕದಲ್ಲಿ 5<br /> <strong>ಒಟ್ಟು ಹುಲಿಗಳು</strong><br /> ದೇಶದಲ್ಲಿ 1700<br /> ಕರ್ನಾಟಕದಲ್ಲಿ 300</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>