<p>`ಚಿತ್ರರಂಗದಲ್ಲಿ ಗೆಲ್ಲಬೇಕು ಎಂದರೆ ಯೋಗ-ಯೋಗ್ಯತೆ ಎರಡೂ ಇರಬೇಕು. ನನಗೆ ಯೋಗ್ಯತೆ ಇದೆ. ಆದರೆ ಯೋಗ ಬರಬೇಕಿದೆ~ ಎನ್ನುತ್ತಾರೆ ಸಂತೋಷ್.<br /> <br /> ಸಕಲೇಶಪುರದ ಕಾಫಿತೋಟಗಳಿಂದ `ಬಣ್ಣದ ಬದುಕಿನಲ್ಲಿ ಗೆಲ್ಲಬೇಕು~ ಎಂಬ ಕನಸು ಹೊತ್ತು ಬಂದಿದ್ದಾರೆ ಅವರು. ಅವಕಾಶ ಕೇಳುವ ಮೊದಲು ಅರ್ಹ ತರಬೇತಿ ಪಡೆದು ಮುಂದಡಿ ಇಡಬೇಕು ಎಂಬ ಎಚ್ಚರಿಕೆಯೂ ಅವರಿಗಿದೆ. <br /> <br /> ಅದರಂತೆ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಅಭಿನಯದ ತರಬೇತಿ ಮುಗಿಸಿಕೊಂಡು ಗಾಂಧಿನಗರದಲ್ಲಿ ಅದೃಷ್ಟ ಅರಸಿ ಹೊರಟ ಅವರಿಗೆ ಮೊದಲು ಖಳ ನಟನಾಗಲು ಅವಕಾಶಗಳು ಬಂದವು. `ಬಂದೇ ಬರ್ತಾಳೆ~, `ತಂತ್ರ~ ಚಿತ್ರಗಳಲ್ಲಿ ಖಳನಾಗಿ ನಟಿಸಿದರು. `ಅಭಿರಾಮ್~ ಚಿತ್ರದಲ್ಲಿ ನಾಯಕನಾಗುವ ಅವಕಾಶ ಸಿಕ್ಕಿತು. ಅದರ ನಂತರ `ಇಷ್ಟ~ ಚಿತ್ರಕ್ಕೂ ನಾಯಕನಾದರು.<br /> <br /> `ಇಷ್ಟ~ ನಿರೀಕ್ಷೆಗೆ ತಕ್ಕ ಗೆಲುವು ಪಡೆಯಲಿಲ್ಲವಾದರೂ ಸಂತೋಷ್ ಉದ್ಯಮದಲ್ಲಿ ಗುರುತಿಸಿಕೊಂಡರು. ಅವಕಾಶಗಳು ಬರತೊಡಗಿದವು. ಆದರೆ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೇ ಒಳ್ಳೆಯ ಕತೆ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸುವ ಸಂಕಲ್ಪ ಮಾಡಿದ್ದಾರೆ.<br /> <br /> ಸದ್ಯಕ್ಕೆ `ನಿನ್ನ ಜೊತೆಯಲಿ~ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ `ಹೂವಿ~ ಮತ್ತು `ಬೆಂಗಳೂರು ಮೆಟ್ರೊ~ ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ.<br /> <br /> ತಾರೇಶ್ ರಾಜು ನಿರ್ದೇಶನದ `ಬೆಂಗಳೂರು ಮೆಟ್ರೋ~ ಚಿತ್ರವನ್ನು ಶಂಕರ್ನಾಗ್ ಅವರ ಕನಸನ್ನು ಆಧರಿಸಿ ಮಾಡಲಾಗುತ್ತಿದೆಯಂತೆ. ವಿಶಾಲ್ ರಾಜು ಅವರ `ಹೂವಿ~ ಚಿತ್ರದಲ್ಲಿ ಸಂತೋಷ್ಗೆ ಉತ್ತರ ಕರ್ನಾಟಕದ ಹಳ್ಳಿಯ ಹುಡುಗನ ಪಾತ್ರ. ಅದಕ್ಕಾಗಿ ಜವಾರಿ ಶೈಲಿಯಲ್ಲಿ ಮಾತನಾಡುವುದನ್ನು ಸಂತೋಷ್ ಕಲಿಯುತ್ತಿದ್ದಾರೆ.<br /> <br /> `ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಮತ್ತು ಒಳ್ಳೆಯ ನಿರ್ದೇಶಕರ ಕೈಕೆಳಗೆ ಕೆಲಸ ಮಾಡುವಾಸೆ~ ಎನ್ನುವ ಈ ಆಸೆ ಕಂಗಳ ತರುಣನದು ಮನೆಯಲ್ಲಿ ಖಾಲಿ ಕುಳಿತಿದ್ದರೂ ಪರವಾಗಿಲ್ಲ. ಒಳ್ಳೆಯ ಚಿತ್ರಗಳಲ್ಲಷ್ಟೇ ನಟಿಸಬೇಕು ಎಂಬ ದೃಢ ನಿರ್ಧಾರ.<br /> <br /> ತನಗೆ ಹೊಂದಿಕೆಯಾಗುವುದಾದರೆ ನೆಗೆಟಿವ್ ಪಾತ್ರಕ್ಕೂ ಸೈ ಎನ್ನುವ ಸಂತೋಷ್ಗೆ ಮಾಸ್ ಹೀರೋ ಆಗಿ ಗುರುತಿಸಿಕೊಳ್ಳುವಾಸೆ. ಎಂಥದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಆತ್ಮವಿಶ್ವಾಸವೂ ಅವರಿಗಿದೆ.<br /> <br /> ನೃತ್ಯ, ಆಕ್ಷನ್, ಅಭಿನಯ ತರಬೇತಿಗಳನ್ನು ಪಡೆದಿರುವ ಸಂತೋಷ್, ಪ್ರತೀದಿನ ಜಿಮ್ನಲ್ಲಿ ಬೆವರು ಹರಿಸುತ್ತಾರೆ. ಅದರಿಂದ ಫಿಟ್ ಆಗಿದ್ದಾರೆ. ಬಿಡುವಿನ ಸಮಯದಲ್ಲಿ ಕ್ರಿಕೆಟ್ ಆಡುವ, ಊರಿಗೋದಾಗ ಕೃಷಿ ಕೆಲಸದಲ್ಲೂ ನಿರತರಾಗುವ ಅವರಿಗೆ ನಟನೆಯಲ್ಲಿಯೇ ಮುಂದುವರಿಯುವ ಬಯಕೆ.<br /> <br /> ರಾಜ್ಕುಮಾರ್ ಅವರ ಅಭಿಮಾನಿಯಾಗಿರುವ ಸಂತೋಷ್ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದಾರಂತೆ. `ಸಿನಿಮಾ ನೋಡುವುದರಿಂದ ಅದರಲ್ಲಿರುವ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬಹುದು~ ಎನ್ನುವ ಅವರು ಅನುಕರಣೆಯನ್ನು ಕಟುವಾಗಿ ವಿರೋಧಿಸುತ್ತಾರೆ.<br /> <br /> ಅಂದಹಾಗೆ, ಚಿತ್ರರಂಗದಲ್ಲಿ ಸಂತೋಷ್ ಎಂಬ ಹೆಸರಿನವರು ಬಹಳ ಮಂದಿ ಇರುವುದರಿಂದ ತಮ್ಮ ಹೆಸರು ಬದಲಾವಣೆ ಬಗ್ಗೆಯೂ ಅವರು ಚಿಂತಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಚಿತ್ರರಂಗದಲ್ಲಿ ಗೆಲ್ಲಬೇಕು ಎಂದರೆ ಯೋಗ-ಯೋಗ್ಯತೆ ಎರಡೂ ಇರಬೇಕು. ನನಗೆ ಯೋಗ್ಯತೆ ಇದೆ. ಆದರೆ ಯೋಗ ಬರಬೇಕಿದೆ~ ಎನ್ನುತ್ತಾರೆ ಸಂತೋಷ್.<br /> <br /> ಸಕಲೇಶಪುರದ ಕಾಫಿತೋಟಗಳಿಂದ `ಬಣ್ಣದ ಬದುಕಿನಲ್ಲಿ ಗೆಲ್ಲಬೇಕು~ ಎಂಬ ಕನಸು ಹೊತ್ತು ಬಂದಿದ್ದಾರೆ ಅವರು. ಅವಕಾಶ ಕೇಳುವ ಮೊದಲು ಅರ್ಹ ತರಬೇತಿ ಪಡೆದು ಮುಂದಡಿ ಇಡಬೇಕು ಎಂಬ ಎಚ್ಚರಿಕೆಯೂ ಅವರಿಗಿದೆ. <br /> <br /> ಅದರಂತೆ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ಅಭಿನಯದ ತರಬೇತಿ ಮುಗಿಸಿಕೊಂಡು ಗಾಂಧಿನಗರದಲ್ಲಿ ಅದೃಷ್ಟ ಅರಸಿ ಹೊರಟ ಅವರಿಗೆ ಮೊದಲು ಖಳ ನಟನಾಗಲು ಅವಕಾಶಗಳು ಬಂದವು. `ಬಂದೇ ಬರ್ತಾಳೆ~, `ತಂತ್ರ~ ಚಿತ್ರಗಳಲ್ಲಿ ಖಳನಾಗಿ ನಟಿಸಿದರು. `ಅಭಿರಾಮ್~ ಚಿತ್ರದಲ್ಲಿ ನಾಯಕನಾಗುವ ಅವಕಾಶ ಸಿಕ್ಕಿತು. ಅದರ ನಂತರ `ಇಷ್ಟ~ ಚಿತ್ರಕ್ಕೂ ನಾಯಕನಾದರು.<br /> <br /> `ಇಷ್ಟ~ ನಿರೀಕ್ಷೆಗೆ ತಕ್ಕ ಗೆಲುವು ಪಡೆಯಲಿಲ್ಲವಾದರೂ ಸಂತೋಷ್ ಉದ್ಯಮದಲ್ಲಿ ಗುರುತಿಸಿಕೊಂಡರು. ಅವಕಾಶಗಳು ಬರತೊಡಗಿದವು. ಆದರೆ ಬಂದ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳದೇ ಒಳ್ಳೆಯ ಕತೆ ಇರುವ ಸಿನಿಮಾಗಳಲ್ಲಿ ಮಾತ್ರ ನಟಿಸುವ ಸಂಕಲ್ಪ ಮಾಡಿದ್ದಾರೆ.<br /> <br /> ಸದ್ಯಕ್ಕೆ `ನಿನ್ನ ಜೊತೆಯಲಿ~ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ `ಹೂವಿ~ ಮತ್ತು `ಬೆಂಗಳೂರು ಮೆಟ್ರೊ~ ಚಿತ್ರಗಳನ್ನೂ ಒಪ್ಪಿಕೊಂಡಿದ್ದಾರೆ.<br /> <br /> ತಾರೇಶ್ ರಾಜು ನಿರ್ದೇಶನದ `ಬೆಂಗಳೂರು ಮೆಟ್ರೋ~ ಚಿತ್ರವನ್ನು ಶಂಕರ್ನಾಗ್ ಅವರ ಕನಸನ್ನು ಆಧರಿಸಿ ಮಾಡಲಾಗುತ್ತಿದೆಯಂತೆ. ವಿಶಾಲ್ ರಾಜು ಅವರ `ಹೂವಿ~ ಚಿತ್ರದಲ್ಲಿ ಸಂತೋಷ್ಗೆ ಉತ್ತರ ಕರ್ನಾಟಕದ ಹಳ್ಳಿಯ ಹುಡುಗನ ಪಾತ್ರ. ಅದಕ್ಕಾಗಿ ಜವಾರಿ ಶೈಲಿಯಲ್ಲಿ ಮಾತನಾಡುವುದನ್ನು ಸಂತೋಷ್ ಕಲಿಯುತ್ತಿದ್ದಾರೆ.<br /> <br /> `ಒಳ್ಳೆಯ ಪಾತ್ರಗಳಲ್ಲಿ ನಟಿಸುವ ಮತ್ತು ಒಳ್ಳೆಯ ನಿರ್ದೇಶಕರ ಕೈಕೆಳಗೆ ಕೆಲಸ ಮಾಡುವಾಸೆ~ ಎನ್ನುವ ಈ ಆಸೆ ಕಂಗಳ ತರುಣನದು ಮನೆಯಲ್ಲಿ ಖಾಲಿ ಕುಳಿತಿದ್ದರೂ ಪರವಾಗಿಲ್ಲ. ಒಳ್ಳೆಯ ಚಿತ್ರಗಳಲ್ಲಷ್ಟೇ ನಟಿಸಬೇಕು ಎಂಬ ದೃಢ ನಿರ್ಧಾರ.<br /> <br /> ತನಗೆ ಹೊಂದಿಕೆಯಾಗುವುದಾದರೆ ನೆಗೆಟಿವ್ ಪಾತ್ರಕ್ಕೂ ಸೈ ಎನ್ನುವ ಸಂತೋಷ್ಗೆ ಮಾಸ್ ಹೀರೋ ಆಗಿ ಗುರುತಿಸಿಕೊಳ್ಳುವಾಸೆ. ಎಂಥದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಆತ್ಮವಿಶ್ವಾಸವೂ ಅವರಿಗಿದೆ.<br /> <br /> ನೃತ್ಯ, ಆಕ್ಷನ್, ಅಭಿನಯ ತರಬೇತಿಗಳನ್ನು ಪಡೆದಿರುವ ಸಂತೋಷ್, ಪ್ರತೀದಿನ ಜಿಮ್ನಲ್ಲಿ ಬೆವರು ಹರಿಸುತ್ತಾರೆ. ಅದರಿಂದ ಫಿಟ್ ಆಗಿದ್ದಾರೆ. ಬಿಡುವಿನ ಸಮಯದಲ್ಲಿ ಕ್ರಿಕೆಟ್ ಆಡುವ, ಊರಿಗೋದಾಗ ಕೃಷಿ ಕೆಲಸದಲ್ಲೂ ನಿರತರಾಗುವ ಅವರಿಗೆ ನಟನೆಯಲ್ಲಿಯೇ ಮುಂದುವರಿಯುವ ಬಯಕೆ.<br /> <br /> ರಾಜ್ಕುಮಾರ್ ಅವರ ಅಭಿಮಾನಿಯಾಗಿರುವ ಸಂತೋಷ್ ಅವರ ಎಲ್ಲಾ ಸಿನಿಮಾಗಳನ್ನು ನೋಡಿದ್ದಾರಂತೆ. `ಸಿನಿಮಾ ನೋಡುವುದರಿಂದ ಅದರಲ್ಲಿರುವ ಸಕಾರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬಹುದು~ ಎನ್ನುವ ಅವರು ಅನುಕರಣೆಯನ್ನು ಕಟುವಾಗಿ ವಿರೋಧಿಸುತ್ತಾರೆ.<br /> <br /> ಅಂದಹಾಗೆ, ಚಿತ್ರರಂಗದಲ್ಲಿ ಸಂತೋಷ್ ಎಂಬ ಹೆಸರಿನವರು ಬಹಳ ಮಂದಿ ಇರುವುದರಿಂದ ತಮ್ಮ ಹೆಸರು ಬದಲಾವಣೆ ಬಗ್ಗೆಯೂ ಅವರು ಚಿಂತಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>