<p>ಊರು ಕೇರಿಯ ಜನಮನದಾಟ- ಗಣೇಶ್ ಮೇಷ್ಟ್ರುರವರ ಜೊತೆಯಲ್ಲಿ ನಾನು ಕಳೆದ ಅಮೂಲ್ಯ ಕ್ಷಣವನ್ನು `ಕಾಮನಬಿಲ್ಲು~ ಲೇಖನ ಮತ್ತೆ ನೆನಪಿಸಿದೆ. ನಾನು ಸಾಗರದ ಸ್ಪಂದನ ರಂಗ ತಂಡದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ, ಆಗ ಸ್ಪಂದನ ತಂಡದ ಪ್ರತಿಭಾ ಮೇಡಂ ಅವರಿಂದ ಗಣೇಶ್ ಮೇಷ್ಟ್ರ ಪರಿಚಯವಾಯಿತು.<br /> <br /> ಗಣೇಶ್ ಮೇಷ್ಟ್ರು ನಮಗೆ ಯು.ಆರ್.ಅನಂತಮೂರ್ತಿಯವರ ಸೂರ್ಯನ ಕುದುರೆ ಕಥೆಯನ್ನು ನಾಟಕ ಮಾಡಿಸುತ್ತಿದ್ದರು. ಒಂದೂಂದು ದಿನ (ಹೆಚ್ಚಾಗಿ ಭಾನುವಾರ) ದಿನವಿಡಿ ನಾಟಕದ ತಾಲೀಮು ನಡೆಸುತ್ತಿದ್ದರು, ಆಗೊಂದು ದಿನ ಮದ್ಯಾಹ್ನ ಗಣೇಶ್ ಮೇಷ್ಟ್ರು ನನಗೆ ಅವರ ಮನೆಗೆ (ಸಾಗರದಿಂದ-ಹೆಗ್ಗೋಡಿಗೆ) ಕರೆದುಕೊಂಡು ಹೋಗಿದ್ದರು, ಅವರ ಮನೆಯಲ್ಲೇ ಊಟಮಾಡಿಕೊಂಡು ಪುನಃ ತಾಲೀಮಿಗೆ ಬಂದೆವು.<br /> <br /> ಆ ದಿನಗಳಿಂದ ಗಣೇಶ್ ಮೇಷ್ಟ್ರು ಹೆಚ್ಚು ಪರಿಚಿತರಾದರು. ಅವರ ಆಲೋಚನೆ, ವಿಚಾರ,ಸ್ನೇಹಪರತೆ ಎಲ್ಲವು ನನಗೆ ಇಷ್ಟವಾಗುತಿತ್ತು. ಈ ಲೇಖನದಿಂದ ನನಗೆ ತಿಳಿದಿರದ ಅವರ ಹಲವು ಹಿನ್ನಲೆಗಳನ್ನು ತಿಳಿಸಿಕೊಟ್ಟಿದೆ, ಧನ್ಯವಾದಗಳು.<br /> <strong>ರಿಯಾಜ್, ಹವ್ಯಾಸಿ ಕಲಾವಿದ ಸ್ಪಂದನ ತಂಡ, ಸಾಗರ</strong><br /> <br /> ಊರು-ಕೇರಿಯ ಹಲವು ಪ್ರದರ್ಶನಗಳನ್ನು ನಾನು ನೋಡಿದ್ದೇನೆ. ಸಿದ್ಧಲಿಂಗಯ್ಯನವರ ಈ ಆತ್ಮಕಥೆಯ ಅತ್ಯಂತ ದೊಡ್ಡ ಶಕ್ತಿಯೆಂದರೆ ಯಾವುದೇ ಕೀಳರಿಮೆಯಿಲ್ಲದೆ ತನ್ನ ಕಥೆಯನ್ನು ಹೇಳಿಕೊಂಡಿರುವುದು. ಅದನ್ನು ಅಷ್ಟೇ ಯಶಸ್ವಿಯಾಗಿ ರಂಗಕ್ಕೆ ತಂದಿರುವುದು ಗಣೇಶ್ ಅವರ ಹೆಚ್ಚುಗಾರಿಕೆ. ಅಭಿಜಾತ ಪ್ರತಿಭೆಯನ್ನು ಪರಿಚಯಿಸಿದ ಲೇಖಕ ಡಿ.ಕೆ.ರಮೇಶ್ ಹಾಗೂ `ಕಾಮನಬಿಲ್ಲು~ ತಂಡಕ್ಕೆ ಧನ್ಯವಾದಗಳು.<br /> <strong> ಎಸ್.ಕೆ. ಬಾಲಕೃಷ್ಣ, ತುಮಕೂರು</strong><br /> <br /> `ಕಾಮನಬಿಲ್ಲು~ ಆರಂಭವಾದ ದಿನಗಳಿಂದಲೂ ವಾಹನಗಳ ಬಗೆಗಿನ ಲೇಖನಗಳನ್ನು ಓದುತ್ತಾ ಬಂದಿರುವೆ. ಆಂಗ್ಲ ಪತ್ರಿಕೆಗಳಿಗೆ ಸರಿಸಮನಾಗಿ ನಿಲ್ಲುವಂಥ ವಿವರ ಮತ್ತು ವಿಶ್ಲೇಷಣೆಗಳು ಈ ಲೇಖನಗಳಲ್ಲಿರುತ್ತವೆ. ಎನ್ಕೆ ಅವರು ಬರೆಯುತ್ತಿರುವ ಆಟೋ ಟೆಕ್ ಕನ್ನಡದಲ್ಲಿ ಅಪರೂಪದ್ದೆನಿಸುವ ಮಾಹಿತಿಗಳನ್ನು ನೀಡುತ್ತಿದೆ.<br /> <strong> ಮೊಹಮ್ಮದ್ ಆಸಿಫ್, ಬೆಳಗಾವಿ</strong><br /> <br /> `ಕಾಮನಬಿಲ್ಲು~ ಕಂಡೊಡನೆ ನಾನು ಓದುವುದು `ನಾನು ಕಂಡ ವಿವೇಕಾನಂದ~ ಇದು ಅಪರೂಪದ್ದೂ, ಸ್ಫೂರ್ತಿದಾಯಕವೂ ಆಗಿರುವ ಅಂಕಣವಾಗಿದೆ. ಈ ವಾರದ `ಮನ್ನಣೆ ಎಂಬ ಹೊನ್ನಶೂಲ~ ತುಂಬ ವಾಸ್ತವಿಕ ಮತ್ತು ಸಾರ್ವಕಾಲಿಕ. ಅಂತೆಯೇ ~ಸೀಳ್ನುಡಿ~ ಅಂಕಣ ಕೂಡ ಸ್ವಾಗತಾರ್ಹವಾದುದು. ಕಾಮನಬಿಲ್ಲು ಹೊಸಬರಿಗಾಗಿ ಒಂದು ಅಂಕಣ ಮೀಸಲಿಡಲು ಸಾಧ್ಯವೇ? <br /> <strong> ಜಿ. ಟಿ. ಶ್ರಿಧರ ಶರ್ಮ, ಸಾಗರ.</strong><br /> <br /> ಕಾಮನಬಿಲ್ಲು ಪುರವಣಿಯಲ್ಲಿ ಏಪ್ರಿಲ್ 12 ರಂದು ಮೂಡಿಬಂದ `ಪಿಕ್ಚರ್ ಪ್ರಪಂಚದ ಕಾಲುದಾರಿ~ ಲೇಖನ ತುಂಬಾ ಚೆನ್ನಾಗಿದೆ. ಕನ್ನಡ ಸಿನಿಮಾವನ್ನೇ ಮರೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ಲೇಖನ ಸಮಯೋಚಿತವಾಗಿದೆ. <br /> <strong> -ಎನ್. ಪೂರ್ಣಿಮಾ ವಿಶ್ವನಾಥಚಾರ್, ಗುಬ್ಬಿ.</strong></p>.<p>ಕಾಮನಬಿಲ್ಲು ಸಾಹಿತ್ಯಕವಾಗಿ ಹಲವಾರು ವಿಶೇಷತೆಗಳನ್ನು ನೀಡಿ ಮನರಂಜಿಸುತ್ತಿದೆ.<br /> ಸಾಮಾಜಿಕ, ವೈಜ್ಞಾನಿಕ ಲೇಖನ, ಪ್ರತಿಭಾವಂತರ ಪರಿಚಯ ನೀಡಿ ಸಾಧನೆಗೆ ಪ್ರೇರೇಪಿತವಾಗಿದೆ. ಕಳೆದ ಬಾರಿಯ ಡಿ. ಕೆ. ರಮೇಶ್ ಅವರ ಪಿಕ್ಚರ್ ಪ್ರಪಂಚದ ಕಾಲು ದಾರಿ ಚಿತ್ರಲೇಖನ ತುಂಬಾ ಸೊಗಸಾಗಿತ್ತು. <br /> <strong> -ಮಹಾಂತೇಶ ರಾಜಗೋಳಿ, ಬೆಳಗಾವಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಊರು ಕೇರಿಯ ಜನಮನದಾಟ- ಗಣೇಶ್ ಮೇಷ್ಟ್ರುರವರ ಜೊತೆಯಲ್ಲಿ ನಾನು ಕಳೆದ ಅಮೂಲ್ಯ ಕ್ಷಣವನ್ನು `ಕಾಮನಬಿಲ್ಲು~ ಲೇಖನ ಮತ್ತೆ ನೆನಪಿಸಿದೆ. ನಾನು ಸಾಗರದ ಸ್ಪಂದನ ರಂಗ ತಂಡದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ, ಆಗ ಸ್ಪಂದನ ತಂಡದ ಪ್ರತಿಭಾ ಮೇಡಂ ಅವರಿಂದ ಗಣೇಶ್ ಮೇಷ್ಟ್ರ ಪರಿಚಯವಾಯಿತು.<br /> <br /> ಗಣೇಶ್ ಮೇಷ್ಟ್ರು ನಮಗೆ ಯು.ಆರ್.ಅನಂತಮೂರ್ತಿಯವರ ಸೂರ್ಯನ ಕುದುರೆ ಕಥೆಯನ್ನು ನಾಟಕ ಮಾಡಿಸುತ್ತಿದ್ದರು. ಒಂದೂಂದು ದಿನ (ಹೆಚ್ಚಾಗಿ ಭಾನುವಾರ) ದಿನವಿಡಿ ನಾಟಕದ ತಾಲೀಮು ನಡೆಸುತ್ತಿದ್ದರು, ಆಗೊಂದು ದಿನ ಮದ್ಯಾಹ್ನ ಗಣೇಶ್ ಮೇಷ್ಟ್ರು ನನಗೆ ಅವರ ಮನೆಗೆ (ಸಾಗರದಿಂದ-ಹೆಗ್ಗೋಡಿಗೆ) ಕರೆದುಕೊಂಡು ಹೋಗಿದ್ದರು, ಅವರ ಮನೆಯಲ್ಲೇ ಊಟಮಾಡಿಕೊಂಡು ಪುನಃ ತಾಲೀಮಿಗೆ ಬಂದೆವು.<br /> <br /> ಆ ದಿನಗಳಿಂದ ಗಣೇಶ್ ಮೇಷ್ಟ್ರು ಹೆಚ್ಚು ಪರಿಚಿತರಾದರು. ಅವರ ಆಲೋಚನೆ, ವಿಚಾರ,ಸ್ನೇಹಪರತೆ ಎಲ್ಲವು ನನಗೆ ಇಷ್ಟವಾಗುತಿತ್ತು. ಈ ಲೇಖನದಿಂದ ನನಗೆ ತಿಳಿದಿರದ ಅವರ ಹಲವು ಹಿನ್ನಲೆಗಳನ್ನು ತಿಳಿಸಿಕೊಟ್ಟಿದೆ, ಧನ್ಯವಾದಗಳು.<br /> <strong>ರಿಯಾಜ್, ಹವ್ಯಾಸಿ ಕಲಾವಿದ ಸ್ಪಂದನ ತಂಡ, ಸಾಗರ</strong><br /> <br /> ಊರು-ಕೇರಿಯ ಹಲವು ಪ್ರದರ್ಶನಗಳನ್ನು ನಾನು ನೋಡಿದ್ದೇನೆ. ಸಿದ್ಧಲಿಂಗಯ್ಯನವರ ಈ ಆತ್ಮಕಥೆಯ ಅತ್ಯಂತ ದೊಡ್ಡ ಶಕ್ತಿಯೆಂದರೆ ಯಾವುದೇ ಕೀಳರಿಮೆಯಿಲ್ಲದೆ ತನ್ನ ಕಥೆಯನ್ನು ಹೇಳಿಕೊಂಡಿರುವುದು. ಅದನ್ನು ಅಷ್ಟೇ ಯಶಸ್ವಿಯಾಗಿ ರಂಗಕ್ಕೆ ತಂದಿರುವುದು ಗಣೇಶ್ ಅವರ ಹೆಚ್ಚುಗಾರಿಕೆ. ಅಭಿಜಾತ ಪ್ರತಿಭೆಯನ್ನು ಪರಿಚಯಿಸಿದ ಲೇಖಕ ಡಿ.ಕೆ.ರಮೇಶ್ ಹಾಗೂ `ಕಾಮನಬಿಲ್ಲು~ ತಂಡಕ್ಕೆ ಧನ್ಯವಾದಗಳು.<br /> <strong> ಎಸ್.ಕೆ. ಬಾಲಕೃಷ್ಣ, ತುಮಕೂರು</strong><br /> <br /> `ಕಾಮನಬಿಲ್ಲು~ ಆರಂಭವಾದ ದಿನಗಳಿಂದಲೂ ವಾಹನಗಳ ಬಗೆಗಿನ ಲೇಖನಗಳನ್ನು ಓದುತ್ತಾ ಬಂದಿರುವೆ. ಆಂಗ್ಲ ಪತ್ರಿಕೆಗಳಿಗೆ ಸರಿಸಮನಾಗಿ ನಿಲ್ಲುವಂಥ ವಿವರ ಮತ್ತು ವಿಶ್ಲೇಷಣೆಗಳು ಈ ಲೇಖನಗಳಲ್ಲಿರುತ್ತವೆ. ಎನ್ಕೆ ಅವರು ಬರೆಯುತ್ತಿರುವ ಆಟೋ ಟೆಕ್ ಕನ್ನಡದಲ್ಲಿ ಅಪರೂಪದ್ದೆನಿಸುವ ಮಾಹಿತಿಗಳನ್ನು ನೀಡುತ್ತಿದೆ.<br /> <strong> ಮೊಹಮ್ಮದ್ ಆಸಿಫ್, ಬೆಳಗಾವಿ</strong><br /> <br /> `ಕಾಮನಬಿಲ್ಲು~ ಕಂಡೊಡನೆ ನಾನು ಓದುವುದು `ನಾನು ಕಂಡ ವಿವೇಕಾನಂದ~ ಇದು ಅಪರೂಪದ್ದೂ, ಸ್ಫೂರ್ತಿದಾಯಕವೂ ಆಗಿರುವ ಅಂಕಣವಾಗಿದೆ. ಈ ವಾರದ `ಮನ್ನಣೆ ಎಂಬ ಹೊನ್ನಶೂಲ~ ತುಂಬ ವಾಸ್ತವಿಕ ಮತ್ತು ಸಾರ್ವಕಾಲಿಕ. ಅಂತೆಯೇ ~ಸೀಳ್ನುಡಿ~ ಅಂಕಣ ಕೂಡ ಸ್ವಾಗತಾರ್ಹವಾದುದು. ಕಾಮನಬಿಲ್ಲು ಹೊಸಬರಿಗಾಗಿ ಒಂದು ಅಂಕಣ ಮೀಸಲಿಡಲು ಸಾಧ್ಯವೇ? <br /> <strong> ಜಿ. ಟಿ. ಶ್ರಿಧರ ಶರ್ಮ, ಸಾಗರ.</strong><br /> <br /> ಕಾಮನಬಿಲ್ಲು ಪುರವಣಿಯಲ್ಲಿ ಏಪ್ರಿಲ್ 12 ರಂದು ಮೂಡಿಬಂದ `ಪಿಕ್ಚರ್ ಪ್ರಪಂಚದ ಕಾಲುದಾರಿ~ ಲೇಖನ ತುಂಬಾ ಚೆನ್ನಾಗಿದೆ. ಕನ್ನಡ ಸಿನಿಮಾವನ್ನೇ ಮರೆಯುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ಲೇಖನ ಸಮಯೋಚಿತವಾಗಿದೆ. <br /> <strong> -ಎನ್. ಪೂರ್ಣಿಮಾ ವಿಶ್ವನಾಥಚಾರ್, ಗುಬ್ಬಿ.</strong></p>.<p>ಕಾಮನಬಿಲ್ಲು ಸಾಹಿತ್ಯಕವಾಗಿ ಹಲವಾರು ವಿಶೇಷತೆಗಳನ್ನು ನೀಡಿ ಮನರಂಜಿಸುತ್ತಿದೆ.<br /> ಸಾಮಾಜಿಕ, ವೈಜ್ಞಾನಿಕ ಲೇಖನ, ಪ್ರತಿಭಾವಂತರ ಪರಿಚಯ ನೀಡಿ ಸಾಧನೆಗೆ ಪ್ರೇರೇಪಿತವಾಗಿದೆ. ಕಳೆದ ಬಾರಿಯ ಡಿ. ಕೆ. ರಮೇಶ್ ಅವರ ಪಿಕ್ಚರ್ ಪ್ರಪಂಚದ ಕಾಲು ದಾರಿ ಚಿತ್ರಲೇಖನ ತುಂಬಾ ಸೊಗಸಾಗಿತ್ತು. <br /> <strong> -ಮಹಾಂತೇಶ ರಾಜಗೋಳಿ, ಬೆಳಗಾವಿ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>