<p>ಹಣಕಾಸಿನ ಸಮಸ್ಯೆ ಕಾರಣ ಈಜು ತೊರೆಯಲು ನಿರ್ಧರಿಸಿದ್ದನು ಈ ಹುಡುಗ...!<br /> ಏಕೆಂದರೆ ವಿದೇಶದಲ್ಲಿ ನಡೆಯಲಿರುವ ಚಾಂಪಿಯನ್ಷಿಪ್ಗಳಲ್ಲಿ ಪಾಲ್ಗೊಳ್ಳಲು ಈ ಹುಡುಗನಿಗೆ ಆರಂಭದ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಕಾರಣದಿಂದ ಬೇಸರಗೊಂಡು ಈಜು ಕ್ಷೇತ್ರದಿಂದಲೇ ದೂರ ಉಳಿಯಲು ತೀರ್ಮಾನಿಸಿದ್ದನು.<br /> <br /> ಆದರೆ ಈಜು ಸ್ಪರ್ಧಾ ಕ್ಷೇತ್ರದಲ್ಲಿನ ಆಸಕ್ತಿ ಹಾಗೂ ಪ್ರೀತಿ ಅದಕ್ಕೆ ಅವಕಾಶ ನೀಡಲಿಲ್ಲ. ಕಷ್ಟದ ಅಲೆಗಳ ವಿರುದ್ಧವೇ ಈಜಲು ಈ ಹುಡುಗ ಅಂದು ತೀರ್ಮಾನಿಸಿದ. ಇದು ಆರಂಭದ ದಿನಗಳಲ್ಲಿ 19ರ ಹರೆಯದ ಹುಡುಗನೊಬ್ಬ ಎದುರಿಸಿದ ಅತ್ಯಂತ ಕಷ್ಟದ ಕ್ಷಣಗಳು.<br /> <br /> ಆ ಕಷ್ಟಗಳ ಬೆನ್ನಟ್ಟಿ ಯಶಸ್ವಿಯಾದ ಅದೇ ಹುಡುಗ ಈಗ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದಾನೆ. ಈ ಮೂಲಕ ತಾನು ಕಂಡ ಕನಸನ್ನು ನಿಜ ಮಾಡಿದ್ದಾನೆ. ಆತನ ಹೆಸರು ಆ್ಯರನ್ ಡಿಸೋಜಾ. <br /> <br /> ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಪ್ರತಿಯೊಬ್ಬ ಹುಡುಗರ ಕನಸು. ಇದು ಪೋಷಕರ ಆಸೆ ಕೂಡ. ಅದರಲ್ಲೂ ಒಲಿಂಪಿಕ್ಸ್ನಂಥ ಉನ್ನತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮತ್ತೊಂದು ಅದ್ಭುತ ಕ್ಷಣ ಯಾವುದಿದೆ ಹೇಳಿ?<br /> <br /> ಹೌದು, ಪ್ರತಿಭಾವಂತ ಈಜುಪಟು ಕರ್ನಾಟಕದ ಆ್ಯರನ್ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ವಿಶೇಷವೆಂದರೆ ಈ ಕ್ಷಣವನ್ನು ಆ್ಯರನ್ ಅವರ ತಂದೆ ಕೂಡ ಕಣ್ತುಂಬಿಕೊಂಡರು. ಇಬ್ಬರ ಪಾಲಿಗೂ ಕನಸು ನನಸಾದ ಖುಷಿ. 43ನೇ ಸಿಂಗಪುರ ರಾಷ್ಟ್ರೀಯ ಏಜ್ ಗ್ರೂಪ್ ಈಜು ಚಾಂಪಿಯನ್ಷಿಪ್ನ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಅವರು ಗಮನಾರ್ಹ ಪ್ರದರ್ಶನ ತೋರಿ ಈ ಸಾಧನೆ ಮಾಡಿದ್ದಾರೆ. <br /> <br /> ಬಸವನಗುಡಿ ಈಜು ಕೇಂದ್ರ (ಬಿಎಸಿ)ದಲ್ಲಿ ತರಬೇತಿ ಪಡೆಯುತ್ತಿರುವ ಡಿಸೋಜಾ ಈ ದೂರವನ್ನು 1 ನಿಮಿಷ 50.89 ಸೆಕೆಂಡ್ಗಳಲ್ಲಿ ತಲುಪಿದರು. ಈ ಮೂಲಕ ಒಲಿಂಪಿಕ್ಸ್ನ `ಬಿ~ ದರ್ಜೆಯ ಅರ್ಹತಾ ಮಟ್ಟ (ಒಲಿಂಪಿಕ್ಸ್ ಆಹ್ವಾನ ಸಮಯ) ಮುಟ್ಟಿದರು.<br /> <br /> `ಈ ಸಾಧನೆ ಮಾಡಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಆದರೆ ಮತ್ತಷ್ಟು ಕಠಿಣ ಪ್ರಯತ್ನ ಹಾಕಬೇಕಾಗಿದೆ. ಈ ಸಾಧನೆಗೆ ಕೋಚ್ ಪ್ರದೀಪ್ ಹಾಗೂ ಪೋಷಕರು ಕಾರಣ~ ಎಂದು ಆ್ಯರನ್ ಪ್ರತಿಕ್ರಿಯಿಸಿದ್ದಾರೆ. ಬಿಎಸಿನಲ್ಲಿ ತರಬೇತಿ ಪಡೆಯುತ್ತಿರುವ ಸೌರಭ್ ಸಾಂಗ್ವೇಕರ್ ಕೂಡ 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಅವರಿಗಿನ್ನೂ 17 ವರ್ಷ.<br /> <br /> ವಿಶೇಷವೆಂದರೆ ಇವರಿಬ್ಬರ ಈ ಸಾಧನೆಗೆ ರಾಷ್ಟ್ರೀಯ ಕೋಚ್ ಪ್ರದೀಪ್ ಕುಮಾರ್ ಪ್ರಮುಖ ಕಾರಣ. ಇವರ ಮಾರ್ಗದರ್ಶನದಲ್ಲಿ ಈ ಹುಡುಗರು ತರಬೇತಿ ಪಡೆಯುತ್ತಿದ್ದಾರೆ. `ಆ್ಯರನ್ ಹಾಗೂ ಸಾಂಗ್ವೇಕರ್ ಕಠಿಣ ಪ್ರಯತ್ನ ಹಾಕುತ್ತಾರೆ. ಅವರ ಮೇಲೆ ನಾನು ಭರವಸೆ ಇಟ್ಟಿದ್ದೇನೆ. ಮತ್ತಷ್ಟು ಸಾಧನೆಯನ್ನು ಅವರಿಂದ ನಿರೀಕ್ಷಿಸುತ್ತೇನೆ~ ಎಂದು ಪ್ರದೀಪ್ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> `ಈಗ ಇವರೆಲ್ಲಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಟೂರ್ನಿಗೆ ಮುನ್ನ ಕಠಿಣ ಅಭ್ಯಾಸ ನಡೆಸಿದ್ದರು. ಇವರೀಗ `ಬಿ~ ದರ್ಜೆಯ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ಸ್ಗೆ ಇನ್ನೂ ಸಮಯವಿದೆ. ಅಷ್ಟರಲ್ಲಿ ತಮ್ಮ ಸಮಯವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಅವಕಾಶವಿದೆ. ನಾವಿನ್ನೂ ಹಲವು ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ~ ಎಂದು ಅವರು ನುಡಿಯುತ್ತಾರೆ. <br /> <br /> ಇಂತಹವೊಂದು ಯಶಸ್ಸಿನ ಅಲೆ ಎಬ್ಬಿಸಲು ಕಾರಣವಾಗಿರುವುದು ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಕ್ರೀಡಾ ಚಟುವಟಿಕೆಗಳು. ದೇಶದ ಪ್ರಸಿದ್ಧ ಈಜು ಕೇಂದ್ರಗಳಲ್ಲಿ ಒಂದೆನಿಸಿರುವ `ಬಿಎಸಿ~ ಈ ವರ್ಷ 25ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದೆ. <br /> <br /> ಈ ಸಂದರ್ಭದಲ್ಲಿ ಈ ಕೇಂದ್ರಕ್ಕೆ ಮತ್ತಷ್ಟು ಮೆರುಗು ಬಂದಿದೆ. ಕಾರಣ ಈ ಕೇಂದ್ರದ ಆ್ಯರನ್ ಹಾಗೂ ಸಾಂಗ್ವೇಕರ್ ಅವರ ಸಾಧನೆ. ಈ ಕೇಂದ್ರದ ಈಜುಪಟುಗಳಾದ ನಿಶಾ ಮಿಲೆಟ್ ಹಾಗೂ ರೆಹಾನ್ ಪೂಂಚಾ ಕೂಡ ಈ ಹಿಂದೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರು. <br /> ಈಜುವಿನ ಮೇಲಿನ ಆಸಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಈ ಕೇಂದ್ರವೇ ಸಾಕ್ಷಿ. ಈ ಕೇಂದ್ರದ ಮುಖ್ಯ ಕೋಚ್ ಪ್ರದೀಪ್. <br /> <br /> ಇವತ್ತು ಬೆಂಗಳೂರಿನಲ್ಲಿರುವಷ್ಟು ಸೌಲಭ್ಯ ಭಾರತದ ಮತ್ತೊಂದು ನಗರದಲ್ಲಿಲ್ಲ. ಹಾಗಾಗಿ ಈಜುಪಟುಗಳು ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿರುವ ಕೋಚಿಂಗ್ ಶೈಲಿಯನ್ನು ಮತ್ತೊಂದು ರಾಜ್ಯದಲ್ಲಿ ಕಾಣಲು ಅಸಾಧ್ಯ. <br /> <br /> ಪೋಷಕರು ಕೂಡ ಈಜುವಿನತ್ತ ಹೆಚ್ಚು ಗಮನ ಹರಿಸಲು ತಮ್ಮ ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ. ಶಿಬಿರಕ್ಕೆಂದು ಬೇರೆ ಬೇರೆ ಜಿಲ್ಲೆಗಳಿಂದಲೂ ಮಕ್ಕಳನ್ನು ಉದ್ಯಾನ ನಗರಿಗೆ ಕಳುಹಿಸಿ ಕೊಡುತ್ತಿದ್ದಾರೆ. <br /> <br /> `ಈಜು ಕ್ರೀಡೆಯಲ್ಲಿ ರಾಷ್ಟ್ರಕ್ಕೆ ಈ ಕೇಂದ್ರ ಅಪಾರ ಕೊಡುಗೆ ನೀಡಿದೆ. ನಾನು ಬಿಎಸಿಯೊಂದಿಗೆ ಬೆಳೆಯುತ್ತಿದ್ದೇನೆ~ ಎಂದು ಪ್ರದೀಪ್ ಹೆಮ್ಮೆಯಿಂದ ಹೇಳುತ್ತಾರೆ.<br /> ಜುಲೈ 27ರಂದು ಆರಂಭವಾಗಲಿರುವ ಲಂಡನ್ ಒಲಿಂಪಿಕ್ಸ್ಗೆ ಭಾರತದಿಂದ ಇದುವರೆಗೆ ನಾಲ್ಕು ಮಂದಿ ಈಜುಪಟುಗಳು ಅರ್ಹತೆ ಗಿಟ್ಟಿಸಿದ್ದಾರೆ.<br /> <br /> ಇನ್ನಿಬ್ಬರೆಂದರೆ ವೀರ್ಧವಳ್ ಖಾಡೆ (50 ಮೀ. ಹಾಗೂ 100 ಮೀ. ಫ್ರೀಸ್ಟೈಲ್) ಮತ್ತು ಸಂದೀಪ್ ಸೆಜ್ವಾಲ್ (100 ಮೀ. ಹಾಗೂ 200 ಮೀ. ಬ್ರೆಸ್ಟ್ ಸ್ಟ್ರೋಕ್). ಖಾಡೆ ಹಾಗೂ ಸೆಜ್ವಾಲ್ ಕೂಡ ಪ್ರದೀಪ್ ಮಾರ್ಗದರ್ಶನದಲ್ಲಿ ಬಿಎಸಿಯಲ್ಲಿ ಒಲಿಂಪಿಕ್ಸ್ಗಾಗಿ ತರಬೇತಿ ನಿರತರಾಗಿದ್ದಾರೆ. ಆದರೆ ಈ ನಾಲ್ಕೂ ಮಂದಿ `ಎ~ ದರ್ಜೆಯ ಅರ್ಹತಾ ಮಟ್ಟ ತಲುಪಬೇಕಾಗಿದೆ. <br /> <br /> ಅಂತರರಾಷ್ಟ್ರೀಯ ಈಜು ಸಂಸ್ಥೆ `ಫಿನಾ~ ಲಂಡನ್ ಒಲಿಂಪಿಕ್ಸ್ಗೆ ಒಟ್ಟು 900 ಈಜುಪಟುಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ಹಾಗಾಗಿ `ಬಿ~ ದರ್ಜೆ ಅರ್ಹತೆ ಗಿಟ್ಟಿಸಿರುವ ಭಾರತದ ಈಜುಪಟುಗಳು ಒಲಿಂಪಿಕ್ಸ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜುಲೈನವರೆಗೆ ಕಾಯಬೇಕು. <br /> <br /> ಅದರೊಳಗೆ `ಎ~ ದರ್ಜೆ ಅರ್ಹತೆ ಗಿಟ್ಟಿಸಿದರೆ ನೇರ ಪ್ರವೇಶ ಪಡೆಯಲಿದ್ದಾರೆ. ಹಾಗಾಗಿ ಇವರೆಲ್ಲಾ ಈಗ `ಎ~ ದರ್ಜೆಯ ಪ್ರವೇಶದ ಮೇಲೆ ಕಣ್ಣಿಟ್ಟಿದ್ದಾರೆ.ಅದೇನೇ ಇರಲಿ, ಈ ಹುಡುಗರ ಸಾಧನೆಗೆ ಶಹಬ್ಬಾಸ್ ಹೇಳಲೇಬೇಕು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಣಕಾಸಿನ ಸಮಸ್ಯೆ ಕಾರಣ ಈಜು ತೊರೆಯಲು ನಿರ್ಧರಿಸಿದ್ದನು ಈ ಹುಡುಗ...!<br /> ಏಕೆಂದರೆ ವಿದೇಶದಲ್ಲಿ ನಡೆಯಲಿರುವ ಚಾಂಪಿಯನ್ಷಿಪ್ಗಳಲ್ಲಿ ಪಾಲ್ಗೊಳ್ಳಲು ಈ ಹುಡುಗನಿಗೆ ಆರಂಭದ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಕಾರಣದಿಂದ ಬೇಸರಗೊಂಡು ಈಜು ಕ್ಷೇತ್ರದಿಂದಲೇ ದೂರ ಉಳಿಯಲು ತೀರ್ಮಾನಿಸಿದ್ದನು.<br /> <br /> ಆದರೆ ಈಜು ಸ್ಪರ್ಧಾ ಕ್ಷೇತ್ರದಲ್ಲಿನ ಆಸಕ್ತಿ ಹಾಗೂ ಪ್ರೀತಿ ಅದಕ್ಕೆ ಅವಕಾಶ ನೀಡಲಿಲ್ಲ. ಕಷ್ಟದ ಅಲೆಗಳ ವಿರುದ್ಧವೇ ಈಜಲು ಈ ಹುಡುಗ ಅಂದು ತೀರ್ಮಾನಿಸಿದ. ಇದು ಆರಂಭದ ದಿನಗಳಲ್ಲಿ 19ರ ಹರೆಯದ ಹುಡುಗನೊಬ್ಬ ಎದುರಿಸಿದ ಅತ್ಯಂತ ಕಷ್ಟದ ಕ್ಷಣಗಳು.<br /> <br /> ಆ ಕಷ್ಟಗಳ ಬೆನ್ನಟ್ಟಿ ಯಶಸ್ವಿಯಾದ ಅದೇ ಹುಡುಗ ಈಗ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದಾನೆ. ಈ ಮೂಲಕ ತಾನು ಕಂಡ ಕನಸನ್ನು ನಿಜ ಮಾಡಿದ್ದಾನೆ. ಆತನ ಹೆಸರು ಆ್ಯರನ್ ಡಿಸೋಜಾ. <br /> <br /> ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಪ್ರತಿಯೊಬ್ಬ ಹುಡುಗರ ಕನಸು. ಇದು ಪೋಷಕರ ಆಸೆ ಕೂಡ. ಅದರಲ್ಲೂ ಒಲಿಂಪಿಕ್ಸ್ನಂಥ ಉನ್ನತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮತ್ತೊಂದು ಅದ್ಭುತ ಕ್ಷಣ ಯಾವುದಿದೆ ಹೇಳಿ?<br /> <br /> ಹೌದು, ಪ್ರತಿಭಾವಂತ ಈಜುಪಟು ಕರ್ನಾಟಕದ ಆ್ಯರನ್ ಲಂಡನ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ವಿಶೇಷವೆಂದರೆ ಈ ಕ್ಷಣವನ್ನು ಆ್ಯರನ್ ಅವರ ತಂದೆ ಕೂಡ ಕಣ್ತುಂಬಿಕೊಂಡರು. ಇಬ್ಬರ ಪಾಲಿಗೂ ಕನಸು ನನಸಾದ ಖುಷಿ. 43ನೇ ಸಿಂಗಪುರ ರಾಷ್ಟ್ರೀಯ ಏಜ್ ಗ್ರೂಪ್ ಈಜು ಚಾಂಪಿಯನ್ಷಿಪ್ನ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಅವರು ಗಮನಾರ್ಹ ಪ್ರದರ್ಶನ ತೋರಿ ಈ ಸಾಧನೆ ಮಾಡಿದ್ದಾರೆ. <br /> <br /> ಬಸವನಗುಡಿ ಈಜು ಕೇಂದ್ರ (ಬಿಎಸಿ)ದಲ್ಲಿ ತರಬೇತಿ ಪಡೆಯುತ್ತಿರುವ ಡಿಸೋಜಾ ಈ ದೂರವನ್ನು 1 ನಿಮಿಷ 50.89 ಸೆಕೆಂಡ್ಗಳಲ್ಲಿ ತಲುಪಿದರು. ಈ ಮೂಲಕ ಒಲಿಂಪಿಕ್ಸ್ನ `ಬಿ~ ದರ್ಜೆಯ ಅರ್ಹತಾ ಮಟ್ಟ (ಒಲಿಂಪಿಕ್ಸ್ ಆಹ್ವಾನ ಸಮಯ) ಮುಟ್ಟಿದರು.<br /> <br /> `ಈ ಸಾಧನೆ ಮಾಡಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಆದರೆ ಮತ್ತಷ್ಟು ಕಠಿಣ ಪ್ರಯತ್ನ ಹಾಕಬೇಕಾಗಿದೆ. ಈ ಸಾಧನೆಗೆ ಕೋಚ್ ಪ್ರದೀಪ್ ಹಾಗೂ ಪೋಷಕರು ಕಾರಣ~ ಎಂದು ಆ್ಯರನ್ ಪ್ರತಿಕ್ರಿಯಿಸಿದ್ದಾರೆ. ಬಿಎಸಿನಲ್ಲಿ ತರಬೇತಿ ಪಡೆಯುತ್ತಿರುವ ಸೌರಭ್ ಸಾಂಗ್ವೇಕರ್ ಕೂಡ 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಅವರಿಗಿನ್ನೂ 17 ವರ್ಷ.<br /> <br /> ವಿಶೇಷವೆಂದರೆ ಇವರಿಬ್ಬರ ಈ ಸಾಧನೆಗೆ ರಾಷ್ಟ್ರೀಯ ಕೋಚ್ ಪ್ರದೀಪ್ ಕುಮಾರ್ ಪ್ರಮುಖ ಕಾರಣ. ಇವರ ಮಾರ್ಗದರ್ಶನದಲ್ಲಿ ಈ ಹುಡುಗರು ತರಬೇತಿ ಪಡೆಯುತ್ತಿದ್ದಾರೆ. `ಆ್ಯರನ್ ಹಾಗೂ ಸಾಂಗ್ವೇಕರ್ ಕಠಿಣ ಪ್ರಯತ್ನ ಹಾಕುತ್ತಾರೆ. ಅವರ ಮೇಲೆ ನಾನು ಭರವಸೆ ಇಟ್ಟಿದ್ದೇನೆ. ಮತ್ತಷ್ಟು ಸಾಧನೆಯನ್ನು ಅವರಿಂದ ನಿರೀಕ್ಷಿಸುತ್ತೇನೆ~ ಎಂದು ಪ್ರದೀಪ್ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> `ಈಗ ಇವರೆಲ್ಲಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಟೂರ್ನಿಗೆ ಮುನ್ನ ಕಠಿಣ ಅಭ್ಯಾಸ ನಡೆಸಿದ್ದರು. ಇವರೀಗ `ಬಿ~ ದರ್ಜೆಯ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ಸ್ಗೆ ಇನ್ನೂ ಸಮಯವಿದೆ. ಅಷ್ಟರಲ್ಲಿ ತಮ್ಮ ಸಮಯವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಅವಕಾಶವಿದೆ. ನಾವಿನ್ನೂ ಹಲವು ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ~ ಎಂದು ಅವರು ನುಡಿಯುತ್ತಾರೆ. <br /> <br /> ಇಂತಹವೊಂದು ಯಶಸ್ಸಿನ ಅಲೆ ಎಬ್ಬಿಸಲು ಕಾರಣವಾಗಿರುವುದು ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಕ್ರೀಡಾ ಚಟುವಟಿಕೆಗಳು. ದೇಶದ ಪ್ರಸಿದ್ಧ ಈಜು ಕೇಂದ್ರಗಳಲ್ಲಿ ಒಂದೆನಿಸಿರುವ `ಬಿಎಸಿ~ ಈ ವರ್ಷ 25ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದೆ. <br /> <br /> ಈ ಸಂದರ್ಭದಲ್ಲಿ ಈ ಕೇಂದ್ರಕ್ಕೆ ಮತ್ತಷ್ಟು ಮೆರುಗು ಬಂದಿದೆ. ಕಾರಣ ಈ ಕೇಂದ್ರದ ಆ್ಯರನ್ ಹಾಗೂ ಸಾಂಗ್ವೇಕರ್ ಅವರ ಸಾಧನೆ. ಈ ಕೇಂದ್ರದ ಈಜುಪಟುಗಳಾದ ನಿಶಾ ಮಿಲೆಟ್ ಹಾಗೂ ರೆಹಾನ್ ಪೂಂಚಾ ಕೂಡ ಈ ಹಿಂದೆ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡಿದ್ದರು. <br /> ಈಜುವಿನ ಮೇಲಿನ ಆಸಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಈ ಕೇಂದ್ರವೇ ಸಾಕ್ಷಿ. ಈ ಕೇಂದ್ರದ ಮುಖ್ಯ ಕೋಚ್ ಪ್ರದೀಪ್. <br /> <br /> ಇವತ್ತು ಬೆಂಗಳೂರಿನಲ್ಲಿರುವಷ್ಟು ಸೌಲಭ್ಯ ಭಾರತದ ಮತ್ತೊಂದು ನಗರದಲ್ಲಿಲ್ಲ. ಹಾಗಾಗಿ ಈಜುಪಟುಗಳು ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿರುವ ಕೋಚಿಂಗ್ ಶೈಲಿಯನ್ನು ಮತ್ತೊಂದು ರಾಜ್ಯದಲ್ಲಿ ಕಾಣಲು ಅಸಾಧ್ಯ. <br /> <br /> ಪೋಷಕರು ಕೂಡ ಈಜುವಿನತ್ತ ಹೆಚ್ಚು ಗಮನ ಹರಿಸಲು ತಮ್ಮ ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ. ಶಿಬಿರಕ್ಕೆಂದು ಬೇರೆ ಬೇರೆ ಜಿಲ್ಲೆಗಳಿಂದಲೂ ಮಕ್ಕಳನ್ನು ಉದ್ಯಾನ ನಗರಿಗೆ ಕಳುಹಿಸಿ ಕೊಡುತ್ತಿದ್ದಾರೆ. <br /> <br /> `ಈಜು ಕ್ರೀಡೆಯಲ್ಲಿ ರಾಷ್ಟ್ರಕ್ಕೆ ಈ ಕೇಂದ್ರ ಅಪಾರ ಕೊಡುಗೆ ನೀಡಿದೆ. ನಾನು ಬಿಎಸಿಯೊಂದಿಗೆ ಬೆಳೆಯುತ್ತಿದ್ದೇನೆ~ ಎಂದು ಪ್ರದೀಪ್ ಹೆಮ್ಮೆಯಿಂದ ಹೇಳುತ್ತಾರೆ.<br /> ಜುಲೈ 27ರಂದು ಆರಂಭವಾಗಲಿರುವ ಲಂಡನ್ ಒಲಿಂಪಿಕ್ಸ್ಗೆ ಭಾರತದಿಂದ ಇದುವರೆಗೆ ನಾಲ್ಕು ಮಂದಿ ಈಜುಪಟುಗಳು ಅರ್ಹತೆ ಗಿಟ್ಟಿಸಿದ್ದಾರೆ.<br /> <br /> ಇನ್ನಿಬ್ಬರೆಂದರೆ ವೀರ್ಧವಳ್ ಖಾಡೆ (50 ಮೀ. ಹಾಗೂ 100 ಮೀ. ಫ್ರೀಸ್ಟೈಲ್) ಮತ್ತು ಸಂದೀಪ್ ಸೆಜ್ವಾಲ್ (100 ಮೀ. ಹಾಗೂ 200 ಮೀ. ಬ್ರೆಸ್ಟ್ ಸ್ಟ್ರೋಕ್). ಖಾಡೆ ಹಾಗೂ ಸೆಜ್ವಾಲ್ ಕೂಡ ಪ್ರದೀಪ್ ಮಾರ್ಗದರ್ಶನದಲ್ಲಿ ಬಿಎಸಿಯಲ್ಲಿ ಒಲಿಂಪಿಕ್ಸ್ಗಾಗಿ ತರಬೇತಿ ನಿರತರಾಗಿದ್ದಾರೆ. ಆದರೆ ಈ ನಾಲ್ಕೂ ಮಂದಿ `ಎ~ ದರ್ಜೆಯ ಅರ್ಹತಾ ಮಟ್ಟ ತಲುಪಬೇಕಾಗಿದೆ. <br /> <br /> ಅಂತರರಾಷ್ಟ್ರೀಯ ಈಜು ಸಂಸ್ಥೆ `ಫಿನಾ~ ಲಂಡನ್ ಒಲಿಂಪಿಕ್ಸ್ಗೆ ಒಟ್ಟು 900 ಈಜುಪಟುಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ಹಾಗಾಗಿ `ಬಿ~ ದರ್ಜೆ ಅರ್ಹತೆ ಗಿಟ್ಟಿಸಿರುವ ಭಾರತದ ಈಜುಪಟುಗಳು ಒಲಿಂಪಿಕ್ಸ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜುಲೈನವರೆಗೆ ಕಾಯಬೇಕು. <br /> <br /> ಅದರೊಳಗೆ `ಎ~ ದರ್ಜೆ ಅರ್ಹತೆ ಗಿಟ್ಟಿಸಿದರೆ ನೇರ ಪ್ರವೇಶ ಪಡೆಯಲಿದ್ದಾರೆ. ಹಾಗಾಗಿ ಇವರೆಲ್ಲಾ ಈಗ `ಎ~ ದರ್ಜೆಯ ಪ್ರವೇಶದ ಮೇಲೆ ಕಣ್ಣಿಟ್ಟಿದ್ದಾರೆ.ಅದೇನೇ ಇರಲಿ, ಈ ಹುಡುಗರ ಸಾಧನೆಗೆ ಶಹಬ್ಬಾಸ್ ಹೇಳಲೇಬೇಕು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>