<p><strong>ಚನ್ನಗಿರಿ: </strong>ಪಟ್ಟಣದ ಸಂತೆ ಮೈದಾನದ ಸಮೀಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ತ್ರೀಶಕ್ತಿ ಭವನ ನಿರ್ಮಾಣಗೊಂಡು ಆರು ತಿಂಗಳು ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯವನ್ನು ಕಾಣದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ತಾಲ್ಲೂಕಿನ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಒಂದೆಡೆ ಸೇರಿ, ಸಭೆ-ಸಮಾರಂಭ ಮಾಡಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಈ ಭವನ ನಿರ್ಮಿಸಲಾಗಿದೆ. ಕಳೆದ ವರ್ಷ ರಾಜ್ಯ ವಲಯದಿಂದ ರೂ 15 ಲಕ್ಷ ಹಾಗೂ ಇಲಾಖೆ ವತಿಯಿಂದ ರೂ 3 ಲಕ್ಷ ಸೇರಿ ಒಟ್ಟು ರೂ 18 ಲಕ್ಷ ಅನುದಾನ ಮಂಜೂರಾಗಿತ್ತು. ಇದರ ಹಿಂದೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪ್ರಯತ್ನವಿತ್ತು.<br /> <br /> ನಿರ್ಮಾಣದ ಗುತ್ತಿಗೆಯನ್ನು ಭೂಸೇನಾ ನಿಗಮ ಪಡೆದುಕೊಂಡಿತ್ತು. ಈ ಭವನ ಈಗ ಅನೈತಿಕ ಚಟಿುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾಯಿತೆಂದರೆ ಸಾಕು ಇಲ್ಲಿ ಪುಂಡ, ಪೋಕರಿಗಳು ಜೂಜಾಟವಾಡುತ್ತಾರೆ. ಸರಿರಾತ್ರಿಯ ವೇಳೆ ಇನ್ನೂ ಹಲವಾರು ಅಸಹ್ಯಕರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಈ ಭವನದ ಕಿಟಕಿಯ ಗಾಜುಗಳನ್ನು ಕಿಡಿಗೇಡಿಗಳು ಪುಡಿ ಮಾಡಿ ಹಾಕಿದ್ದಾರೆ.<br /> <br /> ಭವನದ ಮುಂದೆ ಅಡಿಕೆ ಸುಲಿಯುತ್ತಾ, ಗೋಡೆಗಳಿಗೆ ಅಡಿಕೆ ಮೂಟೆಗಳನ್ನು ಪೇರಿಸಿರುವುದರಿಂದ ಗೋಡೆಗಳೆಲ್ಲಾ ಅಡಿಕೆ ಬಣ್ಣಕ್ಕೆ ತಿರುಗಿವೆ. ಆದ್ದರಿಂದ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿರುವ ಸ್ತ್ರೀಶಕ್ತಿ ಭವನವನ್ನು ಆದಷ್ಟು ಬೇಗ ಉದ್ಘಾಟಿಸಿ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕೆಂದು ಕರಿಯಪ್ಪ, ರಂಗಸ್ವಾಮಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ: </strong>ಪಟ್ಟಣದ ಸಂತೆ ಮೈದಾನದ ಸಮೀಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ತ್ರೀಶಕ್ತಿ ಭವನ ನಿರ್ಮಾಣಗೊಂಡು ಆರು ತಿಂಗಳು ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯವನ್ನು ಕಾಣದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ತಾಲ್ಲೂಕಿನ ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಒಂದೆಡೆ ಸೇರಿ, ಸಭೆ-ಸಮಾರಂಭ ಮಾಡಲು ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಈ ಭವನ ನಿರ್ಮಿಸಲಾಗಿದೆ. ಕಳೆದ ವರ್ಷ ರಾಜ್ಯ ವಲಯದಿಂದ ರೂ 15 ಲಕ್ಷ ಹಾಗೂ ಇಲಾಖೆ ವತಿಯಿಂದ ರೂ 3 ಲಕ್ಷ ಸೇರಿ ಒಟ್ಟು ರೂ 18 ಲಕ್ಷ ಅನುದಾನ ಮಂಜೂರಾಗಿತ್ತು. ಇದರ ಹಿಂದೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪ್ರಯತ್ನವಿತ್ತು.<br /> <br /> ನಿರ್ಮಾಣದ ಗುತ್ತಿಗೆಯನ್ನು ಭೂಸೇನಾ ನಿಗಮ ಪಡೆದುಕೊಂಡಿತ್ತು. ಈ ಭವನ ಈಗ ಅನೈತಿಕ ಚಟಿುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ರಾತ್ರಿಯಾಯಿತೆಂದರೆ ಸಾಕು ಇಲ್ಲಿ ಪುಂಡ, ಪೋಕರಿಗಳು ಜೂಜಾಟವಾಡುತ್ತಾರೆ. ಸರಿರಾತ್ರಿಯ ವೇಳೆ ಇನ್ನೂ ಹಲವಾರು ಅಸಹ್ಯಕರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಈ ಭವನದ ಕಿಟಕಿಯ ಗಾಜುಗಳನ್ನು ಕಿಡಿಗೇಡಿಗಳು ಪುಡಿ ಮಾಡಿ ಹಾಕಿದ್ದಾರೆ.<br /> <br /> ಭವನದ ಮುಂದೆ ಅಡಿಕೆ ಸುಲಿಯುತ್ತಾ, ಗೋಡೆಗಳಿಗೆ ಅಡಿಕೆ ಮೂಟೆಗಳನ್ನು ಪೇರಿಸಿರುವುದರಿಂದ ಗೋಡೆಗಳೆಲ್ಲಾ ಅಡಿಕೆ ಬಣ್ಣಕ್ಕೆ ತಿರುಗಿವೆ. ಆದ್ದರಿಂದ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ನಿರ್ಮಿಸಿರುವ ಸ್ತ್ರೀಶಕ್ತಿ ಭವನವನ್ನು ಆದಷ್ಟು ಬೇಗ ಉದ್ಘಾಟಿಸಿ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕೆಂದು ಕರಿಯಪ್ಪ, ರಂಗಸ್ವಾಮಿ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>