<p>`ನೈವೇದ್ಯ ಯಾರಿಗೆ~, `ದೇವಲೋಕದಲ್ಲಿ ಒಮ್ಮೆ~ ಮೊದಲಾದ ನೃತ್ಯರೂಪಕಗಳ ಧ್ವನಿಸುರುಳಿಯನ್ನು ಸಾಂಸ್ಕೃತಿಕ ಜಗತ್ತಿಗೆ ನೀಡಿರುವ `ಕಲಾಕುಂಜ~ದ ಅಧ್ಯಕ್ಷ ಎಸ್. ನಾಗಭೂಷಣ್ ಅವರಿಂದ ಮತ್ತೊಂದು ಧ್ವನಿಸುರುಳಿ `ಕೀಚಕ~ ಬಿಡುಗಡೆ ಸಮಾರಂಭ ಹಾಗೂ `ಕೀಚಕ~ ನೃತ್ಯ ರೂಪಕ ಬುಧವಾರ ಪ್ರದರ್ಶನಗೊಳ್ಳಲಿದೆ.<br /> <br /> `ಕೀಚಕ~ ಇದು ಟಿ.ಪಿ.ಕೈಲಾಸಂ ಅವರ ಕಲ್ಪನೆಯಲ್ಲಿ ಮೂಡಿಬಂದ ಕಥಾವಸ್ತು. ಜಿ.ಪಿ. ರಾಜರತ್ನಂ ಅದಕ್ಕೆ ನಾಟಕ ರೂಪ ಕೊಟ್ಟರು. ವಿನೂತನ ಮಾದರಿಯ ಈ ನಾಟಕವನ್ನು ಎಸ್. ನಾಗಭೂಷಣ್ ಅವರು ನೃತ್ಯರೂಪಕಕ್ಕೆ ತಂದಿದ್ದಾರೆ.<br /> <br /> ಮಹಾಭಾರತದ ವಿರಾಟಪರ್ವದಲ್ಲಿ ಬರುವ ಒಂದು ದೃಶ್ಯವೇ ಈ ನೃತ್ಯ ರೂಪಕದ ಕಥಾವಸ್ತು. ಪಾಂಡವರ ವನವಾಸದ ಕೊನೆಯ ಒಂದು ವರ್ಷದ ಅಜ್ಞಾತವಾಸದ ಅವಧಿಯಲ್ಲಿ ಪಾಂಡವರು ವಿರಾಟನಗರದಲ್ಲಿ ವಿರಾಟರಾಜನ ಆಶ್ರಯ ಪಡೆದಿರುತ್ತಾರೆ. <br /> <br /> ಕವಿ ಕೈಲಾಸಂ ಅವರ ಕಲ್ಪನಾ ಲೋಕದಲ್ಲಿ ಮೂಡಿಬಂದ ಕೀಚಕನು ಒಬ್ಬ ಪರಾಕ್ರಮಿ, ಭಾವುಕ, ನರ್ತನ ಚತುರ, ಸ್ತ್ರೀಯರ ಬಗ್ಗೆ ಅಪಾರ ಗೌರವ ಹೊಂದಿರುವ ವ್ಯಕ್ತಿ. ಇಡೀ ವಿರಾಟನಗರ ಅವನ ರಕ್ಷಾಕವಚದಲ್ಲಿ ಸುರಕ್ಷಿತವಾಗಿತ್ತು. <br /> <br /> ಅವಿವಾಹಿತನಾದ ಅವನು ದ್ರೌಪದಿಯ ಸ್ವಯಂವರ ಸಮಯದಲ್ಲಿ ಅಪ್ರತಿಮ ಸುಂದರಿಯಾದ ಪಾಂಚಾಲಿಯನ್ನು ಕಂಡು ಮೋಹಿತನಾಗಿ, ಸ್ವಯಂವರದಲ್ಲಿ ಅವಳು ದಕ್ಕದೇ ಹೋದಾಗ, ಅವಳ ಸೌಂದರ್ಯವನ್ನೇ ಮನದಲ್ಲಿ ನೆನೆಯುತ್ತಾ, ಅವಳನ್ನೇ ಆರಾಧಿಸುತ್ತಾ, ಇನ್ನಾವ ಸ್ತ್ರೀಯನ್ನೂ ಒಪ್ಪದೇ ಅವಿವಾಹಿತನಾಗಿಯೇ ಉಳಿದವ. <br /> <br /> ವಿರಾಟನಗರದಲ್ಲಿ ಅವನು ತಂಗಿ ಸುಧೇಷ್ಣೆಯ ಸೇವಕಿಯಾದ ಸೈರಂಧ್ರಿಯನ್ನು ನೋಡಿದಾಗ, ಅವಳನ್ನು ದ್ರೌಪದಿಯೆಂದೇ ಭ್ರಮಿಸಿ, ಅವಳ ರೂಪ ಲಾವಣ್ಯಕ್ಕೆ ಮಾರು ಹೋಗಿ, ಆರಾಧಿಸತೊಡಗುತ್ತಾನೆ. <br /> <br /> ಒಮ್ಮೆ ಸೈರಂಧ್ರಿಯು ಉದ್ಯಾನದಲ್ಲಿ ರಾತ್ರಿಯ ವೇಳೆ ಪತಿ ವಲಲನೊಡನೆ ಸಂಭಾಷಿಸುತ್ತಿರುವುದನ್ನು ನೋಡಿದ ಕೀಚಕನು, ಸೈರಂಧ್ರಿಯನ್ನು ಯಾರೋ ಪರ ಪುರುಷನು ಪೀಡಿಸುತ್ತಿದ್ದಾನೆ ಎಂದು ಭಾವಿಸಿ, ಅವಳನ್ನು ರಕ್ಷಿಸಲು ವಲಲನೊಂದಿಗೆ ಹೋರಾಡಿ ಸಾವನ್ನಪ್ಪುತ್ತಾನೆ. ಇದು ಕೈಲಾಸಂ ಅವರ ಕಲ್ಪನೆಯ, ವಿಭಿನ್ನ ನೋಟದ ಕೀಚಕ.<br /> <br /> ಇಂದು ಸಂಜೆ 6ಕ್ಕೆ ಪ್ರಸ್ತುತಗೊಳ್ಳಲಿರುವ ಈ ನೃತ್ಯರೂಪಕದ ಸಾಹಿತ್ಯ ಮತ್ತು ಪರಿಕಲ್ಪನೆ ಎಸ್. ನಾಗಭೂಷಣ ರಾವ್ ಅವರದ್ದು. ಇಸ್ಮಾಯಿಲ್ ಗೋನಾಳ್ ಸಂಗೀತ ಸಂಯೊಜನೆ ಮಾಡಿದ್ದಾರೆ. <br /> <br /> <strong>ಸ್ಥಳ: ಎ ಡಿ ಎ ರಂಗಮಂದಿರ, ಜೆ.ಸಿ. ರಸ್ತೆ, <br /> ಮುಖ್ಯ ಅತಿಥಿಗಳು: ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ ಭಾರ್ಗವಿ ನಾರಾಯಣ್, ಖ್ಯಾತ ಕುಚಿಪುಡಿ ನೃತ್ಯ ಕಲಾವಿದೆ ವೀಣಾಮೂರ್ತಿ ವಿಜಯ್. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ನೈವೇದ್ಯ ಯಾರಿಗೆ~, `ದೇವಲೋಕದಲ್ಲಿ ಒಮ್ಮೆ~ ಮೊದಲಾದ ನೃತ್ಯರೂಪಕಗಳ ಧ್ವನಿಸುರುಳಿಯನ್ನು ಸಾಂಸ್ಕೃತಿಕ ಜಗತ್ತಿಗೆ ನೀಡಿರುವ `ಕಲಾಕುಂಜ~ದ ಅಧ್ಯಕ್ಷ ಎಸ್. ನಾಗಭೂಷಣ್ ಅವರಿಂದ ಮತ್ತೊಂದು ಧ್ವನಿಸುರುಳಿ `ಕೀಚಕ~ ಬಿಡುಗಡೆ ಸಮಾರಂಭ ಹಾಗೂ `ಕೀಚಕ~ ನೃತ್ಯ ರೂಪಕ ಬುಧವಾರ ಪ್ರದರ್ಶನಗೊಳ್ಳಲಿದೆ.<br /> <br /> `ಕೀಚಕ~ ಇದು ಟಿ.ಪಿ.ಕೈಲಾಸಂ ಅವರ ಕಲ್ಪನೆಯಲ್ಲಿ ಮೂಡಿಬಂದ ಕಥಾವಸ್ತು. ಜಿ.ಪಿ. ರಾಜರತ್ನಂ ಅದಕ್ಕೆ ನಾಟಕ ರೂಪ ಕೊಟ್ಟರು. ವಿನೂತನ ಮಾದರಿಯ ಈ ನಾಟಕವನ್ನು ಎಸ್. ನಾಗಭೂಷಣ್ ಅವರು ನೃತ್ಯರೂಪಕಕ್ಕೆ ತಂದಿದ್ದಾರೆ.<br /> <br /> ಮಹಾಭಾರತದ ವಿರಾಟಪರ್ವದಲ್ಲಿ ಬರುವ ಒಂದು ದೃಶ್ಯವೇ ಈ ನೃತ್ಯ ರೂಪಕದ ಕಥಾವಸ್ತು. ಪಾಂಡವರ ವನವಾಸದ ಕೊನೆಯ ಒಂದು ವರ್ಷದ ಅಜ್ಞಾತವಾಸದ ಅವಧಿಯಲ್ಲಿ ಪಾಂಡವರು ವಿರಾಟನಗರದಲ್ಲಿ ವಿರಾಟರಾಜನ ಆಶ್ರಯ ಪಡೆದಿರುತ್ತಾರೆ. <br /> <br /> ಕವಿ ಕೈಲಾಸಂ ಅವರ ಕಲ್ಪನಾ ಲೋಕದಲ್ಲಿ ಮೂಡಿಬಂದ ಕೀಚಕನು ಒಬ್ಬ ಪರಾಕ್ರಮಿ, ಭಾವುಕ, ನರ್ತನ ಚತುರ, ಸ್ತ್ರೀಯರ ಬಗ್ಗೆ ಅಪಾರ ಗೌರವ ಹೊಂದಿರುವ ವ್ಯಕ್ತಿ. ಇಡೀ ವಿರಾಟನಗರ ಅವನ ರಕ್ಷಾಕವಚದಲ್ಲಿ ಸುರಕ್ಷಿತವಾಗಿತ್ತು. <br /> <br /> ಅವಿವಾಹಿತನಾದ ಅವನು ದ್ರೌಪದಿಯ ಸ್ವಯಂವರ ಸಮಯದಲ್ಲಿ ಅಪ್ರತಿಮ ಸುಂದರಿಯಾದ ಪಾಂಚಾಲಿಯನ್ನು ಕಂಡು ಮೋಹಿತನಾಗಿ, ಸ್ವಯಂವರದಲ್ಲಿ ಅವಳು ದಕ್ಕದೇ ಹೋದಾಗ, ಅವಳ ಸೌಂದರ್ಯವನ್ನೇ ಮನದಲ್ಲಿ ನೆನೆಯುತ್ತಾ, ಅವಳನ್ನೇ ಆರಾಧಿಸುತ್ತಾ, ಇನ್ನಾವ ಸ್ತ್ರೀಯನ್ನೂ ಒಪ್ಪದೇ ಅವಿವಾಹಿತನಾಗಿಯೇ ಉಳಿದವ. <br /> <br /> ವಿರಾಟನಗರದಲ್ಲಿ ಅವನು ತಂಗಿ ಸುಧೇಷ್ಣೆಯ ಸೇವಕಿಯಾದ ಸೈರಂಧ್ರಿಯನ್ನು ನೋಡಿದಾಗ, ಅವಳನ್ನು ದ್ರೌಪದಿಯೆಂದೇ ಭ್ರಮಿಸಿ, ಅವಳ ರೂಪ ಲಾವಣ್ಯಕ್ಕೆ ಮಾರು ಹೋಗಿ, ಆರಾಧಿಸತೊಡಗುತ್ತಾನೆ. <br /> <br /> ಒಮ್ಮೆ ಸೈರಂಧ್ರಿಯು ಉದ್ಯಾನದಲ್ಲಿ ರಾತ್ರಿಯ ವೇಳೆ ಪತಿ ವಲಲನೊಡನೆ ಸಂಭಾಷಿಸುತ್ತಿರುವುದನ್ನು ನೋಡಿದ ಕೀಚಕನು, ಸೈರಂಧ್ರಿಯನ್ನು ಯಾರೋ ಪರ ಪುರುಷನು ಪೀಡಿಸುತ್ತಿದ್ದಾನೆ ಎಂದು ಭಾವಿಸಿ, ಅವಳನ್ನು ರಕ್ಷಿಸಲು ವಲಲನೊಂದಿಗೆ ಹೋರಾಡಿ ಸಾವನ್ನಪ್ಪುತ್ತಾನೆ. ಇದು ಕೈಲಾಸಂ ಅವರ ಕಲ್ಪನೆಯ, ವಿಭಿನ್ನ ನೋಟದ ಕೀಚಕ.<br /> <br /> ಇಂದು ಸಂಜೆ 6ಕ್ಕೆ ಪ್ರಸ್ತುತಗೊಳ್ಳಲಿರುವ ಈ ನೃತ್ಯರೂಪಕದ ಸಾಹಿತ್ಯ ಮತ್ತು ಪರಿಕಲ್ಪನೆ ಎಸ್. ನಾಗಭೂಷಣ ರಾವ್ ಅವರದ್ದು. ಇಸ್ಮಾಯಿಲ್ ಗೋನಾಳ್ ಸಂಗೀತ ಸಂಯೊಜನೆ ಮಾಡಿದ್ದಾರೆ. <br /> <br /> <strong>ಸ್ಥಳ: ಎ ಡಿ ಎ ರಂಗಮಂದಿರ, ಜೆ.ಸಿ. ರಸ್ತೆ, <br /> ಮುಖ್ಯ ಅತಿಥಿಗಳು: ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ ಭಾರ್ಗವಿ ನಾರಾಯಣ್, ಖ್ಯಾತ ಕುಚಿಪುಡಿ ನೃತ್ಯ ಕಲಾವಿದೆ ವೀಣಾಮೂರ್ತಿ ವಿಜಯ್. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>