<p><strong>ನವದೆಹಲಿ (ಪಿಟಿಐ):</strong> ಕಳೆದ ವಾರವಷ್ಟೇ ಮಂಡಿಸಲಾಗಿದ್ದ ರೈಲ್ವೆ ಬಜೆಟ್ನಲ್ಲಿ ಏರಿಸಲಾಗಿದ್ದ ವಿವಿಧ ದರ್ಜೆಯ ರೈಲ್ವೆ ಪ್ರಯಾಣ ದರವನ್ನು ಸರ್ಕಾರ ಇಳಿಸಿದೆ.<br /> <br /> ಜನರ ಜೇಬಿಗೆ ಇದು ಭಾರಿ ಹೊರೆಯಾಗಲಿದೆ ಎಂದು ಹೇಳಿದ ನೂತನ ರೈಲ್ವೆ ಸಚಿವ ಮುಕುಲ್ ರಾಯ್ ದರ ಇಳಿಕೆ ನಿರ್ಧಾರವನ್ನು ಗುರುವಾರ ಲೋಕಸಭೆಯಲ್ಲಿ ಪ್ರಕಟಿಸಿದರು.<br /> <br /> ಗ್ರಾಮೀಣ ಹಾಗೂ ನಗರ ಭಾಗಗಳ ರೈಲಿನ ಎರಡನೇ ದರ್ಜೆ ಪ್ರಯಾಣ ದರ, ಸ್ಲೀಪರ್, ಎ.ಸಿ. ಚೇರ್ ಕಾರ್ ಹಾಗೂ ಎ.ಸಿ. ತ್ರಿ-ಟಯರ್ ದರವನ್ನು ಇಳಿಸಲಾಗಿದೆ. <br /> <br /> ರೈಲ್ವೆ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಮುಕುಲ್ ರಾಯ್, ಇದರಿಂದಾಗಿ ಬಡವರು ಹಾಗೂ ಸಾಮಾನ್ಯರ ಜೇಬಿಗೆ ಭಾರಿ ಹೊರೆಯಾಗಲಿದೆ. ಎ.ಸಿ. ಚೇರ್ ಕಾರ್ ಹಾಗೂ ಎ.ಸಿ. ತ್ರಿ-ಟಯರ್ಗಳಲ್ಲಿ ಇತ್ತೀಚೆಗೆ ಮಧ್ಯಮವರ್ಗದವರು ಹೆಚ್ಚಾಗಿ ಪ್ರಯಾಣಿಸುತ್ತಿದ್ದು ಅದು ಅವರಿಗೆ ಆರ್ಥಿಕ ಹೊಡೆತ ನೀಡಲಿದೆ ಎಂದರು.<br /> <br /> ಆದರೆ, ಎ.ಸಿ-ಟು ಟೈರ್ ಹಾಗೂ ಎ.ಸಿ-ಫಸ್ಟ್ಕ್ಲಾಸ್ ಬೋಗಿಗೆ ಕ್ರಮವಾಗಿ ಕಿ.ಮೀ.ಗೆ 15 ಪೈಸೆ ಹಾಗೂ 30 ಪೈಸೆಯಂತೆ ಏರಿಸಿರುವ ದರವನ್ನು ಸರ್ಕಾರ ಇಳಿಸಿಲ್ಲ.<br /> <br /> ಇದಲ್ಲದೇ ರೈಲ್ವೆ ಮಂಡಳಿಯನ್ನು ವಿಸ್ತರಿಸುವ ದಿನೇಶ್ ತ್ರಿವೇದಿ ಅವರ ನಿರ್ಧಾರವನ್ನು ರದ್ದುಗೊಳಿಸುವುದಾಗಿ ರಾಯ್ ತಿಳಿಸಿದರು. ರೈಲ್ವೆ ದರ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ ಕುರಿತು ಪರಿಶೀಲಿಸಲು ಸಮಿತಿ ರಚಿಸುವ ತ್ರಿವೇದಿ ಪ್ರಸ್ತಾಪವನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಹೇಳಿದರು.<br /> <br /> ಸದನದ ಸದಸ್ಯರು ಕಳವಳ ವ್ಯಕ್ತಪಡಿಸಿದಂತೆ ಮಾನವರಹಿತ ಕ್ರಾಸಿಂಗ್ಗಳಲ್ಲಿ ಆಗುವ ಅಪಘಾತ ತಡೆಯಲು, ಸುರಕ್ಷತೆ ಕಾಪಾಡಲು ಹಾಗೂ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಶುಚಿತ್ವ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.<br /> <br /> ರಾಯ್ ಅವರ 20 ನಿಮಿಷಗಳ ಭಾಷಣದ ನಂತರ ಲೇಖಾನುದಾನಕ್ಕೆ ಸದನ ಅಂಗೀಕಾರ ನೀಡಿತು. ರೈಲ್ವೆ ಸಮನ್ವಯ ಸಮಿತಿಯ ಎರಡನೇ ವರದಿಯ ಶಿಫಾರಸುಗಳನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಕಳೆದ ವಾರವಷ್ಟೇ ಮಂಡಿಸಲಾಗಿದ್ದ ರೈಲ್ವೆ ಬಜೆಟ್ನಲ್ಲಿ ಏರಿಸಲಾಗಿದ್ದ ವಿವಿಧ ದರ್ಜೆಯ ರೈಲ್ವೆ ಪ್ರಯಾಣ ದರವನ್ನು ಸರ್ಕಾರ ಇಳಿಸಿದೆ.<br /> <br /> ಜನರ ಜೇಬಿಗೆ ಇದು ಭಾರಿ ಹೊರೆಯಾಗಲಿದೆ ಎಂದು ಹೇಳಿದ ನೂತನ ರೈಲ್ವೆ ಸಚಿವ ಮುಕುಲ್ ರಾಯ್ ದರ ಇಳಿಕೆ ನಿರ್ಧಾರವನ್ನು ಗುರುವಾರ ಲೋಕಸಭೆಯಲ್ಲಿ ಪ್ರಕಟಿಸಿದರು.<br /> <br /> ಗ್ರಾಮೀಣ ಹಾಗೂ ನಗರ ಭಾಗಗಳ ರೈಲಿನ ಎರಡನೇ ದರ್ಜೆ ಪ್ರಯಾಣ ದರ, ಸ್ಲೀಪರ್, ಎ.ಸಿ. ಚೇರ್ ಕಾರ್ ಹಾಗೂ ಎ.ಸಿ. ತ್ರಿ-ಟಯರ್ ದರವನ್ನು ಇಳಿಸಲಾಗಿದೆ. <br /> <br /> ರೈಲ್ವೆ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಮುಕುಲ್ ರಾಯ್, ಇದರಿಂದಾಗಿ ಬಡವರು ಹಾಗೂ ಸಾಮಾನ್ಯರ ಜೇಬಿಗೆ ಭಾರಿ ಹೊರೆಯಾಗಲಿದೆ. ಎ.ಸಿ. ಚೇರ್ ಕಾರ್ ಹಾಗೂ ಎ.ಸಿ. ತ್ರಿ-ಟಯರ್ಗಳಲ್ಲಿ ಇತ್ತೀಚೆಗೆ ಮಧ್ಯಮವರ್ಗದವರು ಹೆಚ್ಚಾಗಿ ಪ್ರಯಾಣಿಸುತ್ತಿದ್ದು ಅದು ಅವರಿಗೆ ಆರ್ಥಿಕ ಹೊಡೆತ ನೀಡಲಿದೆ ಎಂದರು.<br /> <br /> ಆದರೆ, ಎ.ಸಿ-ಟು ಟೈರ್ ಹಾಗೂ ಎ.ಸಿ-ಫಸ್ಟ್ಕ್ಲಾಸ್ ಬೋಗಿಗೆ ಕ್ರಮವಾಗಿ ಕಿ.ಮೀ.ಗೆ 15 ಪೈಸೆ ಹಾಗೂ 30 ಪೈಸೆಯಂತೆ ಏರಿಸಿರುವ ದರವನ್ನು ಸರ್ಕಾರ ಇಳಿಸಿಲ್ಲ.<br /> <br /> ಇದಲ್ಲದೇ ರೈಲ್ವೆ ಮಂಡಳಿಯನ್ನು ವಿಸ್ತರಿಸುವ ದಿನೇಶ್ ತ್ರಿವೇದಿ ಅವರ ನಿರ್ಧಾರವನ್ನು ರದ್ದುಗೊಳಿಸುವುದಾಗಿ ರಾಯ್ ತಿಳಿಸಿದರು. ರೈಲ್ವೆ ದರ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ ಕುರಿತು ಪರಿಶೀಲಿಸಲು ಸಮಿತಿ ರಚಿಸುವ ತ್ರಿವೇದಿ ಪ್ರಸ್ತಾಪವನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಹೇಳಿದರು.<br /> <br /> ಸದನದ ಸದಸ್ಯರು ಕಳವಳ ವ್ಯಕ್ತಪಡಿಸಿದಂತೆ ಮಾನವರಹಿತ ಕ್ರಾಸಿಂಗ್ಗಳಲ್ಲಿ ಆಗುವ ಅಪಘಾತ ತಡೆಯಲು, ಸುರಕ್ಷತೆ ಕಾಪಾಡಲು ಹಾಗೂ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಶುಚಿತ್ವ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.<br /> <br /> ರಾಯ್ ಅವರ 20 ನಿಮಿಷಗಳ ಭಾಷಣದ ನಂತರ ಲೇಖಾನುದಾನಕ್ಕೆ ಸದನ ಅಂಗೀಕಾರ ನೀಡಿತು. ರೈಲ್ವೆ ಸಮನ್ವಯ ಸಮಿತಿಯ ಎರಡನೇ ವರದಿಯ ಶಿಫಾರಸುಗಳನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>