<p><strong>ನವದೆಹಲಿ/ಲಂಡನ್ (ಪಿಟಿಐ):</strong> ಡಾ. ಸವಿತಾ ಹಾಲಪ್ಪನವರ ದುರಂತ ಸಾವಿನ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಈ ಘಟನೆಯು ಐರ್ಲೆಂಡ್ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಸ್ಥಳೀಯ ಸಂಸದೆ ಅಭಿಪ್ರಾಯಪಟ್ಟಿದ್ದರೆ, ಇತ್ತ ಸ್ವದೇಶದಲ್ಲಿ ಕೇಂದ್ರ ಸರ್ಕಾರವು ಆ ದೇಶದ ರಾಯಭಾರಿ ಅವರನ್ನು ಕರೆಯಿಸಿ ತನ್ನ ಆಘಾತ ದಾಖಲಿಸಿದೆ.<br /> <br /> ಸವಿತಾ ದುರಂತ ಸಾವಿನ ಘಟನೆ ಕುರಿತು ಐರ್ಲೆಂಡ್ ಸರ್ಕಾರದ ಜೊತೆ ಚರ್ಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.<br /> <br /> <strong>ರಾಯಭಾರಿ ಗಮನಕ್ಕೆ ಕಳವಳ: </strong>ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಅಕಾಲಿಕ, ಯಾತನಾಮಯ ಸಾವಿನ ಪ್ರಕರಣ ಕುರಿತು ಕೇಂದ್ರ ಸರ್ಕಾರವು ಶುಕ್ರವಾರ ಐರ್ಲೆಂಡ್ ರಾಯಭಾರಿ ಮೆಕ್ಲಾಗ್ಲಿನ್ ಅವರನ್ನು ಕರೆಯಿಸಿ ತನ್ನ ತೀವ್ರ ಕಳ ವಳ ಮತ್ತು ಆಕ್ರೋಶ ವ್ಯಕ್ತಪಡಿಸಿತು.<br /> <br /> ಯುವ ಜೀವವೊಂದು ಅಕಾಲಿಕ ಮರಣ ಹೊಂದಿರುವುದು ತುಂಬ ಬೇಸರ ಮೂಡಿಸಿದೆ ಎಂದು ರಾಯಭಾರಿ ಫೀಲಿಮ್ ಮೆಕ್ಲಾಗ್ಲಿನ್ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ವಿದೇಶಾಂಗ ವ್ಯವಹಾರ ಸಚಿವಾಲಯದ (ಪಶ್ಚಿಮ) ಕಾರ್ಯದರ್ಶಿ ಮಧುಸೂದನ್ ಗಣಪತಿ ಅವರು ಸರ್ಕಾರದ ಅಸಮಾಧಾನ ದಾಖಲಿಸಿದರು. <br /> <br /> ಸಾವಿನ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಗೆ ಐರ್ಲೆಂಡ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೆಕ್ ರಾಯಭಾರಿ ಭರವಸೆ ನೀಡಿದರು. ತನಿಖೆಯ ಪ್ರಗತಿಯ ಸಂಪೂರ್ಣ ಮಾಹಿತಿಗಳು ಡಬ್ಲಿನ್ನಲ್ಲಿನ ಭಾರತೀಯ ರಾಯಭಾರಿಗೆ ದೊರೆಯುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. <br /> <br /> ಐರ್ಲೆಂಡ್ನಲ್ಲಿನ ಭಾರತೀಯ ರಾಯಭಾರಿಯು, ಅಲ್ಲಿನ ಸರ್ಕಾರದೊಂದಿಗೂ ಮಾತುಕತೆ ನಡೆಸಿದ್ದಾರೆ.<br /> <br /> <strong>ಮಹಿಳಾ ಆಯೋಗ ಆಗ್ರಹ: </strong>ಭಾರತ ಸರ್ಕಾರವು ಈ ಬಗ್ಗೆ ಐರ್ಲೆಂಡ್ ಸರ್ಕಾರದ ಜತೆ ಚರ್ಚೆಗೆ ಮುಂದಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ. <br /> <br /> <strong>ಬಿಜೆಪಿ ಒತ್ತಾಯ: </strong>ಸವಿತಾ ಸಾವಿನ ಕುರಿತು ಎಲ್ಲೆಡೆ ಎದ್ದಿರುವ ಆಕ್ರೋಶದ ನಡುವೆ ಐರ್ಲೆಂಡ್ ರಾಯಭಾರಿ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ಸಂತ್ರಸ್ತ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸುವಂತೆ ಒತ್ತಾಯಿಸಿತು.<br /> <br /> ಆಸ್ಪತ್ರೆ ವೈದ್ಯಾಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ ನಿಯೋಗ, ಒಂದು ವೇಳೆ ಗರ್ಭಪಾತ ನಡೆದಿದ್ದಲ್ಲಿ ಸವಿತಾ ಬದುಕುಳಿಯುತ್ತಿದ್ದರು ಎಂದು ತಿಳಿಸಿತು.<br /> <br /> <strong>ಕಾನೂನುಬದ್ಧ ಗರ್ಭಪಾತಕ್ಕೆ ಕಾಯ್ದೆ:</strong> ಐರ್ಲೆಂಡ್ ಸಂಸದೆ (ಲಂಡನ್ ವರದಿ): ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ ಅವರ ದುರಂತ ಸಾವು ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಕಾನೂನು ಬದ್ಧ ಗರ್ಭಪಾತಕ್ಕೆ ಅಗತ್ಯವಾದ ಶಾಸನ ರೂಪಿಸಬೇಕು ಎಂದು ಐರ್ಲೆಂಡ್ ಸಂಸತ್ (ಸೆನೆಟ್) ಸದಸ್ಯೆ ಇವಾನಾ ಬ್ಯಾಕಿಕ್ ಹೇಳಿದ್ದಾರೆ.<br /> <br /> `ಐರಿಶ್ ಟೈಮ್ಸ~ ಪತ್ರಿಕೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಬ್ಯಾಕಿಕ್, `ಇನ್ನು ಮುಂದೆ ಇಂತಹ ನಿಷ್ಕ್ರಿಯತೆಗೆ ಅವಕಾಶ ಇರಬಾರದು. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಕಾನೂನು ಬದ್ಧ ಗರ್ಭಪಾತಕ್ಕೆ ಅಗತ್ಯ ಶಾಸನ ರಚಿಸಲು ವಿಫಲವಾಗಿವೆ. ಇದರಿಂದ ದೇಶದ ಮಹಿಳೆಯರು ಸಾಕಷ್ಟು ನಲುಗಿದ್ದಾರೆ. ಮಹಿಳೆಯರ ಈ ನೋವಿಗೆ ಮಂಗಳ ಹಾಡಲೇ ಬೇಕು~ ಎಂದಿದ್ದಾರೆ.<br /> <br /> `ಪತ್ನಿ ಕಳೆದುಕೊಂಡ ಪ್ರವೀಣ್ ಹಾಲಪ್ಪನವರ ಅವರಿಗೆ ಇಡೀ ರಾಷ್ಟ್ರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಕಾನೂನಿನಲ್ಲಿರುವ ಲೋಪದ ಬಗ್ಗೆ ದೇಶವ್ಯಾಪಿ ಆಕ್ರೋಶ ಭುಗಿಲೆದ್ದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಐರ್ಲೆಂಡ್ ತಲೆತಗ್ಗಿಸುವಂತಹ ಸನ್ನಿವೇಶ ಉಂಟಾಗಿದೆ. ಯುವ ಗೃಹಿಣಿಯ ಜೀವ ರಕ್ಷಿಸಲು ವಿಫಲವಾಗಿದ್ದು ನಿಜಕ್ಕೂ ಅವಮಾನಕರ~ ಎಂದು ಅವರು `ಐರಿಶ್ ಟೈಮ್ಸ~ನಲ್ಲಿ ಬರೆದಿದ್ದಾರೆ. `1983ರಲ್ಲಿ ಸಂವಿಧಾನಕ್ಕೆ ತಂದ ತಿದ್ದುಪಡಿಯೊಂದರಲ್ಲಿ ಗರ್ಭಿಣಿ ಮತ್ತು ಭ್ರೂಣ ಎರಡಕ್ಕೂ ಜೀವ ಇದೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಶಾಸನಕ್ಕೆ ಕ್ಯಾಥೊಲಿಕ್ ಚರ್ಚ್ಗಳ ಒತ್ತಾಸೆಯೂ ಇದೆ. 30 ವರ್ಷ ಕಳೆದರೂ ಈ ಕಾನೂನು ಜಾರಿಯಲ್ಲಿರುವುದು ಸೋಜಿಗ. ಗರ್ಭಪಾತದ ವಿಷಯದಲ್ಲಿ ದೇಶದ ಕಾನೂನು ಇನ್ನಾದರೂ ಸುಧಾರಣೆಗೊಳ್ಳಬೇಕಿದೆ~ ಎಂದಿದ್ದಾರೆ. <br /> <br /> <strong>`ಸವಿತಾರನ್ನು ಉಳಿಸಬಹುದಿತ್ತು~</strong><br /> ಸವಿತಾ ಅವರಿಗೆ ಅಗತ್ಯವಾಗಿದ್ದ ವೈದ್ಯಕೀಯ ಕಾರ್ಯ ವಿಧಾನ ಅನುಸರಿಸಿದ್ದರೆ ಅವರನ್ನು ಉಳಿಸಬಹುದಾಗಿತ್ತು ಎಂದು ಭಾರತೀಯ ಮೂಲದ ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.<br /> <br /> ವೈದ್ಯಕೀಯ ಸೇವೆಗಳ ಅಗತ್ಯಕ್ಕಿಂತಲೂ ಧಾರ್ಮಿಕ ಮನೋಭಾವಗಳು ಪ್ರಮುಖವಾಗುತ್ತಿದೆ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ವಿಷಾದಿಸಿದ್ದಾರೆ.<br /> <br /> ಸವಿತಾ ಹಾಲಪ್ಪನವರ ಅವರ ದುರಂತ ಸಾವಿನ ಬಗ್ಗೆ ಕೈಗೊಂಡಿರುವ ಎರಡು ತನಿಖೆಗಳು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲವು ಎಂದಿದ್ದಾರೆ.<br /> <strong><br /> ಕೇಂದ್ರಕ್ಕೆ</strong> <strong>ಸಿಎಂ ಪತ್ರ</strong><br /> (ಬೆಂಗಳೂರು ವರದಿ): ಸೂಕ್ತ ವೈದ್ಯಕೀಯ ನೆರವು ದೊರೆಯದೆ ಡಾ. ಸವಿತಾ ಹಾಲಪ್ಪನವರ ಅವರು ಸಾವನ್ನಪ್ಪಿದ ಘಟನೆ ಕುರಿತು ಐರ್ಲೆಂಡ್ ಸರ್ಕಾರದ ಜೊತೆ ಚರ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.<br /> <br /> ಸವಿತಾ ಅವರ ತಂದೆ ಅಂದಾನಪ್ಪ ಯಲಗಿ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಶೆಟ್ಟರ್, `ಭಾರತೀಯ ರಾಯಭಾರಿ ಮೂಲಕ ಐರ್ಲೆಂಡ್ ಸರ್ಕಾರದ ಜೊತೆ ಚರ್ಚೆ ನಡೆಸಲು ಕೇಂದ್ರವನ್ನು ಒತ್ತಾಯಿಸುತ್ತೇನೆ. ಈ ವಿಷಯದಲ್ಲಿ ನಿಮಗೆ ಅಗತ್ಯವಿರುವ ಎಲ್ಲ ನೆರವು ನೀಡಲು ಸರ್ಕಾರ ಸಿದ್ಧ~ ಎಂದು ಅವರು ತಿಳಿಸಿದ್ದಾರೆ.<br /> <br /> ಧಾರ್ಮಿಕ ಕಾರಣ ಮುಂದೊಡ್ಡಿದ ಐರಿಷ್ ವೈದ್ಯರು ಸೂಕ್ತ ಚಿಕಿತ್ಸೆ ನೀಡಲು ಮುಂದಾಗಲಿಲ್ಲ. ಇದರಿಂದಾಗಿ ಸವಿತಾ ಪ್ರಾಣ ತೆರಬೇಕಾಯಿತು. ಅವರ ಸಾವಿಗೆ ಕಾರಣವಾದ ಸಂಗತಿಗಳು ಆಘಾತ ಉಂಟುಮಾಡುತ್ತವೆ ಎಂದು ಮುಖ್ಯಮಂತ್ರಿಯವರು ಪತ್ರದಲ್ಲಿ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ/ಲಂಡನ್ (ಪಿಟಿಐ):</strong> ಡಾ. ಸವಿತಾ ಹಾಲಪ್ಪನವರ ದುರಂತ ಸಾವಿನ ವಿರುದ್ಧ ವಿಶ್ವದಾದ್ಯಂತ ಆಕ್ರೋಶ ಭುಗಿಲೆದ್ದಿರುವ ಬೆನ್ನಲ್ಲೇ, ಈ ಘಟನೆಯು ಐರ್ಲೆಂಡ್ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಸ್ಥಳೀಯ ಸಂಸದೆ ಅಭಿಪ್ರಾಯಪಟ್ಟಿದ್ದರೆ, ಇತ್ತ ಸ್ವದೇಶದಲ್ಲಿ ಕೇಂದ್ರ ಸರ್ಕಾರವು ಆ ದೇಶದ ರಾಯಭಾರಿ ಅವರನ್ನು ಕರೆಯಿಸಿ ತನ್ನ ಆಘಾತ ದಾಖಲಿಸಿದೆ.<br /> <br /> ಸವಿತಾ ದುರಂತ ಸಾವಿನ ಘಟನೆ ಕುರಿತು ಐರ್ಲೆಂಡ್ ಸರ್ಕಾರದ ಜೊತೆ ಚರ್ಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.<br /> <br /> <strong>ರಾಯಭಾರಿ ಗಮನಕ್ಕೆ ಕಳವಳ: </strong>ದಂತವೈದ್ಯೆ ಡಾ. ಸವಿತಾ ಹಾಲಪ್ಪನವರ ಅಕಾಲಿಕ, ಯಾತನಾಮಯ ಸಾವಿನ ಪ್ರಕರಣ ಕುರಿತು ಕೇಂದ್ರ ಸರ್ಕಾರವು ಶುಕ್ರವಾರ ಐರ್ಲೆಂಡ್ ರಾಯಭಾರಿ ಮೆಕ್ಲಾಗ್ಲಿನ್ ಅವರನ್ನು ಕರೆಯಿಸಿ ತನ್ನ ತೀವ್ರ ಕಳ ವಳ ಮತ್ತು ಆಕ್ರೋಶ ವ್ಯಕ್ತಪಡಿಸಿತು.<br /> <br /> ಯುವ ಜೀವವೊಂದು ಅಕಾಲಿಕ ಮರಣ ಹೊಂದಿರುವುದು ತುಂಬ ಬೇಸರ ಮೂಡಿಸಿದೆ ಎಂದು ರಾಯಭಾರಿ ಫೀಲಿಮ್ ಮೆಕ್ಲಾಗ್ಲಿನ್ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ವಿದೇಶಾಂಗ ವ್ಯವಹಾರ ಸಚಿವಾಲಯದ (ಪಶ್ಚಿಮ) ಕಾರ್ಯದರ್ಶಿ ಮಧುಸೂದನ್ ಗಣಪತಿ ಅವರು ಸರ್ಕಾರದ ಅಸಮಾಧಾನ ದಾಖಲಿಸಿದರು. <br /> <br /> ಸಾವಿನ ಪ್ರಕರಣ ಕುರಿತು ನಡೆಯುತ್ತಿರುವ ತನಿಖೆಗೆ ಐರ್ಲೆಂಡ್ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೆಕ್ ರಾಯಭಾರಿ ಭರವಸೆ ನೀಡಿದರು. ತನಿಖೆಯ ಪ್ರಗತಿಯ ಸಂಪೂರ್ಣ ಮಾಹಿತಿಗಳು ಡಬ್ಲಿನ್ನಲ್ಲಿನ ಭಾರತೀಯ ರಾಯಭಾರಿಗೆ ದೊರೆಯುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. <br /> <br /> ಐರ್ಲೆಂಡ್ನಲ್ಲಿನ ಭಾರತೀಯ ರಾಯಭಾರಿಯು, ಅಲ್ಲಿನ ಸರ್ಕಾರದೊಂದಿಗೂ ಮಾತುಕತೆ ನಡೆಸಿದ್ದಾರೆ.<br /> <br /> <strong>ಮಹಿಳಾ ಆಯೋಗ ಆಗ್ರಹ: </strong>ಭಾರತ ಸರ್ಕಾರವು ಈ ಬಗ್ಗೆ ಐರ್ಲೆಂಡ್ ಸರ್ಕಾರದ ಜತೆ ಚರ್ಚೆಗೆ ಮುಂದಾಗಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ ಆಗ್ರಹಿಸಿದೆ. <br /> <br /> <strong>ಬಿಜೆಪಿ ಒತ್ತಾಯ: </strong>ಸವಿತಾ ಸಾವಿನ ಕುರಿತು ಎಲ್ಲೆಡೆ ಎದ್ದಿರುವ ಆಕ್ರೋಶದ ನಡುವೆ ಐರ್ಲೆಂಡ್ ರಾಯಭಾರಿ ಅವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ, ಸಂತ್ರಸ್ತ ಕುಟುಂಬಕ್ಕೆ ಕೂಡಲೇ ನ್ಯಾಯ ಒದಗಿಸುವಂತೆ ಒತ್ತಾಯಿಸಿತು.<br /> <br /> ಆಸ್ಪತ್ರೆ ವೈದ್ಯಾಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ ನಿಯೋಗ, ಒಂದು ವೇಳೆ ಗರ್ಭಪಾತ ನಡೆದಿದ್ದಲ್ಲಿ ಸವಿತಾ ಬದುಕುಳಿಯುತ್ತಿದ್ದರು ಎಂದು ತಿಳಿಸಿತು.<br /> <br /> <strong>ಕಾನೂನುಬದ್ಧ ಗರ್ಭಪಾತಕ್ಕೆ ಕಾಯ್ದೆ:</strong> ಐರ್ಲೆಂಡ್ ಸಂಸದೆ (ಲಂಡನ್ ವರದಿ): ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ ಅವರ ದುರಂತ ಸಾವು ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಕಾನೂನು ಬದ್ಧ ಗರ್ಭಪಾತಕ್ಕೆ ಅಗತ್ಯವಾದ ಶಾಸನ ರೂಪಿಸಬೇಕು ಎಂದು ಐರ್ಲೆಂಡ್ ಸಂಸತ್ (ಸೆನೆಟ್) ಸದಸ್ಯೆ ಇವಾನಾ ಬ್ಯಾಕಿಕ್ ಹೇಳಿದ್ದಾರೆ.<br /> <br /> `ಐರಿಶ್ ಟೈಮ್ಸ~ ಪತ್ರಿಕೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಬ್ಯಾಕಿಕ್, `ಇನ್ನು ಮುಂದೆ ಇಂತಹ ನಿಷ್ಕ್ರಿಯತೆಗೆ ಅವಕಾಶ ಇರಬಾರದು. ಇದುವರೆಗೂ ಆಡಳಿತ ನಡೆಸಿದ ಸರ್ಕಾರಗಳು ಕಾನೂನು ಬದ್ಧ ಗರ್ಭಪಾತಕ್ಕೆ ಅಗತ್ಯ ಶಾಸನ ರಚಿಸಲು ವಿಫಲವಾಗಿವೆ. ಇದರಿಂದ ದೇಶದ ಮಹಿಳೆಯರು ಸಾಕಷ್ಟು ನಲುಗಿದ್ದಾರೆ. ಮಹಿಳೆಯರ ಈ ನೋವಿಗೆ ಮಂಗಳ ಹಾಡಲೇ ಬೇಕು~ ಎಂದಿದ್ದಾರೆ.<br /> <br /> `ಪತ್ನಿ ಕಳೆದುಕೊಂಡ ಪ್ರವೀಣ್ ಹಾಲಪ್ಪನವರ ಅವರಿಗೆ ಇಡೀ ರಾಷ್ಟ್ರ ಸಂತಾಪ ವ್ಯಕ್ತಪಡಿಸಿದೆ. ಜೊತೆಗೆ ಕಾನೂನಿನಲ್ಲಿರುವ ಲೋಪದ ಬಗ್ಗೆ ದೇಶವ್ಯಾಪಿ ಆಕ್ರೋಶ ಭುಗಿಲೆದ್ದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಐರ್ಲೆಂಡ್ ತಲೆತಗ್ಗಿಸುವಂತಹ ಸನ್ನಿವೇಶ ಉಂಟಾಗಿದೆ. ಯುವ ಗೃಹಿಣಿಯ ಜೀವ ರಕ್ಷಿಸಲು ವಿಫಲವಾಗಿದ್ದು ನಿಜಕ್ಕೂ ಅವಮಾನಕರ~ ಎಂದು ಅವರು `ಐರಿಶ್ ಟೈಮ್ಸ~ನಲ್ಲಿ ಬರೆದಿದ್ದಾರೆ. `1983ರಲ್ಲಿ ಸಂವಿಧಾನಕ್ಕೆ ತಂದ ತಿದ್ದುಪಡಿಯೊಂದರಲ್ಲಿ ಗರ್ಭಿಣಿ ಮತ್ತು ಭ್ರೂಣ ಎರಡಕ್ಕೂ ಜೀವ ಇದೆ ಎಂದು ವ್ಯಾಖ್ಯಾನಿಸಲಾಗಿದೆ. ಈ ಶಾಸನಕ್ಕೆ ಕ್ಯಾಥೊಲಿಕ್ ಚರ್ಚ್ಗಳ ಒತ್ತಾಸೆಯೂ ಇದೆ. 30 ವರ್ಷ ಕಳೆದರೂ ಈ ಕಾನೂನು ಜಾರಿಯಲ್ಲಿರುವುದು ಸೋಜಿಗ. ಗರ್ಭಪಾತದ ವಿಷಯದಲ್ಲಿ ದೇಶದ ಕಾನೂನು ಇನ್ನಾದರೂ ಸುಧಾರಣೆಗೊಳ್ಳಬೇಕಿದೆ~ ಎಂದಿದ್ದಾರೆ. <br /> <br /> <strong>`ಸವಿತಾರನ್ನು ಉಳಿಸಬಹುದಿತ್ತು~</strong><br /> ಸವಿತಾ ಅವರಿಗೆ ಅಗತ್ಯವಾಗಿದ್ದ ವೈದ್ಯಕೀಯ ಕಾರ್ಯ ವಿಧಾನ ಅನುಸರಿಸಿದ್ದರೆ ಅವರನ್ನು ಉಳಿಸಬಹುದಾಗಿತ್ತು ಎಂದು ಭಾರತೀಯ ಮೂಲದ ಬ್ರಿಟನ್ ಸಂಸದ ವೀರೇಂದ್ರ ಶರ್ಮಾ ಅಭಿಪ್ರಾಯ ಪಟ್ಟಿದ್ದಾರೆ.<br /> <br /> ವೈದ್ಯಕೀಯ ಸೇವೆಗಳ ಅಗತ್ಯಕ್ಕಿಂತಲೂ ಧಾರ್ಮಿಕ ಮನೋಭಾವಗಳು ಪ್ರಮುಖವಾಗುತ್ತಿದೆ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ವಿಷಾದಿಸಿದ್ದಾರೆ.<br /> <br /> ಸವಿತಾ ಹಾಲಪ್ಪನವರ ಅವರ ದುರಂತ ಸಾವಿನ ಬಗ್ಗೆ ಕೈಗೊಂಡಿರುವ ಎರಡು ತನಿಖೆಗಳು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲವು ಎಂದಿದ್ದಾರೆ.<br /> <strong><br /> ಕೇಂದ್ರಕ್ಕೆ</strong> <strong>ಸಿಎಂ ಪತ್ರ</strong><br /> (ಬೆಂಗಳೂರು ವರದಿ): ಸೂಕ್ತ ವೈದ್ಯಕೀಯ ನೆರವು ದೊರೆಯದೆ ಡಾ. ಸವಿತಾ ಹಾಲಪ್ಪನವರ ಅವರು ಸಾವನ್ನಪ್ಪಿದ ಘಟನೆ ಕುರಿತು ಐರ್ಲೆಂಡ್ ಸರ್ಕಾರದ ಜೊತೆ ಚರ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.<br /> <br /> ಸವಿತಾ ಅವರ ತಂದೆ ಅಂದಾನಪ್ಪ ಯಲಗಿ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಶೆಟ್ಟರ್, `ಭಾರತೀಯ ರಾಯಭಾರಿ ಮೂಲಕ ಐರ್ಲೆಂಡ್ ಸರ್ಕಾರದ ಜೊತೆ ಚರ್ಚೆ ನಡೆಸಲು ಕೇಂದ್ರವನ್ನು ಒತ್ತಾಯಿಸುತ್ತೇನೆ. ಈ ವಿಷಯದಲ್ಲಿ ನಿಮಗೆ ಅಗತ್ಯವಿರುವ ಎಲ್ಲ ನೆರವು ನೀಡಲು ಸರ್ಕಾರ ಸಿದ್ಧ~ ಎಂದು ಅವರು ತಿಳಿಸಿದ್ದಾರೆ.<br /> <br /> ಧಾರ್ಮಿಕ ಕಾರಣ ಮುಂದೊಡ್ಡಿದ ಐರಿಷ್ ವೈದ್ಯರು ಸೂಕ್ತ ಚಿಕಿತ್ಸೆ ನೀಡಲು ಮುಂದಾಗಲಿಲ್ಲ. ಇದರಿಂದಾಗಿ ಸವಿತಾ ಪ್ರಾಣ ತೆರಬೇಕಾಯಿತು. ಅವರ ಸಾವಿಗೆ ಕಾರಣವಾದ ಸಂಗತಿಗಳು ಆಘಾತ ಉಂಟುಮಾಡುತ್ತವೆ ಎಂದು ಮುಖ್ಯಮಂತ್ರಿಯವರು ಪತ್ರದಲ್ಲಿ ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>