<p>ಬಳ್ಳಾರಿ: ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದ ಬ್ಲೂಸ್ ಕ್ಲಬ್ ತಂಡವು ತಾಲ್ಲೂಕಿನ ಜಾನೆಕುಂಟೆ ಗ್ರಾಮದಲ್ಲಿ ಭಾನುವಾರ, ಸೇವಾಲಾಲ್ ಟ್ರಸ್ಟ್ ಏರ್ಪಡಿಸಿದ್ದ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.<br /> <br /> ಒಟ್ಟು 12 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬ್ಲೂಸ್ ಕ್ಲಬ್ ತಂಡ ಯರ್ರಂಗಳಿ ತಂಡವನ್ನು 23–18 ಪಾಯಿಂಟ್ಗಳಿಂದ ಸೋಲಿಸಿ ಪ್ರಶಸ್ತಿಯೊಂದಿಗೆ ಟ್ರೋಫಿ ಹಾಗೂ ₨ 3000 ನಗದು ಬಹುಮಾನ ಗಳಿಸಿತು.<br /> <br /> ಬಂಡಿಹಟ್ಟಿ ತಂಡದ ಷಣ್ಮುಖ, ಮೌನೇಶ, ಪ್ರಕಾಶ ಯಾದವ್, ಯರ್ರಂಗಳಿ ತಂಡದ ಪುರುಷೋತ್ತಮ ಹಾಗೂ ಗೋವಿಂದ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.<br /> <br /> ಸೆಮಿಫೈನಲ್ನಲ್ಲಿ ಬ್ಲೂಸ್ ತಂಡವು ಕುಡತಿನಿ ತಂಡವನ್ನು, ಯರ್ರಂಗಳಿ ತಂಡವು ಕಂಪ್ಲಿ ತಂಡವನ್ನು ಸೋಲಿಸಿದ್ದವು. ಗ್ರಾಮದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ನಡೆದ ಪಂದ್ಯಾವಳಿಯನ್ನು ಗ್ರಾಮಸ್ಥರು, ಯುವಕರು, ಗ್ರಾಮ ಪಂಚಾಯಿತಿ ಸದಸ್ಯರು ವೀಕ್ಷಿಸಿ ಪ್ರೋತ್ಸಾಹ ನೀಡಿದರು. ಇಬ್ರಾಹಿಂಪುರ, ಬಳ್ಳಾರಿಯ ಇತರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳ್ಳಾರಿ: ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದ ಬ್ಲೂಸ್ ಕ್ಲಬ್ ತಂಡವು ತಾಲ್ಲೂಕಿನ ಜಾನೆಕುಂಟೆ ಗ್ರಾಮದಲ್ಲಿ ಭಾನುವಾರ, ಸೇವಾಲಾಲ್ ಟ್ರಸ್ಟ್ ಏರ್ಪಡಿಸಿದ್ದ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.<br /> <br /> ಒಟ್ಟು 12 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಬ್ಲೂಸ್ ಕ್ಲಬ್ ತಂಡ ಯರ್ರಂಗಳಿ ತಂಡವನ್ನು 23–18 ಪಾಯಿಂಟ್ಗಳಿಂದ ಸೋಲಿಸಿ ಪ್ರಶಸ್ತಿಯೊಂದಿಗೆ ಟ್ರೋಫಿ ಹಾಗೂ ₨ 3000 ನಗದು ಬಹುಮಾನ ಗಳಿಸಿತು.<br /> <br /> ಬಂಡಿಹಟ್ಟಿ ತಂಡದ ಷಣ್ಮುಖ, ಮೌನೇಶ, ಪ್ರಕಾಶ ಯಾದವ್, ಯರ್ರಂಗಳಿ ತಂಡದ ಪುರುಷೋತ್ತಮ ಹಾಗೂ ಗೋವಿಂದ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.<br /> <br /> ಸೆಮಿಫೈನಲ್ನಲ್ಲಿ ಬ್ಲೂಸ್ ತಂಡವು ಕುಡತಿನಿ ತಂಡವನ್ನು, ಯರ್ರಂಗಳಿ ತಂಡವು ಕಂಪ್ಲಿ ತಂಡವನ್ನು ಸೋಲಿಸಿದ್ದವು. ಗ್ರಾಮದ ಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ನಡೆದ ಪಂದ್ಯಾವಳಿಯನ್ನು ಗ್ರಾಮಸ್ಥರು, ಯುವಕರು, ಗ್ರಾಮ ಪಂಚಾಯಿತಿ ಸದಸ್ಯರು ವೀಕ್ಷಿಸಿ ಪ್ರೋತ್ಸಾಹ ನೀಡಿದರು. ಇಬ್ರಾಹಿಂಪುರ, ಬಳ್ಳಾರಿಯ ಇತರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>