<p><strong>ವಿಶ್ವಸಂಸ್ಥೆ (ನ್ಯೂಯಾರ್ಕ್) (ಪಿಟಿಐ, ಐಎಎನ್ಎಸ್): </strong>21ನೇ ಶತಮಾನದ ಶಕ್ತಿಯುತ ರಾಷ್ಟ್ರವೆಂದು ಬಿಂಬಿತವಾಗಿರುವ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಗುರುವಾರ ಇಲ್ಲಿಗೆ ಆಗಮಿಸಿದರು. <br /> <br /> ಫ್ರಾಂಕ್ಫರ್ಟ್ನಿಂದ ಹೊರಟು ಇಲ್ಲಿಗೆ ಬಂದ ಉನ್ನತ ಮಟ್ಟದ ನಿಯೋಗದಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಮತ್ತು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಇದ್ದಾರೆ.<br /> <br /> ಶನಿವಾರ ಮಹಾಧಿವೇಶನದಲ್ಲಿ ಮಾತನಾಡಲಿರುವ ಸಿಂಗ್, ವಿಶ್ವಸಂಸ್ಥೆ ಭದ್ರತಾ ಮಂಡಲಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕೆಂದು ಒತ್ತಾಯಿಸಲಿದ್ದಾರೆ. <br /> <br /> ಜನವರಿಯಲ್ಲಿ ಭದ್ರತಾ ಮಂಡಲಿಯ ಕಾಯಂ ಸದಸ್ಯತ್ವ ಭಾರತಕ್ಕೆ ದೊರೆತ ನಂತರ ಜಾಗತಿಕ ಶಾಂತಿ ಸ್ಥಾಪನೆಗಾಗಿ ತಾನು ಮಾಡಿರುವ ಪ್ರಯತ್ನ ಹಾಗೂ ವಿಶ್ವಸಂಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಅವರು ಪ್ರಸ್ತಾಪಿಸಲಿದ್ದಾರೆ.<br /> <br /> ಭಯೋತ್ಪಾದನೆ ದಮನ, ಆರ್ಥಿಕ ಹಿಂಜರಿತ, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿನ ಪ್ರಕ್ಷುಬ್ಧತೆ ಇತ್ಯಾದಿಗಳ ಕುರಿತು ಮಹಾಧಿವೇಶನದಲ್ಲಿ ಚರ್ಚೆ ನಡೆಯಲಿದೆ. <br /> <br /> ಇರಾನ್, ದಕ್ಷಿಣ ಸೂಡಾನ್, ಶ್ರೀ ಲಂಕಾ ರಾಷ್ಟ್ರದ ಅಧ್ಯಕ್ಷರೊಂದಿಗೆ ಹಾಗೂ ಜಪಾನ್, ನೇಪಾಳದ ಪ್ರಧಾನಿಗಳ ಜತೆ ಈ ಸಂದರ್ಭದಲ್ಲಿ ಮನಮೋಹನ್ ಮಾತುಕತೆ ನಡೆಸುವರು. ಆದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮನಮೋಹನ್ ಯಾವುದೇ ಚರ್ಚೆ ನಡೆಸುವುದಿಲ್ಲ. <br /> <br /> ವಿಶ್ವಸಂಸ್ಥೆಯನ್ನು ಪಕ್ಷಪಾತರಹಿತ, ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ವ್ಯವಸ್ಥೆ ಎಂದು ಭಾವಿಸುವ ಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ನಾನು ಒತ್ತು ನೀಡುತ್ತೇನೆ. ವಿಶೇಷವಾಗಿ ಭದ್ರತಾ ಮಂಡಲಿಯ ವಿಸ್ತರಣೆಯ ಬಗ್ಗೆ ಆದ್ಯತೆ ಮೇಲೆ ಪ್ರಸ್ತಾಪಿಸುತ್ತೇನೆ~ ಎಂದು ಐದು ದಿನಗಳ ಭೇಟಿಗೆ ಹೊರಡುವ ಮುನ್ನ ನವದೆಹಲಿಯಲ್ಲಿ ಸಿಂಗ್ ಹೇಳಿದ್ದರು.<br /> <br /> ಜಾಗತಿಕ ಮಟ್ಟದಲ್ಲಿ ಕಂಡುಬರುತ್ತಿರುವ ಆರ್ಥಿಕ ಹಿಂಜರಿತ, ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಎದ್ದಿರುವ ದಂಗೆಗಳ ಬಗ್ಗೆ ಕೂಡ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ (ನ್ಯೂಯಾರ್ಕ್) (ಪಿಟಿಐ, ಐಎಎನ್ಎಸ್): </strong>21ನೇ ಶತಮಾನದ ಶಕ್ತಿಯುತ ರಾಷ್ಟ್ರವೆಂದು ಬಿಂಬಿತವಾಗಿರುವ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಪಾಲ್ಗೊಳ್ಳಲು ಗುರುವಾರ ಇಲ್ಲಿಗೆ ಆಗಮಿಸಿದರು. <br /> <br /> ಫ್ರಾಂಕ್ಫರ್ಟ್ನಿಂದ ಹೊರಟು ಇಲ್ಲಿಗೆ ಬಂದ ಉನ್ನತ ಮಟ್ಟದ ನಿಯೋಗದಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿ ಟಿ.ಕೆ.ಎ.ನಾಯರ್, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ ಮೆನನ್ ಮತ್ತು ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್ ಇದ್ದಾರೆ.<br /> <br /> ಶನಿವಾರ ಮಹಾಧಿವೇಶನದಲ್ಲಿ ಮಾತನಾಡಲಿರುವ ಸಿಂಗ್, ವಿಶ್ವಸಂಸ್ಥೆ ಭದ್ರತಾ ಮಂಡಲಿಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕೆಂದು ಒತ್ತಾಯಿಸಲಿದ್ದಾರೆ. <br /> <br /> ಜನವರಿಯಲ್ಲಿ ಭದ್ರತಾ ಮಂಡಲಿಯ ಕಾಯಂ ಸದಸ್ಯತ್ವ ಭಾರತಕ್ಕೆ ದೊರೆತ ನಂತರ ಜಾಗತಿಕ ಶಾಂತಿ ಸ್ಥಾಪನೆಗಾಗಿ ತಾನು ಮಾಡಿರುವ ಪ್ರಯತ್ನ ಹಾಗೂ ವಿಶ್ವಸಂಸ್ಥೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಅವರು ಪ್ರಸ್ತಾಪಿಸಲಿದ್ದಾರೆ.<br /> <br /> ಭಯೋತ್ಪಾದನೆ ದಮನ, ಆರ್ಥಿಕ ಹಿಂಜರಿತ, ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದಲ್ಲಿನ ಪ್ರಕ್ಷುಬ್ಧತೆ ಇತ್ಯಾದಿಗಳ ಕುರಿತು ಮಹಾಧಿವೇಶನದಲ್ಲಿ ಚರ್ಚೆ ನಡೆಯಲಿದೆ. <br /> <br /> ಇರಾನ್, ದಕ್ಷಿಣ ಸೂಡಾನ್, ಶ್ರೀ ಲಂಕಾ ರಾಷ್ಟ್ರದ ಅಧ್ಯಕ್ಷರೊಂದಿಗೆ ಹಾಗೂ ಜಪಾನ್, ನೇಪಾಳದ ಪ್ರಧಾನಿಗಳ ಜತೆ ಈ ಸಂದರ್ಭದಲ್ಲಿ ಮನಮೋಹನ್ ಮಾತುಕತೆ ನಡೆಸುವರು. ಆದರೆ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮನಮೋಹನ್ ಯಾವುದೇ ಚರ್ಚೆ ನಡೆಸುವುದಿಲ್ಲ. <br /> <br /> ವಿಶ್ವಸಂಸ್ಥೆಯನ್ನು ಪಕ್ಷಪಾತರಹಿತ, ವಿಶ್ವಾಸಾರ್ಹ ಹಾಗೂ ಪರಿಣಾಮಕಾರಿ ವ್ಯವಸ್ಥೆ ಎಂದು ಭಾವಿಸುವ ಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ನಾನು ಒತ್ತು ನೀಡುತ್ತೇನೆ. ವಿಶೇಷವಾಗಿ ಭದ್ರತಾ ಮಂಡಲಿಯ ವಿಸ್ತರಣೆಯ ಬಗ್ಗೆ ಆದ್ಯತೆ ಮೇಲೆ ಪ್ರಸ್ತಾಪಿಸುತ್ತೇನೆ~ ಎಂದು ಐದು ದಿನಗಳ ಭೇಟಿಗೆ ಹೊರಡುವ ಮುನ್ನ ನವದೆಹಲಿಯಲ್ಲಿ ಸಿಂಗ್ ಹೇಳಿದ್ದರು.<br /> <br /> ಜಾಗತಿಕ ಮಟ್ಟದಲ್ಲಿ ಕಂಡುಬರುತ್ತಿರುವ ಆರ್ಥಿಕ ಹಿಂಜರಿತ, ಪಶ್ಚಿಮ ಏಷ್ಯಾ, ಉತ್ತರ ಆಫ್ರಿಕಾ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಎದ್ದಿರುವ ದಂಗೆಗಳ ಬಗ್ಗೆ ಕೂಡ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>