<p><span style="font-size: 26px;"><strong>ಉತ್ತನೂರು ರಾಜಮ್ಮ ವೇದಿಕೆ (ಮುಳಬಾಗಲು):</strong> ಹಳೆಗನ್ನಡ ಕಾವ್ಯ ಓದಲು ಕಷ್ಟ ಎಂಬ ಅಭಿಪ್ರಾಯದ ನಡುವೆಯೇ ಅದು ತನ್ನ ಪ್ರಭಾವವನ್ನು ಆಧುನಿಕ ಸಂದರ್ಭದಲ್ಲೂ ಉಳಿಸಿಕೊಂಡಿದೆ ಎಂದು ಲೇಖಕ, ಅನುವಾದಕ ಸ.ರಘುನಾಥ ಅಭಿಪ್ರಾಯಪಟ್ಟರು.</span><br /> <br /> ಪಟ್ಟಣದಲ್ಲಿ ಬುಧವಾರದಿಂದ ಆರಂಭವಾಗಿರುವ ತಾಲ್ಲೂಕು ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಳೆಗನ್ನಡ ಕಾವ್ಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳೆಗನ್ನಡ ಹುಟ್ಟಿದ್ದು ನಲ್ಮೆಯ ನೆಲೆಯಲ್ಲಿ. ಪಂಪನ ಕಾಲದಲ್ಲಿ ಗಟ್ಟಿ ನೆಲೆ ಕಂಡ ಆ ಕಾವ್ಯದ ಪ್ರಭಾವದಿಂದ ಕುವೆಂಪು, ಗೋಪಾಲಕೃಷ್ಣ ಅಡಿಗ, ರಾಮಚಂದ್ರಶರ್ಮ, ಪುತಿನ ಒಳಗೊಂಡಂತೆ ಕನ್ನಡದ ಎಲ್ಲ ಆಧುನಿಕ ಲೇಖಕರು ಮುಕ್ತರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.<br /> <br /> ಪ್ರೊ.ಬಿ.ಆರ್.ದೇವರಾಜ್ ಜನ್ನನ ಅಮೃತಮತಿ ಪ್ರಸಂಗದ ಕುರಿತು, ಪ್ರೊ.ಸಿ.ಎ.ರಮೇಶ್ ಹಳೆಗನ್ನಡ ಕಾವ್ಯದ ಓದಿನ ರೀತಿ-ನೀತಿಗಳ ಕುರಿತು ಮಾತನಾಡಿದರು. ನಂತರ ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಶಾಲೆ ಮಕ್ಕಳು ಹಳೆಗನ್ನಡ ರೂಪಕ ಪ್ರಸ್ತುತಪಡಿಸಿದರು.<br /> <br /> ನಂತರ ನಡೆದ ಸ್ಥಳೀಯ ಸಾಹಿತ್ಯ ಗೋಷ್ಠಿಯಲ್ಲಿ ವಿಜ್ಞಾನ ಲೇಖಕ ವಿ.ಎಸ್.ಎಸ್.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಡಿವಿಜಿ ಕೃತಿಗಳಲ್ಲಿ ವಿಜ್ಞಾನ ಕುರಿತು ಪ್ರೊ.ಎಂ.ಆರ್.ನಾಗರಾಜ್, ಉತ್ತನೂರು ರಾಜಮ್ಮ ಅವರ ಬದುಕು-ಬರಹ ಕುರಿತು ಮಂಜುಕನ್ನಿಕಾ, ದಾಸಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಕುರಿತು ಉತ್ತನೂರು ನಾರಾಯಣಾಚಾರ್ ಮಾತನಾಡಿದರು. ಸಂಜೆ ನಡೆದ ನಗೆಹಬ್ಬದ ಕಾರ್ಯಕ್ರಮದಲ್ಲಿ ರಿಚರ್ಡ್ ಲೂಯಿಸ್, ಪ್ರೊ.ಕೃಷ್ಣೇಗೌಡ ಮತ್ತು ಮೈಸೂರು ಆನಂದ್ ತಂಡ ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಉತ್ತನೂರು ರಾಜಮ್ಮ ವೇದಿಕೆ (ಮುಳಬಾಗಲು):</strong> ಹಳೆಗನ್ನಡ ಕಾವ್ಯ ಓದಲು ಕಷ್ಟ ಎಂಬ ಅಭಿಪ್ರಾಯದ ನಡುವೆಯೇ ಅದು ತನ್ನ ಪ್ರಭಾವವನ್ನು ಆಧುನಿಕ ಸಂದರ್ಭದಲ್ಲೂ ಉಳಿಸಿಕೊಂಡಿದೆ ಎಂದು ಲೇಖಕ, ಅನುವಾದಕ ಸ.ರಘುನಾಥ ಅಭಿಪ್ರಾಯಪಟ್ಟರು.</span><br /> <br /> ಪಟ್ಟಣದಲ್ಲಿ ಬುಧವಾರದಿಂದ ಆರಂಭವಾಗಿರುವ ತಾಲ್ಲೂಕು ಮಟ್ಟದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಳೆಗನ್ನಡ ಕಾವ್ಯ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಳೆಗನ್ನಡ ಹುಟ್ಟಿದ್ದು ನಲ್ಮೆಯ ನೆಲೆಯಲ್ಲಿ. ಪಂಪನ ಕಾಲದಲ್ಲಿ ಗಟ್ಟಿ ನೆಲೆ ಕಂಡ ಆ ಕಾವ್ಯದ ಪ್ರಭಾವದಿಂದ ಕುವೆಂಪು, ಗೋಪಾಲಕೃಷ್ಣ ಅಡಿಗ, ರಾಮಚಂದ್ರಶರ್ಮ, ಪುತಿನ ಒಳಗೊಂಡಂತೆ ಕನ್ನಡದ ಎಲ್ಲ ಆಧುನಿಕ ಲೇಖಕರು ಮುಕ್ತರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.<br /> <br /> ಪ್ರೊ.ಬಿ.ಆರ್.ದೇವರಾಜ್ ಜನ್ನನ ಅಮೃತಮತಿ ಪ್ರಸಂಗದ ಕುರಿತು, ಪ್ರೊ.ಸಿ.ಎ.ರಮೇಶ್ ಹಳೆಗನ್ನಡ ಕಾವ್ಯದ ಓದಿನ ರೀತಿ-ನೀತಿಗಳ ಕುರಿತು ಮಾತನಾಡಿದರು. ನಂತರ ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಶಾಲೆ ಮಕ್ಕಳು ಹಳೆಗನ್ನಡ ರೂಪಕ ಪ್ರಸ್ತುತಪಡಿಸಿದರು.<br /> <br /> ನಂತರ ನಡೆದ ಸ್ಥಳೀಯ ಸಾಹಿತ್ಯ ಗೋಷ್ಠಿಯಲ್ಲಿ ವಿಜ್ಞಾನ ಲೇಖಕ ವಿ.ಎಸ್.ಎಸ್.ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಡಿವಿಜಿ ಕೃತಿಗಳಲ್ಲಿ ವಿಜ್ಞಾನ ಕುರಿತು ಪ್ರೊ.ಎಂ.ಆರ್.ನಾಗರಾಜ್, ಉತ್ತನೂರು ರಾಜಮ್ಮ ಅವರ ಬದುಕು-ಬರಹ ಕುರಿತು ಮಂಜುಕನ್ನಿಕಾ, ದಾಸಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಕುರಿತು ಉತ್ತನೂರು ನಾರಾಯಣಾಚಾರ್ ಮಾತನಾಡಿದರು. ಸಂಜೆ ನಡೆದ ನಗೆಹಬ್ಬದ ಕಾರ್ಯಕ್ರಮದಲ್ಲಿ ರಿಚರ್ಡ್ ಲೂಯಿಸ್, ಪ್ರೊ.ಕೃಷ್ಣೇಗೌಡ ಮತ್ತು ಮೈಸೂರು ಆನಂದ್ ತಂಡ ಸಭಿಕರನ್ನು ನಗೆಗಡಲಿನಲ್ಲಿ ಮುಳುಗಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>