<p><strong>ಬೆಂಗಳೂರು:</strong> `ಎಲ್ಲ ಪುಸ್ತಕಗಳು ಆದರ್ಶವನ್ನು ಬಿತ್ತುತ್ತವೆ. ಅಂತಹ ಪುಸ್ತಕಗಳನ್ನು ಇಂದಿನ ರಾಜಕಾರಣಿಗಳು ಓದಬೇಕು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು.ಸಿವಿಜಿ ಇಂಡಿಯಾ ಸಂಸ್ಥೆಯು ಮಂಗಳವಾರ ಗಾಂಧಿಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುವೆಂಪು 108 ನೆನಪು ಮಾಲಿಕೆಯ 108 ಕೃತಿಗಳ ಲೋಕಾರ್ಪಣೆ ಹಾಗೂ ಸಿವಿಜಿ ಇಂಡಿಯಾ ಪುಸ್ತಕ ಮಳಿಗೆ ಆರಂಭೋತ್ಸವದಲ್ಲಿ ಅವರು ಮಾತನಾಡಿದರು.<br /> <br /> `ಪುಸ್ತಕಗಳನ್ನು ಓದುವುದರಿಂದ ರಾಜಕೀಯದಲ್ಲಿರುವ ಕೆಟ್ಟ ರಾಜಕಾರಣ, ಅಧಿಕಾರ, ಹಣಕ್ಕಾಗಿ ಇರುವ ಆಮಿಷಗಳು ಕಡಿಮೆಯಾಗಬಹುದು. ಪುಸ್ತಕದಲ್ಲಿನ ಆದರ್ಶ ತತ್ವಗಳನ್ನು ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.<br /> <br /> `ಸಿವಿಜಿ ಇಂಡಿಯಾ ಸಂಸ್ಥೆಯು ಒಮ್ಮೆಗೆ 108 ಪುಸ್ತಕಗಳನ್ನು ಹೊರತಂದಿರುವ ಕಾರ್ಯ ವೈಖರಿ ಪ್ರಶಂಸನೀಯವಾಗಿದೆ~ ಎಂದು ಹೇಳಿದರು.ಸಾರಿಗೆ ಮತ್ತು ಗೃಹ ಸಚಿವ ಆರ್.ಅಶೋಕ ಮಾತನಾಡಿ, `ಬೇರೆ ಭಾಷಿಕರಲ್ಲಿಯೂ ಕನ್ನಡವೆಂಬುದು ಇದೆ. ಅವರನ್ನು ಬೇರೆಯವರೆಂದು ಭಾವಿಸದೆ, ಅವರಿಗೂ ಕನ್ನಡತನವನ್ನು ಕಲಿಸಬೇಕು~ ಎಂದರು. `ಎಲ್ಲ ಪುಸ್ತಕಗಳು ಜನರನ್ನು ತಲುಪಬೇಕು ಆಗಲೇ ಪುಸ್ತಕ ಸಂಸ್ಕೃತಿ ಉಳಿಯುತ್ತದೆ. <br /> ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು. ಅದಕ್ಕೆ ಎಲ್ಲರೂ ಶ್ರಮ ವಹಿಸಬೇಕು~ ಎಂದು ಹೇಳಿದರು. <br /> <br /> `ಹಳ್ಳಿಗಾಡಿನಲ್ಲಿರುವವರು ಕಲೆಯನ್ನು ಲಾಭದ ದೃಷ್ಟಿಯಿಂದ ಮಾಡುವುದಿಲ್ಲ ಬದಲಿಗೆ, ನಮ್ಮ ಸಂಸ್ಕೃತಿ ಉಳಿಯಬೇಕೆಂಬ ಆಸೆಯಿಂದ ಮಾಡುತ್ತಾರೆ. ಅಂತಹವರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ~ ಎಂದರು.<br /> `ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಸಾಹಿತ್ಯ ಸಮ್ಮೇಳನ ನಡೆದಾಗ ಸುಮಾರು 8 ಕೋಟಿ ರೂಪಾಯಿಯ ಪುಸ್ತಕಗಳು ಮಾರಾಟವಾದವು. ಇದು ನಮ್ಮ ಜನರಲ್ಲಿರುವ ಭಾಷಾ ಸಂಸ್ಕೃತಿ ಮತ್ತು ಪುಸ್ತಕ ಪ್ರೇಮವನ್ನು ಸಾರಿ ಹೇಳುತ್ತದೆ~ ಎಂದು ಹೇಳಿದರು.<br /> <br /> ಕೇಂದ್ರದ ಮಾಜಿ ಸಚಿವ ಎಂ.ಪಿ.ವೀರೇಂದ್ರಕುಮಾರ್ ಮಾತನಾಡಿ, `ಸಾಹಿತಿಗಳ ಬಗ್ಗೆ ಎಲ್ಲೆಲ್ಲೂ ಚರ್ಚೆಗಳಾಗುತ್ತವೆ. ಅವರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ದೇಶದ ಯಾವ ವಿಮಾನ ನಿಲ್ದಾಣಕ್ಕೂ ಸಾಹಿತಿಗಳ ಹೆಸರನ್ನು ಇಡುವ ಚಿಂತನೆ ಇನ್ನು ನಡೆದಿಲ್ಲ~ ಎಂದರು.<br /> <br /> ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಅಶ್ವತ್ಥನಾರಾಯಣ, ಕುವೆಂಪು ನೂರೆಂಟು ನೆನಪು ಮಾಲಿಕೆಯ ಸಂಪಾದಕ ಡಾ.ಬೈರಮಂಗಲ ರಾಮೇಗೌಡ, ಮಾಲಿಕೆಯ ಸಂಚಾಲಕ ಸಿವಿಜಿ ಚಂದ್ರ ಸಮಾರಂಭದಲ್ಲಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಎಲ್ಲ ಪುಸ್ತಕಗಳು ಆದರ್ಶವನ್ನು ಬಿತ್ತುತ್ತವೆ. ಅಂತಹ ಪುಸ್ತಕಗಳನ್ನು ಇಂದಿನ ರಾಜಕಾರಣಿಗಳು ಓದಬೇಕು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು.ಸಿವಿಜಿ ಇಂಡಿಯಾ ಸಂಸ್ಥೆಯು ಮಂಗಳವಾರ ಗಾಂಧಿಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುವೆಂಪು 108 ನೆನಪು ಮಾಲಿಕೆಯ 108 ಕೃತಿಗಳ ಲೋಕಾರ್ಪಣೆ ಹಾಗೂ ಸಿವಿಜಿ ಇಂಡಿಯಾ ಪುಸ್ತಕ ಮಳಿಗೆ ಆರಂಭೋತ್ಸವದಲ್ಲಿ ಅವರು ಮಾತನಾಡಿದರು.<br /> <br /> `ಪುಸ್ತಕಗಳನ್ನು ಓದುವುದರಿಂದ ರಾಜಕೀಯದಲ್ಲಿರುವ ಕೆಟ್ಟ ರಾಜಕಾರಣ, ಅಧಿಕಾರ, ಹಣಕ್ಕಾಗಿ ಇರುವ ಆಮಿಷಗಳು ಕಡಿಮೆಯಾಗಬಹುದು. ಪುಸ್ತಕದಲ್ಲಿನ ಆದರ್ಶ ತತ್ವಗಳನ್ನು ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.<br /> <br /> `ಸಿವಿಜಿ ಇಂಡಿಯಾ ಸಂಸ್ಥೆಯು ಒಮ್ಮೆಗೆ 108 ಪುಸ್ತಕಗಳನ್ನು ಹೊರತಂದಿರುವ ಕಾರ್ಯ ವೈಖರಿ ಪ್ರಶಂಸನೀಯವಾಗಿದೆ~ ಎಂದು ಹೇಳಿದರು.ಸಾರಿಗೆ ಮತ್ತು ಗೃಹ ಸಚಿವ ಆರ್.ಅಶೋಕ ಮಾತನಾಡಿ, `ಬೇರೆ ಭಾಷಿಕರಲ್ಲಿಯೂ ಕನ್ನಡವೆಂಬುದು ಇದೆ. ಅವರನ್ನು ಬೇರೆಯವರೆಂದು ಭಾವಿಸದೆ, ಅವರಿಗೂ ಕನ್ನಡತನವನ್ನು ಕಲಿಸಬೇಕು~ ಎಂದರು. `ಎಲ್ಲ ಪುಸ್ತಕಗಳು ಜನರನ್ನು ತಲುಪಬೇಕು ಆಗಲೇ ಪುಸ್ತಕ ಸಂಸ್ಕೃತಿ ಉಳಿಯುತ್ತದೆ. <br /> ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು. ಅದಕ್ಕೆ ಎಲ್ಲರೂ ಶ್ರಮ ವಹಿಸಬೇಕು~ ಎಂದು ಹೇಳಿದರು. <br /> <br /> `ಹಳ್ಳಿಗಾಡಿನಲ್ಲಿರುವವರು ಕಲೆಯನ್ನು ಲಾಭದ ದೃಷ್ಟಿಯಿಂದ ಮಾಡುವುದಿಲ್ಲ ಬದಲಿಗೆ, ನಮ್ಮ ಸಂಸ್ಕೃತಿ ಉಳಿಯಬೇಕೆಂಬ ಆಸೆಯಿಂದ ಮಾಡುತ್ತಾರೆ. ಅಂತಹವರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ~ ಎಂದರು.<br /> `ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಸಾಹಿತ್ಯ ಸಮ್ಮೇಳನ ನಡೆದಾಗ ಸುಮಾರು 8 ಕೋಟಿ ರೂಪಾಯಿಯ ಪುಸ್ತಕಗಳು ಮಾರಾಟವಾದವು. ಇದು ನಮ್ಮ ಜನರಲ್ಲಿರುವ ಭಾಷಾ ಸಂಸ್ಕೃತಿ ಮತ್ತು ಪುಸ್ತಕ ಪ್ರೇಮವನ್ನು ಸಾರಿ ಹೇಳುತ್ತದೆ~ ಎಂದು ಹೇಳಿದರು.<br /> <br /> ಕೇಂದ್ರದ ಮಾಜಿ ಸಚಿವ ಎಂ.ಪಿ.ವೀರೇಂದ್ರಕುಮಾರ್ ಮಾತನಾಡಿ, `ಸಾಹಿತಿಗಳ ಬಗ್ಗೆ ಎಲ್ಲೆಲ್ಲೂ ಚರ್ಚೆಗಳಾಗುತ್ತವೆ. ಅವರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ದೇಶದ ಯಾವ ವಿಮಾನ ನಿಲ್ದಾಣಕ್ಕೂ ಸಾಹಿತಿಗಳ ಹೆಸರನ್ನು ಇಡುವ ಚಿಂತನೆ ಇನ್ನು ನಡೆದಿಲ್ಲ~ ಎಂದರು.<br /> <br /> ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಅಶ್ವತ್ಥನಾರಾಯಣ, ಕುವೆಂಪು ನೂರೆಂಟು ನೆನಪು ಮಾಲಿಕೆಯ ಸಂಪಾದಕ ಡಾ.ಬೈರಮಂಗಲ ರಾಮೇಗೌಡ, ಮಾಲಿಕೆಯ ಸಂಚಾಲಕ ಸಿವಿಜಿ ಚಂದ್ರ ಸಮಾರಂಭದಲ್ಲಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>