<p><strong>ಗದಗ:</strong> ಊರಿನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಸರ್ಕಾರ ಕೈಗೊಳ್ಳುತ್ತದೆ ನಮಗೆ ಏಕೆ? ಎನ್ನುವ ಉದಾಸೀನ ಧೋರಣೆ ಹೊಂದಿರುವವರೇ ಹೆಚ್ಚಾಗಿರುವ ಈ ಕಾಲದಲ್ಲೂ ಸರ್ಕಾರದ ಕೆಲಸವನ್ನು ನಮ್ಮ ಕೆಲಸ ಎಂದು ಟೊಂಕಕಟ್ಟಿ ನಿಂತಿದ್ದಾರೆ ಲಕ್ಕುಂಡಿ ರೈತರು.<br /> <br /> ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ದಂಡಿನ ದುರ್ಗಾದೇವಿ ಕೆರೆಯ ಹೂಳು ತೆಗೆಯುವ ಕಾಮಗಾರಿಯು ಕಳೆದ ಒಂದು ವಾರದಿಂದ ಭರದಿಂದ ಸಾಗಿದೆ. ಈ ಕೆರೆಗೆ ಜಿಲ್ಲಾ ಪಂಚಾಯಿತಿ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಜೆಸಿಬಿ, ಹಿಟಾಚಿ ಯಂತ್ರಗಳು ಹೂಳು ತಗೆಯುವ ಕಾರ್ಯದಲ್ಲಿ ನಿರತವಾಗಿವೆ.<br /> <br /> ಕೆರೆಯಲ್ಲಿ ಬರುವ ಹೂಳನ್ನು ಹೊರಗೆ ತಗೆದುಕೊಂಡು ಹೋಗಲು ರೈತರೇ ಉಚಿತವಾಗಿ ಟ್ರ್ಯಾಕ್ಟರ್ಗಳನ್ನು ನೀಡಿದ್ದಾರೆ. ಸದ್ಯ ದುರ್ಗಾದೇವಿ ಕೆರೆಯಲ್ಲಿ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ಓಡಾಡುತ್ತಿವೆ.<br /> <br /> ಅಂದಾಜು 15 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯ ಹೂಳನ್ನು ರೈತರೇ ಹೊರ ಹಾಕುವ ಕಾರ್ಯ ಮಾಡುತ್ತಿರುವುದರಿಂದ ಸುಮಾರು 8 ರಿಂದ 10 ಲಕ್ಷ ರೂಪಾಯಿ ಉಳಿತಾಯವಾಗಿದೆ. ಈಗ ಉಳಿತಾಯವಾಗುವ ಅನುದಾನದ ಜೊತೆಗೆ ಇನ್ನೊಂದಿಷ್ಟು ಅನುದಾನವನ್ನು ಬಿಡುಗಡೆ ಮಾಡಿದರೇ ಕೆರೆಯನ್ನು ಹೆಚ್ಚಿನ ಅಭಿವೃದ್ಧಿ ಪಡಿಸಬಹುದು ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.<br /> <br /> ಲಕ್ಕುಂಡಿ ಗ್ರಾಮಸ್ಥರು ಸರ್ಕಾರದ ಕೆಲಸದಲ್ಲಿ ಕೈ ಜೋಡಿಸಿರುವುದು ಇದು ಹೊಸದೆನಲ್ಲ. ಲಕ್ಕುಂಡಿಯಲ್ಲಿ 20 ಎಕರೆ ವಿಸ್ತೀರ್ಣ ಹೊಂದಿರುವ ಹಾಲಗುಂಡಿ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿರುವುದು ಇತಿಹಾಸ. ಅದರಂತೆ ಈ ಕೆರೆಯು ಸುಂದರವಾಗಿ ಕಾಣಬೇಕೆನ್ನುವುದು ಗ್ರಾಮಸ್ಥರ ಬಯಕೆಯಾಗಿದೆ. ಅದಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿದ್ದಾರೆ. <br /> <br /> <strong>ಕುಡಿಯುವ ನೀರಿಗಾಗಿ: </strong>ದಂಡಿನ ದುರ್ಗಾದೇವಿ ಕೆರೆಯನ್ನು ಎರಡು ಭಾಗಗಳಾಗಿ ವಿಗಂಡಿಸಿ, ಒಂದು ಭಾಗದಲ್ಲಿ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸಲು ಗ್ರಾಮಪಂಚಾಯ್ತಿ ಯೋಜನೆ ರೂಪಿಸಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. <br /> <br /> ಆದರೂ ಮುಂದಿನ ದಿನದಲ್ಲಿ ತುಂಗಾಭದ್ರ ನದಿ ಅಥವಾ ಮುಲ್ಲಾನ ಹಳ್ಳದ ನೀರನ್ನು ಕೆರೆಗೆ ಸಂಗ್ರಹ ಮಾಡಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಹೇಳುತ್ತಾರೆ.<br /> <br /> ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಪ್ಲೋರೈಡ್ಯುಕ್ತ ನೀರನ್ನು ಕುಡಿಯುವುದರಿಂದ ವಿವಿಧ ರೋಗಬಾಧೆಗಳು ಕಾಣಿಸಿಕೊಳ್ಳತ್ತಿವೆ. ಈಗ ಕೆರೆಯನ್ನು ಅಭಿವೃದ್ಧಿಪಡಿಸಿ ನೀರನ್ನು ಸಂಗ್ರಹ ಮಾಡಿ, ಜನರಿಗೆ ಕುಡಿಯಲು ಪೂರೈಕೆ ಮಾಡುವಂತಹ ಗುರಿಯನ್ನು ಹೊಂದಿರುವ ಗ್ರಾಮ ಪಂಚಾಯತಿ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿ ಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ:</strong> ಊರಿನ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಸರ್ಕಾರ ಕೈಗೊಳ್ಳುತ್ತದೆ ನಮಗೆ ಏಕೆ? ಎನ್ನುವ ಉದಾಸೀನ ಧೋರಣೆ ಹೊಂದಿರುವವರೇ ಹೆಚ್ಚಾಗಿರುವ ಈ ಕಾಲದಲ್ಲೂ ಸರ್ಕಾರದ ಕೆಲಸವನ್ನು ನಮ್ಮ ಕೆಲಸ ಎಂದು ಟೊಂಕಕಟ್ಟಿ ನಿಂತಿದ್ದಾರೆ ಲಕ್ಕುಂಡಿ ರೈತರು.<br /> <br /> ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ದಂಡಿನ ದುರ್ಗಾದೇವಿ ಕೆರೆಯ ಹೂಳು ತೆಗೆಯುವ ಕಾಮಗಾರಿಯು ಕಳೆದ ಒಂದು ವಾರದಿಂದ ಭರದಿಂದ ಸಾಗಿದೆ. ಈ ಕೆರೆಗೆ ಜಿಲ್ಲಾ ಪಂಚಾಯಿತಿ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಜೆಸಿಬಿ, ಹಿಟಾಚಿ ಯಂತ್ರಗಳು ಹೂಳು ತಗೆಯುವ ಕಾರ್ಯದಲ್ಲಿ ನಿರತವಾಗಿವೆ.<br /> <br /> ಕೆರೆಯಲ್ಲಿ ಬರುವ ಹೂಳನ್ನು ಹೊರಗೆ ತಗೆದುಕೊಂಡು ಹೋಗಲು ರೈತರೇ ಉಚಿತವಾಗಿ ಟ್ರ್ಯಾಕ್ಟರ್ಗಳನ್ನು ನೀಡಿದ್ದಾರೆ. ಸದ್ಯ ದುರ್ಗಾದೇವಿ ಕೆರೆಯಲ್ಲಿ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ಓಡಾಡುತ್ತಿವೆ.<br /> <br /> ಅಂದಾಜು 15 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯ ಹೂಳನ್ನು ರೈತರೇ ಹೊರ ಹಾಕುವ ಕಾರ್ಯ ಮಾಡುತ್ತಿರುವುದರಿಂದ ಸುಮಾರು 8 ರಿಂದ 10 ಲಕ್ಷ ರೂಪಾಯಿ ಉಳಿತಾಯವಾಗಿದೆ. ಈಗ ಉಳಿತಾಯವಾಗುವ ಅನುದಾನದ ಜೊತೆಗೆ ಇನ್ನೊಂದಿಷ್ಟು ಅನುದಾನವನ್ನು ಬಿಡುಗಡೆ ಮಾಡಿದರೇ ಕೆರೆಯನ್ನು ಹೆಚ್ಚಿನ ಅಭಿವೃದ್ಧಿ ಪಡಿಸಬಹುದು ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.<br /> <br /> ಲಕ್ಕುಂಡಿ ಗ್ರಾಮಸ್ಥರು ಸರ್ಕಾರದ ಕೆಲಸದಲ್ಲಿ ಕೈ ಜೋಡಿಸಿರುವುದು ಇದು ಹೊಸದೆನಲ್ಲ. ಲಕ್ಕುಂಡಿಯಲ್ಲಿ 20 ಎಕರೆ ವಿಸ್ತೀರ್ಣ ಹೊಂದಿರುವ ಹಾಲಗುಂಡಿ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿರುವುದು ಇತಿಹಾಸ. ಅದರಂತೆ ಈ ಕೆರೆಯು ಸುಂದರವಾಗಿ ಕಾಣಬೇಕೆನ್ನುವುದು ಗ್ರಾಮಸ್ಥರ ಬಯಕೆಯಾಗಿದೆ. ಅದಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿದ್ದಾರೆ. <br /> <br /> <strong>ಕುಡಿಯುವ ನೀರಿಗಾಗಿ: </strong>ದಂಡಿನ ದುರ್ಗಾದೇವಿ ಕೆರೆಯನ್ನು ಎರಡು ಭಾಗಗಳಾಗಿ ವಿಗಂಡಿಸಿ, ಒಂದು ಭಾಗದಲ್ಲಿ ಗ್ರಾಮಕ್ಕೆ ಕುಡಿಯುವ ನೀರನ್ನು ಪೂರೈಸಲು ಗ್ರಾಮಪಂಚಾಯ್ತಿ ಯೋಜನೆ ರೂಪಿಸಿದೆ. ಇದರಿಂದ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ. <br /> <br /> ಆದರೂ ಮುಂದಿನ ದಿನದಲ್ಲಿ ತುಂಗಾಭದ್ರ ನದಿ ಅಥವಾ ಮುಲ್ಲಾನ ಹಳ್ಳದ ನೀರನ್ನು ಕೆರೆಗೆ ಸಂಗ್ರಹ ಮಾಡಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಹೇಳುತ್ತಾರೆ.<br /> <br /> ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಪ್ಲೋರೈಡ್ಯುಕ್ತ ನೀರನ್ನು ಕುಡಿಯುವುದರಿಂದ ವಿವಿಧ ರೋಗಬಾಧೆಗಳು ಕಾಣಿಸಿಕೊಳ್ಳತ್ತಿವೆ. ಈಗ ಕೆರೆಯನ್ನು ಅಭಿವೃದ್ಧಿಪಡಿಸಿ ನೀರನ್ನು ಸಂಗ್ರಹ ಮಾಡಿ, ಜನರಿಗೆ ಕುಡಿಯಲು ಪೂರೈಕೆ ಮಾಡುವಂತಹ ಗುರಿಯನ್ನು ಹೊಂದಿರುವ ಗ್ರಾಮ ಪಂಚಾಯತಿ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿ ಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>