<p><strong>ನವದೆಹಲಿ (ಪಿಟಿಐ): </strong>ಅಧಿಕಾರದಲ್ಲಿದ್ದ ಅವಧಿಯಲ್ಲಿನ ಕೆಲವು ಸತ್ಯಗಳು ತಮ್ಮೊಂದಿಗೇ ಸಮಾಧಿಯಾಗಲಿವೆ ಎಂದು ಅಗಾಧ ನೆನಪಿನ ಶಕ್ತಿಗೆ ಹೆಸರಾಗಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗುರುವಾರ ತಿಳಿಸಿದ್ದಾರೆ.</p>.<p>‘ಮುಖರ್ಜಿ ನೆನಪುಗಳು’ ಸರಣಿಯ ಎರಡನೇ ಪುಸ್ತಕ ‘ದ ಟ್ರರ್ಬ್ಯುಲೆಂಟ್ ಇಯರ್ಸ್:1980–96’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಅತಿ ರಹಸ್ಯ ವಿಷಯಗಳ ಕುರಿತ ತಾನು ಉದ್ದೇಶಪೂರ್ವಕವಾಗಿಯೇ ಈವರೆಗೂ ತುಟಿಬಿಚ್ಚಿಲ್ಲ ಎಂದು ಸ್ಪಷ್ಟ ಪಡಿಸಿದರು.</p>.<p>‘ವಿನ್ಸ್ಟನ್ ಚರ್ಚಿಲ್ ಸೇರಿದಂತೆ ಹಲವರು ಸರ್ಕಾರದಲ್ಲಿದ್ದಾಗಿನ ಸತ್ಯಗಳ ಕುರಿತು ಬರೆದಿದ್ದಾರೆ. ಆದರೆ, ಈ ವಿಷಯದಲ್ಲಿ ನನ್ನದು ಮಡಿವಂತ ನಿಲುವು. ಸರ್ಕಾರ ಬಿಡುಗಡೆ ಮಾಡಿದಾಗಲೇ ಜನರಿಗೆ ಸತ್ಯಾಂಶಗಳು ತಿಳಿಯಬೇಕು. ಸರ್ಕಾರದಲ್ಲಿದ್ದ ಯಾವುದೋ ವ್ಯಕ್ತಿಯಿಂದ ಅದು ಜನತೆಗೆ ತಿಳಿಯಬಾರದು’ ಎಂದರು.</p>.<p>ನಿತ್ಯವೂ ಡೈರಿ ಬರೆಯುವ ಹಳೆಯ ಅಭ್ಯಾಸದ ಕುರಿತು ಪ್ರಸ್ತಾಪಿಸಿದ ಮುಖರ್ಜಿ, ಅದರಲ್ಲಿ ಕೆಲವು ಸತ್ಯಗಳಿವೆ ಎಂದರು.</p>.<p>‘ನನ್ನ ಪುತ್ರಿ ಈ ಡೈರಿಯ ಅಭಿರಕ್ಷಕಿ. ಡೈರಿಯನ್ನು ಪ್ರಕಟಿಸದಂತೆ ಅವಳಿಗೆ ಸೂಚಿಸಿರುವೆ. ನೀನು ಬೇಕಾದರೆ, ಅದನ್ನು ಡಿಜಿಟಲೈಸ್ ಮಾಡು, ಆದರೆ ಪ್ರಕಟಿಸಬೇಡ. ನೀನು ಡಿಜಿಟಲೈಸ್ ಮಾಡಿದರೆ, ಸರ್ಕಾರವು ತನಗೆ ಸೂಕ್ತ ಎನಿಸಿದಾಗ ಹಾಗೂ ಅಗತ್ಯ ಕಂಡಾಗ ಪ್ರಕಟಿಸುತ್ತದೆ ಎಂದು ಹೇಳಿರುವೆ’ ಎಂದು ತಿಳಿಸಿದರು.</p>.<p>ಇದೇ ವೇಳೆ, ‘ಈ ನಿಲುವಿನ ಕುರಿತು ನಾನು ಕೆಲವು ಬಾರಿ ದ್ವಂದ್ವಕ್ಕೆ ಒಳಗಾಗಿದ್ದೇನೆ. ಆದರೆ, ಅದನ್ನು ಮೆಟ್ಟಿನಿಂತು ಈ ನಿಲುವಿಗೆ ಬದ್ಧವಾಗಿದ್ದೇನೆ. ಕೆಲವು ಸತ್ಯಗಳು ನನ್ನೊಂದಿಗೆ ಸಮಾಧಿಯಾಗಲಿವೆ. ಅವು ಎಂದಿಗೂ ಬಹಿರಂಗಗೊಳ್ಳುವುದಿಲ್ಲ. ಅದಕ್ಕೆ ನಾನು ಬದ್ಧ’ ಎಂದು ಮುಖರ್ಜಿ ಅಚಲವಾಗಿ ನುಡಿದಿದ್ದಾರೆ.</p>.<p>ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮುಖರ್ಜಿ ಅವರ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಅಧಿಕಾರದಲ್ಲಿದ್ದ ಅವಧಿಯಲ್ಲಿನ ಕೆಲವು ಸತ್ಯಗಳು ತಮ್ಮೊಂದಿಗೇ ಸಮಾಧಿಯಾಗಲಿವೆ ಎಂದು ಅಗಾಧ ನೆನಪಿನ ಶಕ್ತಿಗೆ ಹೆಸರಾಗಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಗುರುವಾರ ತಿಳಿಸಿದ್ದಾರೆ.</p>.<p>‘ಮುಖರ್ಜಿ ನೆನಪುಗಳು’ ಸರಣಿಯ ಎರಡನೇ ಪುಸ್ತಕ ‘ದ ಟ್ರರ್ಬ್ಯುಲೆಂಟ್ ಇಯರ್ಸ್:1980–96’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಅತಿ ರಹಸ್ಯ ವಿಷಯಗಳ ಕುರಿತ ತಾನು ಉದ್ದೇಶಪೂರ್ವಕವಾಗಿಯೇ ಈವರೆಗೂ ತುಟಿಬಿಚ್ಚಿಲ್ಲ ಎಂದು ಸ್ಪಷ್ಟ ಪಡಿಸಿದರು.</p>.<p>‘ವಿನ್ಸ್ಟನ್ ಚರ್ಚಿಲ್ ಸೇರಿದಂತೆ ಹಲವರು ಸರ್ಕಾರದಲ್ಲಿದ್ದಾಗಿನ ಸತ್ಯಗಳ ಕುರಿತು ಬರೆದಿದ್ದಾರೆ. ಆದರೆ, ಈ ವಿಷಯದಲ್ಲಿ ನನ್ನದು ಮಡಿವಂತ ನಿಲುವು. ಸರ್ಕಾರ ಬಿಡುಗಡೆ ಮಾಡಿದಾಗಲೇ ಜನರಿಗೆ ಸತ್ಯಾಂಶಗಳು ತಿಳಿಯಬೇಕು. ಸರ್ಕಾರದಲ್ಲಿದ್ದ ಯಾವುದೋ ವ್ಯಕ್ತಿಯಿಂದ ಅದು ಜನತೆಗೆ ತಿಳಿಯಬಾರದು’ ಎಂದರು.</p>.<p>ನಿತ್ಯವೂ ಡೈರಿ ಬರೆಯುವ ಹಳೆಯ ಅಭ್ಯಾಸದ ಕುರಿತು ಪ್ರಸ್ತಾಪಿಸಿದ ಮುಖರ್ಜಿ, ಅದರಲ್ಲಿ ಕೆಲವು ಸತ್ಯಗಳಿವೆ ಎಂದರು.</p>.<p>‘ನನ್ನ ಪುತ್ರಿ ಈ ಡೈರಿಯ ಅಭಿರಕ್ಷಕಿ. ಡೈರಿಯನ್ನು ಪ್ರಕಟಿಸದಂತೆ ಅವಳಿಗೆ ಸೂಚಿಸಿರುವೆ. ನೀನು ಬೇಕಾದರೆ, ಅದನ್ನು ಡಿಜಿಟಲೈಸ್ ಮಾಡು, ಆದರೆ ಪ್ರಕಟಿಸಬೇಡ. ನೀನು ಡಿಜಿಟಲೈಸ್ ಮಾಡಿದರೆ, ಸರ್ಕಾರವು ತನಗೆ ಸೂಕ್ತ ಎನಿಸಿದಾಗ ಹಾಗೂ ಅಗತ್ಯ ಕಂಡಾಗ ಪ್ರಕಟಿಸುತ್ತದೆ ಎಂದು ಹೇಳಿರುವೆ’ ಎಂದು ತಿಳಿಸಿದರು.</p>.<p>ಇದೇ ವೇಳೆ, ‘ಈ ನಿಲುವಿನ ಕುರಿತು ನಾನು ಕೆಲವು ಬಾರಿ ದ್ವಂದ್ವಕ್ಕೆ ಒಳಗಾಗಿದ್ದೇನೆ. ಆದರೆ, ಅದನ್ನು ಮೆಟ್ಟಿನಿಂತು ಈ ನಿಲುವಿಗೆ ಬದ್ಧವಾಗಿದ್ದೇನೆ. ಕೆಲವು ಸತ್ಯಗಳು ನನ್ನೊಂದಿಗೆ ಸಮಾಧಿಯಾಗಲಿವೆ. ಅವು ಎಂದಿಗೂ ಬಹಿರಂಗಗೊಳ್ಳುವುದಿಲ್ಲ. ಅದಕ್ಕೆ ನಾನು ಬದ್ಧ’ ಎಂದು ಮುಖರ್ಜಿ ಅಚಲವಾಗಿ ನುಡಿದಿದ್ದಾರೆ.</p>.<p>ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಮುಖರ್ಜಿ ಅವರ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>