<p>ಧಾರವಾಡ: `ಹುಬ್ಬಳ್ಳಿ ತಾಲ್ಲೂಕಿನ ಕೆಲ ಗ್ರಾ.ಪಂ. ಅಧ್ಯಕ್ಷರು ಗೂಂಡಾಗಳಂತೆ ವರ್ತಿಸುತ್ತಿದ್ದು, ಗ್ರಾಮ ಸಭೆಯನ್ನೇ ನಡೆಸಲು ಬಿಡುವುದಿಲ್ಲ~ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದರು. <br /> <br /> ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, `ಯಾವ ಗ್ರಾಮ ಎಂಬುದನ್ನು ಹೇಳುವುದಿಲ್ಲ. ಜಿ.ಪಂ. ಅಧಿಕಾರಿಗಳು ಅಂಥ ಗ್ರಾಮಸಭೆಗೆ ಹೋದರೆ ಮಾತ್ರ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹೇಳಲು ಧೈರ್ಯ ಬರುತ್ತದೆ. ಇಲ್ಲದಿದ್ದರೆ, ನಾವೆಲ್ಲ ಮಾಡುತ್ತೇವೆ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿ ಸಾಗ ಹಾಕುತ್ತಾರೆ~ ಎಂದರು. <br /> <br /> ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವರನಾಗಲಾವಿ ಗ್ರಾಮದ ಸಂಪರ್ಕ ರಸ್ತೆಯಲ್ಲಿ 3.5 ಕಿ.ಮೀ. ರಸ್ತೆ ಅರಣ್ಯ ಪ್ರದೇಶದಲ್ಲಿ ಹಾದುಹೋಗಿದೆ. ಅದಕ್ಕೆ ಬೇಕಾದ ಅನುಮತಿ ದೊರಕಿಲ್ಲ. ಆದ್ದರಿಂದ ಆ ಕಾಮಗಾರಿ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಪೂರ್ವಾಪರ ಯೋಚನೆ ಮಾಡದೇ ಯೋಜನೆಗಳನ್ನು ಆರಂಭಿಸಿದರೆ ಸಮಸ್ಯೆ ಉಂಟಾಗುತ್ತದೆ. ಯೋಜನೆಗಳ ಬಗ್ಗೆ ನಾವು ಜನರಿಗೆ ತಿಳಿಸಿರುತ್ತೇವೆ. ಅದು ಕಾರ್ಯಗತವಾಗದಿದ್ದರೆ ಏನು ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದರು. <br /> <br /> `ತಹಶೀಲ್ದಾರ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ರೀತಿ ಸ್ಪಂದನೆ ಸಿಗುತ್ತಿಲ್ಲ. ಅಂಗವಿಕಲರಿಗೆ ಮಾಸಾಶನ ರದ್ದುಗೊಳಿಸುವ ಅಮಾನವೀಯ ಘಟನೆ ನಡೆದಿರುವುದು ಯಾರಿಗೂ ಶೋಭಿಸದ ಸಂಗತಿ. ತಹಶೀಲ್ದಾರರು ಇಂತಹ ಪ್ರಕರಣಗಳ ಬಗ್ಗೆ ಸರಿಯಾಗಿ ಸ್ಪಂದಿಸಬೇಕು ಎಂದು ಜೋಶಿ ನಿರ್ದೇಶನ ನೀಡಿದರು.<br /> <br /> ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ, `ಪ್ರತಿಯೊಂದು ಗ್ರಾ.ಪಂ. ತನ್ನ ವ್ಯಾಪ್ತಿಯ ಕುಟುಂಬಗಳು ಕಳೆದ 15 ವರ್ಷದಲ್ಲಿ ಪಡೆದ ವಿವಿಧ ಸೌಲಭ್ಯಗಳ ಬಗೆಗಿನ ದಾಖಲೆಯನ್ನು ಗಣಕೀಕರಣ ಮೂಲಕ ಸಂಗ್ರಹಿಸಲು ಹಾಗೂ ಗ್ರಾಮಸಭೆಯ ಠರಾವನ್ನು 15 ದಿನಗಳಲ್ಲಿ ಸಂಬಂಧಿಸಿದವರು ಸಹಿ ಮಾಡದಿದ್ದರೂ ಅಧಿಕೃತವೆಂದು ಪರಿಗಣಿಸಲು ಕ್ರಮ ಕೈಗೊಳ್ಳುತ್ತೇವೆ~ ಎಂದರು. <br /> <br /> ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಅವ್ಯವಹಾರ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು ಸಲಹೆ ನೀಡಿದರು.<br /> <br /> ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಜಿ.ಪಂ.ಅಧ್ಯಕ್ಷ ಅಡಿವೆಪ್ಪ ಮನಮಿ, ಪ್ರೇಮಾ ಕೊಮಾರದೇಸಾಯಿ, ಉಪಕಾರ್ಯದರ್ಶಿ ಎಸ್. ಬಿ.ಮುಳ್ಳೊಳ್ಳಿ, ಜಾಗೃತ ಸಮಿತಿ ಸದಸ್ಯರಾದ ಮೌನೇಶ ಬಡಿಗೇರ, ಮನೋಹರ ಯಡವಣ್ಣವರ, ವೀಣಾ ಕುಲಕರ್ಣಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: `ಹುಬ್ಬಳ್ಳಿ ತಾಲ್ಲೂಕಿನ ಕೆಲ ಗ್ರಾ.ಪಂ. ಅಧ್ಯಕ್ಷರು ಗೂಂಡಾಗಳಂತೆ ವರ್ತಿಸುತ್ತಿದ್ದು, ಗ್ರಾಮ ಸಭೆಯನ್ನೇ ನಡೆಸಲು ಬಿಡುವುದಿಲ್ಲ~ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದರು. <br /> <br /> ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, `ಯಾವ ಗ್ರಾಮ ಎಂಬುದನ್ನು ಹೇಳುವುದಿಲ್ಲ. ಜಿ.ಪಂ. ಅಧಿಕಾರಿಗಳು ಅಂಥ ಗ್ರಾಮಸಭೆಗೆ ಹೋದರೆ ಮಾತ್ರ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹೇಳಲು ಧೈರ್ಯ ಬರುತ್ತದೆ. ಇಲ್ಲದಿದ್ದರೆ, ನಾವೆಲ್ಲ ಮಾಡುತ್ತೇವೆ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿ ಸಾಗ ಹಾಕುತ್ತಾರೆ~ ಎಂದರು. <br /> <br /> ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವರನಾಗಲಾವಿ ಗ್ರಾಮದ ಸಂಪರ್ಕ ರಸ್ತೆಯಲ್ಲಿ 3.5 ಕಿ.ಮೀ. ರಸ್ತೆ ಅರಣ್ಯ ಪ್ರದೇಶದಲ್ಲಿ ಹಾದುಹೋಗಿದೆ. ಅದಕ್ಕೆ ಬೇಕಾದ ಅನುಮತಿ ದೊರಕಿಲ್ಲ. ಆದ್ದರಿಂದ ಆ ಕಾಮಗಾರಿ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಪೂರ್ವಾಪರ ಯೋಚನೆ ಮಾಡದೇ ಯೋಜನೆಗಳನ್ನು ಆರಂಭಿಸಿದರೆ ಸಮಸ್ಯೆ ಉಂಟಾಗುತ್ತದೆ. ಯೋಜನೆಗಳ ಬಗ್ಗೆ ನಾವು ಜನರಿಗೆ ತಿಳಿಸಿರುತ್ತೇವೆ. ಅದು ಕಾರ್ಯಗತವಾಗದಿದ್ದರೆ ಏನು ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದರು. <br /> <br /> `ತಹಶೀಲ್ದಾರ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ರೀತಿ ಸ್ಪಂದನೆ ಸಿಗುತ್ತಿಲ್ಲ. ಅಂಗವಿಕಲರಿಗೆ ಮಾಸಾಶನ ರದ್ದುಗೊಳಿಸುವ ಅಮಾನವೀಯ ಘಟನೆ ನಡೆದಿರುವುದು ಯಾರಿಗೂ ಶೋಭಿಸದ ಸಂಗತಿ. ತಹಶೀಲ್ದಾರರು ಇಂತಹ ಪ್ರಕರಣಗಳ ಬಗ್ಗೆ ಸರಿಯಾಗಿ ಸ್ಪಂದಿಸಬೇಕು ಎಂದು ಜೋಶಿ ನಿರ್ದೇಶನ ನೀಡಿದರು.<br /> <br /> ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ, `ಪ್ರತಿಯೊಂದು ಗ್ರಾ.ಪಂ. ತನ್ನ ವ್ಯಾಪ್ತಿಯ ಕುಟುಂಬಗಳು ಕಳೆದ 15 ವರ್ಷದಲ್ಲಿ ಪಡೆದ ವಿವಿಧ ಸೌಲಭ್ಯಗಳ ಬಗೆಗಿನ ದಾಖಲೆಯನ್ನು ಗಣಕೀಕರಣ ಮೂಲಕ ಸಂಗ್ರಹಿಸಲು ಹಾಗೂ ಗ್ರಾಮಸಭೆಯ ಠರಾವನ್ನು 15 ದಿನಗಳಲ್ಲಿ ಸಂಬಂಧಿಸಿದವರು ಸಹಿ ಮಾಡದಿದ್ದರೂ ಅಧಿಕೃತವೆಂದು ಪರಿಗಣಿಸಲು ಕ್ರಮ ಕೈಗೊಳ್ಳುತ್ತೇವೆ~ ಎಂದರು. <br /> <br /> ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಅವ್ಯವಹಾರ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು ಸಲಹೆ ನೀಡಿದರು.<br /> <br /> ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಜಿ.ಪಂ.ಅಧ್ಯಕ್ಷ ಅಡಿವೆಪ್ಪ ಮನಮಿ, ಪ್ರೇಮಾ ಕೊಮಾರದೇಸಾಯಿ, ಉಪಕಾರ್ಯದರ್ಶಿ ಎಸ್. ಬಿ.ಮುಳ್ಳೊಳ್ಳಿ, ಜಾಗೃತ ಸಮಿತಿ ಸದಸ್ಯರಾದ ಮೌನೇಶ ಬಡಿಗೇರ, ಮನೋಹರ ಯಡವಣ್ಣವರ, ವೀಣಾ ಕುಲಕರ್ಣಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>