<p><strong>ಶಿವಮೊಗ್ಗ: </strong>ಸಾರ್ವಜನಿಕ ಸತ್ಯ ಹಾಗೂ ಖಾಸಗಿ ಸತ್ಯವನ್ನು ಹೇಳುತ್ತಲೇ ಆತ್ಮಕಥೆ ಪ್ರಾಕಾರವನ್ನು ಮೀರುವ ಕೃತಿಗಳು ಕನ್ನಡದಲ್ಲಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.<br /> <br /> ನಗರದ ಕಮಲಾ ನೆಹರು ಕಾಲೇಜಿನಲ್ಲಿ ಅಹರ್ನಿಶಿ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಕವಯತ್ರಿ ಪ್ರತಿಭಾ ನಂದಕುಮಾರ ಅವರ ಆತ್ಮಕಥನ `ಅನುದಿನದ ಅಂತರಗಂಗೆ~ ಮತ್ತು ಪತ್ರಕರ್ತ ಬಿ.ಎಂ. ಬಶೀರ್ ಅವರ `ಅಂಗೈಯಲ್ಲೇ ಆಕಾಶ~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ಆತ್ಮಕಥೆ ಎನ್ನುವ ಪ್ರಾಕಾರಕ್ಕೆ ವಿಶಿಷ್ಟ ಅರ್ಥ, ಆವರಣ ಸೃಷ್ಟಿ ಮಾಡುವ ರೀತಿಯಲ್ಲಿ ಈ ಆತ್ಮಕಥನ ಪ್ರಕಟವಾಗಿದೆ ಎಂದ ಅವರು, ಮುಚ್ಚಿ ಹೋದ ಜಗತ್ತಿನ ಅನಾವರಣ ಇಲ್ಲಿದೆ. ಇದನ್ನು ಅಪ್ಪಟ ಲೇಖಕಿಯಾಗಿ ಬರೆದಿದ್ದಾರೆ ಹೊರತು, ಸ್ತ್ರೀವಾದಿ ಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.<br /> <br /> ಸಾಮಾಜಿಕ ಸತ್ಯದ ಬಗ್ಗೆ ಹೆಣ್ಣುಮಕ್ಕಳು ಬರೆಯುವುದು ಕಡಿಮೆ; ಆದರೆ, ಇಲ್ಲಿ ಕೇವಲ ಖಾಸಗಿ ಸತ್ಯಗಳಿಲ್ಲ; ಅವುಗಳನ್ನು ಮೀರಿದ ಅನುಭವಗಳಿವೆ. ಗದ್ಯವನ್ನು ಮೀರಿದ ಪದ್ಯ, ಪದ್ಯವನ್ನು ಮೀರಿದ ಗದ್ಯದಲ್ಲಿ ಅನುಭವ ವಲಯನ್ನು ಮಿಶ್ರಣ ಮಾಡುವ ತಂತ್ರವನ್ನು ಇಲ್ಲಿ ಪ್ರತಿಭಾ ಅನುಸರಿಸಿದ್ದಾರೆ ಎಂದು ವಿಶ್ಲೇಷಿಸಿದರು.<br /> <br /> ಲೇಖಕಿ ಕಮಲಾದಾಸ್ ಅವರ `ಮೈ ಸ್ಟೋರಿ~ ಆತ್ಮಕಥನ ಬಂದ ನಂತರದಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಯ ಸೃಜನಶೀಲ ಲೇಖಕಿಯರ ಮೇಲೆ ಪ್ರಭಾವ ಬೀರಿತು. ಹೊಸ ಬರವಣಿಗೆಯ ಲೋಕವನ್ನು ತೆರೆದಿಟ್ಟಿತು ಎಂದು ಅವರು ಹೇಳಿದರು.<br /> <br /> ಪ್ರಸ್ತುತ ಆತ್ಮಕಥೆಯಲ್ಲಿ ಪ್ರತಿಭಾ ಅವರ ಬಾಲ್ಯ, ಅವರನ್ನು ಲೇಖಕಿಯಾಗಿ ರೂಪಿಸಿದ ಹೋರಾಟಗಳು ಗೈರು ಆಗಿವೆ ಎಂದು ಕೃಷ್ಣಮೂರ್ತಿ ಗುರುತಿಸಿದರು.<br /> <br /> ಪತ್ರಕರ್ತ ಬಿ.ಎಂ. ಬಶೀರ್ ಅವರ ಕಥೆಗಳು ಪ್ರಶ್ನೋತ್ತರ ಮಾದರಿ ಮೂಲಕ ಜ್ಞಾನವನ್ನು ಹೇಳುತ್ತವೆ. ಮುಖ್ಯವಾಗಿ ಮಹಿಳೆ, ತಾಯಿ, ಕೆಳವರ್ಗದ ಜನರ ಬಗ್ಗೆ ಇವರದ್ದು ಅಪಾರ ಕಾಳಜಿ ಎಂದು ವಿಶ್ಲೇಷಿಸಿದರು.<br /> <strong><br /> ಸ್ತ್ರೀಭಾಷೆಯ ಆತ್ಮಕಥನ: </strong>ವಿಮರ್ಶಕಿ ಎಂ.ಎಸ್. ಆಶಾದೇವಿ ಮಾತನಾಡಿ, ಪ್ರಸ್ತುತ ಆತ್ಮಕಥೆ, ಸ್ತ್ರೀ ಸಮಯ, ಸ್ತ್ರೀ ಭಾಷೆಯ ಆತ್ಮಕಥನ ಎಂದು ವಿಶ್ಲೇಷಿಸಿದರು.<br /> <br /> ಇಡೀ ಆತ್ಮಕಥೆಯ ನೆಲೆ ಇರುವುದು ನನ್ನ ಬದುಕಿಗೆ ನಾನು ಮಾತ್ರ ಉತ್ತರದಾಯಿತ್ವ ಎಂಬ ಅಂಶದಲ್ಲಿ ಎಂದ ಅವರು, ಹೆಣ್ಣಿಗೆ ಬಿಡುಗಡೆ ಹೊರಗಿನಿಂದ ಅಲ್ಲ; ಒಳಗಿನಿಂದ ಎಂಬ ಭಾವನೆಯಲ್ಲಿ ಇದು ಪ್ರಕಟವಾಗಿದೆ ಎಂದು ಹೇಳಿದರು.<br /> <br /> ಈಚೆಗೆ ದಲಿತ, ಮಹಿಳಾ ಆತ್ಮಕಥೆಗಳು ಹೆಚ್ಚುಹೆಚ್ಚು ಬರುತ್ತಿದ್ದು, ಇವು ಅನಾವರಣ ಪರ್ವದ ಕಥೆಗಳು; ಇವು ಏಕಕಾಲಕ್ಕೆ ಸಾರ್ವಜನಿಕವೂ, ವೈಯಕ್ತಿಕವೂ ಹೌದು. ಈ ನಡುವೆ ಈ ಆತ್ಮಕಥೆಗಳು ನಿಭಾಯಿಸುತ್ತಿರುವ ಪಾತ್ರ ಏನು ಎಂಬುದು ಮುಖ್ಯ ಎಂದರು.<br /> <br /> ಪ್ರತಿಭಾ ಆತ್ಮಕಥೆ ಸೃಷ್ಟಿಸಬಹುದಾದ ಸಂಚಲನದ ರೋಚಕ ವಿವರಣೆಗಳ ಆಚೆಗೂ ಅದನ್ನು ನಿಭಾಯಿಸುತ್ತಿರುವುದು ಆ ಕೃತಿಯ ಸ್ತ್ರೀಭಾಷೆ ಎಂದು ಹೇಳಿದರು.<br /> <br /> ಕನ್ನಡದ ಮಹಿಳಾ ಆತ್ಮಕಥೆಗಳನ್ನು ಎರಡು ಬಗೆಯ ವಿನ್ಯಾಸದಲ್ಲಿ ವಿಶ್ಲೇಷಿಸಬಹುದು ಎಂದ ಅವರು, ಒಂದು ಋಣಭಾರದ ಆತ್ಮಕಥೆ, ಇನ್ನೊಂದು ಆರೋಪಭಾರದಲ್ಲಿ ನಲುಗಿ ಹೋದ ಕಥೆಗಳು. ಈ ನಡುವೆ ಮೂರನೇ ವಿನ್ಯಾಸದ ಆತ್ಮಕಥನ ಆರಂಭವಾಗಿದ್ದು ಪ್ರೇಮಾ ಕಾರಂತ, ಭಾರ್ಗವಿ ನಾರಾಯಣ, ಡಾ.ವಿಜಯಮ್ಮ ಅವರಿಂದ ಎಂದರು.<br /> <br /> <strong>ಇನ್ನೊಂದು ಕೃತಿ: </strong>ಕವಯತ್ರಿ ಪ್ರತಿಭಾ ನಂದಕುಮಾರ್ ಮಾತನಾಡಿ, `ಈ ಕೃತಿಯನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದು ಗೊತ್ತಿಲ್ಲ. ಆದರೆ, ಇದು ಕೇವಲ ಪ್ರೀತಿಗಾಗಿ ಹುಡುಕಾಟ ಮಾಡಿದ್ದು; ನನ್ನನ್ನು ಶೋಧಿಸಿಕೊಂಡಿದ್ದು~ ಎಂದರು.<br /> <br /> ಬಾಲ್ಯ ಮತ್ತು ಬೆಂಗಳೂರಿನ ಇತಿಹಾಸದಲ್ಲಿ ರೋಚಕ ಸಂಗತಿಗಳು, ಆದ ಅನುಭವಗಳನ್ನು ಇನ್ನೊಂದು ಕೃತಿಯಲ್ಲಿ ಬರೆಯುವುದಾಗಿ ಪ್ರತಿಭಾ ಪ್ರಕಟಿಸಿದರು.ಪತ್ರಕರ್ತ ಬಿ.ಎಂ. ಬಶೀರ್, ಕಲಾವಿದೆ ಸುರೇಖಾ ಉಪಸ್ಥಿತರಿದ್ದರು. ಪ್ರಕಾಶಕಿ ಕೆ. ಅಕ್ಷತಾ, ಕವಯತ್ರಿ ಡಾ.ಪಿ. ಭಾರತಿದೇವಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ಸಾರ್ವಜನಿಕ ಸತ್ಯ ಹಾಗೂ ಖಾಸಗಿ ಸತ್ಯವನ್ನು ಹೇಳುತ್ತಲೇ ಆತ್ಮಕಥೆ ಪ್ರಾಕಾರವನ್ನು ಮೀರುವ ಕೃತಿಗಳು ಕನ್ನಡದಲ್ಲಿ ಬರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕಾಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.<br /> <br /> ನಗರದ ಕಮಲಾ ನೆಹರು ಕಾಲೇಜಿನಲ್ಲಿ ಅಹರ್ನಿಶಿ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಕವಯತ್ರಿ ಪ್ರತಿಭಾ ನಂದಕುಮಾರ ಅವರ ಆತ್ಮಕಥನ `ಅನುದಿನದ ಅಂತರಗಂಗೆ~ ಮತ್ತು ಪತ್ರಕರ್ತ ಬಿ.ಎಂ. ಬಶೀರ್ ಅವರ `ಅಂಗೈಯಲ್ಲೇ ಆಕಾಶ~ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.<br /> <br /> ಆತ್ಮಕಥೆ ಎನ್ನುವ ಪ್ರಾಕಾರಕ್ಕೆ ವಿಶಿಷ್ಟ ಅರ್ಥ, ಆವರಣ ಸೃಷ್ಟಿ ಮಾಡುವ ರೀತಿಯಲ್ಲಿ ಈ ಆತ್ಮಕಥನ ಪ್ರಕಟವಾಗಿದೆ ಎಂದ ಅವರು, ಮುಚ್ಚಿ ಹೋದ ಜಗತ್ತಿನ ಅನಾವರಣ ಇಲ್ಲಿದೆ. ಇದನ್ನು ಅಪ್ಪಟ ಲೇಖಕಿಯಾಗಿ ಬರೆದಿದ್ದಾರೆ ಹೊರತು, ಸ್ತ್ರೀವಾದಿ ಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.<br /> <br /> ಸಾಮಾಜಿಕ ಸತ್ಯದ ಬಗ್ಗೆ ಹೆಣ್ಣುಮಕ್ಕಳು ಬರೆಯುವುದು ಕಡಿಮೆ; ಆದರೆ, ಇಲ್ಲಿ ಕೇವಲ ಖಾಸಗಿ ಸತ್ಯಗಳಿಲ್ಲ; ಅವುಗಳನ್ನು ಮೀರಿದ ಅನುಭವಗಳಿವೆ. ಗದ್ಯವನ್ನು ಮೀರಿದ ಪದ್ಯ, ಪದ್ಯವನ್ನು ಮೀರಿದ ಗದ್ಯದಲ್ಲಿ ಅನುಭವ ವಲಯನ್ನು ಮಿಶ್ರಣ ಮಾಡುವ ತಂತ್ರವನ್ನು ಇಲ್ಲಿ ಪ್ರತಿಭಾ ಅನುಸರಿಸಿದ್ದಾರೆ ಎಂದು ವಿಶ್ಲೇಷಿಸಿದರು.<br /> <br /> ಲೇಖಕಿ ಕಮಲಾದಾಸ್ ಅವರ `ಮೈ ಸ್ಟೋರಿ~ ಆತ್ಮಕಥನ ಬಂದ ನಂತರದಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಯ ಸೃಜನಶೀಲ ಲೇಖಕಿಯರ ಮೇಲೆ ಪ್ರಭಾವ ಬೀರಿತು. ಹೊಸ ಬರವಣಿಗೆಯ ಲೋಕವನ್ನು ತೆರೆದಿಟ್ಟಿತು ಎಂದು ಅವರು ಹೇಳಿದರು.<br /> <br /> ಪ್ರಸ್ತುತ ಆತ್ಮಕಥೆಯಲ್ಲಿ ಪ್ರತಿಭಾ ಅವರ ಬಾಲ್ಯ, ಅವರನ್ನು ಲೇಖಕಿಯಾಗಿ ರೂಪಿಸಿದ ಹೋರಾಟಗಳು ಗೈರು ಆಗಿವೆ ಎಂದು ಕೃಷ್ಣಮೂರ್ತಿ ಗುರುತಿಸಿದರು.<br /> <br /> ಪತ್ರಕರ್ತ ಬಿ.ಎಂ. ಬಶೀರ್ ಅವರ ಕಥೆಗಳು ಪ್ರಶ್ನೋತ್ತರ ಮಾದರಿ ಮೂಲಕ ಜ್ಞಾನವನ್ನು ಹೇಳುತ್ತವೆ. ಮುಖ್ಯವಾಗಿ ಮಹಿಳೆ, ತಾಯಿ, ಕೆಳವರ್ಗದ ಜನರ ಬಗ್ಗೆ ಇವರದ್ದು ಅಪಾರ ಕಾಳಜಿ ಎಂದು ವಿಶ್ಲೇಷಿಸಿದರು.<br /> <strong><br /> ಸ್ತ್ರೀಭಾಷೆಯ ಆತ್ಮಕಥನ: </strong>ವಿಮರ್ಶಕಿ ಎಂ.ಎಸ್. ಆಶಾದೇವಿ ಮಾತನಾಡಿ, ಪ್ರಸ್ತುತ ಆತ್ಮಕಥೆ, ಸ್ತ್ರೀ ಸಮಯ, ಸ್ತ್ರೀ ಭಾಷೆಯ ಆತ್ಮಕಥನ ಎಂದು ವಿಶ್ಲೇಷಿಸಿದರು.<br /> <br /> ಇಡೀ ಆತ್ಮಕಥೆಯ ನೆಲೆ ಇರುವುದು ನನ್ನ ಬದುಕಿಗೆ ನಾನು ಮಾತ್ರ ಉತ್ತರದಾಯಿತ್ವ ಎಂಬ ಅಂಶದಲ್ಲಿ ಎಂದ ಅವರು, ಹೆಣ್ಣಿಗೆ ಬಿಡುಗಡೆ ಹೊರಗಿನಿಂದ ಅಲ್ಲ; ಒಳಗಿನಿಂದ ಎಂಬ ಭಾವನೆಯಲ್ಲಿ ಇದು ಪ್ರಕಟವಾಗಿದೆ ಎಂದು ಹೇಳಿದರು.<br /> <br /> ಈಚೆಗೆ ದಲಿತ, ಮಹಿಳಾ ಆತ್ಮಕಥೆಗಳು ಹೆಚ್ಚುಹೆಚ್ಚು ಬರುತ್ತಿದ್ದು, ಇವು ಅನಾವರಣ ಪರ್ವದ ಕಥೆಗಳು; ಇವು ಏಕಕಾಲಕ್ಕೆ ಸಾರ್ವಜನಿಕವೂ, ವೈಯಕ್ತಿಕವೂ ಹೌದು. ಈ ನಡುವೆ ಈ ಆತ್ಮಕಥೆಗಳು ನಿಭಾಯಿಸುತ್ತಿರುವ ಪಾತ್ರ ಏನು ಎಂಬುದು ಮುಖ್ಯ ಎಂದರು.<br /> <br /> ಪ್ರತಿಭಾ ಆತ್ಮಕಥೆ ಸೃಷ್ಟಿಸಬಹುದಾದ ಸಂಚಲನದ ರೋಚಕ ವಿವರಣೆಗಳ ಆಚೆಗೂ ಅದನ್ನು ನಿಭಾಯಿಸುತ್ತಿರುವುದು ಆ ಕೃತಿಯ ಸ್ತ್ರೀಭಾಷೆ ಎಂದು ಹೇಳಿದರು.<br /> <br /> ಕನ್ನಡದ ಮಹಿಳಾ ಆತ್ಮಕಥೆಗಳನ್ನು ಎರಡು ಬಗೆಯ ವಿನ್ಯಾಸದಲ್ಲಿ ವಿಶ್ಲೇಷಿಸಬಹುದು ಎಂದ ಅವರು, ಒಂದು ಋಣಭಾರದ ಆತ್ಮಕಥೆ, ಇನ್ನೊಂದು ಆರೋಪಭಾರದಲ್ಲಿ ನಲುಗಿ ಹೋದ ಕಥೆಗಳು. ಈ ನಡುವೆ ಮೂರನೇ ವಿನ್ಯಾಸದ ಆತ್ಮಕಥನ ಆರಂಭವಾಗಿದ್ದು ಪ್ರೇಮಾ ಕಾರಂತ, ಭಾರ್ಗವಿ ನಾರಾಯಣ, ಡಾ.ವಿಜಯಮ್ಮ ಅವರಿಂದ ಎಂದರು.<br /> <br /> <strong>ಇನ್ನೊಂದು ಕೃತಿ: </strong>ಕವಯತ್ರಿ ಪ್ರತಿಭಾ ನಂದಕುಮಾರ್ ಮಾತನಾಡಿ, `ಈ ಕೃತಿಯನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದು ಗೊತ್ತಿಲ್ಲ. ಆದರೆ, ಇದು ಕೇವಲ ಪ್ರೀತಿಗಾಗಿ ಹುಡುಕಾಟ ಮಾಡಿದ್ದು; ನನ್ನನ್ನು ಶೋಧಿಸಿಕೊಂಡಿದ್ದು~ ಎಂದರು.<br /> <br /> ಬಾಲ್ಯ ಮತ್ತು ಬೆಂಗಳೂರಿನ ಇತಿಹಾಸದಲ್ಲಿ ರೋಚಕ ಸಂಗತಿಗಳು, ಆದ ಅನುಭವಗಳನ್ನು ಇನ್ನೊಂದು ಕೃತಿಯಲ್ಲಿ ಬರೆಯುವುದಾಗಿ ಪ್ರತಿಭಾ ಪ್ರಕಟಿಸಿದರು.ಪತ್ರಕರ್ತ ಬಿ.ಎಂ. ಬಶೀರ್, ಕಲಾವಿದೆ ಸುರೇಖಾ ಉಪಸ್ಥಿತರಿದ್ದರು. ಪ್ರಕಾಶಕಿ ಕೆ. ಅಕ್ಷತಾ, ಕವಯತ್ರಿ ಡಾ.ಪಿ. ಭಾರತಿದೇವಿ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>