<p><strong>ಬೆಂಗಳೂರು:</strong> `ಖಾಸಗಿ ಸಹಭಾಗಿತ್ವದ ಜತೆಗೆ ಸಾರ್ವಜನಿಕರ ಒಲವುಗಳನ್ನು ಪರಿಗಣಿಸಿದಾಗ ಮಾತ್ರ ಮಾರುಕಟ್ಟೆ, ಸರ್ಕಾರ ಹಾಗೂ ಜನರು ಉಳಿಯಲು ಸಾಧ್ಯ~ ಎಂದು ಉದ್ಯಮಿ ಜಯಂತ್ ಸಿನ್ಹಾ ಅಭಿಪ್ರಾಯಪಟ್ಟರು. <br /> <br /> ಪೆಂಗ್ವಿನ್ ಬುಕ್ಸ್ ಇಂಡಿಯಾ ಹಾಗೂ ಹೋಟೆಲ್ ತಾಜ್ವೆಸ್ಟ್ ಎಂಡ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲೇಖಕಿ ರೋಹಿಣಿ ನೀಲೆಕಣಿ ಅವರ `ಅನ್ ಕಾಮನ್ ಗ್ರೌಂಡ್~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಹರೀಶ್ ಹಂದೆ, `ಸೌರಶಕ್ತಿ ಬಳಕೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜನತೆಗೆ ಇನ್ನೂ ಸಬ್ಸಿಡಿಗಳು ದೊರೆಯುತ್ತಿಲ್ಲ. ನೂರಿನ್ನೂರು ರೂಪಾಯಿಗಳಷ್ಟು ವಿದ್ಯುತ್ ಬಿಲ್ ಪಾವತಿ ಮಾಡದ ಅಸಹಾಯಕ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನರಿದ್ದಾರೆ. ಅಂತಹವರಿಗೆ ಸೌರಶಕ್ತಿ ಯೋಜನೆಗಳು ಲಭಿಸುವಂತಾಗಬೇಕು~ ಎಂದು ಅಭಿಪ್ರಾಯಪಟ್ಟರು.<br /> <br /> ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲೇಖಕಿ ರೋಹಿಣಿ, `ಸರ್ಕಾರವನ್ನೇ ಎಲ್ಲದಕ್ಕೂ ಹೊಣೆಯಾಗಿಸುವುದರ ಬದಲು ಜನರು ಕೂಡ ಜಾಗೃತರಾಗಬೇಕಿದೆ. ಮನೆಯ ಸುತ್ತ ಕಸದ ರಾಶಿ ಹರಡಿಕೊಂಡರೆ, ನಿರರ್ಥಕವಾಗಿ ವಿದ್ಯುತ್ ಪೋಲು ಮಾಡುತ್ತಿದ್ದರೆ ಆಡಳಿತ ನಡೆಸುವವರು ಏನೂ ಮಾಡಲು ಸಾಧ್ಯವಿಲ್ಲ. ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವ ಸಂಸ್ಕೃತಿ ಮೊದಲು ನಿಲ್ಲಬೇಕು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಖಾಸಗಿ ಸಹಭಾಗಿತ್ವದ ಜತೆಗೆ ಸಾರ್ವಜನಿಕರ ಒಲವುಗಳನ್ನು ಪರಿಗಣಿಸಿದಾಗ ಮಾತ್ರ ಮಾರುಕಟ್ಟೆ, ಸರ್ಕಾರ ಹಾಗೂ ಜನರು ಉಳಿಯಲು ಸಾಧ್ಯ~ ಎಂದು ಉದ್ಯಮಿ ಜಯಂತ್ ಸಿನ್ಹಾ ಅಭಿಪ್ರಾಯಪಟ್ಟರು. <br /> <br /> ಪೆಂಗ್ವಿನ್ ಬುಕ್ಸ್ ಇಂಡಿಯಾ ಹಾಗೂ ಹೋಟೆಲ್ ತಾಜ್ವೆಸ್ಟ್ ಎಂಡ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲೇಖಕಿ ರೋಹಿಣಿ ನೀಲೆಕಣಿ ಅವರ `ಅನ್ ಕಾಮನ್ ಗ್ರೌಂಡ್~ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತ ಹರೀಶ್ ಹಂದೆ, `ಸೌರಶಕ್ತಿ ಬಳಕೆಗೆ ಸಂಬಂಧಿಸಿದಂತೆ ಗ್ರಾಮೀಣ ಭಾಗದ ಜನತೆಗೆ ಇನ್ನೂ ಸಬ್ಸಿಡಿಗಳು ದೊರೆಯುತ್ತಿಲ್ಲ. ನೂರಿನ್ನೂರು ರೂಪಾಯಿಗಳಷ್ಟು ವಿದ್ಯುತ್ ಬಿಲ್ ಪಾವತಿ ಮಾಡದ ಅಸಹಾಯಕ ಸ್ಥಿತಿಯಲ್ಲಿ ಗ್ರಾಮೀಣ ಭಾಗದ ಜನರಿದ್ದಾರೆ. ಅಂತಹವರಿಗೆ ಸೌರಶಕ್ತಿ ಯೋಜನೆಗಳು ಲಭಿಸುವಂತಾಗಬೇಕು~ ಎಂದು ಅಭಿಪ್ರಾಯಪಟ್ಟರು.<br /> <br /> ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲೇಖಕಿ ರೋಹಿಣಿ, `ಸರ್ಕಾರವನ್ನೇ ಎಲ್ಲದಕ್ಕೂ ಹೊಣೆಯಾಗಿಸುವುದರ ಬದಲು ಜನರು ಕೂಡ ಜಾಗೃತರಾಗಬೇಕಿದೆ. ಮನೆಯ ಸುತ್ತ ಕಸದ ರಾಶಿ ಹರಡಿಕೊಂಡರೆ, ನಿರರ್ಥಕವಾಗಿ ವಿದ್ಯುತ್ ಪೋಲು ಮಾಡುತ್ತಿದ್ದರೆ ಆಡಳಿತ ನಡೆಸುವವರು ಏನೂ ಮಾಡಲು ಸಾಧ್ಯವಿಲ್ಲ. ಬೇರೆಯವರನ್ನು ಹೊಣೆಗಾರರನ್ನಾಗಿ ಮಾಡುವ ಸಂಸ್ಕೃತಿ ಮೊದಲು ನಿಲ್ಲಬೇಕು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>