<p>ಚಿತ್ರ ಬಿಡುಗಡೆಗೂ ಮುನ್ನವೇ ತಮ್ಮ `ಆಟೋರಾಜ' ಜನರನ್ನು ತಲುಪಿದ ಖುಷಿ ನಿರ್ದೇಶಕ ಉದಯ್ ಪ್ರಕಾಶ್ ಅವರದ್ದಾದರೆ, ಸಾಲು ಸಾಲು ಸೋಲುಗಳಿಂದ ಗಣೇಶ್ ಅವರನ್ನು ಹೊರ ತರಲಿದೆ ಎನ್ನುವ ಆಶಾವಾದ ಅಭಿಮಾನಿಗಳದ್ದು. ಇಂದು (ಜೂನ್ 21) ತೆರೆಗೆ ಬರಲಿರುವ `ಆಟೋರಾಜ' ಜನರಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆ ನಿರೀಕ್ಷೆಗಳನ್ನು ಚಿತ್ರ ಭಂಗಗೊಳಿಸುವುದಿಲ್ಲ ಎನ್ನುವುದು ಚಿತ್ರ ತಂಡದ ಪ್ರತಿಪಾದನೆ.<br /> <br /> ಮೂವತ್ತಮೂರು ವರ್ಷಗಳ ಹಿಂದೆ ಬಂದ ಶಂಕರ್ ನಾಗ್ ಅವರ `ಆಟೋರಾಜ' ಕಥೆಗೂ, ಈ ಆಟೋಕಥೆಗೂ ವ್ಯತ್ಯಾಸವಿದೆ. ನಡುನಡುವೆ ಶಂಕರ್ನಾಗ್ ಅವರಲ್ಲಿದ್ದ ಸಾಮಾಜಿಕ ಜವಾಬ್ದಾರಿಯ ತುಡಿತವನ್ನು ಗಣೇಶ್ ಮೂಲಕ ನಿರ್ದೇಶಕರು ಹೇಳಿಸಿದ್ದಾರಂತೆ.<br /> <br /> ಚಿತ್ರದ ಆದಿಯಿಂದ ಅಂತ್ಯದವರೆಗೂ ದೈಹಿಕ ಮತ್ತು ಮಾನಸಿಕವಾಗಿ ಶಂಕರ್ ಛಾಯೆ ಢಾಳಾಗಿ ಇದೆ. ಶಂಕರ್ನಾಗ್ ತಮ್ಮ ಯೋಜನಾ ಲಹರಿಗಳ ಮೂಲಕ ಚಿತ್ರದಲ್ಲಿ ಗೋಚರಿಸುತ್ತಾರೆ ಎನ್ನುವ ನಿರ್ದೇಶಕರ ಮಾತುಗಳಲ್ಲಿ ಕನ್ನಡದ ಆಟೋಕಥೆಗಳು ಶಂಕರ್ನಾಗ್ರ ಛಾಯೆಯಿಂದ ಹೊರಬರಲು ಸಾಧ್ಯವ್ಲ್ಲಿಲ ಎಂಬುದನ್ನು ಸ್ಪಷ್ಟಪಡಿಸಿದೆ. <br /> <br /> ಚಿತ್ರದ ಪ್ರಚಾರಾರ್ಥ ಜಿಲ್ಲಾ ಕೇಂದ್ರಗಳಲ್ಲಿ ನಡೆಸಿದ ಆಟೋ ಜಾಥಾಕ್ಕೆ ದೊರೆತ ಸ್ಪಂದನದಿಂದ ಪುಳಕಿತರಾಗಿರುವ ಗಣೇಶ್ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. ಸಾಲು ಸೋಲುಗಳಿಗೆ ವಿರಾಮ ನೀಡುವ ಹವಣಿಕೆ ಅವರದ್ದು. <br /> <br /> ಆಟೋರಾಜದಲ್ಲೂ ತಮ್ಮ ಪ್ರೀತಿಯ ಗಮನವನ್ನು ಉಳಿಸಿಕೊಂಡು ಸಾಹಸಕ್ಕೆ ಮುಂದಾಗಿರುವ ಗಣೇಶ್, ಕೆಲವು ದೃಶ್ಯಗಳಲ್ಲಿ ಶಂಕರ್ ನಾಗ್ರನ್ನು ಅನುಕರಿಸಿದ್ದಾರಂತೆ. ತಮ್ಮ ಏಕತಾನತೆಯ ಇಮೇಜನ್ನು ಗಣೇಶ್ ಇಲ್ಲೂ ಒರೆಗೆ ಹಚ್ಚಿದ್ದಾರೆ. ಮಳೆಯ ಜತೆಗಿನ ಅವಿನಾಭಾವ ಸಂಬಂಧವನ್ನು ಬಿಟ್ಟುಕೊಡದೆ, ನಾಯಕಿಯ ನೆನಪಿನಲ್ಲಿ ವರ್ಷಧಾರೆಯಲ್ಲಿ ಮಿಂದಿದ್ದಾರೆ.<br /> <br /> `ಮುಂಗಾರುಮಳೆ'ಯಲ್ಲಿ ಜತೆಯಾಗಿದ್ದ ಮೊಲ `ದೇವದಾಸ'ನಂತೆ, ಆಟೋರಾಜನಲ್ಲಿ ಬೆಕ್ಕಿನ ಗೆಳೆತನ. ವಾಹನಗಳ ಚಾಲನೆ ವೇಳೆ ಬೆಕ್ಕು ಅಡ್ಡ ಬಂದರೆ ಕ್ಷಣ ನಿಂತುಹೋಗುವುದು ರೂಢಿ. ಆದರೆ ಚಿತ್ರದಲ್ಲಿ ಬೆಕ್ಕು ಅಪಶಕುನವಲ್ಲ, ಶುಭಶಕುನ ಎನ್ನುವುದನ್ನು ತೋರಿಸಲಾಗಿದೆಯಂತೆ. ಜನರು ಶಂಕರ್ನಾಗ್ ಅವರನ್ನು ಆಟೋರಾಜನನ್ನಾಗಿ ಒಪ್ಪಿದಂತೆಯೇ ಗಣೇಶ್ ಅವರನ್ನೂ ಒಪ್ಪಿಕೊಂಡಿದ್ದಾರೆ.<br /> <br /> ಗಣೇಶ್ ಅವರ ಆರೇಳು ವರ್ಷಗಳ ಸಿನಿಯಾನದ ಪಕ್ವತೆ ಮತ್ತು ಪ್ರಬುದ್ಧತೆ ಚಿತ್ರದಲ್ಲಿ ಬಳಕೆಯಾಗಿದೆ ಎನ್ನುವುದು ಚಿತ್ರತಂಡ ಮಾತು. ಆ ಪಕ್ವತೆಯನ್ನು ತೆರೆಯ ಮೇಲೆ ನೋಡಬೇಕಂತೆ. ಆಟೋ ಚಾಲಕರ ಸಮವಸ್ತ್ರ ಖಾಕಿಯನ್ನು ಚಿತ್ರದ ಕೊನೆಯವರೆಗೂ ಗಣೇಶ್ ತೊಟ್ಟಿದ್ದಾರೆ.<br /> <br /> ಬೇರೆ ಚಿತ್ರಗಳ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿರುವ ಕಾರಣ ಚಿತ್ರದ ನಾಯಕಿಯರು ಪ್ರಚಾರದಲ್ಲಿ ತೊಡಗಿಲ್ಲ, ಅನ್ಯಥಾ ಬೇರೆ ಅರ್ಥಕಲ್ಪಿಸಬಾರದು ಎನ್ನುವುದು ಚಿತ್ರತಂಡದ ಸಮಜಾಯಿಷಿ. `ಆಟೋರಾಜ'ನ ಏಳು ಬೀಳುಗಳನ್ನು ಪ್ರತಿ 25 ದಿನಕ್ಕೊಮ್ಮೆ ಚಿತ್ರ ತಂಡ ಹಂಚಿಕೊಳ್ಳಲಿದೆಯಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿತ್ರ ಬಿಡುಗಡೆಗೂ ಮುನ್ನವೇ ತಮ್ಮ `ಆಟೋರಾಜ' ಜನರನ್ನು ತಲುಪಿದ ಖುಷಿ ನಿರ್ದೇಶಕ ಉದಯ್ ಪ್ರಕಾಶ್ ಅವರದ್ದಾದರೆ, ಸಾಲು ಸಾಲು ಸೋಲುಗಳಿಂದ ಗಣೇಶ್ ಅವರನ್ನು ಹೊರ ತರಲಿದೆ ಎನ್ನುವ ಆಶಾವಾದ ಅಭಿಮಾನಿಗಳದ್ದು. ಇಂದು (ಜೂನ್ 21) ತೆರೆಗೆ ಬರಲಿರುವ `ಆಟೋರಾಜ' ಜನರಲ್ಲಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಆ ನಿರೀಕ್ಷೆಗಳನ್ನು ಚಿತ್ರ ಭಂಗಗೊಳಿಸುವುದಿಲ್ಲ ಎನ್ನುವುದು ಚಿತ್ರ ತಂಡದ ಪ್ರತಿಪಾದನೆ.<br /> <br /> ಮೂವತ್ತಮೂರು ವರ್ಷಗಳ ಹಿಂದೆ ಬಂದ ಶಂಕರ್ ನಾಗ್ ಅವರ `ಆಟೋರಾಜ' ಕಥೆಗೂ, ಈ ಆಟೋಕಥೆಗೂ ವ್ಯತ್ಯಾಸವಿದೆ. ನಡುನಡುವೆ ಶಂಕರ್ನಾಗ್ ಅವರಲ್ಲಿದ್ದ ಸಾಮಾಜಿಕ ಜವಾಬ್ದಾರಿಯ ತುಡಿತವನ್ನು ಗಣೇಶ್ ಮೂಲಕ ನಿರ್ದೇಶಕರು ಹೇಳಿಸಿದ್ದಾರಂತೆ.<br /> <br /> ಚಿತ್ರದ ಆದಿಯಿಂದ ಅಂತ್ಯದವರೆಗೂ ದೈಹಿಕ ಮತ್ತು ಮಾನಸಿಕವಾಗಿ ಶಂಕರ್ ಛಾಯೆ ಢಾಳಾಗಿ ಇದೆ. ಶಂಕರ್ನಾಗ್ ತಮ್ಮ ಯೋಜನಾ ಲಹರಿಗಳ ಮೂಲಕ ಚಿತ್ರದಲ್ಲಿ ಗೋಚರಿಸುತ್ತಾರೆ ಎನ್ನುವ ನಿರ್ದೇಶಕರ ಮಾತುಗಳಲ್ಲಿ ಕನ್ನಡದ ಆಟೋಕಥೆಗಳು ಶಂಕರ್ನಾಗ್ರ ಛಾಯೆಯಿಂದ ಹೊರಬರಲು ಸಾಧ್ಯವ್ಲ್ಲಿಲ ಎಂಬುದನ್ನು ಸ್ಪಷ್ಟಪಡಿಸಿದೆ. <br /> <br /> ಚಿತ್ರದ ಪ್ರಚಾರಾರ್ಥ ಜಿಲ್ಲಾ ಕೇಂದ್ರಗಳಲ್ಲಿ ನಡೆಸಿದ ಆಟೋ ಜಾಥಾಕ್ಕೆ ದೊರೆತ ಸ್ಪಂದನದಿಂದ ಪುಳಕಿತರಾಗಿರುವ ಗಣೇಶ್ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. ಸಾಲು ಸೋಲುಗಳಿಗೆ ವಿರಾಮ ನೀಡುವ ಹವಣಿಕೆ ಅವರದ್ದು. <br /> <br /> ಆಟೋರಾಜದಲ್ಲೂ ತಮ್ಮ ಪ್ರೀತಿಯ ಗಮನವನ್ನು ಉಳಿಸಿಕೊಂಡು ಸಾಹಸಕ್ಕೆ ಮುಂದಾಗಿರುವ ಗಣೇಶ್, ಕೆಲವು ದೃಶ್ಯಗಳಲ್ಲಿ ಶಂಕರ್ ನಾಗ್ರನ್ನು ಅನುಕರಿಸಿದ್ದಾರಂತೆ. ತಮ್ಮ ಏಕತಾನತೆಯ ಇಮೇಜನ್ನು ಗಣೇಶ್ ಇಲ್ಲೂ ಒರೆಗೆ ಹಚ್ಚಿದ್ದಾರೆ. ಮಳೆಯ ಜತೆಗಿನ ಅವಿನಾಭಾವ ಸಂಬಂಧವನ್ನು ಬಿಟ್ಟುಕೊಡದೆ, ನಾಯಕಿಯ ನೆನಪಿನಲ್ಲಿ ವರ್ಷಧಾರೆಯಲ್ಲಿ ಮಿಂದಿದ್ದಾರೆ.<br /> <br /> `ಮುಂಗಾರುಮಳೆ'ಯಲ್ಲಿ ಜತೆಯಾಗಿದ್ದ ಮೊಲ `ದೇವದಾಸ'ನಂತೆ, ಆಟೋರಾಜನಲ್ಲಿ ಬೆಕ್ಕಿನ ಗೆಳೆತನ. ವಾಹನಗಳ ಚಾಲನೆ ವೇಳೆ ಬೆಕ್ಕು ಅಡ್ಡ ಬಂದರೆ ಕ್ಷಣ ನಿಂತುಹೋಗುವುದು ರೂಢಿ. ಆದರೆ ಚಿತ್ರದಲ್ಲಿ ಬೆಕ್ಕು ಅಪಶಕುನವಲ್ಲ, ಶುಭಶಕುನ ಎನ್ನುವುದನ್ನು ತೋರಿಸಲಾಗಿದೆಯಂತೆ. ಜನರು ಶಂಕರ್ನಾಗ್ ಅವರನ್ನು ಆಟೋರಾಜನನ್ನಾಗಿ ಒಪ್ಪಿದಂತೆಯೇ ಗಣೇಶ್ ಅವರನ್ನೂ ಒಪ್ಪಿಕೊಂಡಿದ್ದಾರೆ.<br /> <br /> ಗಣೇಶ್ ಅವರ ಆರೇಳು ವರ್ಷಗಳ ಸಿನಿಯಾನದ ಪಕ್ವತೆ ಮತ್ತು ಪ್ರಬುದ್ಧತೆ ಚಿತ್ರದಲ್ಲಿ ಬಳಕೆಯಾಗಿದೆ ಎನ್ನುವುದು ಚಿತ್ರತಂಡ ಮಾತು. ಆ ಪಕ್ವತೆಯನ್ನು ತೆರೆಯ ಮೇಲೆ ನೋಡಬೇಕಂತೆ. ಆಟೋ ಚಾಲಕರ ಸಮವಸ್ತ್ರ ಖಾಕಿಯನ್ನು ಚಿತ್ರದ ಕೊನೆಯವರೆಗೂ ಗಣೇಶ್ ತೊಟ್ಟಿದ್ದಾರೆ.<br /> <br /> ಬೇರೆ ಚಿತ್ರಗಳ ಚಿತ್ರೀಕರಣಗಳಲ್ಲಿ ಪಾಲ್ಗೊಂಡಿರುವ ಕಾರಣ ಚಿತ್ರದ ನಾಯಕಿಯರು ಪ್ರಚಾರದಲ್ಲಿ ತೊಡಗಿಲ್ಲ, ಅನ್ಯಥಾ ಬೇರೆ ಅರ್ಥಕಲ್ಪಿಸಬಾರದು ಎನ್ನುವುದು ಚಿತ್ರತಂಡದ ಸಮಜಾಯಿಷಿ. `ಆಟೋರಾಜ'ನ ಏಳು ಬೀಳುಗಳನ್ನು ಪ್ರತಿ 25 ದಿನಕ್ಕೊಮ್ಮೆ ಚಿತ್ರ ತಂಡ ಹಂಚಿಕೊಳ್ಳಲಿದೆಯಂತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>