<p><strong>ಚನ್ನಗಿರಿ: </strong>ಈ ಬಾರಿಯ ಕರಿಮುಖನ ಅದ್ದೂರಿ ಹಬ್ಬದ ಆಚರಣೆಗೆ ತಡವಾಗಿ ಪ್ರಾರಂಭಗೊಂಡ ಮುಂಗಾರು ಮಳೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಸಂಪೂರ್ಣವಾಗಿ ಕಡಿವಾಣ ಹಾಕಲಿದೆ. ಇದರಿಂದ ಹಬ್ಬದ ಆಚರಣೆಯಲ್ಲಿ ಈ ಬಾರಿ ಅದ್ದೂರಿತನ ಮಾಯವಾಗುವ ಲಕ್ಷಣ ಕಂಡುಬರುತ್ತಿದೆ.</p>.<p>ಸೆ. 19ರಂದು ಗಣಪತಿ ಹಬ್ಬವನ್ನು ಇಡೀ ನಾಡಿನಾದ್ಯಂತ ಆಚರಿಸಲಿದ್ದಾರೆ. ಈಗಾಗಲೇ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆಗೆ ಗಣಪತಿ ವಿಗ್ರಹಗಳ ತಯಾರಿಕೆ ಕಾರ್ಯ ತಾಲ್ಲೂಕಿನಾದ್ಯಂತ ಭರದಿಂದ ಸಾಗಿದೆ. `ಪ್ಲಾಸ್ಟರ್ ಆಫ್ ಪ್ಯಾರೀಸ್~ನಿಂದ ಈ ಬಾರಿ ಗಣಪತಿ ವಿಗ್ರಹಗಳನ್ನು ತಯಾರಿಸಬಾರದೆಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ, ಅಲ್ಲಲ್ಲಿ ವಿಗ್ರಹಗಳ ತಯಾರಕರು ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ಇನ್ನು ಕೆಲವರು ಸಾಂಪ್ರದಾಯಿಕವಾಗಿ ಕರಿಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ.</p>.<p>ಸಾಮಾನ್ಯವಾಗಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಹೆಸರು, ಉದ್ದು, ಎಳ್ಳು ಮುಂತಾದ ಪ್ರಮುಖ ವಾಣಿಜ್ಯ ಬೆಳೆಗಳು ಫಸಲಿಗೆ ಬಂದು ಅವುಗಳನ್ನು ಮಾರಾಟ ಮಾಡಿ, ಅದ್ದೂರಿಯಿಂದ ಗಣಪತಿ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ, ಈ ಬಾರಿ ಮುಂಗಾರು ಮಳೆ ತಡವಾಗಿ ಬಿದ್ದಿರುವುದರಿಂದ ರೈತರು ತಮ್ಮಲ್ಲಿ ಇರುವ ಹಣವನ್ನೆಲ್ಲಾ ರಸಗೊಬ್ಬರ, ಬಿತ್ತನೆಬೀಜಗಳಿಗೆ ಹಾಕಿ ಕೈ ಖಾಲಿ ಮಾಡಿಕೊಂಡು ಮಳೆಗಾಗಿ ಮುಗಿಲನ್ನು ನೋಡುತ್ತಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದರ ಜತೆಗೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿರುವುದು ಅಬ್ಬರದ ಹಬ್ಬದ ಆಚರಣೆಗೆ ಅಡ್ಡಿಯಾಗಲಿದೆ.</p>.<p>ಸಕ್ಕರೆ ಕೆಜಿಗೆ ರೂ 39, ಬೆಲ್ಲ ರೂ. 35, ತೊಗರಿಬೇಳೆ ರೂ. 65, ಉದ್ದಿನಬೇಳೆ ರೂ. 75, ಅಕ್ಕಿ ರೂ. 40, ಹೆಸರುಬೇಳೆ ರೂ. 70 ಇದ್ದರೆ, ಒಂದು ಡಜನ್ ಬಾಳೆಹಣ್ಣಿಗೆ ರೂ. 45, ಸೇಬು 1 ಕೆಜಿಗೆ ರೂ. 150, ದ್ರಾಕ್ಷಿ ರೂ. 120 ದರ ಇದ್ದು, ಇನ್ನು ಒಂದು ಕೆಜಿ ಮಲ್ಲಿಗೆಗೆ ರೂ. 300, ಒಂದು ಮಾರು ಸೇವಂತಿಗೆ ರೂ. 80 ದರ ಆಗಿ ಜನಸಾಮಾನ್ಯರು ಹಬ್ಬವನ್ನು ಆಚರಣೆ ಮಾಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ.</p>.<p>ಆದರೂ, ಪ್ರತಿವರ್ಷದಂತೆ ಗಣಪತಿ ವಿಗ್ರಹಗಳ ತಯಾರಿ ಕಾರ್ಯ ಈಗಾಗಲೇ ನಡೆದಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನರು ವಿಗ್ರಹಗಳನ್ನು ಖರೀದಿಸಲು ಬರುತ್ತಾರೆಯೇ ಇಲ್ಲವೇ ಎಂಬ ಅನುಮಾನ ಕಾಡುತ್ತಿದೆ.<br /> ಹಿಂದೆಲ್ಲಾ ಮುಂಗಡವಾಗಿ ಹಣ ಕೊಟ್ಟು ವಿಗ್ರಹಗಳನ್ನು ತಯಾರು ಮಾಡಲು ಹೇಳುತ್ತಿದ್ದರು. ಆದರೆ, ಈ ಬಾರಿ ಯಾರೂ ಕೂಡಾ ವಿಗ್ರಹಗಳು ಬೇಕು ಎಂದು ಹತ್ತಿರಕ್ಕೆ ಬರುತ್ತಿಲ್ಲ. ಆದರೂ, ಕಳೆದ 30 ವರ್ಷಗಳಿಂದ ವಿಗ್ರಹಗಳನ್ನು ತಯಾರು ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಚನ್ನಗಿರಿ ಪಟ್ಟಣದ ಬಸವರಾಜ್, ಇಂದ್ರಮ್ಮ ದಂಪತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಗಿರಿ: </strong>ಈ ಬಾರಿಯ ಕರಿಮುಖನ ಅದ್ದೂರಿ ಹಬ್ಬದ ಆಚರಣೆಗೆ ತಡವಾಗಿ ಪ್ರಾರಂಭಗೊಂಡ ಮುಂಗಾರು ಮಳೆ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಸಂಪೂರ್ಣವಾಗಿ ಕಡಿವಾಣ ಹಾಕಲಿದೆ. ಇದರಿಂದ ಹಬ್ಬದ ಆಚರಣೆಯಲ್ಲಿ ಈ ಬಾರಿ ಅದ್ದೂರಿತನ ಮಾಯವಾಗುವ ಲಕ್ಷಣ ಕಂಡುಬರುತ್ತಿದೆ.</p>.<p>ಸೆ. 19ರಂದು ಗಣಪತಿ ಹಬ್ಬವನ್ನು ಇಡೀ ನಾಡಿನಾದ್ಯಂತ ಆಚರಿಸಲಿದ್ದಾರೆ. ಈಗಾಗಲೇ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆಗೆ ಗಣಪತಿ ವಿಗ್ರಹಗಳ ತಯಾರಿಕೆ ಕಾರ್ಯ ತಾಲ್ಲೂಕಿನಾದ್ಯಂತ ಭರದಿಂದ ಸಾಗಿದೆ. `ಪ್ಲಾಸ್ಟರ್ ಆಫ್ ಪ್ಯಾರೀಸ್~ನಿಂದ ಈ ಬಾರಿ ಗಣಪತಿ ವಿಗ್ರಹಗಳನ್ನು ತಯಾರಿಸಬಾರದೆಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದರೂ, ಅಲ್ಲಲ್ಲಿ ವಿಗ್ರಹಗಳ ತಯಾರಕರು ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ಇನ್ನು ಕೆಲವರು ಸಾಂಪ್ರದಾಯಿಕವಾಗಿ ಕರಿಮಣ್ಣಿನಿಂದ ಗಣಪತಿ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ.</p>.<p>ಸಾಮಾನ್ಯವಾಗಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಹೆಸರು, ಉದ್ದು, ಎಳ್ಳು ಮುಂತಾದ ಪ್ರಮುಖ ವಾಣಿಜ್ಯ ಬೆಳೆಗಳು ಫಸಲಿಗೆ ಬಂದು ಅವುಗಳನ್ನು ಮಾರಾಟ ಮಾಡಿ, ಅದ್ದೂರಿಯಿಂದ ಗಣಪತಿ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ, ಈ ಬಾರಿ ಮುಂಗಾರು ಮಳೆ ತಡವಾಗಿ ಬಿದ್ದಿರುವುದರಿಂದ ರೈತರು ತಮ್ಮಲ್ಲಿ ಇರುವ ಹಣವನ್ನೆಲ್ಲಾ ರಸಗೊಬ್ಬರ, ಬಿತ್ತನೆಬೀಜಗಳಿಗೆ ಹಾಕಿ ಕೈ ಖಾಲಿ ಮಾಡಿಕೊಂಡು ಮಳೆಗಾಗಿ ಮುಗಿಲನ್ನು ನೋಡುತ್ತಾ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದರ ಜತೆಗೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿರುವುದು ಅಬ್ಬರದ ಹಬ್ಬದ ಆಚರಣೆಗೆ ಅಡ್ಡಿಯಾಗಲಿದೆ.</p>.<p>ಸಕ್ಕರೆ ಕೆಜಿಗೆ ರೂ 39, ಬೆಲ್ಲ ರೂ. 35, ತೊಗರಿಬೇಳೆ ರೂ. 65, ಉದ್ದಿನಬೇಳೆ ರೂ. 75, ಅಕ್ಕಿ ರೂ. 40, ಹೆಸರುಬೇಳೆ ರೂ. 70 ಇದ್ದರೆ, ಒಂದು ಡಜನ್ ಬಾಳೆಹಣ್ಣಿಗೆ ರೂ. 45, ಸೇಬು 1 ಕೆಜಿಗೆ ರೂ. 150, ದ್ರಾಕ್ಷಿ ರೂ. 120 ದರ ಇದ್ದು, ಇನ್ನು ಒಂದು ಕೆಜಿ ಮಲ್ಲಿಗೆಗೆ ರೂ. 300, ಒಂದು ಮಾರು ಸೇವಂತಿಗೆ ರೂ. 80 ದರ ಆಗಿ ಜನಸಾಮಾನ್ಯರು ಹಬ್ಬವನ್ನು ಆಚರಣೆ ಮಾಡಲು ಹಿಂದೇಟು ಹಾಕುವಂತಹ ಪರಿಸ್ಥಿತಿ ಇದೆ.</p>.<p>ಆದರೂ, ಪ್ರತಿವರ್ಷದಂತೆ ಗಣಪತಿ ವಿಗ್ರಹಗಳ ತಯಾರಿ ಕಾರ್ಯ ಈಗಾಗಲೇ ನಡೆದಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನರು ವಿಗ್ರಹಗಳನ್ನು ಖರೀದಿಸಲು ಬರುತ್ತಾರೆಯೇ ಇಲ್ಲವೇ ಎಂಬ ಅನುಮಾನ ಕಾಡುತ್ತಿದೆ.<br /> ಹಿಂದೆಲ್ಲಾ ಮುಂಗಡವಾಗಿ ಹಣ ಕೊಟ್ಟು ವಿಗ್ರಹಗಳನ್ನು ತಯಾರು ಮಾಡಲು ಹೇಳುತ್ತಿದ್ದರು. ಆದರೆ, ಈ ಬಾರಿ ಯಾರೂ ಕೂಡಾ ವಿಗ್ರಹಗಳು ಬೇಕು ಎಂದು ಹತ್ತಿರಕ್ಕೆ ಬರುತ್ತಿಲ್ಲ. ಆದರೂ, ಕಳೆದ 30 ವರ್ಷಗಳಿಂದ ವಿಗ್ರಹಗಳನ್ನು ತಯಾರು ಮಾಡಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಚನ್ನಗಿರಿ ಪಟ್ಟಣದ ಬಸವರಾಜ್, ಇಂದ್ರಮ್ಮ ದಂಪತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>