<p>ಬೆಂಗಳೂರು: ಶ್ರೀಲಂಕಾ ಮೂಲದ ದಂಪತಿಯ ಗಮನ ಬೇರೆಡೆ ಸೆಳೆದು 400 ಡಾಲರ್ಗಳು ಹಾಗೂ ಪಾಸ್ಪೋರ್ಟ್ ದೋಚಿರುವ ಘಟನೆ ಕಲಾಸಿಪಾಳ್ಯದಲ್ಲಿ ಶನಿವಾರ ನಡೆದಿದೆ.<br /> <br /> ಈ ಸಂಬಂಧ ಶ್ರೀಲಂಕಾ ಮೂಲದ ತಿಷೇರ ಎಂಬುವರು ದೂರು ಕೊಟ್ಟಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಮಗಳನ್ನು ಭೇಟಿಯಾಗುವ ಉದ್ದೇಶದಿಂದ ಅವರು ಪತ್ನಿಯೊಂದಿಗೆ ಆ.29ರಂದು ರಾಜ್ಯಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಮಗಳನ್ನು ಭೇಟಿ ಮಾಡಿದ ದಂಪತಿ ವಿಮಾನದಲ್ಲಿ ಶನಿವಾರ (ಸೆ.3) ರಾತ್ರಿ ಶ್ರೀಲಂಕಾಕ್ಕೆ ಹೋಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ರಾತ್ರಿಯೇ ಮಂಗಳೂರಿನಿಂದ ನಗರಕ್ಕೆ ಬಂದು ಕಲಾಸಿಪಾಳ್ಯ ಮುಖ್ಯರಸ್ತೆಯ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದರು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ವಸತಿಗೃಹದಿಂದ ಹೊರ ಬಂದ ದಂಪತಿ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರನ್ನು ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.<br /> <br /> `ನಿಮ್ಮ ಶರ್ಟ್ ಕೊಳೆಯಾಗಿದೆ~ ಎಂದು ತಿಷೇರ ಅವರಿಗೆ ಹೇಳಿದ ದುಷ್ಕರ್ಮಿ, ಶರ್ಟ್ ತೊಳೆದುಕೊಳ್ಳಲು ಬಾಟಲಿಯಲ್ಲಿ ನೀರನ್ನು ಸಹ ಕೊಟ್ಟಿದ್ದಾನೆ. ತಿಷೇರ ಅವರು ಕೈನಲ್ಲಿ ಹಿಡಿದುಕೊಂಡಿದ್ದ ಪಾಸ್ಪೋರ್ಟ್ ಮತ್ತು ಡಾಲರ್ಗಳಿದ್ದ ಬ್ಯಾಗ್ ಅನ್ನು ಪಾದಚಾರಿ ಮಾರ್ಗದಲ್ಲಿಟ್ಟು ಶರ್ಟ್ ತೊಳೆದುಕೊಳ್ಳಲು ಪಕ್ಕಕ್ಕೆ ಹೋದರು. <br /> ಅವರ ಪತ್ನಿ ನೆರವು ನೀಡಲು ಮುಂದಾದರು. ಈ ಸಂದರ್ಭದಲ್ಲಿ ಕಿಡಿಗೇಡಿ ಪಾಸ್ಪೋರ್ಟ್ ಮತ್ತು ಡಾಲರ್ಗಳಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಶ್ರೀಲಂಕಾ ಮೂಲದ ದಂಪತಿಯ ಗಮನ ಬೇರೆಡೆ ಸೆಳೆದು 400 ಡಾಲರ್ಗಳು ಹಾಗೂ ಪಾಸ್ಪೋರ್ಟ್ ದೋಚಿರುವ ಘಟನೆ ಕಲಾಸಿಪಾಳ್ಯದಲ್ಲಿ ಶನಿವಾರ ನಡೆದಿದೆ.<br /> <br /> ಈ ಸಂಬಂಧ ಶ್ರೀಲಂಕಾ ಮೂಲದ ತಿಷೇರ ಎಂಬುವರು ದೂರು ಕೊಟ್ಟಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವ ಮಗಳನ್ನು ಭೇಟಿಯಾಗುವ ಉದ್ದೇಶದಿಂದ ಅವರು ಪತ್ನಿಯೊಂದಿಗೆ ಆ.29ರಂದು ರಾಜ್ಯಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಮಗಳನ್ನು ಭೇಟಿ ಮಾಡಿದ ದಂಪತಿ ವಿಮಾನದಲ್ಲಿ ಶನಿವಾರ (ಸೆ.3) ರಾತ್ರಿ ಶ್ರೀಲಂಕಾಕ್ಕೆ ಹೋಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ಶುಕ್ರವಾರ ರಾತ್ರಿಯೇ ಮಂಗಳೂರಿನಿಂದ ನಗರಕ್ಕೆ ಬಂದು ಕಲಾಸಿಪಾಳ್ಯ ಮುಖ್ಯರಸ್ತೆಯ ವಸತಿಗೃಹವೊಂದರಲ್ಲಿ ಉಳಿದುಕೊಂಡಿದ್ದರು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ವಸತಿಗೃಹದಿಂದ ಹೊರ ಬಂದ ದಂಪತಿ ಕಲಾಸಿಪಾಳ್ಯ ಮುಖ್ಯರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಯೊಬ್ಬ ಅವರನ್ನು ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.<br /> <br /> `ನಿಮ್ಮ ಶರ್ಟ್ ಕೊಳೆಯಾಗಿದೆ~ ಎಂದು ತಿಷೇರ ಅವರಿಗೆ ಹೇಳಿದ ದುಷ್ಕರ್ಮಿ, ಶರ್ಟ್ ತೊಳೆದುಕೊಳ್ಳಲು ಬಾಟಲಿಯಲ್ಲಿ ನೀರನ್ನು ಸಹ ಕೊಟ್ಟಿದ್ದಾನೆ. ತಿಷೇರ ಅವರು ಕೈನಲ್ಲಿ ಹಿಡಿದುಕೊಂಡಿದ್ದ ಪಾಸ್ಪೋರ್ಟ್ ಮತ್ತು ಡಾಲರ್ಗಳಿದ್ದ ಬ್ಯಾಗ್ ಅನ್ನು ಪಾದಚಾರಿ ಮಾರ್ಗದಲ್ಲಿಟ್ಟು ಶರ್ಟ್ ತೊಳೆದುಕೊಳ್ಳಲು ಪಕ್ಕಕ್ಕೆ ಹೋದರು. <br /> ಅವರ ಪತ್ನಿ ನೆರವು ನೀಡಲು ಮುಂದಾದರು. ಈ ಸಂದರ್ಭದಲ್ಲಿ ಕಿಡಿಗೇಡಿ ಪಾಸ್ಪೋರ್ಟ್ ಮತ್ತು ಡಾಲರ್ಗಳಿದ್ದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>